Site icon Vistara News

ಒಲಿಂಪಿಕ್ಸ್‌ಗೆ ಸೇರಿಸಿ: ವಿದ್ಯಾರ್ಥಿ ಭವನದ ವೇಯ್ಟರ್‌ ಬಗ್ಗೆ ಆನಂದ್‌ ಮಹೀಂದ್ರ ಟ್ವೀಟ್

vidyarthi bhavan

ಬೆಂಗಳೂರು: ಉದ್ಯಮಿ ಆನಂದ್‌ ಮಹೀಂದ್ರ ಅವರು ಬೆಂಗಳೂರಿನ ವಿಖ್ಯಾತ ವಿದ್ಯಾರ್ಥಿ ಭವನದ ವೇಯ್ಟರ್‌ಗಳ ಕೌಶಲವನ್ನು ಶ್ಲಾಘಿಸಿ ಟ್ವೀಟ್‌ ಮಾಡಿದ್ದಾರೆ.

ಒಂದರ ಮೇಲೊಂದರಂತೆ ಮಸಾಲೆ ದೋಸೆಯ ಪ್ಲೇಟ್‌ಗಳನ್ನು ಕೈಯಲ್ಲಿ ಪೇರಿಸಿಕೊಂಡು ಗ್ರಾಹಕರಿಗೆ ಸರ್ವ್‌ ಮಾಡುವ ವೇಯ್ಟರ್‌ಗಳ ವಿಡಿಯೋವನ್ನು ಅವರು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದು, ʼʼಒಲಿಂಪಿಕ್‌ ಪಂದ್ಯಾಟದಲ್ಲಿ ʼವೇಯ್ಟರ್‌ ಉತ್ಪಾದಕತೆʼ ಎಂಬ ಹೊಸ ವಿಭಾಗವನ್ನು ಆರಂಭಿಸುವ ಅಗತ್ಯವಿದೆ. ಅದರಲ್ಲಿ ಈ ವ್ಯಕ್ತಿ ಸುವರ್ಣ ಪದಕಕ್ಕೆ ಸ್ಪರ್ಧಿಸಲು ಅರ್ಹʼʼ ಎಂದು ಟ್ವೀಟ್‌ ಮಾಡಿದ್ದಾರೆ.

ಆನಂದ್‌ ಮಹೀಂದ್ರ ಅವರ ಟ್ವೀಟ್‌ ವೈರಲ್‌ ಆಗಿದೆ. ಹಲವಾರು ಮಂದಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ʼʼಇದು ನಮ್ಮ ಹೆಮ್ಮೆಯ ವಿದ್ಯಾರ್ಥಿ ಭವನʼʼ ಎಂದು ಬೆಂಗಳೂರಿಗರು ಉತ್ತರಿಸಿದ್ದಾರೆ. ಇತ್ತೀಚೆಗೆ ಹೂಡಿಕೆ ಸಮಾವೇಶಕ್ಕೆ ಬಂದಿದ್ದ ವಿದೇಶಿ ಉದ್ಯಮಿಗಳು ಕೂಡ ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿ ಅದರ ಫೋಟೋ ಶೇರ್‌ ಮಾಡಿಕೊಂಡದ್ದನ್ನು ನೆನಪಿಸಿಕೊಳ್ಳಬಹುದು.

Exit mobile version