Site icon Vistara News

Mandya Elections : ಕಾಂಗ್ರೆಸ್‌‌ ಅಭ್ಯರ್ಥಿ ಪ್ರಚಾರವೇ ಶುರು, ಜೆಡಿಎಸ್‌ನಿಂದ ನಿಖಿಲ್‌?

Mandya Election Congress Campaign Ravikumar Nikhil Kumaraswamy

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ (Mandya Elections) ಅಖಾಡ ರಂಗೇರಿದೆ. ಒಂದು ಕಡೆ ಬಿಜೆಪಿ-ಜೆಡಿಎಸ್‌ ಮೈತ್ರಿ (BJP-JDS coalition) ಅಭ್ಯರ್ಥಿ ಯಾರಾಗುತ್ತಾರೆ ಎಂಬ ಬಗ್ಗೆ ಕುತೂಹಲದ ಚರ್ಚೆ ನಡೆಯುತ್ತಿರುವ ನಡುವೆಯೇ ಕಾಂಗ್ರೆಸ್‌ ಮಾತ್ರ ‌‌ ಪ್ರಚಾರವನ್ನೇ (Congress starts Campaign) ಶುರು ಮಾಡಿದೆ.

ಕಾಂಗ್ರೆಸ್‌ನ ಅಭ್ಯರ್ಥಿ ಯಾರು ಎನ್ನುವುದನ್ನು ಪಕ್ಷ ಅಧಿಕೃತವಾಗಿ ಇನ್ನೂ ಘೋಷಿಸಿಲ್ಲ. ಆದರೆ, ಹೈಕಮಾಂಡ್ ನಿಂದ ಅಧಿಕೃತ ಘೋಷಣೆಗೂ ಮುನ್ನವೇ ಅಭ್ಯರ್ಥಿ ಫೈನಲ್ ಆಗಿದೆ, ಉದ್ಯಮಿ ಸ್ಟಾರ್ ಚಂದ್ರು ಅಲಿಯಾಸ್‌ ವೆಂಕಟರಮಣೇ ಗೌಡ ಕಾಂಗ್ರೆಸ್ ಅಭ್ಯರ್ಥಿ ಎಂದು ಶಾಸಕ ರವಿ ಗಣಿಗ ಅವರು ಘೋಷಣೆ ಮಾಡಿದ್ದು, ಪ್ರಚಾರವನ್ನೂ ಶುರು ಮಾಡಿದ್ದಾರೆ.

ಮಂಡ್ಯ ಶಾಸಕ ರವಿ ಕುಮಾರ್‌ ಅವರು ಸ್ಟಾರ್‌ ಚಂದ್ರು ಅವರನ್ನು ಕ್ಷೇತ್ರದ ಎಲ್ಲಾ ಕಡೆ ಕರೆದುಕೊಂಡು ಹೋಗಿ ಪರಿಚಯ ಮಾಡಲು ಶೂರು ಮಾಡಿದ್ದಾರೆ. ಆ ಮೂಲಕ ಪ್ರಚಾರವೇ ಆರಂಭಗೊಂಡಂತಾಗಿದೆ. ಲೋಕಸಭಾ ಚುನಾವಣೆಗೆ ಸ್ಟಾರ್ ಚಂದ್ರು ಅವ್ರನ್ನ ನಿಲ್ಲಿಸುತ್ತಿದ್ದೇವೆ. ಅವರಿಗೆ ಆಶೀರ್ವಾದ ಮಾಡುವಂತೆ ಮನವಿ ಮಾಡುತ್ತಿದ್ದಾರೆ ರವಿ ಕುಮಾರ್‌ ಗಣಿಗ.

ಶಾಸಕರು ಸ್ಟಾರ್‌ ಚಂದ್ರು ಅವರನ್ನು ಗುದ್ದಲಿ ಪೂಜೆ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಜೊತೆಯಲ್ಲೇ ಕರೆದುಕೊಂಡು ಓಡಾಡುತ್ತಿದ್ದಾರೆ. ಮತ್ತೊಂದೆಡೆ ಸರ್ಕಾರಿ ಕಾರ್ಯಕ್ರಮಗಳಲ್ಲೂ ಸ್ಟಾರ್ ಚಂದ್ರು ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಸಿಎಂ ಕಾರ್ಯಕ್ರಮದಲ್ಲೂ ಸ್ಟಾರ್ ಚಂದ್ರು ಭಾಗಿಯಾಗಿದ್ದರು. ಆ ಮೂಲಕ ಚುನಾವಣೆ ಪ್ರಚಾರ ಆರಂಭಿಸಿರುವ ಕಾಂಗ್ರೆಸ್ ಒಂದು ಹೆಜ್ಜೆ ಮುಂದಿಟ್ಟಿದೆ.

ಇದನ್ನೂ ಓದಿ: Mandya Lok Sabha constituency: ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಅನೌನ್ಸ್?‌ ಯಾರು ಈ ಸ್ಟಾರ್‌ ಚಂದ್ರು?

ಜೆಡಿಎಸ್‌ ಕೂಡಾ ಆಕ್ಟಿವ್‌; ನಿಖಿಲ್‌ ಕುಮಾರಸ್ವಾಮಿಗೆ ಬೇಡಿಕೆ

ಮಂಡ್ಯ ಲೋಕಸಭಾ ಕ್ಷೇತ್ರ ಬಹುತೇಕ ಜೆಡಿಎಸ್ ಗೆ ಫೈನಲ್ ಹಿನ್ನೆಲೆಯಲ್ಲಿ ಜಿಲ್ಲೆಯ ಜೆಡಿಎಸ್ ನಾಯಕರು ಅಲರ್ಟ್‌ ಆಗಿದ್ದಾರೆ. ಇತ್ತೀಚೆಗೆ ದಿಲ್ಲಿಯಲ್ಲಿ ಎಚ್‌.ಡಿಕುಮಾರಸ್ವಾಮಿ ಮತ್ತು ಅಮಿತ್‌ ಶಾ ನಡುವೆ ನಡೆದ ಮಾತುಕತೆಯಲ್ಲಿ ಹಾಸನ, ಮಂಡ್ಯ ಮತ್ತು ಕೋಲಾರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಒಪ್ಪಲಾಗಿದೆ ಎಂದು ಹೇಳಲಾಗುತ್ತಿದೆ.

ಹಾಗಂತ ಜೆಡಿಎಸ್ ಅಭ್ಯರ್ಥಿ ಫೈನಲ್ ಆಗಿಲ್ಲ ಆದರೂ ಜೆಡಿಎಸ್ ಪಕ್ಷ ಮಾತ್ರ ಆಕ್ವಿವ್‌ ಆಗಿದೆ. ಜೆಡಿಎಸ್ ನ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನಲ್ಲಿ ಭಾನುವಾರ ನಿಖಿಲ್ ಕುಮಾರಸ್ವಾಮಿ ಪ್ರವಾಸ ಆಯೋಜನೆಯಾಗಿದೆ. ಅಲ್ಲಿನ ಹರಿಹರಪುರದ ದೇಗುಲ ಉದ್ಘಾಟನೆ ಕಾರ್ಯಕ್ರಮದಲ್ಲಿ ನಿಖಿಲ್ ಭಾಗಿಯಾಗಿದ್ದಾರೆ.

ನಿಖಿಲ್‌ ಕುಮಾರಸ್ವಾಮಿ ಅವರಿಗೆ ಕೆ.ಆರ್.ಪೇಟೆ ಶಾಸಕ ಮಂಜು ಹಾಗೂ ಮಾಜಿ ಸಚಿವ ಪುಟ್ಟರಾಜು ಸಾಥ್‌ ನೀಡಿದ್ದಾರೆ. ಕೊನೆ ಕ್ಷಣದಲ್ಲಿ ಮತ್ತೆ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗಿಸಲು ಎಚ್ಡಿಕೆ ರಣತಂತ್ರ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಸೋತ ಜಾಗದಲ್ಲೇ ಮಗನನ್ನು ಗೆಲ್ಲಿಸಲು ಪ್ಲಾನ್ ಮಾಡ್ತಿದ್ದಾರೆ ಎಂಬ ಮಾತಿದೆ.

ಹೀಗಾಗಿ ಜೆಡಿಎಸ್‌ ನಾಯಕರು ನಿಖಿಲ್‌ ಕುಮಾರ ಸ್ವಾಮಿ ಅವರನ್ನೇ ಮುಂದಿಟ್ಟುಕೊಂಡು ಪ್ರಚಾರಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಇತ್ತ ಕಳೆದ ಬಾರಿ ಪಕ್ಷೇತರರಾಗಿ ಗೆಲುವು ಸಾಧಿಸಿದ್ದ ಸುಮಲತಾ ಅಂಬರೀಷ್‌ ಅವರು ಕೂಡಾ ಸಕ್ರಿಯರಾಗಿದ್ದು, ಮುಂದಿನ ನಡೆಯೇನು ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

Exit mobile version