Viral News: ರಜೆ ಅಂದ್ರೆ ಮಕ್ಕಳಿಗೆ ಖುಷಿ ನಿಜ.. ಆದ್ರೆ ಅದಕ್ಕಾಗಿ ಕೊಲೆನೇ ಮಾಡೋದಾ? ಈ ವಿಲಕ್ಷಣ ಸುದ್ದಿ ಕೇಳಿ ಎಲ್ಲರಿಗೂ ಶಾಕ್‌! - Vistara News

ವೈರಲ್ ನ್ಯೂಸ್

Viral News: ರಜೆ ಅಂದ್ರೆ ಮಕ್ಕಳಿಗೆ ಖುಷಿ ನಿಜ.. ಆದ್ರೆ ಅದಕ್ಕಾಗಿ ಕೊಲೆನೇ ಮಾಡೋದಾ? ಈ ವಿಲಕ್ಷಣ ಸುದ್ದಿ ಕೇಳಿ ಎಲ್ಲರಿಗೂ ಶಾಕ್‌!

Viral News:ಮಕ್ಕಳು ರಜೆಗಾಗಿ ಸಹಪಾಠಿಯನ್ನೇ ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ವರದಿಯಾಗಿದೆ. ರಜೆಗಾಗಿ ಐದು ವರ್ಷದ ವಿದ್ಯಾರ್ಥಿಯನ್ನು ಮೂವರು ಬಾಲಕರು ಹೊಡೆದು ಕೊಲೆ ಮಾಡಿರುವ ಘಟನೆ ದೆಹಲಿಯ ಮದರಸಾದಲ್ಲಿ ನಡೆದಿದೆ.

VISTARANEWS.COM


on

Viral News
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ರಜೆ ಅಂದ್ರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಇವತ್ತು ಹೇಗಾದರೂ ರಜೆ ಸಿಗುವಂತೆ ಮಾಡಪ್ಪ ಅಂತಾ ಮಕ್ಕಳು ದಿನಾ ಬೆಳಗ್ಗೆದ್ರೆ ಬೇಡಿಕೊಳ್ಳೋದನ್ನು ನಾವು ನೋಡೇ ಇರ್ತೀವಿ. ಆದ್ರೆ ಇಲ್ಲಿ ಕೆಲವು ಮಕ್ಕಳು ರಜೆಗಾಗಿ ಸಹಪಾಠಿಯನ್ನೇ ಕೊಲೆ ಮಾಡಿರುವ ಘಟನೆ ದೆಹಲಿ(New Delhi)ಯಲ್ಲಿ ವರದಿಯಾಗಿದೆ. ರಜೆಗಾಗಿ ಐದು ವರ್ಷದ ವಿದ್ಯಾರ್ಥಿಯನ್ನು ಮೂವರು ಬಾಲಕರು ಹೊಡೆದು ಕೊಲೆ ಮಾಡಿರುವ ಘಟನೆ ದೆಹಲಿಯ ಮದರಸಾದಲ್ಲಿ(Viral News) ನಡೆದಿದೆ.

ಏನಿದು ಘಟನೆ?

ಮೃತ ವಿದ್ಯಾರ್ಥಿಯನ್ನು ಐದು ವರ್ಷದ ರೋಹನ್‌ ಎಂದು ಗುರುತಿಸಲಾಗಿದ್ದು, ಈ ಸರಸ್ವತಿ ವಿಹಾರ್‌ನ ಶಂಕರ್ ಬಸ್ತಿಯ ಕೊಳೆಗೇರಿಯಲ್ಲಿ ತನ್ನ ತಾಯಿ ನಜಿನ್ ಖಾತೂನ್ ಮತ್ತು ಏಳು ವರ್ಷದ ಸಹೋದರಿಯೊಂದಿಗೆ ವಾಸವಾಗಿದ್ದ. ತಂದೆ ತಾಲಿಬ್ ಕಳೆದ ಐದು ವರ್ಷಗಳಿಂದ ವಜೀರಾಬಾದ್‌ನಲ್ಲಿ ಕುಟುಂಬದಿಂದ ದೂರ ವಾಸಿಸುತ್ತಿದ್ದಾರೆ. ತಾಯಿ ದುಡಿದು ಸಂಸಾರ ನಡೆಸುತ್ತಿದ್ದಾರೆ. ತಾಲಿಮ್-ಉಲ್-ಕುರಾನ್ ಮದರಸಾದಲ್ಲಿ ರೋಹನ್‌ ಓದುತ್ತಿದ್ದ. ನಿನ್ನೆ ಮದರಸಾದಲ್ಲಿ ಬಾಲಕ ಅಸ್ವಸ್ಥನಾಗಿರುವ ಕುರಿತು ತಾಯಿಗೆ ಕರೆಯೊಂದು ಬಂದಿತ್ತು. ತಕ್ಷಣ ಮದರಸಾಗೆ ಹೋಗಿ ಅಲ್ಲಿಂದ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದರು.

ಅಲ್ಲಿ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದ್ದರು. ಮಗನ ಮೈಮೇಲೆ ಗಾಯದ ಗುರುತುಗಳಿರುವುದನ್ನು ಕಂಡು ಅನುಮಾನ ಬಂದಿತ್ತು. ಬಾಲಕನ ತಂದೆ ನಜಿನ್ ಮಗನ ಶವದೊಂದಿಗೆ ಮದರಸಾ ತಲುಪಿ ಗಲಾಟೆ ಮಾಡಿದ್ದಾಳೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಮೃತದೇಹವನ್ನು ವಶಕ್ಕೆ ಪಡೆದು ಜಿಟಿಬಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಅವರಿಗೆ ಯಕೃತ್ತಿನ ಗಂಭೀರ ಗಾಯವಾಗಿದೆ ಆತನ ಹೊಟ್ಟೆಯಲ್ಲಿ ರಕ್ತಸ್ರಾವವಾಗುವುದಲ್ಲದೆ, ಆತನ ಶ್ವಾಸಕೋಶಕ್ಕೂ ಗಂಭೀರ ಏಟು ಬಿದ್ದಿರುವ ಬಗ್ಗೆ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಬಯಲಾಗಿದೆ.

ರಜೆಗಾಗಿ ಹೊಡೆದು ಸಾಯಿಸಿದ್ರು

ಇನ್ನು ರೋಹನ್‌ನನ್ನು ಅವರ ಜೊತೆ ಓದುತ್ತಿದ್ದ ಮಕ್ಕಳೇ ಹೊಡೆದು ಸಾಯಿಸಿದ್ದಾರೆ ಎಂಬ ವಿಚಾರ ಪೊಲೀಸ್‌ ವಿಚಾರಣೆ ಬಯಲಾಗಿದೆ. 11 ವರ್ಷದ ಇಬ್ಬರು ಬಾಲಕರು ಮತ್ತು 9ವರ್ಷದ ಬಾಲಕ ಸೇರಿಕೊಂಡು ರೋಹನ್‌ನನ್ನು ಹೊಡೆದು ಸಾಯಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ರಜೆಗಾಗಿ ಈ ಕೊಲೆ ಮಕ್ಕಳು ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ತಮ್ಮ ಮಕ್ಕಳ ವಿರುದ್ಧ ಕೇಳಿಬಂದಿರುವ ಆರೋಪವನ್ನು ಅವರ ಪೋಷಕರು ತಳ್ಳಿ ಹಾಕಿದ್ದಾರೆ. ಇನ್ನು ಮೂವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಯಾರಾದರೂ ಶಾಲೆಯಲ್ಲಿ ಮೃತಪಟ್ಟರೆ ರಜೆ ಸಿಗುತ್ತೆ ಎಂದು ಕೊಲೆ ಮಾಡಿರುವುದಾಗಿ ತಿಳಿಸಿದ್ದಾರೆ. ಇದನ್ನು ಕೇಳಿದ ಎಲ್ಲರೂ ಒಂದು ಕ್ಷಣಕ್ಕೆ ದಂಗಾಗಿದ್ದಾರೆ.

ಇದನ್ನೂ ಓದಿ: Actor Darshan : ರೌಡಿಶೀಟರ್‌ಗಳ ಜತೆಗೆ ಸಿಗರೇಟ್‌ ಸೇದುತ್ತಾ ಜೈಲಿನಲ್ಲಿ ನಟ ದರ್ಶನ್‌ ಬಿಂದಾಸ್‌ ಲೈಫ್!‌ ವೈರಲ್‌ ಆಯ್ತು ಫೋಟೊ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral News: ಮತ್ತೆ ಜಗಳಕ್ಕಿಳಿದ ಯೂಟ್ಯೂಬರ್ ಗಳಾದ ಧ್ರುವ ರಥೀ ಮತ್ತು ಗೌರವ್ ತನೇಜಾ

ಉತ್ತರ ಪ್ರದೇಶ ಸರ್ಕಾರವನ್ನು ಉತ್ತೇಜಿಸಲು ಪ್ರಭಾವಿಗಳಿಗೆ 8 ಲಕ್ಷ ರೂ. ವರೆಗೆ ಪಾವತಿಸುವುದಾಗಿ ಹೇಳುತ್ತಿದ್ದು, ಇದು ಕಾನೂನುಬದ್ಧ ಲಂಚ. ತೆರಿಗೆ ಪಾವತಿದಾರರ ಹಣದಿಂದ ಇದನ್ನು ಮಾಡುವ ಯಾವುದೇ ಪ್ರಭಾವಿಗಳು ನಾಚಿಕೆಪಡಬೇಕು ಎಂದು ಧ್ರುವ ರಥೀ ಹೇಳಿದ್ದು, ಇದಕ್ಕೆ ಗೌರವ್ ತನೇಜಾ ಪ್ರತ್ಯುತ್ತರ ನೀಡಿದ್ದಾರೆ.ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯದ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ (Viral News) ಆಗಿದೆ.

VISTARANEWS.COM


on

By

Viral News
Koo

ಯೂಟ್ಯೂಬರ್‌ಗಳಾದ (YouTubers) ಧ್ರುವ ರಥೀ (YouTubers Dhruv Rathee) ಮತ್ತು ಗೌರವ್ ತನೇಜಾ (YouTubers Gaurav Taneja) ಅವರ ನಡುವೆ ಮತ್ತೊಮ್ಮೆ ಭಿನ್ನಾಭಿಪ್ರಾಯ ಕಾಣಿಸಿಕೊಂಡಿದೆ. ಸಾಮಾಜಿಕ ಜಾಲತಾಣವಾದ (social media) ಎಕ್ಸ್ ನಲ್ಲಿ (Viral News) ವಾದ, ವಿವಾದ ಮಂಡಿಸಿದ್ದು, ಸಾಕಷ್ಟು ಮಂದಿಯ ಗಮನ ಸೆಳೆದಿದೆ.

ಉತ್ತರ ಪ್ರದೇಶ ಸರ್ಕಾರವನ್ನು ಉತ್ತೇಜಿಸಲು ಪ್ರಭಾವಿಗಳಿಗೆ 8 ಲಕ್ಷ ರೂ. ವರೆಗೆ ಪಾವತಿಸುವುದಾಗಿ ಹೇಳುತ್ತಿದ್ದು, ಇದು ಕಾನೂನುಬದ್ಧ ಲಂಚ. ತೆರಿಗೆ ಪಾವತಿದಾರರ ಹಣದಿಂದ ಇದನ್ನು ಮಾಡುವ ಯಾವುದೇ ಪ್ರಭಾವಿಗಳು ನಾಚಿಕೆಪಡಬೇಕು ಎಂದು ಧ್ರುವ ರಥೀ ಹೇಳಿದ್ದು, ಇದಕ್ಕೆ ಪ್ರತಿಯಾಗಿ ಗೌರವ್ ತನೇಜಾ ಅಧಿಕಾರದಲ್ಲಿರುವ ಯಾವುದೇ ಸರ್ಕಾರವನ್ನು ಪ್ರಚಾರ ಮಾಡಲು ಪಾವತಿಸಿದ ಜಾಹೀರಾತುಗಳನ್ನು ತೋರಿಸುವ ಎಲ್ಲಾ ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳು ನಾಚಿಕೆಪಡಬೇಕೇ? ಎಂದು ಪ್ರಶ್ನಿಸಿದ್ದಾರೆ.

ಉತ್ತರ ಪ್ರದೇಶ ಸರ್ಕಾರದ ಹೊಸ ಸಾಮಾಜಿಕ ಮಾಧ್ಯಮ ನೀತಿಯ ಅಡಿಯಲ್ಲಿ ಸರ್ಕಾರದ ಕುರಿತು ಪ್ರಚಾರಕ್ಕಾಗಿ ತಿಂಗಳಿಗೆ 8 ಲಕ್ಷ ರೂ. ವರೆಗೆ ಗಳಿಸಬಹುದು ಎಂದು 29ರ ಹರೆಯದ ಧ್ರುವ್ ರಾಥೀ ಅವರು ಹೇಳಿ ಈ ನೀತಿಯನ್ನು ಟೀಕಿಸಿದರು. ಇದು ತೆರಿಗೆದಾರರ ಹಣದ ದುರುಪಯೋಗ ಎಂದು ಹೇಳಿದ್ದಾರೆ.


ಸರ್ಕಾರವನ್ನು ಉತ್ತೇಜಿಸಲು ಪ್ರಭಾವಿಗಳಿಗೆ 8 ಲಕ್ಷ ರೂ. ವರೆಗೆ ಪಾವತಿಸುವುದಾಗಿ ಉತ್ತರ ಪ್ರದೇಶ ಸರ್ಕಾರ ಹೇಳುತ್ತಿದೆ ಎಂದು ರಾಥಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಬರೆದಿದ್ದಾರೆ.

ತೆರಿಗೆ ಪಾವತಿದಾರರ ಹಣದಿಂದ ಇದು ಕಾನೂನುಬದ್ಧ ಲಂಚ. ಇದನ್ನು ಮಾಡುವ ಯಾವುದೇ ಪ್ರಭಾವಿಗಳು ಸಾರ್ವಜನಿಕವಾಗಿ ನಾಚಿಕೆಪಡಬೇಕು ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಸೇರಿಸಿದ್ದಾರೆ. ಇದನ್ನು ಸುಮಾರು 2 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ.

ಇದಕ್ಕೆ 38 ವರ್ಷದ ಮಾಜಿ ಪೈಲಟ್ ಗೌರವ್ ತನೇಜಾ ತಿರುಗೇಟು ನೀಡಿದ್ದಾರೆ. ಸಮಸ್ಯೆಯ ಬಗ್ಗೆ ಸಂಪೂರ್ಣವಾಗಿ ವಿಭಿನ್ನವಾದ ಅಭಿಪ್ರಾಯವನ್ನು ನೀಡಿದ್ದಾರೆ. ತನೇಜಾ ಅವರು ಯೋಜನೆಯನ್ನು ಸಮರ್ಥಿಸಿಕೊಂಡಿದ್ದು, ಸರ್ಕಾರಿ ಜಾಹೀರಾತುಗಳನ್ನು ನೀಡಲು ಹಣ ಪಡೆಯುವ ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳು ನಾಚಿಕೆಪಡಬೇಕೇ ಎಂದು ಪ್ರಶ್ನಿಸಿದರು.


ಈ ವಿವಾದಾತ್ಮಕ ವಿಷಯವು ಹಲವಾರು ಮಂದಿಯಿಂದ ಪ್ರತಿಕ್ರಿಯೆಗಳನ್ನು ಪಡೆಯಿತು. ಒಂದು ಪಕ್ಷವು ತಮ್ಮ ಪಕ್ಷ ಮತ್ತು ಅವರ ಪ್ರಚಾರವನ್ನು ಮಾಡಲು ಬಯಸಿದರೆ ಚುನಾವಣಾ ಬಾಂಡ್ ಹಣದಿಂದ ಪಾವತಿಸಬಹುದು. ಆದರೆ ಅವರು ಸರ್ಕಾರಿ ಯೋಜನೆಗಳನ್ನು ಪ್ರಚಾರ ಮಾಡುವ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮದ ಪ್ರಭಾವಿಗಳಿಗೆ ಕಷ್ಟಪಟ್ಟು ಕೆಲಸ ಮಾಡುವ ತೆರಿಗೆದಾರರ ಹಣವನ್ನು ಬಳಸಲು ಬಯಸುತ್ತಾರೆ. ನಾವು ಅದರ ವಿರುದ್ಧವಾಗಿದ್ದೇವೆ ಎಂದು ಒಬ್ಬರು ಕಾಮೆಂಟ್ ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Viral News: 10 ವರ್ಷಗಳ ಬೋಧನೆಯ ಅನಂತರವೂ ಸಂಬಳ ಹೆಚ್ಚಿಸಿಲ್ಲ; ಹತಾಶೆಯಿಂದ ರಾಜೀನಾಮೆ

ವಿಚಿತ್ರವೆಂದರೆ ನಿಮಗೆ ವ್ಯಕ್ತಿಗಳ ಜಾಹೀರಾತುಗಳು ಮತ್ತು ಪ್ರಚಾರದ ನಡುವಿನ ವ್ಯತ್ಯಾಸವು ತಿಳಿದಿಲ್ಲ ಎಂದು ಇನ್ನೊಬ್ಬರು ಹೇಳಿದ್ದಾರೆ.

ಧ್ರುವ ರಥೀ ಮತ್ತು ಗೌರವ್ ತನೇಜಾ ಸಾಮಾಜಿಕ ಜಾಲತಾಣಗಳಲ್ಲಿ ಮಾತಿನ ಚಕಮಕಿ ನಡೆಸುತ್ತಿರುವುದು ಇದೇ ಮೊದಲಲ್ಲ. ಜೂನ್ 2024 ರಲ್ಲಿ ‘ಇಂಡಿಯಾ ವರ್ಸಸ್ ಭಾರತ್’ ಚರ್ಚೆಯಲ್ಲಿ ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ತೀವ್ರವಾದ ವಾದ ವಿವಾದಗಳನ್ನು ಮಂಡಿಸಿದ್ದರು.

Continue Reading

ವೈರಲ್ ನ್ಯೂಸ್

Deep Fake Video: ಎಐ ಬಳಸಿ ದರ್ಶನ್‌- ಧನ್ವಿರ್ ವಿಡಿಯೋ ದುರ್ಬಳಕೆ..!

ಬಳ್ಳಾರಿ ಜೈಲು ಸೇರಿರುವ ದರ್ಶನ್ ಗೆ ಈಗ ಎಐ ಕಾಟ ಶುರುವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ (Deep Fake Video) ನಟ ದರ್ಶನ್‌ ಹಾಗೂ ಧನ್ವೀರ್‌ ಪರಸ್ಪರ ಮುತ್ತು ಕೊಡುತ್ತಿರುವಂತೆ ವಿಡಿಯೋ ಎಡಿಟ್ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಷ್ಟು ದಿನ ನಟಿಮಣಿಯರ ಟಾರ್ಗೆಟ್ ಆಗಿದ್ದ ಎಐ ತಂತ್ರಜ್ಞಾನವನ್ನು ಇದೀಗ ದರ್ಶನ್ ಮೇಲೂ ಪ್ರಯೋಗ ಮಾಡಲಾಗಿದೆ.

VISTARANEWS.COM


on

By

Deep Fake Video
Koo

ಬೆಂಗಳೂರು: ಡೀಪ್ ಫೇಕ್ ವಿಡಿಯೋಗೆ (Deep Fake Video) ಈಗಾಗಲೇ ಸಾಕಷ್ಟು ಮಂದಿ ನಟ, ನಟಿಯರು ಬಲಿಯಾಗಿದ್ದಾರೆ. ಈಗ ಇದು ಕೊಲೆ ಆರೋಪದಲ್ಲಿ ಜೈಲು ಸೇರಿರುವ ದರ್ಶನ್ ನನ್ನೂ (Actor darshan) ಕೂಡ ಬಿಟ್ಟಿಲ್ಲ. ಆರ್ಟಿಫಿಷಿಯಲ್ ತಂತ್ರಜ್ಞಾನವನ್ನು ಬಳಸಿಕೊಂಡು ಎಡಿಟ್ ಮಾಡಿರುವ ದರ್ಶನ್‌- ಧನ್ವಿರ್ ವಿಡಿಯೋ (Darshan- Dhanvir Video) ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿರುವ ದರ್ಶನ್ ಅನ್ನು ರಾಜಾತಿಥ್ಯ ಪ್ರಕರಣದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.


ಬಳ್ಳಾರಿ ಜೈಲು ಸೇರಿರುವ ದರ್ಶನ್ ಗೆ ಈಗ ಎಐ ಕಾಟ ಶುರುವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ನಟ ದರ್ಶನ್‌ ಹಾಗೂ ಧನ್ವೀರ್‌ ಪರಸ್ಪರ ಮುತ್ತು ಕೊಡುತ್ತಿರುವಂತೆ ವಿಡಿಯೋ ಎಡಿಟ್ ಕಿಡಿಗೇಡಿಗಳು ಹಂಚಿಕೊಂಡಿದ್ದಾರೆ.
ಇಷ್ಟು ದಿನ ನಟಿಮಣಿಯರ ಟಾರ್ಗೆಟ್ ಆಗಿದ್ದ ಎಐ ತಂತ್ರಜ್ಞಾನವನ್ನು ಇದೀಗ ದರ್ಶನ್ ಮೇಲೂ ಪ್ರಯೋಗ ಮಾಡಲಾಗಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ದಚ್ಚು ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್ 9 ರವರೆಗೆ ನ್ಯಾಯಾಂಗ ಬಂಧನ

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸೆಪ್ಟೆಂಬರ್ 9 ರವರೆಗೆ ನಟ ದರ್ಶನ್ ಮತ್ತು ಇತರ ಆರೋಪಿಗಳಿಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಿ 24 ನೇ ಎಸಿಎಂಎಂ ಕೋರ್ಟ್ ಬುಧವಾರ ಆದೇಶಿಸಿತ್ತು. ದರ್ಶನ್ ಮತ್ತು ಗ್ಯಾಂಗ್ ನ ನ್ಯಾಯಾಂಗ ಬಂಧನ ಅವಧಿ ಬುಧವಾರ ಅಂತ್ಯವಾದ ಹಿನ್ನೆಲೆಯಲ್ಲಿ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಜೈಲು ಅಧಿಕಾರಿಗಳು ಹಾಜರು ಪಡಿಸಲಾಯಿತು.

ತುಮಕೂರು ಹಾಗೂ ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ರೇಣುಕಾಸ್ವಾಮಿ ಕೊಲೆ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರಾದರು.

ಪವಿತ್ರ ಗೌಡ, ದರ್ಶನ್, ಪುಟ್ಟಸ್ವಾಮಿ ಅಲಿಯಾಸ್ ಪವನ್, ನಂದಿಶ್ ,ರಾಘವೇಂದ್ರ, ಲಕ್ಷ್ಮಣ, ದೀಪಕ್, ಪ್ರದೂಷ್, ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ಹೆಸರು ಕರೆದು ಹಾಜರಾತಿ ತೆಗೆದುಕೊಂಡ ನ್ಯಾಯಾಧೀಶರು ಸೆಪ್ಟೆಂಬರ್ 9 ರವರೆಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಆದೇಶಿಸಿದರು.

ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಬಳಿಕ ನಟ ದರ್ಶನ್ ನನ್ನು ಬಳ್ಳಾರಿ ಜೈಲ್ ಗೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ: Actor Chikkanna: ರೇಣುಕಾ ಸ್ವಾಮಿ ಕೊಲೆ ಪ್ರಕರಣ: ದರ್ಶನ್‌ ಭೇಟಿ ಮಾಡಿದ್ದಕ್ಕೆ ನಟ ಚಿಕ್ಕಣ್ಣ ವಿಚಾರಣೆಗೆ ಹಾಜರು

ಸೆಲೆಬ್ರಿಟಿಗಳ ಭೇಟಿಗೆ ಅವಕಾಶವಿಲ್ಲ

ಸದ್ಯ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್‌ ಭೇಟಿಗೆ ಯಾವ ಸೆಲೆಬ್ರಿಟಿಗಳಿಗೆ ಅವಕಾಶ ಇಲ್ಲ ಎನ್ನಲಾಗಿದೆ. ಕೇವಲ ಕೈದಿಯ ಧರ್ಮಪತ್ನಿ, ರಕ್ತಸಂಬಂಧಿಗಳು ಮತ್ತು ವಕಾಲತ್ತು ವಹಿಸಿದ ವಕೀಲರಿಗೆ ಮಾತ್ರ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ.

ಚಿತ್ರರಂಗದ ಕಲಾವಿದರು, ಅಭಿಮಾನಿಗಳು, ರಾಜಕೀಯ ವ್ಯಕ್ತಿಗಳು ಯಾರಿಗೂ ದರ್ಶನ್‌ ಭೇಟಿಗೆ ಅವಕಾಶ ಇರುವುದಿಲ್ಲ. ಇನ್ನೂ ಸಾಮಾನ್ಯ ಖೈದಿಯಂತೆ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿ ಇರಲಿದ್ದು, ಗೃಹ, ಮನರಂಜನೆ ಸೌಲಭ್ಯಗಳು, ಕಾರಾಗೃಹದ ನಿಯಮದಂತೆ ಒದಗಿಸಲಾಗುತ್ತದೆ. ನಿಯಮ ಉಲ್ಲಂಘನೆ ಮಾಡುವ ಹಾಗಿಲ್ಲ. ಬೇರೆ ಕೈದಿಗಳ ಜತೆ ಬೆರೆಯದಂತೆ ಸೂಕ್ತ ಭದ್ರತೆ ನೀಡಲಾಗಿದೆ.

Continue Reading

ವೈರಲ್ ನ್ಯೂಸ್

Viral News: 10 ವರ್ಷಗಳ ಬೋಧನೆಯ ಅನಂತರವೂ ಸಂಬಳ ಹೆಚ್ಚಿಸಿಲ್ಲ; ಹತಾಶೆಯಿಂದ ರಾಜೀನಾಮೆ

ರಾಜೀನಾಮೆ ನೀಡುವ ಮೊದಲು ತಮ್ಮ ಸಮಸ್ಯೆಗಳನ್ನು ಪ್ರಾಂಶುಪಾಲರೊಂದಿಗೆ ಚರ್ಚಿಸಲು ಬಯಸಿದ್ದ ಪ್ರಾಧ್ಯಾಪಕರೊಂದಿಗೆ ಪ್ರಾಂಶುಪಾಲರು ಹೆಚ್ ಒಡಿ ಉಪಸ್ಥಿತಿಯಿಲ್ಲದೆ ವಿಷಯವನ್ನು ಚರ್ಚಿಸಲು ನಿರಾಕರಿಸಿದರು. ಅವರು ಯಾವಾಗಲೂ ಕೆಲವು ಅಧ್ಯಾಪಕರನ್ನು ಬೆಂಬಲಿಸುತ್ತಾರೆ ಮತ್ತು ಪ್ರಾಧ್ಯಾಪಕರು ಸೇರಿದಂತೆ ಇತರರನ್ನು ಕಷ್ಟಕರವಾದ ಕಾರ್ಯಗಳಿಗೆ ನಿಯೋಜಿಸುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ(Viral News) ಪ್ರಾಧ್ಯಾಪಕರು ತಿಳಿಸಿದ್ದಾರೆ.

VISTARANEWS.COM


on

By

Viral News
Koo

ಪೂರ್ವ ಬೆಂಗಳೂರಿನ (East bengaluru) ಎಂಜಿನಿಯರಿಂಗ್ ಕಾಲೇಜೊಂದರ (engineering college) 37 ವರ್ಷದ ಸಹಾಯಕ ಪ್ರಾಧ್ಯಾಪಕರು 10 ವರ್ಷಗಳ ಬೋಧನೆಯ ಅನಂತರವೂ ಸಂಬಳ ಹೆಚ್ಚಿಸಿಲ್ಲ ಎಂದು ಹತಾಶೆ ವ್ಯಕ್ತಪಡಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ (Viral News) ಮಾಹಿತಿ ಹಂಚಿಕೊಂಡಿರುವ ಮಾಜಿ ಪ್ರೊಫೆಸರ್, ಪ್ರಾಮಾಣಿಕತೆ ಮತ್ತು ನಿಷ್ಠೆಗೆ ಈ ಜಗತ್ತಿನಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದ್ದಾರೆ.

ನನಗಿಂತ ಕಿರಿಯರಿಗೆ ಹೆಚ್ಚು ಸಂಭಾವನೆ ನೀಡಲಾಗುತ್ತಿತ್ತು ದೂರಿರುವ ಅವರು, ಪ್ರಾಧ್ಯಾಪಕರು ರಾಜೀನಾಮೆ ನೀಡುವ ಮೊದಲು ಪ್ರಾಂಶುಪಾಲರನ್ನು ಸಂಪರ್ಕಿಸಲು ಪ್ರಯತ್ನಿಸಿದರು. 2019 ರವರೆಗೆ ಎಲ್ಲವೂ ಸಾಮಾನ್ಯವಾಗಿತ್ತು. ಹೊಸ ಪ್ರಾಂಶುಪಾಲರು ಸೇರಿಕೊಂಡ ಬಳಿಕ ಕಾಲೇಜಿನಲ್ಲಿ ಮೂರು ಶಾಖೆಗಳನ್ನು ಮುಚ್ಚಲಾಗಿದೆ.

ಯಾವುದೇ ಇಪಿಎಫ್ ಪಾವತಿಗಳನ್ನು ಮಾಡದೆ ಸಂಬಳದ ರಚನೆಯನ್ನು ಬದಲಾಯಿಸಲಾಗಿದೆ, ತುಟ್ಟಿಭತ್ಯೆ ಕಡಿತಗೊಳಿಸಲಾಗಿದೆ ಮತ್ತು ಗ್ರಾಚ್ಯುಟಿಯನ್ನು ಕಡಿಮೆ ಮಾಡಲಾಗಿದೆ ಎಂದು ಪ್ರಾಧ್ಯಾಪಕರು ಉಲ್ಲೇಖಿಸಿದ್ದಾರೆ.
ರಾಜೀನಾಮೆ ನೀಡುವ ಮೊದಲು ಪ್ರಾಧ್ಯಾಪಕರು ತಮ್ಮ ಸಮಸ್ಯೆಗಳನ್ನು ಪ್ರಾಂಶುಪಾಲರೊಂದಿಗೆ ಚರ್ಚಿಸಲು ಬಯಸಿದ್ದರು. ಆದರೆ ಪ್ರಾಂಶುಪಾಲರು ಹೆಚ್ ಒಡಿ ಉಪಸ್ಥಿತಿಯಿಲ್ಲದೆ ವಿಷಯವನ್ನು ಚರ್ಚಿಸಲು ನಿರಾಕರಿಸಿದರು. ಅವರು ಯಾವಾಗಲೂ ಕೆಲವು ಅಧ್ಯಾಪಕರನ್ನು ಬೆಂಬಲಿಸುತ್ತಾರೆ ಮತ್ತು ಪ್ರಾಧ್ಯಾಪಕರು ಸೇರಿದಂತೆ ಇತರರನ್ನು ಕಷ್ಟಕರವಾದ ಕಾರ್ಯಗಳಿಗೆ ನಿಯೋಜಿಸುತ್ತಾರೆ. ನಾನು ಏಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಯಾರೂ ಕೇಳಲಿಲ್ಲ ಮತ್ತು ಯಾರೂ ನನ್ನನ್ನು ಉಳಿಯಲು ಕೇಳಲಿಲ್ಲ ಎಂದು ಪ್ರಾಧ್ಯಾಪಕರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಈ ಪೋಸ್ಟ್ ಗೆ ಬಳಕೆದಾರರು ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೀರ್ಘಾವಧಿಯ ಕೆಲಸ ಸೇರಿದಂತೆ ವೈಯಕ್ತಿಕ ತ್ಯಾಗಗಳನ್ನು ಮಾಡಿದರೂ, ಸಂಬಳ ಹೆಚ್ಚಳಕ್ಕಾಗಿ ಅವರ ವಿನಂತಿಯನ್ನು ಯಾವಾಗಲೂ ನಿರ್ಲಕ್ಷಿಸಲಾಗಿದೆ ಎಂದು ಅನೇಕರು ಹೇಳಿಕೊಂಡಿದ್ದಾರೆ.
ಈ ಪೋಸ್ಟ್ ವೈರಲ್ ಆದ ಬಳಿಕ 1,200 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದರೆ. ಅನೇಕರು ಪ್ರಾಧ್ಯಾಪಕರಿಗೆ ಬೆಂಬಲ ಸೂಚಿಸಿದರು. ಕಾಲೇಜು ಮತ್ತು ಪ್ರಾಂಶುಪಾಲರ ಹೆಸರನ್ನು ಬಹಿರಂಗಪಡಿಸುವಂತೆ ಒತ್ತಾಯಿಸಿದರು.

Viral News
Viral News


ಇದನ್ನೂ ಓದಿ: Attempt To murder : ಪ್ರೀತಿ‌ ನಿರಾಕರಿಸಿದ ಮಂಗಳಮುಖಿಗೆ ಚಾಕು ಇರಿದ ಯುವಕ!

ಒಬ್ಬ ಬಳಕೆದಾರ ಕಾಮೆಂಟ್ ಮಾಡಿ, ನಮ್ಮ ದೇಶ ಮತ್ತು ವಿಶೇಷವಾಗಿ ಬೆಂಗಳೂರು ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿ ಇತ್ಯಾದಿಗಳ ಪರವಾಗಿ ಶೈಕ್ಷಣಿಕ ಸಂಸ್ಥೆಗಳ ಕೆಲಸದ ಸಂಸ್ಕೃತಿಯನ್ನು ಬುಡಮೇಲು ಮಾಡಬೇಕಾಗಿದೆ ಎಂದು ಹೇಳಿದ್ದಾರೆ.

ಮತ್ತೊಬ್ಬರು ಉದ್ಯೋಗದಾತರು ಇಪಿಎಫ್ ಅನ್ನು ತಡೆಹಿಡಿಯುವಂತಿಲ್ಲ. ಇದು ಭಾರತೀಯ ಕಾನೂನುಗಳ ಪ್ರಕಾರ ಅಪರಾಧವಾಗಿದೆ; ನಿಮ್ಮ ಹಣಕ್ಕಾಗಿ ನೀವು ಹೋರಾಟ ಮಾಡಬಹುದು ಎಂದು ಹೇಳಿದ್ದಾರೆ.

Continue Reading

ತುಮಕೂರು

Attempt To murder : ಪ್ರೀತಿ‌ ನಿರಾಕರಿಸಿದ ಮಂಗಳಮುಖಿಗೆ ಚಾಕು ಇರಿದ ಯುವಕ!

Attempt To murder : ಪ್ರೀತಿ ನಿರಾಕರಿಸಿದ್ದಕ್ಕೆ ಸಿಟ್ಟಾದ ಯುವಕನೊರ್ವ ಮಂಗಳಮುಖಿಗೆ ಚಾಕು ಇರಿದು ಹತ್ಯೆಗೆ ಯತ್ನಿಸಿದ್ದಾನೆ. ಚಾಕು ಇರಿದು ಪರಾರಿ ಆಗಲು ಯತ್ನಿಸಿದ ಯುವಕನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

VISTARANEWS.COM


on

By

attempt to murder case
Koo

ತುಮಕೂರು: ಪ್ರೀತಿ‌ ನಿರಾಕರಿಸಿದ ಮಂಗಳಮುಖಿಗೆ ಯುವಕನೊರ್ವ ಚಾಕು (Attempt To murder) ಇರಿದಿದ್ದಾನೆ. ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದಾಗ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ಕೋಟೆ ಪ್ರದೇಶದಲ್ಲಿ ಘಟನೆ ನಡೆದಿದೆ.

ಹನೀಷಾ (21) ಚಾಕುವಿನಿಂದ ಇರಿತಕ್ಕೊಳಗಾದ ಮಂಗಳಮುಖಿಯಾಗಿದ್ದಾರೆ. ಮಂಡ್ಯದ ಆದಿಲ್‌ (23) ಚಾಕು ಇರಿದ ಆರೋಪಿಯಾಗಿದ್ದಾನೆ. ಇವರಿಬ್ಬರು ಕಳೆದ ಆರು ತಿಂಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಹನೀಷಾ ಲಿಂಗತ್ವ ಅಲ್ಪಸಂಖ್ಯಾತರ ಕಾರ್ಯಕ್ರಮಗಳ ನಿಮಿತ್ತ ಪರ ಊರುಗಳಿಗೆ ಆಗಾಗ ಹೋಗುತ್ತಿದ್ದರು.

ಇದನ್ನು ಸಹಿಸದ ಆದಿಲ್‌ ಆಕ್ಷೇಪ ವ್ಯಕ್ತಪಡಿಸಿ ಹಲ್ಲೆ ನಡೆಸುತ್ತಿದ್ದ. ಇದರಿಂದ ಬೇಸತ್ತು ಹನೀಷಾ ಪ್ರೇಮ ನಿರಾಕರಿಸಿದ್ದಳು. ಈ ಹಿನ್ನೆಲೆಯಲ್ಲಿ ಬುಧವಾರ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಸಂದರ್ಭದಲ್ಲಿ ಸಿಟ್ಟಿನಲ್ಲಿ ಆದಿಲ್‌ ಚಾಕುವಿನಿಂದ ಇರಿದಿದ್ದಾನೆ. ಗಾಯಾಳು ಹನೀಷಾಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ: Road Accident : ಚಾಲುಕ್ಯ ಸರ್ಕಲ್‌ನಲ್ಲಿ ಸೈಕಲ್‌ ಸವಾರನಿಗೆ ಲಾರಿ ಡಿಕ್ಕಿ; ಹೊರಬಂತು ಮೆದುಳು!

ಬುದ್ಧಿ ಹೇಳಿದಕ್ಕೆ ಹೆತ್ತ ತಾಯಿಯನ್ನೆ ಕೊಂದ ಪಾಪಿ ಪುತ್ರ!

ಪಾಪಿ ಪುತ್ರನೊಬ್ಬ ಬುದ್ದಿ ಹೇಳಿದ್ದಕ್ಕೆ ಮಲಗಿದಲ್ಲೇ ಹೆತ್ತ ತಾಯಿಯನ್ನು ಕೊಂದಿರುವ ಘಟನೆ ಗದಗ ನಗರದ ದಾಸರ ಓಣಿಯಲ್ಲಿ ಜರುಗಿದೆ. ಶಾರದಮ್ಮ ಅಗಡಿ (85) ಕೊಲೆಯಾದ ತಾಯಿಯಾಗಿದ್ದು, ಸಿದ್ಧಲಿಂಗ ಅಗಡಿ ಕೊಲೆ ಮಾಡಿದ ಪಾಪಿ ಪುತ್ರನಾಗಿದ್ದಾನೆ.

ನಿನ್ನೆ ಪಕ್ಕದ ಮನೆಯವರ ಜತೆ ಸಿದ್ಧಲಿಂಗ ಅಗಡಿ ಜಗಳ ಮಾಡಿಕೊಂಡಿದ್ದ‌.‌ ಈ ವೇಳೆ ನನ್ನ ಮಗನ ತಲೆ ಸರಿಯಿಲ್ಲ ಬಿಟ್ಟು ಬಿಡಿ ಎಂದು ತಾಯಿ ಬೇಡಿಕೊಂಡಿದ್ದರು. ಇನ್ನು ತಾಯಿಯನ್ನು ಕೊಂದು ಸಹೋದರಿಯರಿಗೆ ಫೋನ್ ಮಾಡಿದ ಪಾಪಿ ಪುತ್ರ, ತಾಯಿ ಸಾವನ್ನಪ್ಪಿದ್ದಾಳೆ ಎಂದು ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.

ಮಾನಸಿಕ ಅಸ್ವಸ್ಥ ಸಹೋದರನ ಮಾತು ನಂಬದ ಅಕ್ಕಂದಿರು, ಬಳಿಕ ಪೊಲೀಸರು ಮಾಹಿತಿ ನೀಡಿದ ಬಳಿಕ ಓಡೋಡಿ ಬಂದಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಬಿ ಎಸ್ ನೇಮಗೌಡ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಘಟನೆಯು ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Viral News
ವೈರಲ್ ನ್ಯೂಸ್29 mins ago

Viral News: ಮತ್ತೆ ಜಗಳಕ್ಕಿಳಿದ ಯೂಟ್ಯೂಬರ್ ಗಳಾದ ಧ್ರುವ ರಥೀ ಮತ್ತು ಗೌರವ್ ತನೇಜಾ

Finance Commission Meeting
ಬೆಂಗಳೂರು1 hour ago

Finance Commission Meeting: 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕಕ್ಕೆ ಒಟ್ಟು ರೂ.79770 ಕೋಟಿ ನಷ್ಟ: ಸಿದ್ದರಾಮಯ್ಯ

Muda scam CM gets temporary relief Hearing adjourned to August 31
ಬೆಂಗಳೂರು1 hour ago

CM Siddaramaiah : ಮುಡಾ ಹಗರಣ ಸಿಎಂಗೆ ತಾತ್ಕಾಲಿಕ ರಿಲೀಫ್‌; ಆ.31ಕ್ಕೆ ವಿಚಾರಣೆ ಮುಂದೂಡಿಕೆ

Deep Fake Video
ವೈರಲ್ ನ್ಯೂಸ್1 hour ago

Deep Fake Video: ಎಐ ಬಳಸಿ ದರ್ಶನ್‌- ಧನ್ವಿರ್ ವಿಡಿಯೋ ದುರ್ಬಳಕೆ..!

Viral News
ವೈರಲ್ ನ್ಯೂಸ್2 hours ago

Viral News: 10 ವರ್ಷಗಳ ಬೋಧನೆಯ ಅನಂತರವೂ ಸಂಬಳ ಹೆಚ್ಚಿಸಿಲ್ಲ; ಹತಾಶೆಯಿಂದ ರಾಜೀನಾಮೆ

Kannada New Movie
ಬೆಂಗಳೂರು2 hours ago

Kannada New Movie: ಪೃಥ್ವಿ ಅಂಬಾರ್, ಪ್ರಮೋದ್ ಅಭಿನಯದ ‘ಭುವನಂ ಗಗನಂ’ ಸಿನಿಮಾಗೆ ಕಿಚ್ಚ ಸುದೀಪ್ ಸಾಥ್‌

Ranjani Raghavan
ಸಿನಿಮಾ3 hours ago

Ranjani Raghavan: ಹಸೆಮಣೆ ಏರಲು ಸಜ್ಜಾದ ನಟಿ ರಂಜನಿ ರಾಘವನ್; ಇವ್ರೇ ನೋಡಿ ಅವ್ರ ಹುಡುಗ

DK Shivakumar
ಬೆಂಗಳೂರು3 hours ago

DK Shivakumar: ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣ; ನ್ಯಾಯಾಲಯ ಏನೇ ತೀರ್ಪು ನೀಡಿದರು ದೇವರ ಪ್ರಸಾದ ಎಂದು ಸ್ವೀಕರಿಸುತ್ತೇನೆ: ಡಿ.ಕೆ. ಶಿವಕುಮಾರ್‌

Prajwal Revannas anticipatory bail plea adjourned to September 5
ಹಾಸನ4 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಕೇಸ್‌; ನಿರೀಕ್ಷಣಾ ಜಾಮೀನು ಅರ್ಜಿಗಳ ವಿಚಾರಣೆ ಸೆ.5ಕ್ಕೆ ಮುಂದೂಡಿಕೆ

Actor Darshan
ಸಿನಿಮಾ4 hours ago

Actor Darshan : ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್‌ ಭೇಟಿಗೆ ಸೆಲೆಬ್ರೆಟಿಗಳಿಗೆ ಇಲ್ಲ ಅವಕಾಶ!

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Actor Darshan
ಸ್ಯಾಂಡಲ್ ವುಡ್7 hours ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ5 days ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ3 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ3 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ3 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ4 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ4 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

ಟ್ರೆಂಡಿಂಗ್‌