Site icon Vistara News

Actor Darshan : ದರ್ಶನ್‌ ಕೊಟ್ಟ ಮೂರೇ ಹೊಡೆತಕ್ಕೆ ಜೀವ ಬಿಟ್ಟಿದ್ದ ರೇಣುಕಾಸ್ವಾಮಿ!; ಆ 45 ನಿಮಿಷ ಶೆಡ್‌ನಲ್ಲಿ ನಡೆದಿದ್ದೇನು?

actor darshan

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ ಸಂಬಂಧ ಚಾರ್ಜ್‌ಶೀಟ್‌ ಸಲ್ಲಿಕೆ ಆಗಿದ್ದೇ ತಡ ದರ್ಶನ್‌ ಟೀಂನ (actor darshan) ಕೌರ್ಯ ಹೇಗಿತ್ತು ಎಂದು ಒಂದೊಂದೆ ಬಯಲಾಗುತ್ತಿದೆ. ಇಷ್ಟಕ್ಕೂ ಪಟ್ಟಣಗೆರೆ ಶೆಡ್‌ನಲ್ಲಿ ದರ್ಶನ್ ಇದ್ದ ಆ 45 ನಿಮಿಷ ನಡೆದಿದ್ದು ಏನು ಗೊತ್ತಾ? ರೇಣುಕಾಸ್ವಾಮಿ ಸಾವಿಗೆ ಕಾರಣವಾಗಿದ್ದೇ ದರ್ಶನ್‌ ಕೊಟ್ಟ ಆ ಮೂರು ಹೊಡೆತಗಳು.

ಹೊಡೆತ 1

ನಟ ದರ್ಶನ್‌ ಸಿಟ್ಟಿನಲ್ಲಿ ರೇಣುಕಾಸ್ವಾಮಿ ಎದೆಗೆ ಒಂದೆ ಸಮನೆ ಒದ್ದಿದ್ದ. 110 ಕೆ.ಜಿಯ ಮನುಷ್ಯ ನರಪೇತಲನಂತಿದ್ದ ರೇಣುಕಾಸ್ವಾಮಿ ಎದೆಗೆ ಶೂ ಕಾಲಿನಿಂದ ಒದ್ದಿದ್ದ. ದರ್ಶನ್ ಹೊಡೆತಕ್ಕೆ ರೇಣುಕಾಸ್ವಾಮಿ ಎದೆ ಮೂಳೆ ಪುಡಿ ಪುಡಿಯಾಗಿತ್ತು.

ಹೊಡೆತ 2

ಸಿನಿಮಾ ಶೈಲಿಯಲ್ಲಿ ರೇಣುಕಾಸ್ವಾಮಿಯನ್ನು ಎತ್ತಿ ಲಾರಿಗೆ ಬಿಸಾಕಿದ್ದ ದರ್ಶನ್. ದರ್ಶನ್ ಬಿಸಾಕಿದ ರಭಸಕ್ಕೆ ರೇಣುಕಾಸ್ವಾಮಿ ತಲೆಗೆ ಗಂಭೀರ ಗಾಯವಾಗಿತ್ತು. ತಲೆ ಬುರುಡೆಗೆ ಏಟು ಬಿದ್ದು ರಕ್ತ ಹೆಪ್ಪುಗಟ್ಟಿತ್ತು.

ಹೊಡೆತ 3

ಇದೇ ಫೋಟೊ ಅಲ್ವೇನೋ ನೀನು ಕಳಿಸಿದ್ದು ನಿನ್ನ…..! ಎಂದು ರೇಣುಕಾಸ್ವಾಮಿ ಮರ್ಮಾಂಗಕ್ಕೆ ನಟ ದರ್ಶನ್‌ ಒದ್ದಿದ್ದ. ಮರ್ಮಾಂಗಕ್ಕೆ ಒದೆಯುತ್ತಿದ್ದಂತೆ ರೇಣುಕಾಸ್ವಾಮಿ ಪ್ರಜ್ಞೆ ತಪ್ಪಿ ಬಿದ್ದಿದ್ದ. ಈ ಹೊಡೆತಗಳೆ ರೇಣುಕಾಸ್ವಾಮಿ ಸಾವಿಗೆ ಕಾರಣ ಎನ್ನಲಾಗಿದೆ. ಎಫ್‌ಎಸ್‌ಎಲ್‌ ರಿಪೋರ್ಟ್‌ನಲ್ಲೂ ಸಾವಿನ ರಹಸ್ಯ ಬಯಲಾಗಿದ್ದು, ಚಾರ್ಜ್ ಶೀಟ್‌ನಲ್ಲಿ ಇದೆಲ್ಲವನ್ನು ಪೊಲೀಸರು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Dvija Film : ಅಕ್ಟೋಬರ್‌ಗೆ ‘ದ್ವಿಜ’ ಚಿತ್ರ ಬಿಡುಗಡೆಗೆ ಸಜ್ಜು; ಕ್ರೈಂ ಥ್ರಿಲ್ಲರ್‌ ಮೂವಿಯಲ್ಲಿ ಕ್ರಿಮಿನಲ್ ಜಗತ್ತು ಅನಾವರಣ

ಚಾರ್ಜ್‌‌ಶೀಟ್‌ನಲ್ಲಿ ಆಡಿಯೋ ವಿಡಿಯೋ ವರದಿ ಉಲ್ಲೇಖ

ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಚಾರ್ಜ್‌‌ಶೀಟ್‌ನಲ್ಲಿ ಆಡಿಯೋ ವಿಡಿಯೋ ವರದಿ ಬಗ್ಗೆಯೂ ಉಲ್ಲೇಖ ಮಾಡಲಾಗಿದೆ. ಒಟ್ಟು 30 ಸ್ಯಾಂಪಲ್ಸ್‌ಗಳಿಗೆ ಸಂಬಂಧಿಸಿದ ಆಡಿಯೋ ವಿಡಿಯೋ ವರದಿ ಇದೆ. ಹಾಗಾದರೆ ಆ ಆಡಿಯೋ ವಿಡಿಯೋ ವರದಿಯಲ್ಲಿ ಏನೇನಿದೆ?

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version