Site icon Vistara News

RBI Caution : ಮೋಸಗಾರರಿದ್ದಾರೆ; ಕೆವೈಸಿ ಅಪ್​ಡೇಟ್ ಹೆಸರಲ್ಲಿ ಕರೆ ಬಂದರೆ ಎಚ್ಚರ ವಹಿಸಿ ಎಂದ ಆರ್​ಬಿಐ

Bank Fraud

ಬೆಂಗಳೂರು: ನೋ ಯುವರ್ ಕಸ್ಟಮರ್ (ಕೆವೈಸಿ) ಅಪ್​ಡೇಟ್​ ಮಾಡುವುದಾಗಿ ಹೇಳಿ ಖಾತೆಯಿಂದ ದುಡ್ಡು ಎಗರಿಸುವ ಜಾಲಗಳು ಕಾರ್ಯಾಚರಿಸುತ್ತಿವೆ. ಇಂಥ ಮಹಾನ್​ ವಂಚನೆ ತಡೆಗಟ್ಟಲು ಮತ್ತು ತಮ್ಮನ್ನು ರಕ್ಷಿಸಿಕೊಳ್ಳಲು ಎಚ್ಚರಿಕೆ ವಹಿಸುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಾಗರಿಕರಿಗೆ ಸೂಚನೆ ನೀಡಿದೆ. ಕೆವೈಸಿ ಅಪ್​ಡೇಟ್​ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಗಳಿಗೆ ಗ್ರಾಹಕರು ಬಲಿಯಾಗುತ್ತಿರುವ ಘಟನೆಗಳು ಮತ್ತು ವರದಿಗಳ ಹಿನ್ನೆಲೆಯಲ್ಲಿ, ಆರ್​ಬಿಐ ಫೆಬ್ರವರಿ 02 ರಂದು ಬಿಡುಗಡೆ ಮಾಡಿದೆ. ಇದರೊಂದಿಗೆ ಸೆಪ್ಟೆಂಬರ್ 13, 2021 ರಂದು ಹೊರಡಿಸಿದ ತನ್ನ ಮಾಹಿತಿಯನ್ನು ಮತ್ತೊಮ್ಮೆ ಪ್ರಕಟಿಸಿದೆ.

KYC ಅಪ್​ಡೇಟ್ ಹೆಸರಲ್ಲಿ ವಂಚನೆ ಹೇಗೆ ಮಾಡುತ್ತಾರೆ?

ಕೆವೈಸಿ ವಂಚಕರು ಸಾಮಾನ್ಯವಾಗಿ ಫೋನ್ ಕರೆಗಳು, ಎಸ್ಎಂಎಸ್. ಇಮೇಲ್​ ಸೇರಿದಂತೆ ಅನಪೇಕ್ಷಿತ ಸಂಪರ್ಕವನ್ನು ಮಾಡುತ್ತಾರೆ. ಈ ಮೂಲಕ ಗ್ರಾಹಕರ ವೈಯಕ್ತಿಕ ಮಾಹಿತಿ, ಬ್ಯಾಂಕ್​​ ಖಾತೆ. ಲಾಗಿನ್ ವಿವರಗಳನ್ನು ಪಡೆದುಕೊಳ್ಳುತ್ತಾರೆ. ಅದೇ ರೀತಿ ಅನಧಿಕೃತವಲ್ಲದ ಲಿಂಕ್​ಗಳನ್ನು ಕಳುಹಿಸಿ ಅದನ್ನು ಫೋನ್​ಗೆ ಹಾಕಿಸಿಕೊಂಡು ಅಲ್ಲಿಂದ ಎಲ್ಲ ಮಾಹಿತಿಗಳನ್ನು ಕದಿಯುತ್ತಾರೆ.

ವಂಚಕರು ಬಹುಪಾಲು ಬೆದರಿಕೆ ತಂತ್ರವನ್ನು ಒಡ್ಡುತ್ತಾರೆ. ಬ್ಯಾಂಕ್​ ಖಾತೆ ನಿಷ್ಕ್ರಿಯವಾಗುತ್ತದೆ. ಹಣ ಕಳೆದುಕೊಳ್ಳುತ್ತೀರಿ ಎಂದೆಲ್ಲ ಗ್ರಾಹಕರನ್ನು ಭಯಭೀತಿಗೊಳಿಸುತ್ತಾರೆ. ಮಾಹಿತಿ ಕೊಡದೇ ಹೋದರೆ ಖಾತೆಯಲ್ಲಿರುವ ಹಣ ಸಿಗುವುದಿಲ್ಲ ಎಂದು ಹೆದರಿಸುತ್ತಾರೆ.

ಕೆಲವು ವಂಚರು ನಯವಾಗಿ ಮಾತನಾಡಿ ಒಂದು ಲಿಂಕ್ ಕಳುಹಿಸುತ್ತಾರೆ. ಆ ಲಿಂಕ್ ಒತ್ತುವ ಮೂಲಕ ಅನಧಿಕೃತವಾಗಿ ಖಾತೆಗೆ ಪ್ರವೇಶ ಪಡೆಯುವಂತೆ ಹೇಳುತ್ತಾರೆ. ಅಲ್ಲದೆ ಮೋಸದ ಚಟುವಟಿಕೆಯಲ್ಲಿ ತೊಡಗುತ್ತಾರೆ.

ಗ್ರಾಹಕರು ಏನು ಮಾಡಬೇಕು?

ಈ ತಪ್ಪುಗಳನ್ನು ಮಾಡಲೇಬೇಡಿ

ಯಾರಿಗೆ ದೂರು ನೀಡಬೇಕು?

ಹಣಕಾಸು ಸೈಬರ್ ವಂಚನೆಯ ಸಂದರ್ಭದಲ್ಲಿ, ಸಾರ್ವಜನಿಕರು ತಕ್ಷಣ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (www.cybercrime.gov.in) ಅಥವಾ ಸೈಬರ್ ಕ್ರೈಮ್ ಸಹಾಯವಾಣಿ (1930) ಮೂಲಕ ದೂರು ದಾಖಲಿಸಬೇಕು.

Exit mobile version