Site icon Vistara News

ರಾಹುಲ್‌ ಗಾಂಧಿಗೆ ಕಾಂಗ್ರೆಸ್‌ ಮುಖಂಡರಿಂದ ಚರಕ ಉಡುಗೊರೆ

charaka to rahul

ಹುಬ್ಬಳ್ಳಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಹುಬ್ಬಳ್ಳಿಯ ಕಾಂಗ್ರೆಸ್‌ ಮುಖಂಡ ರಜತ್‌ ಉಳ್ಳಾಗಡ್ಡಿ ಮಠ ಮತ್ತು ಇತರರು ಸೇರಿ ಚರಕವನ್ನು ಉಡುಗೊರೆಯಾಗಿ ನೀಡಿದರು.

ಮಂಗಳವಾರ ರಾತ್ರಿ ಹುಬ್ಬಳ್ಳಿಗೆ ಆಗಮಿಸಿದ ರಾಹುಲ್‌ ಗಾಂಧಿ ಅವರು ಹೋಟೆಲ್‌ ಗೋಕುಲದಲ್ಲಿ ನಡೆದ ಕಾಂಗ್ರೆಸ್‌ ರಾಜಕೀಯ ವ್ಯವಹಾರಗಳ ಸಮಿತಿಯ ಸಭೆಯಲ್ಲಿ ಮಾತನಾಡಿದ್ದರು. ಬಳಿಕ ವಿಶ್ರಾಂತಿಗೆ ತೆರಳಿದ ಅವರು ಮುಂಜಾನೆ ಚಿತ್ರದುರ್ಗಕ್ಕೆ ಹೊರಟಿದ್ದಾರೆ. ಚಿತ್ರದುರ್ಗದ ಬ್ರಹನ್ಮಠಕ್ಕೆ ಭೇಟಿ ನೀಡಲಿರುವ ರಾಹುಲ್‌ ಅಲ್ಲಿಂದ ದಾವಣಗೆರೆಯಲ್ಲಿ ನಡೆಯುವ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ತೆರಳಲಿದ್ದಾರೆ.

ಈ ನಡುವೆ, ಹೋಟೆಲ್‌ನಿಂದ ರಾಹುಲ್ ಗಾಂಧಿ ಅವರು ಹೊರಬರುತ್ತಿದ್ದಂತೆಯೇ ಅವರಿಗೆ ಚರಕ ನೀಡಿ ಗೌರವಿಸಲಾಯಿತು. ಈ ವೇಳೆ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡಾ ಇದ್ದರು.

ಬಳಿಕ ಕಾಂಗ್ರೆಸ್‌ ಸೇವಾದಳದ ವತಿಯಿಂದ ರಾಹುಲ್‌ ಅವರನ್ನು ಗೌರವಿಸಲಾಯಿತು. ಹಿರಿಯ ಸೇವಾದಳ ಕಾರ್ಯಕರ್ತರು ಬಿಳಿ ಟೋಪಿ ಇಟ್ಟು ಗೌರವಿಸಿದರು. ಸೇವಾದಳದ ಪದಕ ವಿರುವ ಟ್ಯಾಗನ್ನು ಕೈಯಲ್ಲೇ ಸ್ವೀಕರಿಸಿದ ರಾಹುಲ್‌ ಟೋಪಿಯನ್ನೂ ಪಕ್ಕದಲ್ಲಿದ್ದವರಿಗೆ ಹಸ್ತಾಂತರಿಸಿದರು.

ಇದನ್ನೂ ಓದಿ | Siddaramaiah@75: ಮಾಜಿ ಸಿಎಂ ಸಿದ್ದರಾಮಯ್ಯ ಜತೆ ಕಳೆದ ಬಾಲ್ಯದ ನೆನಪುಗಳ ಬಿಚ್ಚಿಟ್ಟ ಸ್ನೇಹಿತರು

Exit mobile version