Site icon Vistara News

ಅಂತರ್‌ಜಿಲ್ಲಾ ಮನೆಗಳ್ಳರ ಬಂಧನ: ₹92,000 ಕದ್ದಿದ್ದ ಆರೋಪಿಗಳು

ಕಾರವಾರ (ಉತ್ತರ ಕನ್ನಡ): ಕಾರವಾರ ತಾಲೂಕಿನ ಶಿರವಾಡದಲ್ಲಿ ಮನೆಕಳ್ಳತನ ಮಾಡಿದ ಅಂತರ್ಜಿಲ್ಲಾ ಕಳವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಶಿರವಾಡದ ಉಷಾ ನಾಯ್ಕ ಎಂಬವರ ಮನೆಯಲ್ಲಿ ಆರೋಪಿಗಳು ಕಳವು ಮಾಡಿದ್ದರು. ಮನೆಯಲ್ಲಿದ್ದ ₹92,000 ನಗದು ಹಣ ಕದ್ದು ಪರಾರಿಯಾಗಿದ್ದ ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು, ಅಲ್ಪ ಅವಧಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಚಾಕದ ಅನಿಲ ಕುಮಾರ (37), ಮಂಗಳೂರಿನ ನೀರು ಮಾರ್ಗದ ಹರೀಶ ಪೂಜಾರಿ (32) ಬಂಧಿತ ಆರೋಪಿಗಳು. ಕಾರವಾರ, ಮಂಗಳೂರು, ಉಡುಪಿ, ಮೈಸೂರು, ಕೇರಳ ಮುಂತಾದ ಕಡೆಗಳಲ್ಲೂ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಕಾರವಾರ ಗ್ರಾಮೀಣ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿದೆ.

Exit mobile version