Site icon Vistara News

Shimogga tense | ಚೂರಿ ಇರಿತ ಪ್ರಕರಣದಲ್ಲಿ ನಾಲ್ವರ ಬಂಧನ

knife

ಶಿವಮೊಗ್ಗ: ಶಿವಮೊಗ್ಗದಲ್ಲಿ ಪ್ರೇಮ್ ಸಿಂಗ್ ಎಂಬವರ ಮೇಲೆ ಚೂರಿಯಿಂದ ಇರಿದು ಹಲ್ಲೆ ನಡೆಸಿದ್ದ ಒಟ್ಟು ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ರಾತ್ರಿಯೇ ನದೀಂ ಮತ್ತು ರೆಹಮಾನ್ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಸೋಮವಾರ ತಡರಾತ್ರಿ ಜಬೀವುಲ್ಲಾ ಎಂಬ ಆರೋಪಿಯನ್ನು ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಮಂಗಳವಾರ ಮತ್ತೊಬ್ಬ ಆರೋಪಿ ತನ್ವೀರ್‌ ಎಂಬಾತನನ್ನು ಬಂಧಿಸಲಾಗಿದೆ.

ಈ ಕುರಿತು ಶಿವಮೊಗ್ಗದಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಹೇಳಿಕೆ ನೀಡಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. A1-ಜಬೀವುಲ್ಲಾ, A2-ರೆಹಮಾನ್, A3-ನದೀಂ, A4-ತನ್ವೀರ್‌ ಬಂಧಿತ ಆರೋಪಿಗಳು. A1 ಆರೋಪಿ ಜಬೀವುಲ್ಲಾ, ಪ್ರೇಮ್ ಸಿಂಗ್‌ಗೆ ಚಾಕು ಇರಿದಿದ್ದ. ಈತನನ್ನು ಬಂಧಿಸಲು ತೆರಳಿದ್ದ ವೇಳೆ ಆತ ಪ್ರತಿರೋಧ ಒಡ್ಡಿದ್ದ. ಹೀಗಾಗಿ ನಮ್ಮ ಪೊಲೀಸರು ಆತನಿಗೆ ಗುಂಡೇಟು ಹೊಡೆದಿದ್ದರು. ಈ ನಾಲ್ವರೂ ಪಿಎಫ್‌ಐ ಕಾರ್ಯಕರ್ತರೇ ಅಲ್ಲವೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ, ತನಿಖೆ ಮುಗಿದ ಬಳಿಕ ತಿಳಿಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: Shimogga tense | ಚೂರಿ ಇರಿತ ಆರೋಪಿಗೆ ಗುಂಡೇಟು, ಬಂಧನ

Exit mobile version