Site icon Vistara News

Virat kohli : ಬಾಲಿವುಡ್ ನಟಿ ಕತ್ರಿನಾ ಕೈಫ್​ ಖ್ಯಾತಿಗೆ ಕುತ್ತು ತಂದ ಕೊಹ್ಲಿ; ಏನಾಯಿತು ಅವರಿಬ್ಬರ ನಡುವೆ?

Virat kohli

ನವದೆಹಲಿ: ವಿಶ್ವದ ಅತಿದೊಡ್ಡ ಸರ್ಚ್ ಎಂಜಿನ್​ ಗೂಗಲ್​ನಲ್ಲಿ 2023ರಲ್ಲಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಯಾಗಿ ಭಾರತ ಕ್ರಿಕೆಟ್​ ತಂಡದ ಸ್ಟಾರ್ ವಿರಾಟ್ ಕೊಹ್ಲಿ (Virat kohli) ಹೊರಹೊಮ್ಮಿದ್ದಾರೆ. ಗೂಗಲ್ ಟ್ರೆಂಡ್ಸ್ನಿಂದ ಪಡೆದ ಮಾಹಿತಿಯ ಪ್ರಕಾರ, ಕೊಹ್ಲಿ ಏಷ್ಯಾದ ಕೆಲವು ಪ್ರಸಿದ್ಧ ವ್ಯಕ್ತಿಗಳನ್ನು ಮೀರಿಸಿ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ.

ಜೂನ್​ನಲ್ಲಿ ಬಿಡುಗಡೆಯಾದ ಪಟ್ಟಿಯ ಪ್ರಕಾರ, ಕೊರಿಯಾದ ಪಾಪ್ ಗುಂಪು ಬಿಟಿಎಸ್ ವಿ 2023 ರ ಮೊದಲಾರ್ಧದಲ್ಲಿ ಗೂಗಲ್​ನಲ್ಲಿ ಹೆಚ್ಚು ಹುಡುಕಲ್ಪಟ್ಟ ಏಷ್ಯಾದ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಆದಾಗ್ಯೂ, ಬಲಗೈ ಬ್ಯಾಟರ್ 2023ರಲ್ಲಿ ಇಲ್ಲಿಯವರೆಗೆ ಹೆಚ್ಚು ಗೂಗಲ್ ಹುಡುಕಾಟಗಳನ್ನು ಪಡೆದ ತಾರೆಯಾಗಿ ಪಾಪ್​ ಗುಂಪನ್ನು ಹಿಂದಿಕ್ಕಿದ್ದಾರೆ. ಭಾರತದ ಮಾಜಿ ನಾಯಕ, ಬಿಟಿಎಸ್ ಸದಸ್ಯರಾದ ಜಂಗ್ ಕೂಕ್ ಮತ್ತು ವಿ ಅವರನ್ನು ಮೀರಿಸಿದ್ದಾರೆ. ಕಳೆದ ವರ್ಷದ ಗೂಗಲ್ ಪಟ್ಟಿಯ ಪ್ರಕಾರ ಏಷ್ಯನ್ ವರ್ಲ್ಡ್​​ವೈಡ್​ 2022ರಲ್ಲಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಯಾಗಿದ್ದ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರನ್ನೂ ಕೊಹ್ಲಿ ಹಿಂದಿಕ್ಕಿದ್ದಾರೆ. ಇದರೊಂದಿಗೆ ಕತ್ರಿನಾ ಹೆಸರಲ್ಲಿದ್ದ ಖ್ಯಾತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.

ಗೂಗಲ್ ಟ್ರೆಂಡ್​ನಿಂದ ಪಡೆದ ಈ ಅಂಕಿ ಅಂಶವು ಏಷ್ಯಾದ ಐಕಾನ್​ಗಳು ಮತ್ತು ಪ್ರಸಿದ್ಧ ಹೆಸರುಗಳಲ್ಲಿ ವಿರಾಟ್ ಕೊಹ್ಲಿಯನ್ನು ಅಗ್ರಸ್ಥಾನದಲ್ಲಿರಿಸಿದೆ. ಇದು ವಿಶ್ವದಾದ್ಯಂತದ ಎಲ್ಲಾ ವಯಸ್ಸಿನ ಮತ್ತು ದೇಶಗಳ ಅಭಿಮಾನಿಗಳಲ್ಲಿ ಕೊಹ್ಲಿಯ ಕ್ರೇಜ್ ಮತ್ತು ಅಭಿಮಾನಿ ಬಳಗವನ್ನು ಸಾಬೀತುಪಡಿಸಿದೆ.

2023 ರಲ್ಲಿ ಗೂಗಲ್​​ನಲ್ಲಿ ಹೆಚ್ಚು ಹುಡುಕಲ್ಪಟ್ಟ ಏಷ್ಯನ್ನರ್​

1) ವಿರಾಟ್ ಕೊಹ್ಲಿ
2) ಬಿಟಿಎಸ್ನ ಜಂಗ್ಕೂಕ್
3) ಬಿಟಿಎಸ್ ವಿ

ಇತ್ತೀಚೆಗೆ ಗೂಗಲ್ ಟ್ರೆಂಡ್ಸ್​ನಲ್ಲಿ ಕೊಹ್ಲಿಯ ಸಿಕ್ಕಾಪಟ್ಟೆ ಖ್ಯಾತಿ ಪಡೆದುಕೊಂಡಿದ್ದಾರೆ. ಅದಕ್ಕೆ ಭಾನುವಾರ ಮುಕ್ತಾಯಗೊಂಡ ಏಷ್ಯಾ ಕಪ್ 2023ರಲ್ಲಿ ಪಾಕಿಸ್ತಾನ ವಿರುದ್ಧ ಅವರ ಬಂಪರ್ ಶತಕವೂ ಕಾರಣವಾಗಿದೆ. ಈ ಶತಕವು ಕೊಹ್ಲಿ ಅವರ 47 ನೇ ಏಕದಿನ ಶತಕವಾಗಿದ್ದು, ಈಗ ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕಗಳ ದಾಖಲೆ ಮುರಿಯಲುಕೇವಲ 2 ಶತಕಗಳು ಸಾಕು.

ಇದನ್ನೂ ಓದಿ : Rohit Sharma : ಏರ್​ಪೋರ್ಟ್​ಗೆ ಹೊರಡುವಾಗ ಪಾಸ್​​​ಪೋರ್ಟ್​​ ಮರೆತು ಬಂದ ರೋಹಿತ್​! ಎಲ್ಲರಿಗೂ ಪೀಕಲಾಟ

ದೆಹಲಿ ಮೂಲದ ಕ್ರಿಕೆಟಿಗ ಈಗ 77 ಅಂತಾರಾಷ್ಟ್ರೀಯ ಶತಕಗಳನ್ನು ಹೊಂದಿದ್ದಾರೆ, ಸಚಿನ್ ಅವರ 100 ಅಂತಾ ರಾಷ್ಟ್ರೀಯ ಶತಕಗಳ ದಾಖಲೆಯಿಂದ ಇನ್ನೂ 23 ಮೂರಂಕಿ ಮೊತ್ತದ ದೂರದಲ್ಲಿದ್ದಾರೆ.

ಏಷ್ಯಾ ಕಪ್ 2023 ರ ಬಗ್ಗೆ ಮಾತನಾಡುವುದಾದರೆ ಶ್ರೀಲಂಕಾ ವಿರುದ್ಧದ ಫೈನಲ್​​ನಲ್ಲಿ ಕೊಹ್ಲಿಗೆ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಏಕೆಂದರೆ ಭಾರತದ ಆರಂಭಿಕ ಆಟಗಾರರಾದ ಇಶಾನ್ ಕಿಶನ್ ಮತ್ತು ಶುಭ್ಮನ್ ಗಿಲ್ ಅವರು 51 ರನ್​ಗಳ ಸುಲಭ ಗುರಿಯನ್ನು ಔಟಾಗದೇ ಬೆನ್ನಟ್ಟಿದ್ದರು. ಅದಕ್ಕೂ ಮೊದಲು ಮೊಹಮ್ಮದ್ ಸಿರಾಜ್​ ತಮ್ಮ ಬೌಲಿಂಗ್ ಸಾಹಸದ ಮೂಲಕ 21 ರನ್​ಗಳಿಗೆ 6 ವಿಕೆಟ್​ ಉರುಳಿಸಿ ಲಂಕಾ ತಂಡವನ್ನು ಸಣ್ಣ ಮೊತ್ತಕ್ಕೆ ಕಟ್ಟಿ ಹಾಕಿದ್ದರು.

ಫೈನಲ್​ನಲ್ಲಿ ಸಿರಾಜ್ ಅವರ ಸ್ಮರಣೀಯ ಪ್ರಯತ್ನವು ಭಾರತಕ್ಕೆ 8ನೇ ಏಷ್ಯಾ ಕಪ್ ಟ್ರೋಫಿಯನ್ನು ಗೆಲ್ಲಲು ಸಹಾಯ ಮಾಡಿತು.ಕೊಹ್ಲಿ ಮತ್ತು ಭಾರತದ ಮುಂದಿನ ಕಾರ್ಯಯೋಜನೆ ಸೆಪ್ಟೆಂಬರ್ 22 ರಿಂದ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 3 ಏಕದಿನ ಸರಣಿಯಾಗಿದೆ.

Exit mobile version