Site icon Vistara News

Road accident | ರಸ್ತೆ ವಿಭಜಕಕ್ಕೆ ಲಾರಿ ಡಿಕ್ಕಿ: ಕ್ಷಣಾರ್ಧದಲ್ಲೇ ಧಗಧಗನೆ ಉರಿದು ಭಸ್ಮ

road accident

ತುಮಕೂರು: ಇಲ್ಲಿನ ಗೂಳೂರಿನಲ್ಲಿ ಎಳನೀರು ತುಂಬಿದ ಲಾರಿಯೊಂದು ಹೊತ್ತಿ ಉರಿದಿದೆ. ರಸ್ತೆ ವಿಭಜಕಕ್ಕೆ ರಭಸವಾಗಿ ಡಿಕ್ಕಿ (Road accident) ಹೊಡೆದ ಪರಿಣಾಮ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಕ್ಷಣಾರ್ಧದಲ್ಲೇ ಅದು ಧಗಧಗನೇ ಉರಿದು ಭಸ್ಮವಾಯಿತು.

ಸೋಮವಾರ ರಾತ್ರಿ ಸುಮಾರು 10 ಗಂಟೆಗೆ ಈ ಘಟನೆ ನಡೆದಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ಆರಿಸಿದ್ದಾರೆ. ಈ ಘಟನೆಯಲ್ಲಿ ಲಾರಿ ಚಾಲಕ ಮತ್ತು ಕ್ಲಿನರ್ ಬಚಾವ್ ಆಗಿದ್ದಾರೆ.

ಗೂಳೂರು ಗ್ರಾಮದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ರಸ್ತೆ ವಿಭಜಕವೇ ಈ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಈ ರೀತಿಯ ಅಪಘಾತಗಳು ಇಲ್ಲಿ ತಿಂಗಳಲ್ಲಿ ಮೂರ್ನಾಲ್ಕು ನಡೆಯುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Exit mobile version