Site icon Vistara News

ಕಾಡಿನಲ್ಲಿ ಕೈಕೊಟ್ಟ ಅರ್ಚಕ: ಅವನೇ ಬೇಕು ಎಂದ ಗೃಹಿಣಿ

ಕಾಡಿನಲ್ಲಿ ಕೈಕೊಟ್ಟ ಅರ್ಚಕ

ಮೈಸೂರು: ಯುವಕನನ್ನು ನೆಚ್ಚಿಕೊಂಡು ಬಂದ ಗೃಹಿಣಿಯನ್ನು ಏಕಾಂಗಿಯಾಗಿ ಕಾಡಿನಲ್ಲಿ ಬಿಟ್ಟು ಅರ್ಚಕ ಪರಾರಿಯಾಗಿದ್ದಾನೆ. ನಂಜನಗೂಡು ತಾಲೂಕಿನ ಕೊಲ್ಲೂಪುರ ಗ್ರಾಮದಲ್ಲಿ ಇಂತಹದ್ದೊಂದು ವಿಲಕ್ಷಣ ಘಟನೆ ಸಂಭವಿಸಿದೆ.

ಗೃಹಿಣಿ (31) ಜತೆ ಇರುವುದಾಗಿ ನಂಬಿಸಿ ಸಂತೋಷ್‌ (21) ಎಂಬಾತ ಕರೆದುಕೊಂಡು ಹೋಗಿದ್ದ. ಸುಮಾರು ಹತ್ತು ದಿನ ಓಡಾಡಿಕೊಂಡಿದ್ದ ಇಬ್ಬರೂ ನಂತರ ಕೊಲ್ಲೂಪುರ ಗ್ರಾಮದ ಬಳಿಯ ಕಾಡಿಗೆ ಬಂದಿದ್ದರು. ರಾತ್ರಿ ಒಬ್ಬಳನ್ನೇ ಬಿಟ್ಟ ಯುವಕ, ಮಧ್ಯರಾತ್ರಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಗೃಹಿಣಿ ದೂರಿದ್ದಾರೆ. ಈಗಾಗಲೇ ಗೃಹಿಣಿಗೆ ಇಬ್ಬರು ಮಕ್ಕಳಿದ್ದಾರೆ.

ಕಳೆದ ವರ್ಷ ಪೂಜೆಗಾಗಿ ಮಲೆ ಮಹದೇಶ್ವರ ದೇವಸ್ಥಾನಕ್ಕೆ ಹೋಗಿದ್ದಾಗ ಅರ್ಚಕ ಸಂತೋಷ್‌ ಎಂಬಾತನ ಪರಿಚಯವಾಗಿದೆ. ಇಬ್ಬರೂ ಟೆಲಿಫೋನ್‌ ನಂಬರ್‌ ಶೇರ್‌ ಮಾಡಿಕೊಂಡಿದ್ದು ಮಾತನಾಡಲು ಶುರುಮಾಡಿಕೊಂಡಿದ್ದರು. ತನಗಿಂತ ೧೦ ವರ್ಷ ದೊಡ್ಡವಳಾದ ಗೃಹಿಣಿಯೊಂದಿಗೆ ಆತ ಪ್ರೀತಿ- ಪ್ರೇಮ- ಪ್ರಣಯ ಶುರುವಿಟ್ಟುಕೊಂಡಿದ್ದ. ಮದುವೆಯಾಗಿಸುವುದಾಗಿ ನಂಬಿಸಿ ಆಕೆಯನ್ನು ಮನೆಯಿಂದಲೂ ಕರೆದುಕೊಂಡು ಹೋಗಿದ್ದ. ೧೦ ದಿನ ಊರೂರು ಸುತ್ತಾಡಿ ಕೊನೆಗೆ ನಂಜನಗೂಡು ತಾಲೂಕಿನ ಕೊಲ್ಲೂಪುರ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದಾನೆ. ಕಾಡಂಚಿನ ಜಮೀನಿನಲ್ಲಿ ಇಬ್ಬರೂ ಮಲಗಿದ್ದು, ಮಧ್ಯರಾತ್ರಿ ಸಂತೋಷ್‌ ಎಸ್ಕೇಪ್‌ ಆಗಿದ್ದಾನೆ.

ಇದನ್ನೂ ಓದಿ | ನೂರು ಕೋಟಿ ಲೂಟಿ! ಇದು ಚೀನಿ ಗ್ಯಾಂಗ್‌ನ ಕರಾಮತ್ತು

ಕಾಡಿನ ಸಮೀಪ ಜಮೀನಿನಲ್ಲಿ ಓಡಾಡುತ್ತಿದ್ದ ಒಂಟಿ ಮಹಿಳೆಯನ್ನು ಕಂಡು ಗ್ರಾಮಸ್ಥರು ವಿಚಾರಿಸಿದ್ದಾರೆ. ಈ ಸಂದರ್ಭ ಎಲ್ಲ ಎಲ್ಲ ವಿಚಾರವನ್ನೂ ಗೃಹಿಣಿ ತಿಳಿಸಿದ್ದಾರೆ. ಇಷ್ಟರ ನಂತರವೂ, ಯುವಕನೊಂದಿಗೇ ಬಾಳುತ್ತೇನೆ ಎಂದು ಗೃಹಿಣಿ ಪಟ್ಟು ಹಿಡಿದಿದ್ದಾರೆ. ಸದ್ಯ ಗ್ರಾಮಸ್ಥರು ಹುಲ್ಲಹಳ್ಳಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಗೃಹಿಣಿಗೆ ರಕ್ಷಣೆ ನೀಡಿದ್ದಾರೆ.

ಇದನ್ನೂ ಓದಿ | ಬೆಂಗಳೂರಿನಲ್ಲಿ ಸಿಮ್‌ ಬಾಕ್ಸ್‌ ಮೂಲಕ ಪಾಕಿಸ್ತಾನಕ್ಕೆ ಮಾಹಿತಿ ರವಾನೆ, ಆರೋಪಿ ಸೆರೆ

Exit mobile version