Site icon Vistara News

Shivamogga Violence : ವೇಷ ಮರೆಸಿ ಗಲಭೆ ಹೇಳಿಕೆ; ರಾಮಲಿಂಗಾ ರೆಡ್ಡಿ ಮೇಲೆ ಮುಗಿಬಿದ್ದ ಬಿಜೆಪಿ

Ramalinga Reddy CT Ravi KS Eshwarappa

ಬೆಂಗಳೂರು/ಶಿವಮೊಗ್ಗ: ಬಿಜೆಪಿಯವರು ವೇಷ ಬದಲಾಯಿಸಿ, ಹೆಸರು ಬದಲಾಯಿಸಿ ಗಲಭೆ ಸೃಷ್ಟಿ (BJP people change dress and create tension) ಮಾಡೋದರಲ್ಲಿ ಸಿದ್ಧಹಸ್ತರು ಎಂಬ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಅವರ ಹೇಳಿಕೆಯನ್ನು ಬಿಜೆಪಿ ಕಟುವಾಗಿ ಖಂಡಿಸಿದೆ. ಬಿಜೆಪಿ ನಾಯಕರು, ಒಬ್ಬರಾದ ಮೇಲೆ ಒಬ್ಬರು ರಾಮಲಿಂಗಾ ರೆಡ್ಡಿ ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಅದರಲ್ಲೂ ರಾಮಲಿಂಗಾ ರೆಡ್ಡಿಯಂಥವರು ಈ ರೀತಿಯ ಹೇಳಿಕೆ (Shivamogga Violence) ನೀಡಬಾರದಿತ್ತು ಎಂಬ ಮಾತನ್ನೂ ಆಡಿದ್ದಾರೆ.

ರೆಡ್ಡಿ ಇಷ್ಟು ಕೆಳಗಿಳಿಯುತ್ತಾರೆ ಅಂತ ಗೊತ್ತಿರಲಿಲ್ಲ ಎಂದ ಈಶ್ವರಪ್ಪ

ʻʻಹಿಂದೆ ಗೃಹ ಸಚಿವರಾಗಿದ್ದ ರಾಮ, ಲಿಂಗ ಮೊದಲಾದ ದೇವರ ಹೆಸರು ಇಟ್ಟುಕೊಂಡವರು ರೆಡ್ಡಿಯವರು ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಅಂತ ಗೊತ್ತಿರಲಿಲ್ಲ. ಗೃಹಸಚಿವರಾಗಿದ್ದವರ ಮಾತು ನಂಬಲು ಸಾಧ್ಯವಿಲ್ಲʼʼ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ʻʻಅವರು ನಾಳೆ ಶಿವಮೊಗ್ಗಕ್ಕೆ ಬರಲಿ. ಮುಸಲ್ಮಾನ ಗುಂಡಾಗಳು ಹಿಂದು ಮನೆಗಳನ್ನು ಹುಡುಕಿ ಹುಡುಕಿ ಹೊಡೆದಿದ್ದನ್ನು ನಾನೇ ತೋರಿಸ್ತೇನೆ. ಆಸ್ಪತ್ರೆಗೂ ನಾನೇ ಕರೆದೊಯ್ಯುತ್ತೇನೆ. ಎಸ್ಪಿ, ನಾನು, ಅವರು ಮೂರು ಜನ ಕೂತು ಮಾತಾಡೋಣ. ಬಿಜೆಪಿಯವರು ವೇಷ ಬದಲಿಸಿ ಗಲಭೆ ಮಾಡಿದ್ದಾರೆ ಎಂದು ಎಸ್ಪಿ ಹೇಳಿದರೆ ರಾಮಲಿಂಗಾರೆಡ್ಡಿ ಏನೇ ಹೇಳಿದ್ರೂ ನಾನು ಕೇಳ್ತೇನೆʼʼ ಎಂದು ಹೇಳಿದರು.

ʻʻನಾವು ಯಾವುದೇ ಮುಸಲ್ಮಾನರಿಗೆ ತೊಂದರೆ ಕೊಟ್ಟಿಲ್ಲ. ಬಿಜೆಪಿ ಕಾರ್ಯಕರ್ತನ ರಕ್ತದ ಕಣಕಣ ಕೂಡ ನಾವು ಭಾರತ ಮಾತೆಯ ಮಕ್ಕಳು ಅನ್ನುತ್ತದೆʼʼ ಎಂದು ಕೆ.ಎಸ್.‌ ಈಶ್ವರಪ್ಪ ಹೇಳಿದರು.

ʻʻರಾಮಲಿಂಗಾ ರೆಡ್ಡಿ ಅವರು ಈ ರೀತಿ ನೇರ ಸುಳ್ಳು ಹೇಳಿ ಜನರನ್ನು ಕೆರಳಿಸುವ ಪ್ರಯತ್ನ ಮಾಡ್ತಿದ್ದಾರೆ. ಸುಳ್ಳು ಹೇಳಿಕೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಸ್‌ಪಿ ಹೇಳಿದ್ದಾರೆ. ಅವರು ರಾಮಲಿಂಗಾ ರೆಡ್ಡಿ ಮೇಲೆ ಕ್ರಮ‌ಕೈಗೊಳ್ಳಲಿʼʼ ಎಂದು ಹೇಳಿದ ಈಶ್ವರಪ್ಪ ಅವರು, ಇಲ್ಲದಿದ್ದರೆ ರಾಮಲಿಂಗಾರೆಡ್ಡಿ ಅವರು ತನಗೆ ಬುದ್ಧಿಭ್ರಮಣೆ ಆಗಿತ್ತು, ತಪ್ಪಾಯ್ತು ಅಂತ ಹಿಂದುಗಳ ಕ್ಷಮೆ ಕೇಳಲಿʼʼ ಎಂದು ಆಗ್ರಹಿಸಿದರು.

ಇದು ಪೂರ್ವನಿಯೋಜಿತ ಗಲಭೆ ಎಂದ ಈಶ್ವರಪ್ಪ

ರಾಗಿಗುಡ್ಡದಲ್ಲಿ ನಡೆದಿರುವುದು ಪೂರ್ವನಿಯೋಜಿತ ಗಲಭೆ. ಸರ್ಕಾರದ ಬಳಿ ಬೇಹುಗಾರಿಕೆ ಸಂಸ್ಥೆ ಇಲ್ವ? ಗಲಾಟೆ ಮಾಡಿದವರು ಜೈಲಲ್ಲಿ ಇದ್ದಾರೆ. ಅವರು ಖುದ್ದು ಜೈಲಿಗೆ ಹೋಗಿ ಬರಲಿ. ಯಾರ್ಯಾರು ವೇಷ ಬದಲಿಸಿಕೊಂಡು ಇದ್ದಾರೆ ಗೊತ್ತಾಗುತ್ತದೆ ಎಂದು ಕೆ.ಎಸ್‌. ಈಶ್ವರಪ್ಪ ಹೇಳಿದರು.

ʻʻಗೃಹಸಚಿವರು ಇದು ಸಣ್ಣ ಘಟನೆ ಅಂತ ಹೇಳ್ತಾರೆ. ಮುಸ್ಲಿಮರ ಕೈಯಲ್ಲಿ ರಟ್ಟಿನ ಖಡ್ಗವೂ ಇತ್ತು, ಒರಿಜಿನಲ್ ಕೂಡ ಇತ್ತು. ಗೃಹಸಚಿವರು ಯಾವ ರೀತಿ ನೋಡ್ತಾರೋ ಗೊತ್ತಿಲ್ಲʼʼ ಎಂದರು. ʻʻಜೈಲಲ್ಲಿ ಇದ್ದವರನ್ನು ಬಿಡಬೇಕು ಅಂತ ಪತ್ರ ಬರೆಯುವ ಡಿಕೆ ಶಿವಕುಮಾರ್‌ ಅವರಂಥ ಡಿಸಿಎಂ ರಾಜ್ಯಕ್ಕೆ ಬೇಕಾಗಿಲ್ಲʼʼ ಎಂದು ಹೇಳಿದರು.

ರೆಡ್ಡಿಯವರೇ ನೀವು ಇಷ್ಟು ಕೆಟ್ಟು ಹೋಗಬಾರದು: ಸಿ.ಟಿ. ರವಿ

ʻʻರಾಮಲಿಂಗಾ ರೆಡ್ಡಿ ಅವರೇ ನೀವು ಇಷ್ಟು ಕೆಟ್ಟು ಹೋಗಬಾರದು. ಸಿಸಿ ಟಿವಿಯಲ್ಲಿ ಮೀಸೆ ಬೋಳಿಸಿಕೊಂಡು, ಗಡ್ಡ ಬಿಟ್ಟವರಿದ್ರಾ.? ಇಲ್ಲ ಮೀಸೆ ಬಿಟ್ಟುಕೊಂಡವರು ಇದ್ರಾ.? ರಾಮಲಿಂಗಾ ರೆಡ್ಡಿ ತರದ ಹಿಂದೂಗಳು ಅದರಲ್ಲಿ ಇರಬಹುದು. ಆದ್ರೆ ನನ್ನ ರೀತಿ ಅಥವಾ ಯತ್ನಾಳ್ ಅಂತವರು ಖಂಡಿತ ಇರಲಿಲ್ಲ.ʼʼ ಎಂದು ರಾಮಲಿಂಗಾ ರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಬಿಜೆಪಿ ನಾಯಕ ಸಿ.ಟಿ. ರವಿ.

ಇದನ್ನೂ ಓದಿ: Ramalinga Reddy : ಬಿಜೆಪಿಯವರೇ ವೇಷ ಬದಲಿಸಿ ಗಲಭೆ ಸೃಷ್ಟಿಸ್ತಾರೆ; ರಾಮಲಿಂಗಾ ರೆಡ್ಡಿ ವಿವಾದಾತ್ಮಕ ಹೇಳಿಕೆ

ಮುಸ್ಲಿಮರ ಮತಕ್ಕಾಗಿ ಇಂಥ ಹೇಳಿಕೆ: ತೇಜಸ್ವಿ ಸೂರ್ಯ ಆಕ್ರೋಶ

ಶಿವಮೊಗ್ಗ ಗಲಭೆಗೆ ಬಿಜೆಪಿ ಕಾರಣ ಎಂಬ ರಾಮಲಿಂಗ ರೆಡ್ಡಿ ಹೇಳಿಕೆಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿಸೂರ್ಯ ತಿರುಗೇಟು ನೀಡಿದ್ದಾರೆ. ʻʻಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದು ದಿನವೂ ಜನರ ಹಿತ ಬಯಸಿಲ್ಲ. ಅಲ್ಪಸಂಖ್ಯಾತರ ವೋಟ್ ಬ್ಯಾಂಕ್ ಗೋಸ್ಕರವೇ ಕೆಲಸ ಮಾಡ್ತಿದೆʼʼ ಎಂದು ಹೇಳಿದರು.

ʻʻನಮ್ಮ ಸರ್ಕಾರ ಇದ್ದಾಗ 40 ಅಡಿ ತಲ್ವಾರ್ ಮೆರವಣಿಗೆ ಯಾಕೆ ನಡೆಯಲಿಲ್ಲ? ಪೊಲೀಸರ ಮೇಲೆಯೇ ಕಲ್ಲು ತೂರಾಟ ಮಾಡಿದವರ ಮೇಲೂ ಯಾಕೆ ಸರ್ಕಾರ ಕ್ರಮ ತೆಗೆದುಗೊಂಡಿಲ್ಲʼʼ ಎಂದು ಪ್ರಶ್ನಿಸಿದರು.

ರಾಮ ಲಿಂಗಾ ರೆಡ್ಡಿಯವರು ಬಿಜೆಪಿಯವರು ವೇಷ ಬದಲಾಯಿಸಿ ಗಲಭೆ ಮಾಡ್ತಾರೆ ಎಂದು ಹೇಳಿದ್ದಾರಲ್ವಾ? ಹಾಗಿದ್ದರೆ ಈಗ ಅರೆಸ್ಟ್‌ ಆಗಿರೋರು ಯಾಕೆ ಹೆಸರು ಬದಲಿಸಿಕೊಂಡಿಲ್ಲ ಎಂದು ಕೇಳಿದರು.

Exit mobile version