Site icon Vistara News

Viral News: ಸಿಕ್ಕ ಸಿಕ್ಕ ಕಾರಿನ ಮೇಲೆ ಜಿಗಿತಾಳೆ ಈ ನಾಗಿಣಿ !!; ವಿಡಿಯೊ ಇಲ್ಲಿದೆ ನೋಡಿ

Viral News

ಬೆಂಗಳೂರು: ನಗರದಲ್ಲೊಬ್ಬಳು ಮಾನಸಿಕ ಅಸ್ವಸ್ಥ (Mentally ill) ಹುಡುಗಿ ಪ್ರತ್ಯಕ್ಷವಾಗಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದ್ದಾಳೆ. ಇದರ ವಿಡಿಯೋ (Video) ಈಗ ಭಾರೀ ವೈರಲ್ (Viral News) ಆಗುತ್ತಿದೆ. ಕಾರಿನ ಮುಂದೆ ಬಿದ್ದು ಭಯಗೊಳ್ಳುವಂತೆ ಮಾಡುವ ಈ ಹುಡುಗಿ ಕಾರಿನ ಬಾನೆಟ್ ಮೇಲೆ ನಿಂತು ಸುಮ್ಮನೆ ಬಡಬಡಿಸುತ್ತಾಳೆ.

ಬಿಷಪ್ ಕಾಟನ್ ಜಂಕ್ಷನ್ ಬಳಿ ಈ ಘಟನೆ ನಡೆದಿದ್ದು, ಅನೇಕರು ಯುವತಿಯ ವರ್ತನೆಗೆ ಬೆಚ್ಚಿ ಬಿದ್ದಿದ್ದಾರೆ. ತನ್ನಷ್ಟಕ್ಕೆ ತಾನೇ ಮಾತನಾಡಿಕೊಂಡು ಸಾಗುವ ಯುವತಿಯ ವಿಡಿಯೋ ಕಾರಿನ ಡ್ಯಾಷ್ ಕ್ಯಾಮ್ ನಲ್ಲಿ ಸೆರೆಯಾಗಿದೆ. ಟಿವಿ ಸಿರಿಯಲ್ ಗಳಲ್ಲಿ ಇರುವ ನಾಗಿಣಿಯಂತೆ ಈಕೆ ಕಾರಿನ ಮುಂದೆ ಬಂದು ಕಾರಿನ ಬಾನೆಟ್ ಮೇಲೆ ಕುಳಿತು ತನ್ನಷ್ಟಕ್ಕೆ ತಾನು ಮಾತನಾಡುವುದು ಇದರ ವಿಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ: Viral News: ರಜೆ ಅಂದ್ರೆ ಮಕ್ಕಳಿಗೆ ಖುಷಿ ನಿಜ.. ಆದ್ರೆ ಅದಕ್ಕಾಗಿ ಕೊಲೆನೇ ಮಾಡೋದಾ? ಈ ವಿಲಕ್ಷಣ ಸುದ್ದಿ ಕೇಳಿ ಎಲ್ಲರಿಗೂ ಶಾಕ್‌!

ಕೋರ್ಟ್ ಗೆ ಹಾಜರಾಗದ ವಕೀಲ ಬಂಧನ

ವಾರೆಂಟ್ ಜಾರಿಯಾದರೂ ಕೋರ್ಟ್ ಗೆ ಹಾಜರಾಗದ ಹಿನ್ನಲೆಯಲ್ಲಿ ವಕೀಲ ಕೆ.ಎನ್. ಜಗದೀಶ್ ಕುಮಾರ್ ನನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಗೋವಾದಲ್ಲಿ ಜಗದೀಶ್ ನನ್ನು ಬಂಧಿಸಿ ಪೊಲೀಸರು ಬೆಂಗಳೂರಿಗೆ ಕರೆತರುತ್ತಿದ್ದಾರೆ.

ಜಗದೀಶ್ ವಿರುದ್ಧ 2022 ರಲ್ಲಿ ಜಾತಿ ನಿಂದನೆ ಕೇಸ್ ದಾಖಲಾಗಿತ್ತು. ನ್ಯಾಯಾಲಯದಲ್ಲಿ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ಕೋರ್ಟ್ ಗೆ ಹಾಜರಾಗದೇ ವಕೀಲ ಜಗದೀಶ್ ಕುಮಾರ್ ತಲೆಮರೆಸಿಕೊಂಡಿದ್ದ.

ಹಿಟ್ ಆಂಡ್ ರನ್ ಗೆ ಪಾದಚಾರಿ ಬಲಿ

ಬೆಳ್ಳಂಬೆಳಗ್ಗೆ ಹಿಟ್ ಆ್ಯಂಡ್ ರನ್ ಗೆ ಪಾದಚಾರಿಯೊಬ್ಬ ಬಲಿಯಾದ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ಲ ಗ್ರಾಮದಲ್ಲಿ ನಡೆದಿದೆ. ನರೇಗಲ್ ಪಟ್ಟಣದ ನಿವಾಸಿ ಮಲ್ಲಯ್ಯ ಬಕ್ಕಯ್ಯನಮಠ (65) ಮೃತರು.

Viral News


ಶುಕ್ರವಾರ ಬೆಳಗಿನ ಜಾವ 5.30 ರ ಸುಮಾರಿಗೆ ಮನೆಯಿಂದ ಚಹಾ ಕುಡಿಯಲೆಂದು ಹೊರಗೆ ಹೋಗಿದ್ದ ವೃದ್ದ ಮಲ್ಲಯ್ಯ ನರೇಗಲ್ ಪಟ್ಟಣ ಪಂಚಾಯತಿ ಬಳಿ ರಸ್ತೆಯಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.

ಪೂಜಾರಿಕೆ ವೃತ್ತಿ‌ ಮಾಡುತ್ತಿದ್ದ ಮಲ್ಲಯ್ಯನ ಮೇಲೆ ಏಕಾಏಕಿ ಹರಿದ ಅಪರಿಚಿತ ವಾಹನದಿಂದಾಗಿ ದೇಹ ಛಿದ್ರ ಛಿದ್ರವಾಗಿದೆ. ಸ್ಥಳಕ್ಕೆ ನರೇಗಲ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ನರೇಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಾಹನ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Exit mobile version