Site icon Vistara News

ಸಂತೋಷ್‌ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಈಶ್ವರಪ್ಪ A1: ಉಡುಪಿ ಠಾಣೆಯಲ್ಲಿ FIR

ಈಶ್ವರಪ್ಪ

ಬೆಂಗಳೂರು: ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ (Santosh Suicide) ಪ್ರಕರಣದ ಸಂಬಂಧ ಉಡುಪಿ ಠಾಣೆಯಲ್ಲಿ‌ ಎಫ್‌ಐಆರ್‌ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಅವರನ್ನು ಮೊದಲ ಆರೋಪಿ (A1) ಎಂದು ಹೆಸರಿಸಲಾಗಿದೆ.

ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದ ಸಂತೋಷ್‌ ಪಾಟೀಲ್‌, ತಮ್ಮ ಆತ್ಮಹತ್ಯೆಗೆ ಕೆ.ಎಸ್‌. ಈಶ್ವರಪ್ಪ ಅವರು ಕಾರಣ ಎಂದು ಅನೇಕರಿಗೆ ಸಂದೇಶ ಕಳಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಶಾಂತ್‌ ಗೌಡಪ್ಪ ಪಾಟೀಲ್‌ ಎಂಬವರು ಉಡುಪಿ ಟೌನ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ಎರಡನೇ ಹಾಗೂ ಮೂರನೇ ಆರೋಪಿಗಳಾಗಿ ಕ್ರಮವಾಗಿ ಈಶ್ವರಪ್ಪ ಅವರ ಆಪ್ತರಾದ ಬಸವರಾಜ್‌(A2), ರಮೇಶ್‌ (A3) ಅವರನ್ನು ಹೆಸರಿಸಲಾಗಿದೆ. ಸುದ್ದಿಗೋಷ್ಠಿಗಳಲ್ಲಿ ಹಾಗೂ ಯಾವುದೇ ವಿವಾದಗಳ ಸಂದರ್ಭದಲ್ಲಿ ತಮ್ಮದೇ ವಿಶಿಷ್ಠ ಶೈಲಿಯಲ್ಲಿ ಮಾತಿನ ಚಟಾಕಿ ಹಾರಿಸುವಲ್ಲಿ ಈಶ್ವರಪ್ಪ ಸಿದ್ಧಹಸ್ತ. ಇದೇ ವಿಚಾರಕ್ಕೆ ಅನೇಕ ಬಾರಿ ವಿವಾದಕ್ಕೂ ಈಡಾಗಿದ್ದ ಹಿರಿಯ ಸಚಿವ ಈಗ ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಎಫ್‌ಐಆರ್‌ ಸಾಂರಾಂಶ ಹೀಗಿದೆ

ಹೆಚ್ಚಿನ ಓದಿಗಾಗಿ: ಕೊಲೆ ಕೇಸ್‌ ಹಿಂಪಡೆದಾಗ ಕರ್ತವ್ಯಪ್ರಜ್ಞೆ ಎಲ್ಲಿತ್ತು?: HDK, ಸಿದ್ದುಗೆ ಬೊಮ್ಮಾಯಿ ತಿರುಗೇಟು

Exit mobile version