Site icon Vistara News

Rajasthan Murder | ಕಲ್ಲಂಗಡಿ ಒಡೆದಾಗ ಅತ್ತವರು ಈಗೆಲ್ಲಿ?: ಹತ್ಯೆಗೆ ರಾಜ್ಯದಲ್ಲಿ ಖಂಡನೆ

Shivamogga protest

ಬೆಂಗಳೂರು: ರಾಜಸ್ಥಾನದ ಉದಯಪುರದಲ್ಲಿ ಟೈಲರ್‌ ಕನ್ಹಯ್ಯ ಲಾಲ್‌ ಶಿರಚ್ಛೇದವನ್ನು (Rajasthan Murder) ಖಂಡಿಸಿ ಕರ್ನಾಟಕದ ವಿವಿಧೆಡೆ ಪ್ರತಿಭಟನೆ, ಆಕ್ರೋಶ ವ್ಯಕ್ತವಾಗಿದೆ.

ಧಾರವಾಡದಲ್ಲಿ ಪ್ರಮೋದ್‌ ಮುತಾಲಿಕ್‌ ನೇತೃತ್ವದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಶ್ರೀರಾಮ ಸೇನೆ ಕಾರ್ಯಕರ್ತರು, ಹತ್ಯೆಯನ್ನು ಖಂಡಿಸಿದರು. ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಪ್ರಮೋದ್ ಮುತಾಲಿಕ್, ಇಡೀ ದೇಶಾದ್ಯಂತ ತಲೆ ತಗ್ಗಿಸುವ ಕೃತ್ಯ ಇದು. ಪ್ರಜಾಪ್ರಭುತ್ವದ ಆಧಾರದ ಮೇಲೆ ನಮ್ಮ ದೇಶ ನಡೆಯುತ್ತಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಈ ಹತ್ಯೆಗೆ ಸರ್ಕಾರವೇ ಜವಾಬ್ದಾರಿಯಾಗಿದೆ. ಇಡೀ ದೇಶದಲ್ಲಿ ಭಯೋತ್ಪಾದಕರನ್ನೇ ಕಾಂಗ್ರೆಸ್ ಬೆಳೆಸಿದ್ದು, ಇವರ ಹಿಂದೆ ಮುಲ್ಲಾ ಮೌಲ್ವಿಗಳಿದ್ದಾರೆ ಅಥವಾ ಸಂಘಟನೆಗಳಿವೆ.

ಪ್ರಮೋದ್‌ ಮುತಾಲಿಕ್‌

ಒಂದು ತಿಂಗಳ ಒಳಗಡೆಯೇ ಅವರಿಗೆ ಶಿಕ್ಷೆ ಆಗಬೇಕು. ಇದನ್ನು ಕೇಂದ್ರ ಸರ್ಕಾರವೂ ಗಂಭೀರವಾಗಿ ತೆಗೆದುಕೊಳ್ಳಬೇಕು. ಸರ್ಕಾರ ನಾಟಕವನ್ನು ಮಾಡುವುದನ್ನು ನಿಲ್ಲಿಸಿ ಇಸ್ಲಾಮ್ ಮಾನಸಿಕತೆಗೆ ತಡೆಯೊಡ್ಡಬೇಕು. ಅಂಥವರನ್ನು ಸಮುದಾಯದಿಂದ ಬಹಿಷ್ಕಾರ ಹಾಕಬೇಕು.

ಧಾರವಾಡದಲ್ಲಿ ಕಲ್ಲಂಗಡಿ ಒಡೆದಿದ್ದಕ್ಕೆ ಅನೇಕರು ಆಹಾಕಾರ ಮಾಡಿದರು. ಕುಮಾರಸ್ವಾಮಿ 10 ಸಾವಿರ ರೂ. ಕೊಟ್ಟು ದೊಡ್ಡ ರಾದ್ಧಾಂತ ಮಾಡಿದರು. ಈಗ ಏನು ಮಾಡುತ್ತೀರ? ಬುದ್ಧಿ ಜೀವಿಗಳೇ ಒಬ್ಬರಾದರೂ ಮಾತನಾಡಿ ಎಂದು ಮುತಾಲಿಕ್‌ ಆಗ್ರಹಿಸಿದರು.

ಶಿವಮೊಗ್ಗದ ಶಿವಪ್ಪನಾಯಕ ವೃತ್ತದಲ್ಲಿ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ನೇತೃತ್ವದಲ್ಲಿ ಸೇರಿದ ಪ್ರತಿಭಟನಾಕಾರರು, ಹತ್ಯೆ ನಡೆಸಿದವರ ವಿರುದ್ಧ ಘೋಷಣೆ ಕೂಗಿದರು. ಜಿಹಾದಿಗಳು ಅಮಾಯಕ ಟೈಲರ್ ಹತ್ಯೆ ಮಾಡಿದ್ದಾರೆ. ಕೊಲೆಗಡುಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ಹತ್ಯೆ ಮಾಡಿದವರ ಪ್ರತಿಕೃತಿಯನ್ನು ದಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಸ್‌. ಈಶ್ವರಪ್ಪ, ಇಂತಹ ಸಭೆಯಲ್ಲಿ, ಪ್ರತಿಭಟನೆಯಲ್ಲಿ ಮಾನತಾಡಲು ನೋವಾಗುತ್ತದೆ. ರಾಷ್ಟ್ರಭಕ್ತ ಹಿಂದೂಗಳನ್ನು ಹೇಡಿಗಳ ರೀತಿಯಲ್ಲಿ ಹೋಗಿ ಕೊಲೆ ಮಾಡಲಾಗುತ್ತಿದೆ. ಸಂವಿಧಾನದಲ್ಲಿ ತಿದ್ದುಪಡಿ ಮಾಡಿ, ಇಂತಹವರನ್ನು ಗುಂಡಿಟ್ಟು ಕೊಲ್ಲಬೇಕು, ಇಲ್ಲವೇ ಗಲ್ಲಿಗೇರಿಸಬೇಕು. ಈಗಾಗಲೇ ಆರೋಪಿಗಳು ವಿಡಿಯೋದಲ್ಲಿ ಒಪ್ಪಿಕೊಂಡಿರುವುದರಿಂದ ವಿಚಾರಣೆ ಮಾಡುವ ಅಗತ್ಯವೇ ಇಲ್ಲ. ಕೋರ್ಟ್‌ಗೆ ಕರೆದುಕೊಂಡು ಹೋಗಿ ನಿಲ್ಲಿಸಿದರೆ, ಅಲ್ಲಿಯೂ ಇವರು ಇದನ್ನೇ ಹೇಳುತ್ತಾರೆ. ಕೊಲೆಗಡುಕ ರಾಷ್ಟ್ರದ್ರೋಹಿಗಳನ್ನು ಕೊಲ್ಲಲು ಸಂವಿಧಾನದಲ್ಲಿ ತಿದ್ದುಪಡಿ ಮಾಡಿ ಕಾನೂನು ರೂಪಿಸಬೇಕು ಎಂದರು.

ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರಿಂದ ಮೌನಾಚರಣೆ

ಶಿವಮೊಗ್ಗದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಯುತ್ತಿದೆ. ಆದರೆ, ಬೇರೆ ಕಡೆ ಏನಾಗುತ್ತದೆಯೋ ಗೊತ್ತಿಲ್ಲ. ಹಿಂದೂ ಟೈಲರ್‌ಗೆ ಆದ ರೀತಿಯಲ್ಲಿಯೇ ಮುಸಲ್ಮಾನರಿಗೆ ಆದರೆ ಏನಾಗುತ್ತದೆ? ಈ ಎಚ್ಚರಿಕೆಯನ್ನ ನಾನು ಮುಸಲ್ಮಾನರಿಗೆ ನೀಡುತ್ತೇನೆ.

ಚಿಕ್ಕಮಗಳೂರಿನಲ್ಲಿ ಒಟ್ಟಾದ ಬಿಜೆಪಿ ಕಾರ್ಯಕರ್ತರು, ಹತ್ಯೆಯನ್ನು ಖಂಡಿಸಿ ಮೌನಾಚರಣೆ ನಡೆಸಿದರು. ನಂತರ ಆಜಾದ್‌ ಪಾರ್ಕ್‌ ಬಳಿ ಪ್ರತಿಭಟನೆ ನಡೆಸಿದರು. ಹತ್ಯೆ ಮಾಡಿದವರನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.

ಕಲಬುರಗಿಯಲ್ಲಿ ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಈ ಕುರಿತು ಪ್ರತಿಕ್ರಿಯಿಸಿದ್ದು, ಇದು ಇಡೀ ದೇಶ ತಲೆ ತಗ್ಗಿಸುವಂತಹ ವಿಚಾರ. ಕನ್ಹಯ್ಯಲಾಲ್‌ರನ್ನ ಆತನ ಅಂಗಡಿಗೆ ನುಗ್ಗಿ ಹಾಡು ಹಗಲೆ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಆರೋಪಿಗಳಾದ ಮೊಹಮ್ಮದ ರಿಯಾಜ್ ಮತ್ತು ಅನ್ಸಾರಿಯನ್ನು ಗುಂಡಿಟ್ಟು ಹತ್ಯೆ ಮಾಡಬೇಕು.

ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ

ವಿಡಿಯೋ ಹರಿ ಬಿಟ್ಟು, ಅಲ್ಲಿ ಮತ್ತೆ ಪರಿಸ್ಥಿತಿ ಉದ್ವಿಗ್ನವಾಗುವಂತೆ ಮಾಡಿದ್ದಾರೆ. ಇಂಥಹ ಕೊಲೆಗಡುಕರು ಐಸಿಸ್‌ನ ಏಜೆಂಟರು. ಇವರನ್ನು ಬಂಧಿಸಿ ಜೈಲಿಗೆ ಹಾಕಿ ಪೋಷಿಸಬಾರದು. ಕಂಡಲ್ಲಿ ಗುಂಡಿಟ್ಟು ಹತ್ಯೆ ಮಾಡಬೇಕು. ರಾಜಸ್ಥಾನದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದು, ಮುಸ್ಲಿಮರ ತುಷ್ಠೀಕರಣ ಮಾಡುತ್ತಿದೆ. ಇದೇ ಕಾರಣಕ್ಕೆ ಇಂತಹ ಘಟನೆಗಳು ನಡೆಯುತ್ತಿವೆ ಎಂದಿದ್ದಾರೆ.

Exit mobile version