Site icon Vistara News

Vistara News Launch | ಕಾಯಕ ಯೋಗಿ ಪುರಸ್ಕಾರಕ್ಕೆ ಭಾಜನರಾದ ಖ್ಯಾತ ನಿರ್ಮಾಪಕ ವಿಜಯ್ ಕಿರಗಂದೂರು

Vistara News Launch

ಭಾರತೀಯ ಚಿತ್ರರಂಗದಲ್ಲಿ ಈಗ ʻಹೊಂಬಾಳೆ ಫಿಲ್ಮ್ಸ್ʼ ಅತ್ಯಂತ ದೊಡ್ಡ ಹೆಸರು. ಈ ಚಿತ್ರ ನಿರ್ಮಾಣ ಸಂಸ್ಥೆಯ ಹಿಂದಿನ ಶಕ್ತಿ ಶ್ರೀ ವಿಜಯ್ ಕಿರಗಂದೂರು. ಸಿನಿಮಾ ನಿರ್ಮಾಣ ಇವರಿಗೆ ಪ್ಯಾಷನ್ ಮಾತ್ರವಲ್ಲ, ತಪಸ್ಸು ಕೂಡ. ಇದರ ಫಲವಾಗಿ ಇವರ ನಿರ್ಮಾಣ ಸಂಸ್ಥೆಯಿಂದ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳು ಒಂದರ ಹಿಂದೆ ಒಂದರಂತೆ ಮೂಡಿ ಬರುತ್ತಿವೆ. ಇವರ ನಿರ್ಮಾಣದ ಕೆಜಿಎಫ್ ಭಾಗ 1 ಮತ್ತು 2 ವಿಶ್ವ ಚಿತ್ರರಂಗ ಕನ್ನಡ ಚಿತ್ರಗಳತ್ತ ತಿರುಗಿ ನೋಡುವಂತೆ ಮಾಡಿತು ಇದೀಗ ಈ ಸಾಧನೆಗಾಗಿ ಅವರಿಗೆ ವಿಸ್ತಾರ ನ್ಯೂಸ್​ ಬಳಗವು (Vistara News Launch) ” ಕಾಯಕ ಯೋಗಿ ಪ್ರಶಸ್ತಿ” ನೀಡಿ ಗೌರವಿಸಿದೆ.

ಇವರದೇ ನಿರ್ಮಾಣದ ʼಕಾಂತಾರʼ ಮತ್ತೊಮ್ಮೆ ಚಿತ್ರರಂಗ ಬೆರಗಾಗುವಂತೆ ಮಾಡಿದೆ. 2014ರಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ ʻನಿನ್ನಿಂದಲೇʼ ಚಿತ್ರದ ನಿರ್ಮಾಣದ ಮೂಲಕ ಶ್ರೀ ವಿಜಯ್ ಕಿರಗಂದೂರು ಚಿತ್ರೋದ್ಯಮ ಪ್ರವೇಶಿಸಿದರು. 2015ರಲ್ಲಿ ಯಶ್ ನಟನೆಯ ʻಮಾಸ್ಟರ್ ಪೀಸ್ʼ ನಿರ್ಮಿಸಿದರು. 2017ರಲ್ಲಿ ಪುನೀತ್ ನಾಯಕ ನಟರಾಗಿದ್ದ ʼರಾಜಕುಮಾರʼ ಚಿತ್ರ ಇವರ ಬದುಕಿನ ದಿಕ್ಕನ್ನೇ ಬದಲಿಸಿತು.

ಈಗಾಗಲೇ ತೆಲುಗು ಮತ್ತು ಮಲಯಾಳಂನಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ. ಶ್ರೇಷ್ಠ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದ ಎತ್ತರವನ್ನು ಮತ್ತಷ್ಟು ಹೆಚ್ಚಿಸುತ್ತಿರುವ ಶ್ರೀ ವಿಜಯ್ ಕಿರಗಂದೂರು ಅವರಿಗೆ ʻಕಾಯಕ ಯೋಗಿʼ ಪ್ರಶಸ್ತಿ ನೀಡಿ ಗೌರವಿಸಲು ವಿಸ್ತಾರ ನ್ಯೂಸ್‌ ಹೆಮ್ಮೆಪಡುತ್ತಿದೆ.

ಇದನ್ನೂ ಓದಿ | ವಿಸ್ತಾರ ನ್ಯೂಸ್‌ ಕಚೇರಿಗೆ ಸಿಎಂ ಬೊಮ್ಮಾಯಿ ಭೇಟಿ, ಟಿವಿ ಚಾನೆಲ್‌ ಸಿದ್ಧತೆಗೆ ಮೆಚ್ಚುಗೆ

Exit mobile version