Site icon Vistara News

Murder Case | ಕುಡಿದ ಎಣ್ಣೆ ಸಾಲ ಕೇಳಿದ್ದಕ್ಕೆ ಮಹಿಳೆ ಹತ್ಯೆ; ಮೂವರು ಆರೋಪಿಗಳ ಸೆರೆ

ಮಹಿಳೆ ಹತ್ಯೆ

ರಾಮನಗರ: ಕುಡಿದ ಎಣ್ಣೆ ಸಾಲ ಕೇಳಿದ್ದಕ್ಕೆ ಮಹಿಳೆ ಹತ್ಯೆ (Murder Case) ಪ್ರಕರಣದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಮನಗರ ಗ್ರಾಮಾಂತರ ಠಾಣೆ ಅಚಲು ಗ್ರಾಮದ ಲಿಂಗರಾಜು (19), ರವಿ (20) ಹಾಗೂ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ.

ಸೆಪ್ಟೆಂಬರ್ 8ರಂದು ಅಚಲು ಗ್ರಾಮದ ಕೆಂಪಮ್ಮ (45) ಅವರನ್ನು ಕೊಲೆ ಮಾಡಲಾಗಿತ್ತು. ಚಿಲ್ಲರೆ ಅಂಗಡಿ ಇಟ್ಟಿದ್ದ ಮಹಿಳೆಯ ಅಂಗಡಿಯಲ್ಲಿ ಆರೋಪಿಗಳು ಆಗಾಗ ಸಾಲಕ್ಕೆ ಮದ್ಯ ಖರೀದಿಸುತ್ತಿದ್ದರು. ಆರೋಪಿಗಳು ಅಂಗಡಿಗೆ ಬಂದಾಗ ಕೇವಲ 600 ರೂಪಾಯಿ ಸಾಲದ ಕೇಳಿದ್ದಕ್ಕಾಗಿ ಮಹಿಳೆ ವಿರುದ್ಧ ಆರೋಪಿಗಳು ಜಗಳ ತೆಗೆದಿದ್ದಾರೆ.

ಬೀದಿಯಲ್ಲಿ ಸಾಲ ಕೇಳಿದ್ದಕ್ಕೆ ಕೋಪ ಮಾಡಿಕೊಂಡ ಆರೋಪಿಗಳು, ಮಹಿಳೆ ದನ ಮೇಯಿಸಲು ಹೋಗಿದ್ದಾಗ ವೈರ್‌ನಲ್ಲಿ ಕುತ್ತಿಗೆ ಬಿಗಿದು ಕೊಲೆ ಮಾಡಿ ಬಳಿಕ ಪ್ಲಾಸ್ಟಿಕ್ ಚೀಲದಲ್ಲಿ ಮಹಿಳೆ ಶವ ತುಂಬಿ ಅರ್ಕಾವತಿ ನದಿ ದಡದಲ್ಲಿ ಬಿಸಾಡಿದ್ದರು. ಜತೆಗೆ ಆಕೆಯ ಮೈಮೇಲಿದ್ದ 22 ಗ್ರಾಂ ಚಿನ್ನಾಭರಣ ಕದ್ದಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿರುವ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ, 22 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ | Suicide Case | ಉಟ್ಟ ಲುಂಗಿಯಲ್ಲಿಯೇ ನೇಣಿಗೆ ಶರಣಾದ ವ್ಯಕ್ತಿ; ವಿಡಿಯೊ ಚಿತ್ರೀಕರಿಸಿದ ಸ್ಥಳೀಯರು!

Exit mobile version