Site icon Vistara News

Road accident : ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ತಾಯಿ, ಒಂದು ವರ್ಷದ ಪುಟ್ಟ ಮಗು ಸ್ಥಳದಲ್ಲೇ ಸಾವು

accident at Dharwad

#image_title

ಧಾರವಾಡ: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು (Road accident) ಬೈಕ್‌ನಲ್ಲಿ ಸಾಗುತ್ತಿದ್ದ ತಾಯಿ ಮತ್ತು ಮಗು ದಾರುಣವಾಗಿ ಪ್ರಾಣ ಕಳೆದುಕೊಂಡಿರುವ ಭೀಕರ ಘಟನೆ ಧಾರವಾಡದ ಹೊರವಲಯದಲ್ಲಿ ಸಂಭವಿಸಿದೆ.

ಧಾರವಾಡದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಬೆಳಗಾವಿ ರಸ್ತೆಯ ಬೇಲೂರು ಬಳಿ ನಡೆದ ಘಟನೆಯಲ್ಲಿ ತಾಯಿ ಸಂಗವ್ವ ಹೆಗ್ಗಣ್ಣವರ (20) ಹಾಗೂ ಮಗು ಮಾಯಕ್ಕ (1) ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಜಕ್ಕಪ್ಪ ಎಂಬವರು ಪತ್ನಿ ಮತ್ತು ಒಂದು ವರ್ಷದ ಮಗುವಿನೊಂದಿಗೆ ಬೈಕ್‌ನಲ್ಲಿ ಹುಬ್ಬಳ್ಳಿಗೆ ಬರುವಾಗ ಈ ಘಟನೆ ನಡೆದಿದೆ. ಹೆದ್ದಾರಿಯಲ್ಲಿ ಬರುತ್ತಿದ್ದ ವೇಳೆ ಹಿಂದಿನಿಂದ ಬಂದ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಈ ಸಂದರ್ಭ ಬೈಕ್‌ ರಸ್ತೆಗೆ ಉರುಳಿ ಬಿದ್ದಿದ್ದು, ತಾಯಿ ಮತ್ತು ಒಂದು ವರ್ಷದ ಮಗು ತಲೆ ರಸ್ತೆಗೆ ಬಡಿದು ಸಾವನ್ನಪ್ಪಿದ್ದಾರೆ.

ಮೃತರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಗರಾಳ ಗ್ರಾಮದವರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಗರಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Fire tragedy: ಬಿಎಂಟಿಸಿ ಬಸ್ಸಿಗೆ ಬೆಂಕಿ, ಕಂಡಕ್ಟರ್‌ ಸಜೀವ ದಹನ

ಬೆಂಗಳೂರು: ಬಸ್‌ ಅಗ್ನಿಗೆ ಆಹುತಿಯಾದ ಪರಿಣಾಮ ಬಿಎಂಟಿಸಿ ಬಸ್ಸಿನಲ್ಲಿ ಮಲಗಿದ್ದ ನಿರ್ವಾಹಕರೊಬ್ಬರು ಸಜೀವ ದಹನಗೊಂಡ ಘಟನೆ ಲಿಂಗಧೀರನಹಳ್ಳಿಯಲ್ಲಿ ನಡೆದಿದೆ.

ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಲಿಂಗಧೀರನಹಳ್ಳಿ ಡಿ ಗ್ರೂಪ್ ಲೇಔಟ್ ಬಸ್ ನಿಲ್ದಾಣದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮುತ್ತಯ್ಯಸ್ವಾಮಿ (45) ಮೃತ ಕಂಡಕ್ಟರ್.‌ ಬಸ್ಸಿಗೆ ಇದ್ದಕ್ಕಿದ್ದಂತೆ

31ನೇ ಸುಮನಹಳ್ಳಿ ಬಸ್ ಡಿಪೋ ಸೇರಿರುವ KA57F2069 ನಂಬರಿನ BMTC ಬಸ್‌ ಅನ್ನು ಚಾಲಕ ಪ್ರಕಾಶ್‌ ಹಾಗೂ ನಿರ್ವಾಹಕ ಮುತ್ತಯ್ಯ ಸ್ವಾಮಿ ನಡೆಸುತ್ತಿದ್ದರು. ರಾತ್ರಿ ರೂಟ್ ಮುಗಿಸಿ ಲಿಂಗಧೀರನಹಳ್ಳಿ ಬಸ್ ನಿಲ್ದಾಣದಲ್ಲಿ ಬಸ್‌ನಲ್ಲಿ ಇಬ್ಬರೂ ಮಲಗಿದ್ದರು. ಬೆಳಗ್ಗೆ 4 ಗಂಟೆ ವೇಳೆ ಚಾಲಕ ಪ್ರಕಾಶ್‌ ಎದ್ದು ಶೌಚಕ್ಕೆ ಹೋದಾಗ ಬಸ್ಸಿಗೆ ಬೆಂಕಿ ಹತ್ತಿಕೊಂಡಿದೆ. ಬಸ್ಸು ಸುಟ್ಟು ಕರಕಲಾಗಿದ್ದು, ಮುತ್ತಯ್ಯ ಸ್ವಾಮಿ ಕೂಡ ದಹಿಸಿಹೋಗಿದ್ದಾರೆ. ಸ್ಥಳಕ್ಕೆ ಬ್ಯಾಡರಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ Child falls from Balcony: ಆಟವಾಡುತ್ತಾ ಬಾಲ್ಕನಿಯಿಂದ ಕೆಳಗೆ ಬಿದ್ದ 3 ವರ್ಷದ ಮಗು; ತಲೆಗೆ ಗಂಭೀರ ಗಾಯ

Exit mobile version