Site icon Vistara News

ʼಪರಾಕ್ರಮಿʼ ಮನೋಜ್‌ ಪಾಂಡೆ ನೂತನ ಸೇನಾ ಮುಖ್ಯಸ್ಥ

manoj pande

ನವದೆಹಲಿ: ಲೆ.ಜನರಲ್‌ ಮನೋಜ್‌ ಪಾಂಡೆ ದೇಶದ 29ನೇ ಭೂಸೇನಾ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಈವರೆಗೆ ಸೇನಾ ಉಪ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದು ಮೇ 1ರಿಂದ ಮುಂದಿನ ಸೇನಾ ಮುಖ್ಯಸ್ಥರಾಗಿ ಕಾರ್ಯೋನ್ಮುಖರಾಗಲಿದ್ದಾರೆ. ಪ್ರಸ್ತುತ ಭೂಸೇನಾ ಮುಖ್ಯಸ್ಥರಾಗಿರುವ ಮನೋಜ್‌ ಮುಕುಂದ್‌ ನರವಣೆ ಅವರ ಅಧಿಕಾರಾವಧಿ ಏಪ್ರಿಲ್‌ 30ಕ್ಕೆ ಮುಕ್ತಾಯವಾಗಲಿದೆ. ಮನೋಜ್‌ ಮುಕುಂದ್‌ 28 ತಿಂಗಳ ಕಾಲ ಭೂಸೇನಾ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಾರೆ.

ʼಸೇನೆಯ ಮುಖ್ಯಸ್ಥರಾಗಿ ಲೆ. ಜನರಲ್‌ ಮನೋಜ್‌ ಪಾಂಡೆಯವರನ್ನು ಸರ್ಕಾರ ನೇಮಕ ಮಾಡಿದೆ

ಮನೋಜ್‌ ಪಾಂಡೆ ಪಯಣ:

ಪ್ರಶಸ್ತಿಗಳು:

ಲೆ. ಜನರಲ್‌ ಮನೋಜ್‌ ಪಾಂಡೆ ಸೇನೆಯಲ್ಲಿ ಅಪೂರ್ವ ಸಾಧನೆಯನ್ನು ಮಾಡಿದ್ದಾರೆ. ಮನೋಜ್‌ ಅವರ ಸಾಧನೆ, ಭಾರತೀಯ ಸೇನೆಯಲ್ಲಿ ಸಲ್ಲಿಸಿದ ಕಾರ್ಯವನ್ನು ಗುರುತಿಸಿ ಭಾರತ ಸರ್ಕಾರ ಅವರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.

ಏನಿದು ಆಪರೇಶನ್ ಪರಾಕ್ರಮ್?

2001ರ ಡಿಸೆಂಬರ್‌ನಲ್ಲಿ ಪಾರ್ಲಿಮೆಂಟ್‌ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಆ ಭಯೋತ್ಪಾದಕರನ್ನು ಭಾರತದ ಪಶ್ಚಿಮ ಗಡಿಯತ್ತ ಕ್ರೋಢೀಕರಿಸಲು ಭಾರತ ಸೇನೆ ʼಆಪರೇಶನ್‌ ಪರಾಕ್ರಮ್‌ʼ ಎಂಬ ಸಾಹಸೀ ಕಾರ್ಯಾಚರಣೆ ನಡೆಸಿತ್ತು.

ಸೇನೆಯ ಜತೆಗಿನ ಸಂಬಂಧ

ನಾಗಪುರ ಮೂಲದ ಮನೋಜ್‌ ಪಾಂಡೆ ಸೇನೆಯೊಡನೆ ನಿಕಟ ಸಂಬಂಧವನ್ನು ಹೊಂದಿದ್ದಾರೆ. ಮನೋಜ್‌ ಕುಟುಂಬದವರು ಸಹ ಸೇನೆಯ ಭಾಗವಾಗಿರುವುದು ಹೆಮ್ಮೆಯ ವಿಷಯವಾಗಿದೆ. ಮನೋಜ್‌ ಪಾಂಡೆ ಸಹೋದರ ಸಾಕೇತ್‌ ಪಾಂಡೆ ಕೂಡ ಸೇನೆಯಲ್ಲಿ ಕರ್ನಲ್‌ ಹುದ್ದೆಯಲ್ಲಿದ್ದು ನಿವೃತ್ತರಾದವರು. ಮನೋಜ್‌ ಪುತ್ರ ಅಕ್ಷಯ ಸಹ ಭಾರತೀಯ ವಾಯುಪಡೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ದೇಶದ ಮೊದಲ ಸಿಡಿಎಸ್‌ ಬಿಪಿನ್‌ ರಾವತ್‌ ಮರಣದಿಂದ ತೆರವಾಗಿರುವ ಸ್ಥಾನಕ್ಕೆ ಈವರೆಗೆ ಯಾವುದೇ ನೇಮಕಾತಿ ನಡೆದಿಲ್ಲ.

ಹೆಚ್ಚಿನ ಓದಿಗಾಗಿ: Explainer: ಏನಿದು ಪಿಎಫ್‌ಐ? ಯಾಕೆ ಬ್ಯಾನ್‌ ಒತ್ತಾಯ?

Exit mobile version