Site icon Vistara News

Suspicious death : ಪ್ರೀತಿಸಿ ಮದುವೆಯಾದವಳ ಅನುಮಾನಾಸ್ಪದ ಸಾವು

Suspicious death of housewife dharshini

ಮೈಸೂರು: ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದಲ್ಲಿ ಗೃಹಿಣಿ ಅನುಮಾನಾಸ್ಪದವಾಗಿ (Suspicious death) ಮೃತಪಟ್ಟಿದ್ದಾಳೆ. ಮೈಸೂರಿನ ದರ್ಶಿನಿ (21) ಮೃತ ದುರ್ದೈವಿ.

ಮನೆಯವರ ವಿರೋಧದ ನಡುವೆಯೂ ದರ್ಶಿನಿ ಒಂದೂವರೆ ವರ್ಷದ ಹಿಂದೆ ಬೆಳಗೊಳ ಗ್ರಾಮದ ಸೂರ್ಯ ಎಂಬಾತನನ್ನು ಪ್ರೀತಿಸಿ ಮದುವೆ ಆಗಿದ್ದಳು. ಆದರೆ ಮದುವೆಯಾದ ನಾಲ್ಕೇ ತಿಂಗಳಿಗೆ ವರದಕ್ಷಿಣೆ ತರುವಂತೆ ಮಗಳಿಗೆ ಕಿರುಕುಳ ನೀಡುತ್ತಿದ್ದರು ಎಂದು ದರ್ಶಿನಿ ಪೋಷಕರು ಆರೋಪಿಸಿದ್ದಾರೆ.

ನೇಣು ಬಿಗಿದುಕೊಂಡು ಮೃತಪಟ್ಟಿರುವ ದರ್ಶಿನಿ

ನಿಮ್ಮ ಮಗಳು ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದು, ಆಕೆಯ ಮೃತದೇಹ ಕೆಆರ್‌ ಆಸ್ಪತ್ರೆಯಲ್ಲಿದೆ ಎಂದು ಅಪರಿಚಿತರು ಫೋನ್‌ ಮಾಡಿ ದರ್ಶಿನಿ ಪೋಷಕರಿಗೆ ಮಾಹಿತಿಯನ್ನು ಮುಟ್ಟಿಸಿದ್ದಾರೆ. ಕೂಡಲೇ ಆಸ್ಪತ್ರೆಗೆ ಹೋಗಿ ನೋಡಿದಾಗ ಮಗಳು ಮೃತಪಟ್ಟಿರುವುದು ತಿಳಿದು ಬಂದಿದೆ. ಆಸ್ಪತ್ರೆಯಲ್ಲೇ ಇದ್ದ ಪತಿ ಸೂರ್ಯನನ್ನು ಈ ಬಗ್ಗೆ ಕೇಳಿದ್ದರೆ ದರ್ಶಿನಿ ಪೋಷಕರ ಮೇಲೆ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಇತ್ತ ಆಸ್ಪತ್ರೆಯಲ್ಲಿ ಜನರೆಲ್ಲರೂ ಸೇರುತ್ತಿದ್ದಂತೆ ಸೂರ್ಯ ಅಲ್ಲಿಂದ ಓಡಿ ಹೋದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸೂರ್ಯ ಎಂಬಾತನನ್ನು ಪ್ರೀತಿಸಿ ಮದುವೆ ಆಗಿದ್ದ ದರ್ಶಿನಿ

ನನ್ನ ಮಗಳಿಗೆ 15 ಲಕ್ಷ ರೂ. ವರದಕ್ಷಿಣೆ ತರುವಂತೆ ಹಾಗೂ ಕುಂಬಾರಕೊಪ್ಪದಲ್ಲಿರುವ ನಿಮ್ಮ ಅಪ್ಪನ ಮನೆಯನ್ನು ನನಗೆ ಬರೆಸಿಕೊಡು ಎಂದು ನಿತ್ಯ ಕಿರುಕುಳ ಕೊಡುತ್ತಿದ್ದರು. ನನ್ನ ಮಗಳ ಸಾವಿಗೆ ನ್ಯಾಯ ಬೇಕು. ಸೂರ್ಯ ಹಾಗೂ ಆತನ ಕುಟುಂಬಸ್ಥರನ್ನು ಬಂಧಿಸಬೇಕೆಂದು ದರ್ಶಿನಿ ಪೋಷಕರು ಒತ್ತಾಯಿಸಿದ್ದಾರೆ. ಘಟನೆ ಸಂಬಂಧ ಕೆ.ಆರ್.ಎಸ್ ಠಾಣೆಗೆ ದೂರು ನೀಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version