Site icon Vistara News

Accident | ಕ್ರೂಸರ್-ಬೈಕ್ ಡಿಕ್ಕಿಯಾಗಿ ತಂದೆ, ಮಗಳು ಸಾವು

murder ಸುರಪುರ ಕೆಂಬಾವಿ ಜೋಡಿ ಕೊಲೆ

ವಿಜಯಪುರ: ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದ ರಸ್ತೆಯಲ್ಲಿ ಕ್ರೂಸರ್-ಬೈಕ್ ಡಿಕ್ಕಿಯಾಗಿ(Accident) ಬೈಕ್‌ನಲ್ಲಿ ತೆರಳುತ್ತಿದ್ದ ತಂದೆ ಮತ್ತು ಮಗಳು ಮೃತಪಟ್ಟಿದ್ದಾರೆ. ಬಸವನ ಬಾಗೇವಾಡಿ ತಾಲೂಕಿನ ಬೂದಿಹಾಳ ಗ್ರಾಮದ ರಮೇಶ ನಾಟಿಕಾರ (45), ಪುತ್ರಿ ಖುಷಿ(8) ಮೃತರು. ತಾಯಿ ಶ್ರೀದೇವಿ ಗಂಭೀರವಾಗಿ ಗಾಯಗಳಾಗಿವೆ. ಸ್ಥಳಕ್ಕೆ ದೇವರಹಿಪ್ಪರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಾಯಾಳು ಶ್ರೀದೇವಿ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯಪುರದಲ್ಲಿ ಅಪರಿಚಿತ ಮಹಿಳೆ ಮೃತದೇಹ ಪತ್ತೆ
ವಿಜಯಪುರ: ಅಪರಿಚಿತ ಮಹಿಳೆ ಮೃತದೇಹ ನಗರದ ಸ್ಲಂ ಪ್ರದೇಶದಲ್ಲಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಅಪರಿಚಿತ ಮಹಿಳೆ ಮೃತದೇಹ ಪತ್ತೆಯಾಗಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಅಂದಾಜು 40 ವರ್ಷದ ಅಪರಿಚಿತ ಮಹಿಳೆ ಮೃತದೇಹ ನಗರದ ವಜ್ರ ಹನುಮಾನ್ ರೈಲ್ವೆ ಗೇಟ್ ಕೂಗಳತೆಯ ದಿಲ್ಲಿ ದರ್ಬಾರ್ ಹೊಟೇಲ್ ಬಳಿ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಅಪರಿಚಿತ ಮಹಿಳೆ ತಲೆಗೆ ಬಲವಾದ ಗಾಯವಾಗಿರೋದು ಕೊಲೆ ಶಂಕೆಗೆ ಕಾರಣವಾಗಿದೆ. ಬೇರೆಡೆ ಮಹಿಳೆಗೆ ಹೊಡೆದು ಕೊಂದು ಮುಳ್ಳುಕಂಟಿಯಲ್ಲಿ ತಂದು ಹಾಕಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಪರಿಚಿತ ಮಹಿಳೆ ಶವ ಪ್ರಕರಣ ಭೇದಿಸಲು ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ, ತನಿಖೆ ನಡೆಸಿದ ಬಳಿಕ ಶವವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದರು.

ಇದನ್ನೂ ಓದಿ | Lovers suicide | ಪ್ರೀತಿಯ ವಿಚಾರ ಮನೆಯಲ್ಲಿ ತಿಳಿಯುತ್ತಿದ್ದಂತೆಯೇ ಪ್ರೇಮಿಗಳು ಸಾವಿಗೆ ಶರಣು

Exit mobile version