Site icon Vistara News

ಪತ್ನಿಯ ನೋವನ್ನು ಅರ್ಥ ಮಾಡಿಕೊಂಡು, ತ್ಯಾಗವನ್ನೇ ಮಾಡಿದ ಪತಿ; ಹಳ್ಳಿಜನ ಸಿಟ್ಟಾದರೂ ಮೌನವಾಗಿಯೇ ಇದ್ದ!

Man helps wife to elope with her lover

#image_title

ಪತ್ನಿಗೆ ತನ್ನ ಮೇಲೆ ಮನಸಿಲ್ಲ, ಆಕೆ ಇನ್ನೊಬ್ಬನನ್ನು ಪ್ರೀತಿಸುತ್ತಿದ್ದಾಳೆ ಎಂಬ ವಿಷಯ ಗೊತ್ತಾಗುತ್ತಿದ್ದಂತೆ ಪತಿ ಅತ್ಯಂತ ತಾಳ್ಮೆಯಿಂದ ವರ್ತಿಸಿದ್ದಲ್ಲದೆ, ತ್ಯಾಗವನ್ನೇ ಮಾಡಿದ್ದಾನೆ. ಪತ್ನಿಯನ್ನು ಅವಳು ಪ್ರೀತಿಸಿದ ಹುಡುಗನೊಂದಿಗೆ ಈತನೇ (Maharashtra Man) ಖುದ್ದಾಗಿ ನಿಂತು ಕಳಿಸಿಕೊಟ್ಟಿದ್ದಾನೆ. ಸಾಮಾನ್ಯವಾಗಿ ಇಂಥ ಸನ್ನಿವೇಶಗಳಲ್ಲಿ ಕ್ರೈಂಗಳು ಆಗುವುದು ಹೆಚ್ಚು. ಜಗಳ, ಹೊಡೆದಾಟ, ಕೊಲೆ ನಡೆದು ಹೋಗುತ್ತದೆ. ಆದರೆ ಈ ಕೇಸ್​ ಭಿನ್ನವಾಗಿದೆ. ಪತಿ ಅತ್ಯಂತ ಸೂಕ್ಷ್ಮವಾಗಿ ವರ್ತಿಸಿ, ಪತ್ನಿಯನ್ನು ಬಿಟ್ಟುಕೊಟ್ಟಿದ್ದಾನೆ.

ಮಹಾರಾಷ್ಟ್ರದ ಬೀಚ್ಕಿಲಾ ಎಂಬ ಗ್ರಾಮದ ನಿವಾಸಿಯಾಗಿರುವ ಸನೋಜ್ ಕುಮಾರ್​ ಸಿಂಗ್​ ಮೇ 10ರಂದು ಪ್ರಿಯಾಂಕಾ ಕುಮಾರಿ ಎಂಬಾಕೆಯನ್ನು ಮದುವೆಯಾಗಿದ್ದ. ಮದುವೆಯಾಗಿ ಮೂರ್ನಾಲ್ಕು ದಿನಗಳೇ ಕಳೆದರೂ ಪ್ರಿಯಾಂಕಾ ಮುಖದಲ್ಲಿ ಸಂತೋಷ ಇರಲಿಲ್ಲ. ಸದಾ ಚಿಂತೆಯಲ್ಲೇ ಇರುತ್ತಿದ್ದಳು. ಸರಿಯಾಗಿ ವಿಚಾರಿಸಿದಾಗಲೇ ಗೊತ್ತಾಯಿತು, ಆಕೆ ಇದೇ ಹಳ್ಳಿಯ ಜಿತೇಂದ್ರ ಎಂಬುವನನ್ನು ಪ್ರೀತಿಸುತ್ತಿದ್ದಳು ಎಂಬುದು. 10 ವರ್ಷಗಳಿಂದಲೂ ಪ್ರಿಯಾಂಕಾ ಕುಮಾರಿ ಮತ್ತು ಜಿತೇಂದ್ರ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಜಾತಿ ಬೇರೆಯಾಗಿದ್ದರಿಂದ ಮದುವೆ ಸಾಧ್ಯವಿಲ್ಲ ಎಂದು ಮೌನವಾಗಿದ್ದರು. ಈ ವಿಷಯ ಗೊತ್ತಿದ್ದೂ ಸನೋಜ್ ಕುಮಾರ್​ ಸ್ವಲ್ಪ ದಿನ ಮೌನವಾಗಿಯೇ ಇದ್ದ.

ಇದನ್ನೂ ಓದಿ: ಲವ್ವರ್​​ಗೆ ಮೆಸೇಜ್​ ಮಾಡುತ್ತಿದ್ದ ಸ್ನೇಹಿತನಿಗೆ ಚಾಕು ಇರಿತ: ಹಣ ಕೊಡಲು ಒಪ್ಪದ ತಮ್ಮನ ಹತ್ಯೆ

ಹೀಗೆ ಒಂದು ದಿನ ಪ್ರಿಯಾಂಕಾ ಕುಮಾರಿ ತನ್ನ ಪ್ರಿಯಕರ ಜಿತೇಂದ್ರ ಜತೆ ಪರಾರಿಯಾಗಲು ಯತ್ನಿಸಿದರು. ಆದರೆ ಹಳ್ಳಿಯ ಜನರು ಇವರಿಬ್ಬರನ್ನೂ ಹಿಡಿದು, ಮನತು ಪೊಲೀಸ್​ ಸ್ಟೇಶನ್​​ಗೆ ಕರೆದುಕೊಂಡು ಹೋದರು. ಆಗ ಪೊಲೀಸರು ಸನೋಜ್ ಕುಮಾರ್ ಮತ್ತು ಅವನ ಕುಟುಂಬದವರನ್ನು ಸ್ಟೇಶನ್​ಗೆ ಕರೆಸಿ, ವಿಷಯ ತಿಳಿಸಿದರು. ಆದರೆ ಅಚ್ಚರಿಯೆಂಬಂತೆ ಸನೋಜ್ ಕುಮಾರ್​ ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಪತ್ನಿ ಬೆಂಬಲಕ್ಕೆ ನಿಂತ. ಆಕೆ ಪ್ರೀತಿಸಿದವನೊಂದಿಗೆ ಹೋಗಲು ಬಿಟ್ಟುಬಿಡಿ ಎಂದು ಹೇಳಿದ. ಸದ್ಯ ಪ್ರಿಯಾಂಕಾ ಕುಮಾರಿ ಜಿತೇಂದ್ರ ಜತೆ ಹೋಗಿದ್ದಾಳೆ.

Exit mobile version