Site icon Vistara News

Attempt To Murder : ಹೆಂಡ್ತಿ ಕೊಲ್ಲುತ್ತಾಳೆ ಎಂದು ಮಕ್ಕಳೊಂದಿಗೆ ವಿಷ ಸೇವಿಸಿದ ಗಂಡ

Fear of wife killing Husband consumes poison with children

ವಿಜಯನಗರ: ಕಳೆದ ನಾಲ್ಕೈದು ದಿನದ ಹಿಂದೆ ಕೂಡ್ಲಿಗಿ ತಾಲೂಕಿನ ಕಂಚೋಬನಳ್ಳಿ ಗ್ರಾಮದಲ್ಲಿ ತಂದೆ ಹಾಗೂ ಮಕ್ಕಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ (Self Harming) ಯತ್ನಿಸಿದ್ದರು. ಮೊದಮೊದಲು ಇದು ಕೌಟುಂಬಿಕ ಕಲಹಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಇದೀಗ ಈ ಕೇಸ್‌ಗೆ ಟ್ವಿಸ್ಟ್‌ ಸಿಕ್ಕಿದ್ದು, ಹೆಂಡತಿ ಕೊಲೆ (Attempt To Murder) ಮಾಡುತ್ತಾಳೆ ಎನ್ನುವ ಭೀತಿಗೆ ಆತ್ಮಹತ್ಯೆಗೆ ಯತ್ನಿಸಿರುವುದು ಗೊತ್ತಾಗಿದೆ.

ಮಾರಪ್ಪ (38) ಎಂಬಾತ ತನ್ನಿಬ್ಬರು ಮಕ್ಕಳಾದ ಚಂದನ (16), ರಮೇಶ್(18) ಒಟ್ಟಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಇದೀಗ ವಿಚಾರಣೆ ವೇಳೆ ಬೀದಿ ಹೆಣ ಆಗುವುದಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳುವುದೇ ಸೂಕ್ತ ಎಂದು ಯೋಚಿಸಿ, ವಿಷ ಸೇವಿಸಿರುವುದಾಗಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Bengaluru News : ಬೆಂಗಳೂರಲ್ಲಿ ವೃದ್ಧ ದಂಪತಿ ಸೂಸೈಡ್‌

ಮಾರಪ್ಪನ ಪತ್ನಿ ದುರಗಮ್ಮ ಎಂಬಾಕೆಗೆ ಗೋವಿಂದಗಿರಿ ತಾಂಡಾ ನಿವಾಸಿ ಬೆಂಕಿನಾಯ್ಕ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರ ತಿಳಿದ ಮಾರಪ್ಪ, ದುರಗಮ್ಮಳ ಮೊಬೈಲ್ ಕಸಿದುಕೊಂಡು ಅವನ ಸಹವಾಸ ಬಿಡು ಎಂದು ತಾಕೀತು ಮಾಡಿದ್ದರು. ಮಾತ್ರವಲ್ಲ ಮಾರಪ್ಪ ಮತ್ತು ಮಕ್ಕಳಿಬ್ಬರು ದುರಗಮ್ಮಳನ್ನು ಕೂರಿಸಿಕೊಂಡು ಬುದ್ಧಿವಾದ ಹೇಳಿದ್ದರು.

ಆತ್ಮಹತ್ಯೆಗೆ ಯತ್ನಿಸಿದ್ದ ಮಾರಪ್ಪ ಹಾಗೂ ಅವರ ಇಬ್ಬರು ಮಕ್ಕಳು

ಆದರೆ ಇವರ ಯಾವ ಮಾತಿಗೂ ಕ್ಯಾರೆ ಎನ್ನದ ದುರಗಮ್ಮ ಸಿಟ್ಟಾಗಿದ್ದಳು. ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಗಾಲು ಹಾಕಿದ್ದ ಗಂಡ, ಮಕ್ಕಳನ್ನು ಕೊಲ್ಲುವ ತೀರ್ಮಾನಕ್ಕೆ ಬಂದಿದ್ದಳು. ದುರಗಮ್ಮ, ಪ್ರಿಯಕರ ಬೆಂಕಿನಾಯ್ಕ್ ಸಹೋದರ ಶಿವಕುಮಾರ್ ಸೇರಿ ಕೊಲೆಗೆ ಸಂಚು ರೂಪಿಸಿದ್ದಾರೆ.

ಇತ್ತ ಕೊಲೆಗೆ ಸಂಚು ರೂಪಿಸಿದ್ದ ವಿಷಯವು ಹೇಗೋ ಮಾರಪ್ಪನ ಕಿವಿಗೆ ಬಿದ್ದಿತ್ತು. ಇದರಿಂದ ಮಾರಪ್ಪನ ಕುಟುಂಬ ಅಘಾತಕ್ಕೆ ಒಳಗಾಗಿದ್ದರು. ಇವರಿಂದ ಬೀದಿ ಹೆಣವಾಗುವ ಬದಲು ಆತ್ಮಹತ್ಯೆ ಮಾಡಿಕೊಳ್ಳುವುದೇ ಸೂಕ್ತ ಎಂದು ಯೋಚಿಸಿದ್ದರು. ಹೀಗಾಗಿ ಮೂವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದರು. ಸದ್ಯ, ಕಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version