Site icon Vistara News

Attempt to Kidnap | ವಿಜಯಪುರದಲ್ಲಿ ಅಪ್ರಾಪ್ತನ ಅಪಹರಣಕ್ಕೆ ಯತ್ನ

Attempt to kidnap

ವಿಜಯಪುರ: ನಗರದಲ್ಲಿ ಬಾಲಕನ ಕಿಡ್ನ್ಯಾಪ್(Attempt to kidnap) ಯತ್ನ ನಡೆದಿದ್ದು, ಅದೃಷ್ಟವಶಾತ್‌ ಬಾಲಕ ತಪ್ಪಿಸಿಕೊಂಡು ಮನೆಗೆ ವಾಪಸಾಗಿದ್ದಾನೆ.

ನಗರದ ಶಹಾಪೇಟೆನಗರದ ಭಾಸ್ಕರ್ ಶಿರನಾಳ (11) ಅಪಹರಣಕ್ಕೊಳಗಾಗಿದ್ದ ಬಾಲಕ. ಅಂಗಡಿಗೆ ಪೆನ್ ತರಲು ಹೋಗಿದ್ದ ವೇಳೆ ಬಾಲಕನನ್ನು ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಅಪಹರಿಸಿದ್ದಾರೆ. ಆದರೆ, ಹೇಗೋ ಖದೀಮರಿಂದ ತಪ್ಪಿಸಿಕೊಂಡ ಬಾಲಕ ಗಾಂಧಿಚೌಕ್ ಪೊಲೀಸ್ ಠಾಣೆಗೆ ತೆರಳಿ ಕಿಡ್ನ್ಯಾಪ್‌ಗೆ ಯತ್ನಿಸಿರುವ ಬಗ್ಗೆ ತಿಳಿಸಿದ್ದಾನೆ. ಬಳಿಕ ಸಿಪಿಐ ಸಿದ್ದೇಶ ಹಾಗೂ ಸಿಬ್ಬಂದಿ, ಪೊಲೀಸರು ಬಾಲಕನನ್ನು ಪಾಲಕರಿಗೆ ಒಪ್ಪಿಸಿ, ಮನೆ ಸುತ್ತಮುತ್ತಲಿದ್ದ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಿ, ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಶ್ರೀಗಳನ್ನು ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಗೆ ಶಿಫ್ಟ್‌ ಮಾಡಲು ಕೋರ್ಟ್‌ ಅನುಮತಿ

Exit mobile version