Site icon Vistara News

CT Ravi: ಹೌದೋ ಹುಲಿಯಾ ಅಲ್ಲ… ಡ್ಯಾಶ್…‌ ಡ್ಯಾಶ್ ಖಾನ್ ಎಂದ ಸಿ.ಟಿ. ರವಿ; ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ

many congress leaders fearing loss after siddaramaiah decision regarding kolar

ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿ ಕ್ಷೇತ್ರದ ನಿಡಗುಂದಿ ಪಟ್ಟಣದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ರಥ ಯಾತ್ರೆ ರೋಡ್ ಶೋ ವೇಳೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ (CT Ravi) ಮಾತನಾಡುವಾಗ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಹೌದೋ ಹುಲಿಯಾ ಅಲ್ಲ, ಡ್ಯಾಶ್…‌ ಡ್ಯಾಶ್ ಖಾನ್ ಎಂದು ಹೇಳಿದ್ದಾರೆ.

ಸಿಟಿ ರವಿ ಭಾಷಣ ಮಾಡುವ ವೇಳೆ ಬಿಜೆಪಿ ಕಾರ್ಯಕರ್ತರು “ಹೌದೋ ಹುಲಿಯಾ” ಎಂದು ಘೋಷಣೆ ಕೂಗಿದ್ದಾರೆ. ಆಗ ಒಂದು ಕ್ಷಣ ಮಾತು ನಿಲ್ಲಿಸಿದ ರವಿ, ಹೌದೋ ಹುಲಿಯಾ ಅಲ್ಲ… ಡ್ಯಾಶ್… ಡ್ಯಾಶ್ ಖಾನ್ ಎಂದು ಹೇಳಿದರು. ಅಲ್ಲದೆ, ಪುನಃ ಜನರತ್ತ ನೋಡಿ, ಎಂತಹ ಖಾನ್..? ಎಂತಹ ಖಾನ್..? ಎಂದು ಕಾರ್ಯಕರ್ತರಿಗೆ ಸಿ.ಟಿ. ರವಿ ಪ್ರಶ್ನೆ ಮಾಡಿದಾಗ, ಕಾರ್ಯಕರ್ತರು, ಸಿದ್ರಾಮುಲ್ಲಾ ಖಾನ್ ಎಂದು ಘೋಷಣೆ ಕೂಗಿದರು.

ವಿಜಯ ಸಂಕಲ್ಪ ರಥ ಯಾತ್ರೆಯಲ್ಲಿ ಮಾತನಾಡಿದ ಸಿ.ಟಿ. ರವಿ

ಇದನ್ನೂ ಓದಿ: Vijayapura Road Accident: ವಿಜಯ ಸಂಕಲ್ಪ ಯಾತ್ರೆಯಲ್ಲಿ ಸರಣಿ ಕಾರು ಅಪಘಾತ; ದಾವಣಗೆರೆಯಲ್ಲಿ ಖಾಸಗಿ ಬಸ್ ಪಲ್ಟಿ

ಸಿ.ಟಿ. ರವಿ ಭಾಷಣದ ವಿಡಿಯೊ ಇಲ್ಲಿದೆ

ಪ್ರಧಾನಿ ನರೇಂದ್ರ ಮೋದಿಯವರು ಇಡೀ ದೇಶದ ಜನತೆಗೆ ಉಚಿತವಾಗಿ ಕೋವಿಡ್ ಇಂಜೆಕ್ಷನ್ ಕೊಡುವ ವ್ಯವಸ್ಥೆ ಮಾಡಿದರು. ಈ ವೇಳೆ ಜಾತಿ ಯಾವುದು ಅಂತ ಕೇಳಲಿಲ್ಲ. ಮುಸ್ಲಿಮರಿಗೂ, ಹಿಂದುಗಳಿಗೂ, ಕ್ರಿಶ್ಚಿಯನ್ನರಿಗೂ ಕೊಟ್ಟರು. ಆದರೆ, ನಮ್ಮ ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌ ಪಕ್ಷದವರು. ಶಾದಿ ಭಾಗ್ಯ ಅಂತ ಯೋಜನೆ ಕೊಟ್ಟರು. ಆದರೆ, ಇದು ಬಡವರ ಹೆಣ್ಣು ಮಕ್ಕಳಿಗಾಗಿ ಮಾಡಿದ ಯೋಜನೆ ಅಲ್ಲ. ಕೇವಲ ಒಂದು ಕೋಮಿನ ಮೂಗಿಗೆ ತುಪ್ಪ ಸವರುವ ಯೋಜನೆ ಎಂದ ಸಿ.ಟಿ. ರವಿ ಹೇಳಿದರು.

Exit mobile version