Site icon Vistara News

ವಿಸ್ತಾರ Explainer: Mann ki baat @100 ಪ್ರಧಾನಿ ಮನ್ ಕಿ ಬಾತ್‌ಗೆ ನೂರು, ಕರ್ನಾಟಕದ ಸಾಧನೆಗಳ ಮಾತೇ ಜೋರು!

mann ki baat

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರತಿ ತಿಂಗಳು ರೇಡಿಯೋದಲ್ಲಿ ನೀಡುತ್ತಿರುವ ʼಮನ್‌ ಕಿ ಬಾತ್ʼ ಮಾತಿನ ಕಾರ್ಯಕ್ರಮ ದೇಶದ ಜನಮೆಚ್ಚುಗೆ ಪಡೆದಿದೆ. ಯುವಜನತೆಗೆ ಸ್ಫೂರ್ತಿಯಾಗಿದೆ. ಇದರಲ್ಲಿ ಅವರು ಆಗಾಗ ಜನಸಾಮಾನ್ಯ ಸಾಧಕರ ಧನಾತ್ಮಕ ಕಾರ್ಯಗಳ ಬಗ್ಗೆ ಉಲ್ಲೇಖ ಮಾಡುವುದು ವಿಶೇಷ.

ಇನ್ನೊಂದು ವಿಶೇಷವೆಂದರೆ ಕರ್ನಾಟಕದ ಜನತೆಯ ಉದ್ಯಮಶೀಲ ಮನೋಭಾವವನ್ನು ಅವರು ಹೆಚ್ಚಿನ ಸಲ ತಮ್ಮ ಮಾತುಗಳಲ್ಲಿ ಉಲ್ಲೇಖಿಸಿದ್ದಾರೆ. ಕರ್ನಾಟಕದ ಜನತೆಯ ಸ್ಪಂದನಶೀಲ ಸಂಸ್ಕೃತಿ, ಆವಿಷ್ಕಾರ ಮಾಡುವ ಮನಸ್ಥಿತಿಗಳನ್ನು ಪ್ರಶಂಸಿಸುವ ಅವಕಾಶಗಳನ್ನು ಧಾರಾಳವಾಗಿ ಬಳಸಿಕೊಂಡಿದ್ದಾರೆ. ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಬಾರಿ ಉಲ್ಲೇಖ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ಅಗ್ರ ಸ್ಥಾನ ಪಡೆದಿದೆ.

ತಂತ್ರಜ್ಞಾನದಿಂದ ಹಿಡಿದು ಕೃಷಿಯವರೆಗೆ ರಾಜ್ಯದ ವಿವಿಧ ಕ್ಷೇತ್ರಗಳು, ವಿಶಿಷ್ಟ ಪದ್ಧತಿಗಳು, ಭಾಷೆ ಮತ್ತು ಉದ್ಯಮಶೀಲತೆಯ ಗುಣಮಟ್ಟವನ್ನು ಒತ್ತಿ ಹೇಳುವ ಹಲವಾರು ಸಂಗತಿಗಳನ್ನು ಅವರು ಹಂಚಿಕೊಂಡಿದ್ದಾರೆ. ಹಾಗೆ ಉಲ್ಲೇಖಗೊಂಡ ಕೆಲವು ನಮ್ಮ ಉದ್ಯಮಗಳು, ಸ್ಟಾರ್ಟಪ್‌ಗಳು, ಹೊಸ ಆವಿಷ್ಕಾರಗಳು ಇಲ್ಲಿವೆ.

  1. ಬೆಂಗಳೂರಿನ ಸಹಕಾರನಗರದ ಕಾಡನ್ನು ಪುನರುಜ್ಜೀವಗೊಳಿಸಲು ಸುರೇಶ್ ಕುಮಾರ್ ಕೈಗೊಂಡ ಉಪಕ್ರಮ; 25 ವರ್ಷಗಳಿಂದ ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯನ್ನು ಪುನರುಜ್ಜೀವಗೊಳಿಸುವ ಕಾರ್ಯದಲ್ಲಿ ನಿರತರಾಗಿರುವ ಕೆ. ಉಮಾಶ್ರೀ ಅವರ ʼಕಲಾ ಚೇತನ’ ವೇದಿಕೆ; ವೀಳ್ಯದೆಲೆ ನಾರಿನಿಂದ ತಯಾರಿಸಿದ ವಿಶಿಷ್ಟ ಉತ್ಪನ್ನಗಳನ್ನು ಲಂಡನ್ ಮತ್ತು ಯುರೋಪ್ ನಂತಹ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಕಳುಹಿಸುವ ಸುರೇಶ್ ಮತ್ತು ಮೈಥಿಲಿ ದಂಪತಿ; ಇವರನ್ನು ಸ್ಮರಿಸಿಕೊಂಡರು.

ಇದನ್ನೂ ಓದಿ: Mann Ki Baat: ಮೋದಿ ಮನ್‌ ಕಿ ಬಾತ್‌ಗೆ ಕಿವಿಯಾಗಲಿದೆ ಜಗತ್ತು, 100ನೇ ಆವೃತ್ತಿ ಹಿನ್ನೆಲೆ ಬಿಜೆಪಿ ಬಿಗ್ ಪ್ಲಾನ್‌ ಏನು?

Exit mobile version