Site icon Vistara News

ಜೋಡಿ ಕೊಲೆ | ಹಾರೆಯಿಂದ ತಲೆಗೆ ಹೊಡೆದು ಪತ್ನಿ, ಮಗನ ಹತ್ಯೆ

murder

ತುಮಕೂರು: ಪತ್ನಿ ಹಾಗೂ ಮಗುವನ್ನು ಪಾತಕಿಯೊಬ್ಬ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ‌ ಕೊಂಡ್ಲಿ ಸಮೀಪದ ಮಾವಿನಹಳ್ಳಿಯಲ್ಲಿ ನಡೆದಿದೆ.

24 ವರ್ಷದ ಕವಿತಾ ಹಾಗೂ 4 ವರ್ಷದ ಜೀವನ್ ಕೊಲೆಯಾದವರು. ಕವಿತಾಳ ಗಂಡ ಸ್ವಾಮಿ ಇವರಿಬ್ಬರಿಗೂ ಹಾರೆಯಿಂದ ತಲೆಗೆ ‌ಹೊಡೆದು ಹತ್ಯೆ ಮಾಡಿದ್ದಾನೆ. ಬೆಳಗ್ಗೆ 6 ಗಂಟೆ ಸಂದರ್ಭದಲ್ಲಿ ಘೋರ ಕೃತ್ಯ ನಡೆದಿದೆ. ಗಲಾಟೆ ಕೇಳಿದ ಸ್ಥಳಕ್ಕೆ ಬಂದ ಗ್ರಾಮಸ್ಥರು ಆರೋಪಿ ಸ್ವಾಮಿಯನ್ನು ಹಿಡಿದು ತಪ್ಪಿಸಿಕೊಂಡು ಓಡಿ ಹೋಗದಂತೆ ಹಗ್ಗದಿಂದ ಕಟ್ಟಿ ಹಾಕಿ, ಪೊಲೀಸರ ವಶಕ್ಕೆ ನೀಡಿದ್ದಾರೆ.

ಗುಬ್ಬಿ ತಾಲೂಕು ನಿಟ್ಟೂರು ಹೋಬಳಿ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಚೇಳೂರು ಸಬ್ ಇನ್ಸ್‌ಪೆಕ್ಟರ್, ಗುಬ್ಬಿ ಸರ್ಕಲ್‌ ಇನ್ಸ್‌ಪೆಕ್ಟರ್ ನದಾಫ್‌ ಭೇಟಿ ನೀಡಿದ್ದು, ತನಿಖೆ ಮುಂದುವರಿದಿದೆ.

ಇದನ್ನೂ ಓದಿ | ಮ್ಯಾಟ್ರಿಮೋನಿ ವಂಚಕ | ಶ್ರೀಮಂತ ಯುವತಿಯರಿಗೆ ಸಾಲು ಸಾಲು ವಂಚನೆ

Exit mobile version