Site icon Vistara News

Accident | ಕಾರುಗಳ ನಡುವೆ ಡಿಕ್ಕಿ: ಅಪ್ಪಳಿಸಿದ ರಭಸಕ್ಕೆ ಬೆಂಕಿಗಾಹುತಿ, ಅಗ್ನಿಯಲ್ಲಿ ಬೆಂದು ಹೋದ ಮಹಿಳೆ

car

ತುಮಕೂರು: ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಎಂಲೆರಾಂಪುರ ಬಳಿ ಎರಡು ಕಾಡುಗಳು ಪರಸ್ಪರ ಡಿಕ್ಕಿ ಹೊಡೆದು ಒಂದು ಕಾರು ಬೆಂಕಿಗಾಹುತಿಯಾಗಿದೆ. ಅಪಘಾತದಲ್ಲಿ ಮಹಿಳೆಯೊಬ್ಬರು ಬೆಂಕಿಯಲ್ಲಿ ಬೆಂದು ಪ್ರಾಣ ಕಳೆದುಕೊಂಡಿದ್ದಾರೆ. ಐವರಿಗೆ ಗಂಭೀರ ಗಾಯಗಳಾಗಿವೆ.

ಬೆಂಗಳೂರು ಕಡೆಯಿಂದ ಮಧುಗಿರಿ ಕಡೆಗೆ ಹೋಗುತ್ತಿದ್ದ ಮಹೇಂದ್ರ TUV ಕಾರು ಮತ್ತು ಮಧುಗಿರಿ ಕಡೆಯಿಂದ ಬೆಂಗಳೂರು ಕಡೆಗೆ ಹೊರಟಿದ್ದ ಇಟಿಯೋಸ್ ಕಾರು ನಡುವೆ ಮುಖಾಮುಖಿ ಡಿಕ್ಕಿ ನಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಟಿಯೋಸ್ ಕಾರು ಬೆಂಕಿಗಾಹುತಿಯಾದರೆ, ಮಹೇಂದ್ರ ಟಿಯುವಿ ನಜ್ಜುಗುಜ್ಜಾಗಿದೆ. ಇಟಿಯೋಸ್ ಕಾರಿನಲ್ಲಿದ್ದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನುಳಿದ ಐವರಿಗೆ ಗಂಭೀರ ಗಾಯಗಳಾಗಿವೆ.

ಗಾಯಾಳುಗಳನ್ನು ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ‌ದ ಸಿಬ್ಬಂದಿ ಹಾಗೂ ಕೊರಟಗೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ |Accident | ಕ್ರೂಸರ್-ಬೈಕ್ ಡಿಕ್ಕಿಯಾಗಿ ತಂದೆ, ಮಗಳು ಸಾವು

Exit mobile version