Site icon Vistara News

ಕೂಲಿಗೆ ಬಂದ ಯುಪಿ ಕುಟುಂಬಕ್ಕೆ ಮೃತ್ಯುವಾಯ್ತು ನಾಡ ಬಂದೂಕು | ಆಕಸ್ಮಿಕವಾಗಿ ಗುಂಡು ಹಾರಿ ಬಾಲಕ ಸಾವು

country gun

ರಾಮನಗರ: ಮಾಲೀಕನ ನಿರ್ಲಕ್ಷ್ಯದಿಂದ ಲೋಡ್‌ ಮಾಡಿ ಇಡಲಾಗಿದ್ದ ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿ ಬಾಲಕ ಸಾವಿಗೀಡಾದ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಾಡಶಿವನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶಮಾ (7) ಮೃತ ಬಾಲಕ. ಬಾಲಕನ‌ ಸಹೋದರರ ಕೈಯಲ್ಲಿರುವಾಗಲೇ ಬಂದೂಕಿನ ಗುಂಡು ಹಾರಿದೆ. ಸಾಜೀದ್ (16) ಎಂಬಾತ ಬಂದೂಕಿನ ಟ್ರಿಗರ್ ಒತ್ತಿದ್ದಾನೆ.

ಮಲ್ಲೇಶ್ ಎಂಬಾತನ ಜಮೀನಿನಲ್ಲಿ ಕೂಲಿ ಕೆಲಸಕ್ಕೆಂದು ಉತ್ತರ ಪ್ರದೇಶದಿಂದ ಬಂದ ಕುಟುಂಬ ಇವರದಾಗಿದೆ. ತಂದೆ ಅಮಿನುಲ್ಲಾ, ತಾಯಿ ಸಮ್ ಸೂನ್ ಮಕ್ಕಳ ಜತೆಗೆ ಮೂರು‌ ದಿನಗಳ ಕೆಳಗೆ ಕೂಲಿ ಕೆಲಸಕ್ಕೆಂದು ಬಂದಿದ್ದರು. ತಂದೆ ತಾಯಿ ತೋಟದಲ್ಲಿ ಕೆಲಸದಲ್ಲಿ‌ ನಿರತರಾಗಿದ್ದರು. ಈ ವೇಳೆ ತೋಟದ ಮನೆಯಲ್ಲಿ ಇದ್ದ ಮಲ್ಲೇಶ್ ಅವರ ನಾಡಬಂದೂಕು ತೆಗೆದುಕೊಂಡು ಮಕ್ಕಳು ಆಟವಾಡಲು ಮುಂದಾಗಿದ್ದರು. ಸಾಜೀದ್ ಆಕಸ್ಮಿಕವಾಗಿ ಟ್ರಿಗರ್‌ ಅದುಮಿದ್ದು, ಗುಂಡು ಶಮಾ ಎಂಬ ಬಾಲಕನಿಗೆ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸುರಕ್ಷತಾ ನಿಯಮ ಪಾಲಿಸದೇ ಮನೆಯಲ್ಲಿ ಬಂದೂಕನ್ನು ಲೋಡ್‌ ಮಾಡಿ ಇಟ್ಟಿದ್ದ ಮಾಲೀಕ ಮಲ್ಲೇಶ್‌ನನ್ನು ಬಂಧಿಸಲಾಗಿದೆ. ಗುಂಡು ಹಾರಿಸಿದ ಬಾಲಕ ಸಾಜೀದ್‌ನನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Hit and Run | ನೆಲಮಂಗಲದಲ್ಲಿ ಕಾರು ಡಿಕ್ಕಿ, ವ್ಯಕ್ತಿ ಸಾವು

Exit mobile version