Site icon Vistara News

Crime News | ಆಶ್ರಯ ನೀಡುವುದಾಗಿ ಕರೆದೊಯ್ದು ಯುವತಿ ಮೇಲೆ ಅತ್ಯಾಚಾರ

ರಾಮನಗರ: ಆಶ್ರಯ ನೀಡುವುದಾಗಿ ಕರೆದೊಯ್ದು ಯುವತಿ ಮೇಲೆ ಅತ್ಯಾಚಾರ ನಡೆಸಿ ಬಲವಂತದ ಮದುವೆ ಮಾಡಿಸಿರುವ ಪ್ರಕರಣ (Crime News) ಬೆಳಕಿಗೆ ಬಂದಿದೆ.

ಯುವತಿಯೊಬ್ಬಳು ಕುಟುಂಬಸ್ಥರೊಂದಿಗೆ ಜಗಳವಾಡಿಕೊಂಡು ಮನೆ ಬಿಟ್ಟು ಬಂದಿದ್ದಳು. ರಾಮನಗರ ಬಸ್ ನಿಲ್ದಾಣದಲ್ಲಿದ್ದ ಯುವತಿಗೆ ಆಶ್ರಯ ಕೊಡುವುದಾಗಿ ನಂಬಿಸಿ, ಪ್ರೀತಿ ಎಂಬ ಮಹಿಳೆ ಅನಾಥಾಶ್ರಮಕ್ಕೆ ಕರೆದೊಯ್ದಿದ್ದಳು. ಈ ವೇಳೆ ಯುವತಿ ಮೇಲೆ ಯೋಗೀಶ್ ಎಂಬಾತ ನಿರಂತರ ಅತ್ಯಾಚಾರ ನಡೆಸಿ, ಮಾನಸಿಕ ಹಿಂಸೆ ನೀಡಿದ್ದಾನೆ. ಯುವತಿ ಗರ್ಭಿಣಿಯಾಗಿದ್ದು, ಬಳಿಕ ಗರ್ಭಪಾತ ಮಾಡಿಸಿದ್ದಾರೆ. ಇಲ್ಲಿಯ ವಿಷಯ ಹೇಳಿದರೆ ಯುವತಿಯ ಅಣ್ಣನನ್ನು ಕೊಲೆ ಮಾಡುವುದಾಗಿ ಹೆದರಿಸಿ ಗರ್ಭಪಾತ ಮಾಡಿಸಿದ್ದಾರೆ. ಜತೆಗೆ ಬಲವಂತವಾಗಿ ಮತ್ತೊಬ್ಬನ ಜತೆಗೆ ಮದುವೆ ಮಾಡಿಸಿದ್ದಾರೆಂದು ಯುವತಿ ಆರೋಪಿಸಿದ್ದಾಳೆ.

ರಾಮನಗರ ಮಹಿಳಾ ಠಾಣೆಗೆ ನೊಂದ ಯುವತಿ ದೂರು ನೀಡಿದ್ದಾಳೆ. ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಈ ಪ್ರಕರಣದಲ್ಲಿ ಪ್ರೀತಿ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು, ಮತ್ತಿಬ್ಬರಿಗಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ | Ration Card | ರೇಷನ್ ಕಾರ್ಡ್‌ನಲ್ಲಿ ಯೇಸು ಭಾವಚಿತ್ರ; ರಾಮನಗರದಲ್ಲಿ ಕ್ರಿಶ್ಚಿಯನ್‌ ಮತ ಪ್ರಚಾರದ ಆರೋಪ

Exit mobile version