Site icon Vistara News

Crime | ಮನೆಗೆ ನುಗ್ಗಿ ಮುಸುಕುಧಾರಿಗಳಿಂದ ಚಾಕು ಇರಿತ; ಚನ್ನಪಟ್ಟಣ ನಿವಾಸಿಗೆ ಗಂಭೀರ ಗಾಯ

ಚಾಕು ಇರಿತ

ರಾಮನಗರ: ಚನ್ನಪಟ್ಟಣದಲ್ಲಿ ಮುಸುಕುಧಾರಿ ವ್ಯಕ್ತಿಗಳು ಏಕಾಏಕಿ ಮನೆಗೆ ನುಗ್ಗಿ ಚಾಕು ಇರಿದಿದ್ದರಿಂದ (Crime) ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚನ್ನಪಟ್ಟಣದ ನವ್ಯ ಸಿಲ್ಕ್ ಸ್ಯಾರಿ ಸೆಂಟರ್ ಮಾಲೀಕ ಲಕ್ಷ್ಮೀನಾರಾಯಣ್ ಗಾಯಾಳು. ಇವರು ಮೂರನೇ ಕ್ರಾಸ್‌ನಲ್ಲಿರುವ ತಮ್ಮ ಮನೆಯಲ್ಲಿದ್ದಾಗ ಸೋಮವಾರ ಸಂಜೆ ನುಗ್ಗಿರುವ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ.

ಈ ವೇಳೆ ಕುತ್ತಿಗೆಗೆ ನಾಲ್ಕೈದು ಬಾರಿ ಇರಿದಿದ್ದರಿಂದ ಲಕ್ಷ್ಮೀನಾರಾಯಣ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಡಿವೈಎಸ್‌ಪಿ ಓಂ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶ್ವಾನದಳ, ಬೆರಳಚ್ಚು ತಜ್ಞರು ಮಾಹಿತಿ ಕಲೆಹಾಕುತ್ತಿದ್ದಾರೆ. ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Suicide Case | ಹಿರಿಯ ಅಧಿಕಾರಿ, ಸಹೋದ್ಯೋಗಿ ಕಿರುಕುಳಕ್ಕೆ ಬೇಸತ್ತು ಲೈನ್‌ಮನ್‌ ಆತ್ಮಹತ್ಯೆ!

Exit mobile version