Site icon Vistara News

kodi mutt swamiji: ಪಕ್ಷಗಳು ಒಡೆದರೂ ಒಂದು ಪಕ್ಷ ಅಧಿಕಾರಕ್ಕೆ ಬರಲಿದೆ: ಕೋಡಿಮಠ ಶ್ರೀ ಭವಿಷ್ಯ

kodi mutt swamiji in jamakhandi

ಬಾಗಲಕೋಟೆ: ರಾಜ್ಯ ರಾಜಕೀಯದಲ್ಲಿ ಅಸ್ಥಿರತೆ ಇದೆ. ಮುಂಬರುವ ಚುನಾವಣೆವರೆಗೆ ಯಾವುದನ್ನೂ ಹೇಳುವುದಕ್ಕೆ ಆಗದು. ಎಲ್ಲ ಪಕ್ಷಗಳೂ ಹರಿದು ಹಂಚಿ ಹೋಗುವ ಲಕ್ಷಣ ಕಾಣುತ್ತಿದೆ. ಆದರೂ, ಒಂದು ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಜಮಖಂಡಿಯಲ್ಲಿ ಕೋಡಿಮಠದ ಸ್ವಾಮೀಜಿ (kodi mutt swamiji) ಭವಿಷ್ಯ ನುಡಿದಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಕೋಡಿ ಶ್ರೀಗಳು, ಪಕ್ಷಾಂತರಗಳು ಹೆಚ್ಚಾಗಲಿದ್ದು, ರಾಜಕೀಯ ಪಕ್ಷಗಳು ಇಬ್ಭಾಗವಾಗಲಿದೆ. ರಾಜಕೀಯ ಅಸ್ಥಿರತೆಗಳು ಕಂಡುಬರಲಿದೆ. ಒಂದು ಪಕ್ಷವೂ ಒಟ್ಟಾಗಿ ಹೋಗುವುದಿಲ್ಲ. ಆದರೂ ಒಂದು ಪಕ್ಷ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲಿದೆ ಎಂದು ಹೇಳಿದರು.

ಉಳಿದ ಭವಿಷ್ಯವನ್ನು ಯುಗಾದಿ ನಂತರ ಹೇಳುತ್ತೇನೆ. ಮುಂದೆ ಎಷ್ಟು ಸುಖವಿದೆಯೋ, ಅಷ್ಟು ಕಷ್ಟವಿದೆ. ಪ್ರಕೃತಿ ವಿಕೋಪ ಆಗುತ್ತದೆ. ಒಲೆ ಹೊತ್ತಿ ಉರಿದರೆ ನಿಂತುಕೊಳ್ಳಬಹುದು, ಆದರೆ, ಧರೆ ಹೊತ್ತಿ ಉರಿದರೆ ನಿಲ್ಲಲು ಆಗದು. ನಾನು ಹೀಗೆ ಹೇಳಿದ ಮರುದಿನವೇ ವಿಮಾನ ಅಪಘಾತವಾಗಿ ೫೦ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಎಲ್ಲವನ್ನೂ ಯುಗಾದಿ ನಂತರ ವಿವರವಾಗಿ ಹೇಳುತ್ತೇನೆ.

ಇದನ್ನೂ ಓದಿ: Heart attack : ಕಾರಿನಲ್ಲಿ ಹೋಗುತ್ತಿದ್ದಾಗಲೇ ಹೃದಯಾಘಾತ: ಖ್ಯಾತ ವಿಧಿ ವಿಜ್ಞಾನ ತಜ್ಞ ಡಾ. ಭಗವಾನ್‌ ಎಸ್‌. ಇನ್ನಿಲ್ಲ

ಮಾಡಬಾರದ್ದು‌ ಮಾಡಿದರೆ ಆಗಬಾರದ್ದು ಆಗುತ್ತದೆ. ಯಾರೇ ಆಗಲಿ, ತಪ್ಪು ಇರಲಿ ಇಲ್ಲವೇ ಸರಿ ಇರಲಿ, ನಾವು ಏನು ಮಾಡುತ್ತೇವೆಯೋ ಅದನ್ನು ಅನುಭವಿಸುತ್ತಾರೆ. ಬಿತ್ತಿದ್ದನ್ನೇ ಬೆಳೆಯೋದು ಎಂದು ಹೇಳಿದರು.

Exit mobile version