ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವ ವಿಖ್ಯಾತ ದಸರಾ (Mysore dasara) ಅಂತಿಮ ಹಂತಕ್ಕೆ ಬಂದಿದೆ. ನವರಾತ್ರಿಯ (Navratri Celebrations) 9ನೇ ದಿನವಾದ ಸೋಮವಾರ (ಅಕ್ಟೋಬರ್ 23) ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಅವರು ಅರಮನೆಯಲ್ಲಿ (Mysore Palace) ಸಾಂಪ್ರದಾಯಿಕವಾಗಿ ಆಯುಧ ಪೂಜೆ (Ayudha Puja) ನೆರವೇರಿಸಿದರು. ಅಲ್ಲದೆ, ಖಾಸಾ ಆಯುಧಗಳಿಗೆ ಪೂಜೆ ಸಲ್ಲಿಸಿದರು.
ಬಳಿಕ ಸವಾರಿ ತೊಟ್ಟಿಯಲ್ಲಿ ಪಟ್ಟದ ಆನೆ, ಕುದುರೆ, ಹಸು, ವಾಹನಗಳಿಗೂ ಯದುವೀರ್ ಒಡೆಯರ್ ಅವರು ಪೂಜೆ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಅರಮನೆಯೊಳಗೆ ಪಟ್ಟದ ಆನೆ, ಹಸು, ಕುದುರೆಯನ್ನು ಪೂಜೆಗಾಗಿ ಶೃಂಗರಿಸಿ ಸಿದ್ಧತೆ ಮಾಡಿಡಲಾಗಿತ್ತು. ಇನ್ನು ಅರಮನೆಯ 10 ಪಿರಂಗಿಗಳಿಗೂ ಪೂಜೆ ಸಲ್ಲಿಸಲಾಗಿದೆ. ಇನ್ನು ಯಧುವೀರ್ ಒಡೆಯರ್ ಅವರು ಬಳಕೆ ಮಾಡುವ ಕಾರುಗಳ ಸಹಿತ ರಾಜ ಮನೆತನದ ಕಾರುಗಳಿಗೂ ಯದುವೀರ್ ಒಡೆಯರ್ ಅವರು ಪೂಜೆ ಸಲ್ಲಿಸಿದರು.
ಇದನ್ನೂ ಓದಿ: Mysore dasara : ಜಂಬೂ ಸವಾರಿಯಲ್ಲಿ ಗಮನ ಸೆಳೆವ ಆಪರೇಶನ್ ಸ್ಪೆಷಲಿಸ್ಟ್ ಆನೆಗಳು! ಇಲ್ಲಿದೆ ಕಿರು ಪರಿಚಯ
ಬೆಳಗ್ಗೆಯಿಂದಲೇ ಪೂಜಾ ವಿಧಿವಿಧಾನ
ಆಯುಧ ಪೂಜೆ ಹಿನ್ನೆಲೆಯಲ್ಲಿ ಮುಂಜಾನೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಜತೆಗೆ ಪಟ್ಟದ ಕತ್ತಿಯನ್ನು ಅರಮನೆಯಿಂದ ಕೋಡಿ ಸೋಮೇಶ್ವರ ದೇವಾಲಯಕ್ಕೆ ತರಲಾಗಿತ್ತು. ಪೂಜೆ ಬಳಿಕ ಖಾಸಾ ಆಯುಧಗಳನ್ನು ಮೆರವಣಿಗೆಯಲ್ಲಿ ಅರಮನೆಗೆ ಕೊಂಡೊಯ್ಯಲಾಯಿತು. ಪೂಜೆ ಬಳಿಕ ಖಾಸಾ ಆಯುಧಗಳನ್ನು ಮೆರವಣಿಗೆಯಲ್ಲಿ ತರಲಾಯಿತು.
ಪ್ರತಿ ವರ್ಷದಂತೆ ಅರಮನೆಯ ಕಲ್ಯಾಣ ಮಂಟಪದಲ್ಲಿ ಚಂಡಿಕಾ ಹೋಮ ನಡೆಯಿತು. ನಾಡು ಸುಭಿಕ್ಷವಾಗಿರಲಿ, ಮಳೆ – ಬೆಳೆ ಉತ್ತಮವಾಗಿ ಆಗಲಿ ಎಂದು ಮಹಾರಾಜ ಯದುವೀರ್ ಒಡೆಯರ್ ಅವರು ಪ್ರಾರ್ಥಿಸಿದರು.
ಯದುವೀರ್ಗೆ ಗೌರವ ವಂದನೆ
ಮಹಾರಾಜ ಯದುವೀರ್ ಒಡೆಯರ್ ಅವರು ಖಾಸಾ ಆಯುಧಗಳಿಗೆ ಪೂಜೆ ಮುಗಿಸಿ ಕಲ್ಯಾಣ ಮಂಟಪದಿಂದ ಸವಾರಿ ತೊಟ್ಟಿಗೆ ಆಗಮಿಸಿದರು. ಈ ವೇಳೆ ಕಾಯೋ ಶ್ರೀ ಗೌರಿ ಎನ್ನುವ ಮೈಸೂರು ಸಂಸ್ಥಾನ ಗೀತೆಯನ್ನು ಪೊಲೀಸ್ ಬ್ಯಾಂಡ್ನವರು ನುಡಿಸಿದ್ದಾರೆ. ಯದುವೀರ್ ಅವರು ಈ ವೇಳೆ ಗೌರವ ವಂದನೆಯನ್ನು ಸ್ವೀಕರಿಸಿದರು.
ಇದನ್ನೂ ಓದಿ: Mysore dasara : ಇದು ನಮ್ಮ ಮೈಸೂರು ದಸರೆಯ ವೈಭೋಗ; ತಿಳಿಯಿರಿ ಇದರ ಇತಿಹಾಸದ ಸೊಬಗ
ಪಟ್ಟದ ಆನೆ ಧನಂಜಯ, ನಿಶಾನೆ ಆನೆ ಅರ್ಜುನ, ಪಟ್ಟದ ಹಸು, ಪಟ್ಟದ ಕುದುರೆ, ಪಟ್ಟದ ಒಂಟೆ ಸೇರಿದಂತೆ ಸಾಲಾಗಿ ನಿಲ್ಲಿಸಲಾಗಿದ್ದ ರಾಜವಂಶಸ್ಥರು ಬಳಸುವ ವಾಹನಗಳಿಗೆ ಯದುವೀರ್ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಪೂಜಾ ವಿಧಿವಿಧಾನ ಮುಗಿಸಿದರು. ಈ ಪೂಜಾ ಕೈಂಕರ್ಯವನ್ನು ಪತ್ನಿ ತ್ರಿಷಿಕಾ ಕುಮಾರಿ ಸಿಂಗ್ (Trishika Kumari Singh) ಹಾಗೂ ತಾಯಿ ಪ್ರಮೋದಾ ದೇವಿ ಒಡೆಯರ್ (Pramoda Devi wadeyar) ಹಾಗೂ ಪುತ್ರ ಆದ್ಯವೀರ್ ಒಡೆಯರ್ ಕಣ್ತುಂಬಿಕೊಂಡರು.