ಪತ್ನಿಯ ನೋವನ್ನು ಅರ್ಥ ಮಾಡಿಕೊಂಡು, ತ್ಯಾಗವನ್ನೇ ಮಾಡಿದ ಪತಿ; ಹಳ್ಳಿಜನ ಸಿಟ್ಟಾದರೂ ಮೌನವಾಗಿಯೇ ಇದ್ದ! - Vistara News

ದೇಶ

ಪತ್ನಿಯ ನೋವನ್ನು ಅರ್ಥ ಮಾಡಿಕೊಂಡು, ತ್ಯಾಗವನ್ನೇ ಮಾಡಿದ ಪತಿ; ಹಳ್ಳಿಜನ ಸಿಟ್ಟಾದರೂ ಮೌನವಾಗಿಯೇ ಇದ್ದ!

ಮಹಾರಾಷ್ಟ್ರದ ಬೀಚ್ಕಿಲಾ ಎಂಬ ಗ್ರಾಮದ ನಿವಾಸಿಯಾಗಿರುವ ಸನೋಜ್ ಕುಮಾರ್​ ಸಿಂಗ್​ ಮೇ 10ರಂದು ಪ್ರಿಯಾಂಕಾ ಕುಮಾರಿ ಎಂಬಾಕೆಯನ್ನು ಮದುವೆಯಾಗಿದ್ದ. ಮದುವೆಯಾಗಿ ಮೂರ್ನಾಲ್ಕು ದಿನಗಳೇ ಕಳೆದರೂ ಪ್ರಿಯಾಂಕಾ ಮುಖದಲ್ಲಿ ಸಂತೋಷ ಇರಲಿಲ್ಲ.

VISTARANEWS.COM


on

Man helps wife to elope with her lover
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪತ್ನಿಗೆ ತನ್ನ ಮೇಲೆ ಮನಸಿಲ್ಲ, ಆಕೆ ಇನ್ನೊಬ್ಬನನ್ನು ಪ್ರೀತಿಸುತ್ತಿದ್ದಾಳೆ ಎಂಬ ವಿಷಯ ಗೊತ್ತಾಗುತ್ತಿದ್ದಂತೆ ಪತಿ ಅತ್ಯಂತ ತಾಳ್ಮೆಯಿಂದ ವರ್ತಿಸಿದ್ದಲ್ಲದೆ, ತ್ಯಾಗವನ್ನೇ ಮಾಡಿದ್ದಾನೆ. ಪತ್ನಿಯನ್ನು ಅವಳು ಪ್ರೀತಿಸಿದ ಹುಡುಗನೊಂದಿಗೆ ಈತನೇ (Maharashtra Man) ಖುದ್ದಾಗಿ ನಿಂತು ಕಳಿಸಿಕೊಟ್ಟಿದ್ದಾನೆ. ಸಾಮಾನ್ಯವಾಗಿ ಇಂಥ ಸನ್ನಿವೇಶಗಳಲ್ಲಿ ಕ್ರೈಂಗಳು ಆಗುವುದು ಹೆಚ್ಚು. ಜಗಳ, ಹೊಡೆದಾಟ, ಕೊಲೆ ನಡೆದು ಹೋಗುತ್ತದೆ. ಆದರೆ ಈ ಕೇಸ್​ ಭಿನ್ನವಾಗಿದೆ. ಪತಿ ಅತ್ಯಂತ ಸೂಕ್ಷ್ಮವಾಗಿ ವರ್ತಿಸಿ, ಪತ್ನಿಯನ್ನು ಬಿಟ್ಟುಕೊಟ್ಟಿದ್ದಾನೆ.

ಮಹಾರಾಷ್ಟ್ರದ ಬೀಚ್ಕಿಲಾ ಎಂಬ ಗ್ರಾಮದ ನಿವಾಸಿಯಾಗಿರುವ ಸನೋಜ್ ಕುಮಾರ್​ ಸಿಂಗ್​ ಮೇ 10ರಂದು ಪ್ರಿಯಾಂಕಾ ಕುಮಾರಿ ಎಂಬಾಕೆಯನ್ನು ಮದುವೆಯಾಗಿದ್ದ. ಮದುವೆಯಾಗಿ ಮೂರ್ನಾಲ್ಕು ದಿನಗಳೇ ಕಳೆದರೂ ಪ್ರಿಯಾಂಕಾ ಮುಖದಲ್ಲಿ ಸಂತೋಷ ಇರಲಿಲ್ಲ. ಸದಾ ಚಿಂತೆಯಲ್ಲೇ ಇರುತ್ತಿದ್ದಳು. ಸರಿಯಾಗಿ ವಿಚಾರಿಸಿದಾಗಲೇ ಗೊತ್ತಾಯಿತು, ಆಕೆ ಇದೇ ಹಳ್ಳಿಯ ಜಿತೇಂದ್ರ ಎಂಬುವನನ್ನು ಪ್ರೀತಿಸುತ್ತಿದ್ದಳು ಎಂಬುದು. 10 ವರ್ಷಗಳಿಂದಲೂ ಪ್ರಿಯಾಂಕಾ ಕುಮಾರಿ ಮತ್ತು ಜಿತೇಂದ್ರ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಜಾತಿ ಬೇರೆಯಾಗಿದ್ದರಿಂದ ಮದುವೆ ಸಾಧ್ಯವಿಲ್ಲ ಎಂದು ಮೌನವಾಗಿದ್ದರು. ಈ ವಿಷಯ ಗೊತ್ತಿದ್ದೂ ಸನೋಜ್ ಕುಮಾರ್​ ಸ್ವಲ್ಪ ದಿನ ಮೌನವಾಗಿಯೇ ಇದ್ದ.

ಇದನ್ನೂ ಓದಿ: ಲವ್ವರ್​​ಗೆ ಮೆಸೇಜ್​ ಮಾಡುತ್ತಿದ್ದ ಸ್ನೇಹಿತನಿಗೆ ಚಾಕು ಇರಿತ: ಹಣ ಕೊಡಲು ಒಪ್ಪದ ತಮ್ಮನ ಹತ್ಯೆ

ಹೀಗೆ ಒಂದು ದಿನ ಪ್ರಿಯಾಂಕಾ ಕುಮಾರಿ ತನ್ನ ಪ್ರಿಯಕರ ಜಿತೇಂದ್ರ ಜತೆ ಪರಾರಿಯಾಗಲು ಯತ್ನಿಸಿದರು. ಆದರೆ ಹಳ್ಳಿಯ ಜನರು ಇವರಿಬ್ಬರನ್ನೂ ಹಿಡಿದು, ಮನತು ಪೊಲೀಸ್​ ಸ್ಟೇಶನ್​​ಗೆ ಕರೆದುಕೊಂಡು ಹೋದರು. ಆಗ ಪೊಲೀಸರು ಸನೋಜ್ ಕುಮಾರ್ ಮತ್ತು ಅವನ ಕುಟುಂಬದವರನ್ನು ಸ್ಟೇಶನ್​ಗೆ ಕರೆಸಿ, ವಿಷಯ ತಿಳಿಸಿದರು. ಆದರೆ ಅಚ್ಚರಿಯೆಂಬಂತೆ ಸನೋಜ್ ಕುಮಾರ್​ ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಪತ್ನಿ ಬೆಂಬಲಕ್ಕೆ ನಿಂತ. ಆಕೆ ಪ್ರೀತಿಸಿದವನೊಂದಿಗೆ ಹೋಗಲು ಬಿಟ್ಟುಬಿಡಿ ಎಂದು ಹೇಳಿದ. ಸದ್ಯ ಪ್ರಿಯಾಂಕಾ ಕುಮಾರಿ ಜಿತೇಂದ್ರ ಜತೆ ಹೋಗಿದ್ದಾಳೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Lok Sabha Election 2024

Lok Sabha Election 2024: ಕಾಂಗ್ರೆಸ್‌ ಅಧಿಕಾರಕ್ಕೆ ಬಂದೆ ದೇಶದಲ್ಲಿ ಶರಿಯಾ ಕಾನೂನು ಜಾರಿ; ಯೋಗಿ ಆದಿತ್ಯನಾಥ್ ವಾಗ್ದಾಳಿ

Lok Sabha Election 2024: ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಆಸ್ತಿ ಮರು ಹಂಚಿಕೆ ಮಾಡುವ ಬಗ್ಗೆ ಪ್ರಸ್ತಾವಿಸಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಳಿಕ ಇದೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರೂ ಆರೋಪಿಸಿದ್ದಾರೆ. ʼʼಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ದೇಶದಲ್ಲಿ ‘ಶರಿಯಾ ಕಾನೂನನ್ನು’ ಜಾರಿಗೆ ತರುವ ಮತ್ತು ಜನರ ಆಸ್ತಿಯನ್ನು ಮರುಹಂಚಿಕೆ ಮಾಡುವ ಉದ್ದೇಶವನ್ನು ವ್ಯಕ್ತಪಡಿಸಿದೆʼʼ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದ ಅಮ್ರೋಹದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಅವರು ಮಾತನಾಡಿ ಈ ವಿಚಾರ ಪ್ರಸ್ತಾವಿಸಿದ್ದಾರೆ.

VISTARANEWS.COM


on

Lok Sabha Election 2024
Koo

ಲಕ್ನೋ: ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿನ ಸಂಪತ್ತು ಮರು ಹಂಚಿಕೆ ವಿಚಾರವನ್ನು ಪ್ರಸ್ತಾವಿಸಿದೆ ಎಂದು ಆರೋಪಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೈ ಪಡೆಯ ವಿರುದ್ಧ ವಾಗ್ದಾಳಿ ನಡೆಸಿದ ಬಳಿಕ ಇದೀಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಅವರ ಸರದಿ. ಯೋಗಿ ಆದಿತ್ಯನಾಥ್ ಮಂಗಳವಾರ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ, ʼʼಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ದೇಶದಲ್ಲಿ ‘ಶರಿಯಾ ಕಾನೂನನ್ನು’ ಜಾರಿಗೆ ತರುವ ಮತ್ತು ಜನರ ಆಸ್ತಿಯನ್ನು ಮರುಹಂಚಿಕೆ ಮಾಡುವ ಉದ್ದೇಶವನ್ನು ವ್ಯಕ್ತಪಡಿಸಿದೆʼʼ ಎಂದು ಹೇಳಿದ್ದಾರೆ (Lok Sabha Election 2024).

ಉತ್ತರ ಪ್ರದೇಶದ ಅಮ್ರೋಹದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ದೇಶಕ್ಕೆ ದ್ರೋಹ ಬಗೆದಿವೆ ಮತ್ತು ಮತ್ತೊಮ್ಮೆ ತಮ್ಮ ತಪ್ಪಾದ ಪ್ರಣಾಳಿಕೆಯೊಂದಿಗೆ ನಿಮ್ಮ ಬಳಿಗೆ ಬಂದಿವೆ. ನೀವು ಕಾಂಗ್ರೆಸ್ ಪ್ರಣಾಳಿಕೆಯನ್ನು ಗಮನಿಸಿದರೆ ಅದರಲ್ಲಿ ಅವರು ತಾವು ಸರ್ಕಾರ ರಚಿಸಿದರೆ, ಶರಿಯಾ ಕಾನೂನನ್ನು ಜಾರಿಗೆ ತರುತ್ತೇವೆ ಎಂದು ಹೇಳುತ್ತಾರೆ. ನೀವು ಹೇಳಿ ಈ ದೇಶವನ್ನು ಡಾ.ಬಿ.ಆರ್‌.ಅಂಬೇಡ್ಕರ್ ರಚಿಸಿದ ಸಂವಿಧಾನದ ಆಧಾರದಲ್ಲಿ ನಡೆಸಬೇಕೆ ಅಥವಾ ಶರಿಯತ್‌ನಿಂದ ನಡೆಸಬೇಕೆ?” ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿ ಅವರು ಈ ಹಿಂದೆ ತಮ್ಮ ಚುನಾವಣಾ ರ‍್ಯಾಲಿಗಳಲ್ಲಿ ಮಾತನಾಡಿ, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಜನರ ಆಸ್ತಿಯ ಮರು ಹಂಚಿಕೆಯನ್ನು ಸೇರಿಸಿದೆ ಎಂದು ಆರೋಪಿಸಿದ್ದರು.

ಯೋಗಿ ಆದಿತ್ಯನಾಥ್ ಹೇಳಿದ್ದೇನು?

ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ವ್ಯಕ್ತಿಗತ ಕಾನೂನು (Vyaktigat kanoon) ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡಿದೆ. ಶರಿಯಾ ಕಾನೂನು ಜಾರಿ ಎನ್ನುವುದೇ ಇದರ ಅರ್ಥ. ಯಾಕೆಂದರೆ ಮೋದಿ ತ್ರಿವಳಿ ತಲಾಖ್‌ ಕಾನೂನನ್ನು ದೇಶದಲ್ಲಿ ನಿಷೇಧಿಸಿದ್ದಾರೆʼʼ ಎಂದು ಆದಿತ್ಯನಾಥ್‌ ಹೇಳಿದ್ದಾರೆ. ಮುಂದುವರಿದು, ʼʼಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಜನರ ಆಸ್ತಿಯನ್ನು ವಶಪಡಿಸಿಕೊಂಡು ಹಂಚುವ ಬಗ್ಗೆ ಪ್ರಸ್ತಾವಿಸಲಾಗಿದೆ. ಕಾಂಗ್ರೆಸ್‌ ಮತ್ತು ಸಮಾಜವಾದಿ ಪಾರ್ಟಿಗಳು ನಿಮ್ಮ ಆಸ್ತಿಯನ್ನು ಕೊಳ್ಳೆ ಹೊಡೆಯಲು ಅನುಮತಿ ನೀಡುತ್ತೀರಾ? ಅವರ ಇಬ್ಬಗೆಯ ನೀತಿಯತ್ತ ಗಮನ ಹರಿಸಿ. ಅವರು ಒಂದು ಕಡೆ ನಿಮ್ಮ ಆಸ್ತಿಯ ಮೇಲೆ ಕಣ್ಣಿಡುತ್ತಾರೆ. ಇನ್ನೊಂದು ಕಡೆ ಮಾಫಿಯಾ ಮತ್ತು ಅಪರಾಧಿಗಳಿಗೆ ನೆರವು ನೀಡುತ್ತಿದ್ದಾರೆʼʼ ಎಂದು ವಾಗ್ದಾಳಿ ನಡೆಸಿದ್ದಾರೆ.

2006ರಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ ಯೋಗಿ ಆದಿತ್ಯನಾಥ್, “ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ, ದೇಶದ ಸಂಪನ್ಮೂಲಗಳ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕು ಇದೆ ಎಂದು ಹೇಳಿದ್ದರು. ಹಾಗಾದರೆ ನಮ್ಮ ದಲಿತರು, ಹಿಂದುಳಿದ ವರ್ಗಗಳು, ಬಡವರು ಮತ್ತು ರೈತರು ಎಲ್ಲಿಗೆ ಹೋಗುತ್ತಾರೆ? ತಾಯಂದಿರು ಮತ್ತು ಸಹೋದರಿಯರು ಎಲ್ಲಿಗೆ ಹೋಗುತ್ತಾರೆ? ಯುವಕರು ಎಲ್ಲಿಗೆ ಹೋಗುತ್ತಾರೆ?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ಮಂಗಳಸೂತ್ರವೂ ಸುರಕ್ಷಿತವಲ್ಲ; ಮತ್ತೆ ಸಂಪತ್ತು ಹಂಚಿಕೆ ವಿಷಯ ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ

ಮೋದಿ ಸರ್ಕಾರದ ಅವಧಿಯಲ್ಲಿ ಭಾರತದಲ್ಲಿ ಭಯೋತ್ಪಾದನೆ ಕೊನೆಗೊಂಡಿದೆ ಎಂದು ಅವರು ಹೇಳಿದ್ದಾರೆ. “10 ವರ್ಷಗಳ ಹಿಂದೆ ದೇಶದಲ್ಲಿ ಭಯದ ವಾತಾವರಣವಿತ್ತು. 2014ರ ನಂತರ ಭಯೋತ್ಪಾದನೆಯನ್ನು ನಿಯಂತ್ರಿಸಲಾಯಿತು ಮತ್ತು 2019ರ ಹೊತ್ತಿಗೆ ಮೋದಿ ಭಯೋತ್ಪಾದನೆಯ ಮೂಲವನ್ನು ಜಮ್ಮು ಕಾಶ್ಮೀರದ 370ನೇ ವಿಧಿಯನ್ನು ರದ್ದುಗೊಳಿಸಿದರು. ಇಂದು ಭಾರತದಲ್ಲಿ ಭಯೋತ್ಪಾದನೆ ನಾಶವಾಗಿದೆ” ಎಂದು ಅವರು ಹೇಳಿದ್ದಾರೆ. ಅಮ್ರೋಹಾದಲ್ಲಿ ಏಪ್ರಿಲ್ 26ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ.

Continue Reading

ಪ್ರಮುಖ ಸುದ್ದಿ

Public Sector Banks : ಸಾರ್ವಜನಿಕ ಬ್ಯಾಂಕ್​ಗಳು ಸಾಲ ಕಟ್ಟದವರಿಗೆ ಲುಕ್ ಔಟ್ ನೋಟಿಸ್​ ನೀಡುವಂತಿಲ್ಲ, ಕೋರ್ಟ್​​ ಆದೇಶ

Public Sector Banks :ಈ ಆದೇಶದ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ. ಎಲ್ಒಸಿಗಳ (ಸುಸ್ತಿದಾರರ ವಿರುದ್ಧ ಬ್ಯಾಂಕುಗಳು ಹೊರಡಿಸಿದ) ಮೇಲೆ ಬ್ಯೂರೋ ಆಫ್ ಇಮಿಗ್ರೇಷನ್ ಕಾರ್ಯನಿರ್ವಹಿಸುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

VISTARANEWS.COM


on

Public Sector Banks
Koo

ಮುಂಬೈ: ವಿದೇಶದಲ್ಲಿರುವ ಸುಸ್ತಿ ಸಾಲಗಾರರ ವಿರುದ್ಧ ಲುಕ್ ಔಟ್ ನೋಟಿಸ್​ (LOC) ಹೊರಡಿಸಲು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ (Public Sector Banks) ಕಾನೂನಿನಲ್ಲಿ ಅಧಿಕಾರವಿಲ್ಲ ಎಂದು ಬಾಂಬೆ ಹೈಕೋರ್ಟ್ ಮಂಗಳವಾರ ತೀರ್ಪು ನೀಡಿದೆ. ಹೈಕೋರ್ಟ್​ ತೀರ್ಪಿನಿಂದಾಗಿ ಸಾಲ ಕಟ್ಟದೇ ವಿದೇಶಗಳಲ್ಲಿ ವಾಸವಿರುವವರಿಗೆ ನೀಡಲಾಗಿರುವ ಎಲ್ಲ ನೋಟಿಸ್​ಗಳು ರದ್ದಾಗಲಿವೆ.

ಸುಸ್ತಿ ಸಾಲಗಾರರ ವಿರುದ್ಧ ಲುಕ್​ಔಟ್​ ನೋಟಿಸ್​ ಹೊರಡಿಸಲು ಸಾರ್ವಜನಿಕ ವಲಯದ ಬ್ಯಾಂಕುಗಳ ಅಧ್ಯಕ್ಷರಿಗೆ ಅಧಿಕಾರ ನೀಡುವಂಥ ಕೇಂದ್ರ ಸರ್ಕಾರ ಹೊರಡಿಸಿದ ಕಚೇರಿ ಜ್ಞಾಪಕ ಪತ್ರದ ಷರತ್ತು ಅಸಂವಿಧಾನಿಕ ಎಂದು ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ಮಾಧವ್ ಜಾಮ್ದಾರ್ ಅವರ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ. ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ವಕೀಲ ಆದಿತ್ಯ ಠಕ್ಕರ್ ಅವರು ಹೈಕೋರ್ಟ್ ಆದೇಶವನ್ನು ತಡೆಹಿಡಿಯಬೇಕೆಂದು ಕೋರಿದರು. ಆದರೆ ನ್ಯಾಯಪೀಠ ನಿರಾಕರಿಸಿತು.

ಈ ಆದೇಶದ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ. ಎಲ್ಒಸಿಗಳ (ಸುಸ್ತಿದಾರರ ವಿರುದ್ಧ ಬ್ಯಾಂಕುಗಳು ಹೊರಡಿಸಿದ) ಮೇಲೆ ಬ್ಯೂರೋ ಆಫ್ ಇಮಿಗ್ರೇಷನ್ ಕಾರ್ಯನಿರ್ವಹಿಸುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಯಾವುದೇ ಸುಸ್ತಿದಾರರ ವಿರುದ್ಧ ನ್ಯಾಯಮಂಡಳಿ ಅಥವಾ ಕ್ರಿಮಿನಲ್ ನ್ಯಾಯಾಲಯವು ವಿದೇಶಕ್ಕೆ ಪ್ರಯಾಣಿಸದಂತೆ ನಿರ್ಬಂಧಿಸುವ ಆದೇಶಗಳ ಮೇಲೆ ತನ್ನ ತೀರ್ಪು ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ : Diamond Smuggling : ನೂಡಲ್ಸ್​ ಪ್ಯಾaಕೆಟ್​​ನಲ್ಲಿ ಸಿಕ್ಕಿತು 6.46 ಕೋಟಿ ರೂಪಾಯಿ ಮೌಲ್ಯದ ವಜ್ರ!

ಕೇಂದ್ರವು ಹೊರಡಿಸಿದ ಕಚೇರಿ ಜ್ಞಾಪಕ ಪತ್ರವು ಸಂವಿಧಾನಕ್ಕೆ ವಿರುದ್ಧವಾಗಿಲ್ಲವಾದರೂ, ಎಲ್ಒಸಿ ಹೊರಡಿಸಲು ಸಾರ್ವಜನಿಕ ವಲಯದ ಬ್ಯಾಂಕಿನ ಅಧ್ಯಕ್ಷರಿಗೆ ಅಧಿಕಾರ ನೀಡುವುದು ಸರಿಯಲ್ಲ ಎಂದು ಕೋರ್ಟ್ ಹೇಳಿದೆ. ಕೇಂದ್ರದ ಕಚೇರಿ ಜ್ಞಾಪಕ ಪತ್ರವು 2018 ರಲ್ಲಿ ಮಾಡಿದ ತಿದ್ದುಪಡಿಯಲ್ಲಿ, “ಭಾರತದ ಆರ್ಥಿಕ ಹಿತದೃಷ್ಟಿಯಿಂದ” ಎಲ್ಒಸಿಗಳನ್ನು ನೀಡಲು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಅಧಿಕಾರ ನೀಡಿತ್ತು.

ಒಬ್ಬ ವ್ಯಕ್ತಿಯ ನಿರ್ಗಮನವು ದೇಶದ ಆರ್ಥಿಕ ಹಿತಾಸಕ್ತಿಗೆ ಹಾನಿಕಾರಕವಾಗಿದ್ದರೆ ಅವನು/ ಅವಳು ವಿದೇಶಕ್ಕೆ ಪ್ರಯಾಣಿಸುವುದನ್ನು ನಿರ್ಬಂಧಿಸುತ್ತದೆ ಎಂದು ಹೇಳಿತ್ತು “ಭಾರತದ ಆರ್ಥಿಕ ಹಿತಾಸಕ್ತಿ” ಎಂಬ ಪದಗಳನ್ನು ಯಾವುದೇ ಬ್ಯಾಂಕಿನ “ಆರ್ಥಿಕ ಹಿತಾಸಕ್ತಿಗಳೊಂದಿಗೆ” ತುಲನೆ ಮಾಡುವುದು ಸರಿಯಲ್ಲ ಎಂದು ಅರ್ಜಿದಾರರು ವಾದಿಸಿದ್ದರು.

Continue Reading

ಪ್ರಮುಖ ಸುದ್ದಿ

Look between H and L : ಸೋಶಿಯಲ್​ ಮೀಡಿಯಾಗಳಲ್ಲಿ ಟ್ರೆಂಡ್​ ಆದ H ಮತ್ತು L; ಏನಿದರ ಗಮ್ಮತ್ತು?

Look between H and L : ನಿಮ್ಮ ಕೀಬೋರ್ಡ್​​ನಲ್ಲಿ ಎಚ್ ಮತ್ತು ಎಲ್ ನಡುವೆ ನೋಡಿ” ಟ್ರೆಂಡ್ ಕೂಡ ಗೊಂದಲ ಸೃಷ್ಟಿಸಿತು. ಯಾಕೆಂದರೆ ಸ್ವಿಗ್ಗಿ, ಯೂಟ್ಯೂಬ್, ಬ್ಲಿಂಕಿಟ್ ಮತ್ತು ಇತರ ಬ್ರಾಂಡ್​ಗಳು ಕೂಡ ತಮ್ಮದೂ ಇರಲಿ ಎಂದು ಪೋಸ್ಟ್​​ ಮಾಡಿದವು. ಹೀಗಾಗಿ ವಿಷಯವೇನೆಂದು ತಿಳಿದುಕೊಳ್ಳುವುದು ಅಗತ್ಯ.

VISTARANEWS.COM


on

ook between H and L
Koo

ಬೆಂಗಳೂರು: ಮೇಣದ ಅರಮನೆಗೆ ಬೆಂಕಿ ಹಿಡಿದಷ್ಟೇ ವೇಗವಾಗಿ ಸೋಶಿಯಲ್​ ಮೀಡಿಯಾಗಳಲ್ಲಿ ಟ್ರೆಂಡ್ ಗಳು ಸೃಷ್ಟಿಯಾಗುತ್ತವೆ. ವ್ಯಕ್ತಿಯೊಬ್ಬರು ಶೇರ್ ಮಾಡುವ ಯಾವುದೊ ಒಂದು ಕಾನ್ಸೆಪ್ಟ್​ ಬೆಳೆಬೆಳೆದು ವಿಶ್ವ ವ್ಯಾಪಿಯಾಗುತ್ತದೆ. ಆ ವಿಷಯಕ್ಕೆ ತಲೆ, ಕಾಲು ಮತ್ತು ಬಾಲಗಳೂ ಸೇರಿಕೊಳ್ಳುತ್ತವೆ. ಮುಂದೆ ಅದು ಎಲ್ಲರ ಮನಸ್ಸನ್ನೂ ಗೆಲ್ಲುವ ಸೋಶಿಯಲ್​ ಮೀಡಿಯಾ ಟ್ರೆಂಡ್ ಆಗಿ ಉಳಿಯುತ್ತದೆ. ಅಂತೆಯೇ ಮಂಗಳವಾರ (ಏಪ್ರಿಲ್ 23ರಂದು) ಸೋಶಿಯಲ್​ ಮೀಟಿಯಾ ವೇದಿಕೆಯಾಗಿರುವ ಎಕ್ಸ್​​ನಲ್ಲಿ ಎಚ್​​ ಮತ್ತು ಎಲ್ ಮಧ್ಯೆ ನೋಡಿ (Look between H and L) ಟ್ರೆಂಡ್​ ಕಿಡಿ ಹಚ್ಚಿತ್ತು. ಎಲ್ಲಿ ನೋಡಿದರೂ ಇದೇ ರೀತಿಯ ಪೋಸ್ಟ್​ಗಳು ಕಾಣಿಸುತ್ತಿದ್ದವು. ಆರಂಭದಲ್ಲಿ ಪೋಸ್ಟ್​​ ನೋಡಿ ಗಾಬರಿ ಬಿದ್ದಿದ್ದರು ಹಲವರು. ಅರ್ಥ ಮಾಡಿಕೊಂಡ ಬಳಿಕ ಅದು ದೊಡ್ಡ ವಿನೋದವಾಗಿ ಮಾರ್ಪಾಡಾಯಿತು.

ಸೋಶಿಯಲ್​ ಮೀಡಿಯಾಗಳಲ್ಲಿ ಆಗಾಗ್ಗೆ ಮೀಮ್ ಗಳು, ವೀಡಿಯೊಗಳು ಮತ್ತು ನೆಟ್ಟಿಗರು ಹಂಚಿಕೊಳ್ಳುವ ವಿಷಯಗಳು ಸಮೃದ್ಧವಾಗಿರುತ್ತವೆ. ಆದಾಗ್ಯೂ, ಈ ಕೆಲವು ಸಂಗತಿಗಳ ಅರ್ಥದ ಬಗ್ಗೆ ತಿಳಿದಿಲ್ಲದ ಬಹಳಷ್ಟು ಜನರಿಗೆ ಇದೇನು ಅನಿಸುವುದು ಸಹಜ. ಅಂತೆಯೇ “ನಿಮ್ಮ ಕೀಬೋರ್ಡ್​​ನಲ್ಲಿ ಎಚ್ ಮತ್ತು ಎಲ್ ನಡುವೆ ನೋಡಿ” ಟ್ರೆಂಡ್ ಕೂಡ ಗೊಂದಲ ಸೃಷ್ಟಿಸಿತು. ಯಾಕೆಂದರೆ ಸ್ವಿಗ್ಗಿ, ಯೂಟ್ಯೂಬ್, ಬ್ಲಿಂಕಿಟ್ ಮತ್ತು ಇತರ ಬ್ರಾಂಡ್​ಗಳು ಕೂಡ ತಮ್ಮದೂ ಇರಲಿ ಎಂದು ಪೋಸ್ಟ್​​ ಮಾಡಿದವು. ಹೀಗಾಗಿ ವಿಷಯವೇನೆಂದು ತಿಳಿದುಕೊಳ್ಳುವುದು ಅಗತ್ಯ.

ಏನಿದು Look between H and L?

ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಕಿ ಪ್ಯಾಡ್​ನಲ್ಲಿ ಇಂಗ್ಲಿಷ್​ನ H ಮತ್ತು L ನಡುವೆ J ಮತ್ತು K ಇದೆ. ಹಾಗಾದರೆ ಜೆ.ಕೆ ಎಂದರೇನು? ಇಂಗ್ಲಿಷ್​ನಲ್ಲಿ Just Kidding ( ಕೇವಲ ತಮಾಷೆಗಾಗಿ) ಎಂಬ ಮಾತಿದೆ. ಅದನ್ನು ನೇರವಾಗಿ ಹೇಳುವ ಬದಲು Look between H and L ಟ್ರೆಂಡ್​ ಸೃಷ್ಟಿ ಮಾಡಲಾಗಿದೆ. ಅಂದ ಹಾಗೆ ಇದಕ್ಕೂ ಒಂದು ಕಾರಣವಿದೆ. ಇತ್ತೀಚೆಗೆ ಮಲಯಾಳಂನಲ್ಲಿ ‘ಪ್ರೇಮಾಲು’ ಎಂಬ ಸಿನಿಮಾ ಬಿಡುಗಡೆಯಾಗಿತ್ತು. ಅದು ಈಗ ಒಟಿಟಿಯಲ್ಲೂ ಲಭ್ಯ. ಅದಲ್ಲಿ ಭಗ್ನ ಪ್ರೇಮಿ ಹಾಗೂ ಐಟಿ ಕಂಪನಿಯೊಂದರ ಪ್ರಾಜೆಕ್ಟ್​ ಮ್ಯಾನೇಜರ್​ ಆದಿ ಎಂಬ ಪಾತ್ರವನ್ನು Just Kidding ಅನ್ನು ಪದೇ ಪದೆ ಬಳಸುತ್ತಾನೆ. ಗಂಭೀರವಾದ ವಿಷಯವನ್ನು ಹೇಳಿ just kidding ಎಂದು ಹೇಳುತ್ತಿದ್ದಾನೆ.

ಇದನ್ನೂ ಓದಿ: Virat kohli : ಅಂಪೈರ್​ಗಳ ಕೈ ಕುಲುಕಲೂ ನಿರಾಕರಿಸಿದ್ದ ವಿರಾಟ್​ ಕೊಹ್ಲಿ; ವಿಡಿಯೊ ಇದೆ

ಇದೇ ವೇಳೆ Look Between T and O ಟ್ರೆಂಡ್​ ಕೂಡ ಆಗಿದೆ. ಇದು 2021ರಲ್ಲಿ ಆರಂಭಗೊಂಡಿತು. 4Chan ಎಂಬ ಚಿತ್ರ ಆಧಾರಿತ ವೆಬ್​​ ಸರಣಿಯದ್ದಾಗಿದೆ. ಕೀಬೋರ್ಡ್​​ನಲ್ಲಿ T ಮತ್ತು O ನಡುವಿನ Y, U ಮತ್ತು I ಅಕ್ಷರಗಳಿವೆ. ಇದು ಅನಿಮೆ ಸರಣಿಯ ಪಾತ್ರವಾದ Yui ಹೆಸರಾಗಿದೆ. ಇದು ತಮ್ಮ ಪ್ರೌಢ ಶಾಲೆಯ ಸಂಗೀತ ಕ್ಲಬ್ ಮೂಲಕ ಬ್ಯಾಂಡ್ ನುಡಿಸುವು ಹುಡುಗಿಯ ಕುರಿತದ್ದು.

ಬಹಳಷ್ಟು ಜನರು ಈ ಟ್ರೆಂಡ್​ ತಮ್ಮ ಪ್ರತಿಕ್ರಿಯೆಗಳನ್ನು ಸಹ ವ್ಯಕ್ತಪಡಿಸಿದರು. ಕೆಲವರು ಅದರ ಬಗ್ಗೆ ಗೊಂದಲಕ್ಕೊಳಗಾಗಿದ್ದರೆ ಇತರರು ಇದು “ಕಿರಿಕಿರಿ” ಎಂದು ಎಂದೂ ಕಾಮೆಂಟ್​ ಮಾಡಿದ್ದಾರೆ.

Continue Reading

ರಾಜಕೀಯ

Lok Sabha Election 2024: ಬಿಜೆಪಿ, ಕಾಂಗ್ರೆಸ್‌ ಜತೆ ಇರುವ ಮಿತ್ರ ಪಕ್ಷಗಳ ಯಾವವು? ಇಲ್ಲಿದೆ ಅಂತಿಮ ಚಿತ್ರಣ

Lok Sabha Election 2024: ಏಕತೆಯನ್ನು ತೋರ್ಪಡಿಸಲು ದೇಶದ ಎರಡು ಬಲಿಷ್ಠ ಪಕ್ಷಗಳು ತನ್ನದೇ ಆದ ಮೈತ್ರಿ ಕೂಟವನ್ನು ರಚಿಸಿಕೊಂಡಿದೆ. ಈ ಬಾರಿ ಲೋಕಸಭೆ ಚುನಾವಣೆ- 2024ಕ್ಕೆ ಮುಂಚಿತವಾಗಿ ಎನ್ ಡಿಎ ಮತ್ತು ಕಾಂಗ್ರೆಸ್ ತನ್ನ ಸಾಮರ್ಥ್ಯ ತೋರ್ಪಡಿಸಲು ಮೈತ್ರಿಗೆ ಹೆಚ್ಚಿನ ಗಮನ ಹರಿಸಿ ಶಕ್ತಿ ಪ್ರದರ್ಶನ ಮಾಡಿವೆ. ಬಿಜೆಪಿ ಮತ್ತು ಕಾಂಗ್ರೆಸ್‌ ಜತೆ ಇರುವ ಮಿತ್ರ ಪಕ್ಷಗಳ ಪಟ್ಟಿ ಇಲ್ಲಿದೆ.

VISTARANEWS.COM


on

By

Lok Sabha Election-2024
Koo

ಹೊಸದಿಲ್ಲಿ: ಲೋಕಸಭಾ ಚುನಾವಣೆ 2024ರಲ್ಲಿ (Lok Sabha Election 2024) ಈ ಬಾರಿ ದೇಶದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಪರಸ್ಪರ ಹೋರಾಡುತ್ತಿದ್ದು, ಸಣ್ಣ ಪಕ್ಷಗಳನ್ನು ತನ್ನ ತೆಕ್ಕೆಯೊಳಗೆ ಸೇರಿಸಿಕೊಂಡಿವೆ. ಹಿಂದಿನ ಚುನಾವಣೆಯಲ್ಲಿ ಎರಡು ಬಾರಿ ಅಧಿಕಾರಕ್ಕೆ ಏರಿರುವ ಎನ್‌ಡಿಎಯನ್ನು (NDA) ಸೋಲಿಸುವ ಉದ್ದೇಶದಿಂದ ಕಾಂಗ್ರೆಸ್ (congress) ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟವನ್ನು (India alliance) ರಚಿಸಲಾಗಿದೆ. ಅದೇ ರೀತಿ ಎನ್‌ಡಿಎ ಕೂಡ ತನ್ನ ಸಾಮರ್ಥ್ಯವನ್ನು ವೃದ್ಧಿಸಲು ಕೆಲವು ಪಕ್ಷಗಳನ್ನು ತನ್ನೊಳಗೆ ಸೇರಿಸಿಕೊಂಡಿದೆ.

ಕಾಂಗ್ರೆಸ್ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟ ರಚನೆಯಾದ ಬಳಿಕ ಎನ್‌ಡಿಎ ಕೂಡ ಹಳೆಯ ಮತ್ತು ಹೊಸ ಘಟಕಗಳನ್ನು ಸೇರಿಸಿ ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಂಡಿದೆ.

ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು (ಎನ್‌ಡಿಎ) ನವ ಭಾರತವನ್ನು (N-New India), ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ( D-Developed Nation) ಮಾಡಲು ಬಯಸುವ ಆಕಾಂಕ್ಷೆಯುಳ್ಳ ಭಾರತದ ಜನರು (A-Aspiration of People of India) ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇಂಡಿಯಾ ಮೈತ್ರಿ ಕೂಟ ರಚನೆಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಘೋಷಿದ್ದರು.


ಇದನ್ನೂ ಓದಿ: CM Siddaramaiah: ಕೇಂದ್ರದ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ; ಮೋದಿ, ಅಮಿತ್ ಶಾಗೆ ಗೋ ಬ್ಯಾಕ್‌ ಘೋಷಣೆ


ಇಂಡಿಯಾ

2024ರ ಲೋಕಸಭೆ ಚುನಾವಣೆಗಾಗಿ ವಿರೋಧ ಪಕ್ಷಗಳು ಒಗ್ಗೂಡಿ ರಚಿಸಿದ ಮೈತ್ರಿ ಕೂಟ. 2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು, ಸಂವಿಧಾನವನ್ನು ರಕ್ಷಿಸುವುದು, ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯನ್ನು ಉತ್ತೇಜಿಸುವುದು ಮತ್ತು ಜಾತ್ಯತೀತತೆಯನ್ನು ಎತ್ತಿಹಿಡಿಯುವುದು ಇದರ ಮುಖ್ಯ ಉದ್ದೇಶ ಎಂದು ಘೋಷಿಸಿದೆ.

ಇಂಡಿಯಾ ಒಕ್ಕೂಟದಲ್ಲಿವೆ 26 ಪಕ್ಷಗಳು

ಕಾಂಗ್ರೆಸ್ ನೇತೃತ್ವದಲ್ಲಿ 26 ವಿರೋಧ ಪಕ್ಷಗಳು ಒಗ್ಗೂಡಿವೆ. ಅವುಗಳೆಂದರೆ:

  • – ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ)
  • – ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ)
  • – ಆಮ್ ಆದ್ಮಿ ಪಕ್ಷ (ಎಎಪಿ)
  • – ರಾಷ್ಟ್ರೀಯ ಜನತಾ ದಳ (RJD)
  • – ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)
  • – ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಶರದ್ ಪವಾರ್ ಬಣ
  • – ಶಿವಸೇನೆ (UBT)
  • – ಸಮಾಜವಾದಿ ಪಕ್ಷ (SP)
  • – ರಾಷ್ಟ್ರೀಯ ಲೋಕದಳ (RLD)
  • – ಅಪ್ನಾ ದಳ (ಕಾಮೆರವಾಡಿ)
  • – ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ಕಾನ್ಫರೆನ್ಸ್‌ (NC)
  • – ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP)
  • – ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ)
  • – ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ)
  • – ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್-ಲೆನಿನಿಸ್ಟ್) ಲಿಬರೇಶನ್
  • – ಕ್ರಾಂತಿಕಾರಿ ಸಮಾಜವಾದಿ ಪಕ್ಷ (RSP)
  • – ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್, ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ (MDMK)
  • – ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ)
  • – ಕೊಂಗುನಾಡು ಮಕ್ಕಳ್ ದೇಸಿಯ ಕಚ್ಚಿ (KMDK)
  • – ಮನಿತನೇಯ ಮಕ್ಕಳ್ ಕಚ್ಚಿ (ಎಂಎಂಕೆ)
  • – ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML)
  • – ಕೇರಳ ಕಾಂಗ್ರೆಸ್ (ಎಂ)
  • – ಕೇರಳ ಕಾಂಗ್ರೆಸ್ (ಜೋಸೆಫ್)


ಎನ್‌ಡಿಎ ಬಣದಲ್ಲಿ 38 ಪಕ್ಷಗಳು

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಆಡಳಿತಾರೂಢ ಎನ್‌ಡಿಎಯ 38 ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಭಾಗವಹಿಸುತ್ತಿದೆ. ಮೈತ್ರಿಯಲ್ಲಿ ಭಾರತೀಯ ಜನತಾ ಪಕ್ಷದ ಬಹುದೊಡ್ಡ ಶಕ್ತಿಯಾಗಿದೆ.

ಎನ್‌ಡಿಎ ಘಟಕದಲ್ಲಿ ಇವರು ಪಕ್ಷಗಳು ಹೀಗಿವೆ:

-ಭಾರತೀಯ ಜನತಾ ಪಕ್ಷ

  • – ಶಿವಸೇನೆ (ಏಕನಾಥ್ ಶಿಂಧೆ ಬಣ)
  • – ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಎನ್‌ಸಿಪಿ (ಅಜಿತ್ ಪವಾರ್ ಬಣ)
  • – ಜನತಾ ದಳ ಸಂಯುಕ್ತ (ನಿತೀಶ್‌ ಕುಮಾರ್‌)
  • – ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ (ಪಶುಪತಿ ಕುಮಾರ್ ಪರಸ್ ಬಣ)
  • – ಅಪ್ನಾ ದಲ್ (ಸೋನೆಲಾಲ್)
  • -ನ್ಯಾಷನಲ್ ಪೀಪಲ್ಸ್ ಪಾರ್ಟಿ
  • – ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ನೈಫಿಯು ರಿಯೊ)
  • – ಜಾರ್ಖಂಡ್ ವಿದ್ಯಾರ್ಥಿಗಳ ಒಕ್ಕೂಟ
  • – ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ
  • – ಮಿಜೋ ನ್ಯಾಷನಲ್ ಫ್ರಂಟ್‌
  • – ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ
  • – ನಾಗಾ ಪೀಪಲ್ಸ್ ಫ್ರಂಟ್
  • – ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠಾವಳೆ),
  • -ಅಸೋಮ್ ಗಣ ಪರಿಷತ್
  • – ಪಟ್ಟಾಲಿ ಮಕ್ಕಳ್ ಕಚ್ಚಿ
  • – ತಮಿಳು ಮಾನಿಲ ಕಾಂಗ್ರೆಸ್
  • – ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್
  • – ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ (ಓಂ ಪ್ರಕಾಶ್ ರಾಜಭರ್)
  • – ಶಿರೋಮಣಿ ಅಕಾಲಿ ದಳ (ಸಂಯುಕ್ತ)
  • – ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ
  • – ಜನನಾಯಕ ಜನತಾ ಪಾರ್ಟಿ
  • – ಪ್ರಹಾರ್ ಜನಶಕ್ತಿ ಪಾರ್ಟಿ
  • – ರಾಷ್ಟ್ರೀಯ ಸಮಾಜ ಪಕ್ಷ
  • – ಜನ ಸುರಾಜ್ಯ ಶಕ್ತಿ ಪಾರ್ಟಿ
  • – ಕುಕಿ ಪೀಪಲ್ಸ್ ಅಲೈಯನ್ಸ್ (ಮಣಿಪುರ)
  • – ಯುನೈಟೆಡ್ ಡೆಮಾಕ್ರಟಿಕ್ ಪಕ್ಷ
  • – ಹಿಲ್ ಸ್ಟೇಟ್ ಪೀಪಲ್ಸ್, ಡೆಮಾಕ್ರಟಿಕ್ ಪಾರ್ಟಿ
  • – ನಿಶಾದ್ ಪಾರ್ಟಿ
  • – ಅಖಿಲ ಭಾರತ ಎನ್ ಆರ್ ಕಾಂಗ್ರೆಸ್
  • – ಹಿಂದೂಸ್ತಾನ್ ಅವಾಮ್ ಮೋರ್ಚಾ
  • – ಜನಸೇನಾ ಪಕ್ಷ
  • – ಹರಿಯಾಣ ಲೋಕ್‌ಹಿತ್ ಪಾರ್ಟಿ
  • -ಭಾರತ ಧರ್ಮ ಜನ ಸೇನೆ
  • -ಕೇರಳ ಕಾಮರಾಜ್ ಕಾಂಗ್ರೆಸ್
  • – ಪುಟ್ಟಿಯ ತಮಿಳಗಂ
  • – ಲೋಕ ಜನಶಕ್ತಿ ಪಕ್ಷ
  • – ಗೂರ್ಖಾ ನ್ಯಾಷನಲ್ ಲಿಬರೇಶನ್ ಫ್ರಂಟ್
Continue Reading
Advertisement
Lok Sabha Election 2024
Lok Sabha Election 20248 mins ago

Lok Sabha Election 2024: ಕಾಂಗ್ರೆಸ್‌ ಅಧಿಕಾರಕ್ಕೆ ಬಂದೆ ದೇಶದಲ್ಲಿ ಶರಿಯಾ ಕಾನೂನು ಜಾರಿ; ಯೋಗಿ ಆದಿತ್ಯನಾಥ್ ವಾಗ್ದಾಳಿ

Amit Shah
ಕರ್ನಾಟಕ13 mins ago

Amit Shah: ಬೆಂಗಳೂರಲ್ಲಿ ಅಮಿತ್‌ ಶಾ ಹವಾ; ತೇಜಸ್ವಿ ಸೂರ್ಯ ಪರ ಭರ್ಜರಿ ರೋಡ್‌ ಶೋ

Public Sector Banks
ಪ್ರಮುಖ ಸುದ್ದಿ60 mins ago

Public Sector Banks : ಸಾರ್ವಜನಿಕ ಬ್ಯಾಂಕ್​ಗಳು ಸಾಲ ಕಟ್ಟದವರಿಗೆ ಲುಕ್ ಔಟ್ ನೋಟಿಸ್​ ನೀಡುವಂತಿಲ್ಲ, ಕೋರ್ಟ್​​ ಆದೇಶ

Union Minister Pralhad Joshi visit Sri Nuggikeri Anjaneya Swamy Temple in dharwad
ಕರ್ನಾಟಕ1 hour ago

Pralhad Joshi: ಸಚಿವ ಪ್ರಲ್ಹಾದ್‌ ಜೋಶಿಗೆ ಶ್ರೀ ಆಂಜನೇಯ ಸ್ವಾಮಿಯ ಆಶೀರ್ವಾದ; ತಾವರೆ ಹೂ ರೂಪದಲ್ಲಿ ಪ್ರಸಾದ!

Kanguva Budget
ಸಿನಿಮಾ1 hour ago

Kanguva Budget: ಭಾರಿ ಸದ್ದು ಮಾಡುತ್ತಿರುವ ಕಂಗುವ ಚಿತ್ರದ ಬಜೆಟ್ ಎಷ್ಟು ಗೊತ್ತೇ?

ook between H and L
ಪ್ರಮುಖ ಸುದ್ದಿ2 hours ago

Look between H and L : ಸೋಶಿಯಲ್​ ಮೀಡಿಯಾಗಳಲ್ಲಿ ಟ್ರೆಂಡ್​ ಆದ H ಮತ್ತು L; ಏನಿದರ ಗಮ್ಮತ್ತು?

Lok Sabha Election-2024
ರಾಜಕೀಯ2 hours ago

Lok Sabha Election 2024: ಬಿಜೆಪಿ, ಕಾಂಗ್ರೆಸ್‌ ಜತೆ ಇರುವ ಮಿತ್ರ ಪಕ್ಷಗಳ ಯಾವವು? ಇಲ್ಲಿದೆ ಅಂತಿಮ ಚಿತ್ರಣ

Neha Murder Case How can a mobile photo be leaked when accused Fayaz is in jail
ಹುಬ್ಬಳ್ಳಿ2 hours ago

Neha Murder Case: ಫಯಾಜ್‌ ಜೈಲಲ್ಲಿ ಇರೋವಾಗ ಮೊಬೈಲ್ ಫೋಟೊ ಲೀಕ್ ಆಗಲು ಹೇಗೆ ಸಾಧ್ಯ?

Money Guide
ಮನಿ-ಗೈಡ್2 hours ago

Money Guide: ಮನೆ ಪೂರ್ತಿಯಾಗುವ ಮುನ್ನವೇ ಸಾಲದ ಹಣ ಖರ್ಚಾಯ್ತೆ? ಚಿಂತೆ ಬೇಡ; ಟಾಪ್‌ ಅಪ್‌ ಲೋನ್‌ಗೆ ಅಪ್ಲೈ ಮಾಡಿ

Lok Sabha Election 2024
ಕರ್ನಾಟಕ2 hours ago

Lok Sabha Election 2024: ಬೆಂಗಳೂರಲ್ಲಿ ನಾಳೆಯಿಂದ ಏ.26ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ; ಮದ್ಯ ಮಾರಾಟವೂ ಬಂದ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ18 hours ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು1 day ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ1 day ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು1 day ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು1 day ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

ಟ್ರೆಂಡಿಂಗ್‌