Site icon Vistara News

ದರೋಡೆ ನಾಟಕ, ಚೀಟಿ ಹಣ ವಂಚನೆ, ಪತ್ನಿ ನಾಪತ್ತೆ! ನಂಜನಗೂಡು ಶಿಕ್ಷಕನ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್

fraud

ಮೈಸೂರು: ನಂಜನಗೂಡಿನ ಶಿಕ್ಷಕನ ಆತ್ಮಹತ್ಯೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ದೊರೆತಿದೆ. ತಾನೇ ಹೆಣೆದ ಬಲೆಗೆ ಶಿಕ್ಷಕ ತಾನೇ ಕೊರಳೊಡ್ಡಿರುವುದು ಪತ್ತೆಯಾಗಿದೆ.

ಶಂಭುಲಿಂಗ ಮೃತ ಶಿಕ್ಷಕ. ಈತ ಪತ್ನಿ ಹೆಸರಿನಲ್ಲಿ ಚೀಟಿ ವ್ಯವಹಾರ ನಡೆಸುತ್ತಿದ್ದು, 200ರಿಂದ 300 ಮಂದಿಗೆ ಸುಮಾರು 20 ಕೋಟಿ ರೂ. ಹಣ ನೀಡದೆ ವಂಚಿಸಿದ್ದಾನೆ. ಚೀಟಿ ಹಣದಿಂದ ಪತ್ನಿ ಸಂಬಂಧಿಕರ ಹೆಸರಲ್ಲಿ ಮೈಸೂರು, ನಂಜನಗೂಡಿನಲ್ಲಿ ಸೈಟ್ ಹಾಗೂ ಮನೆ ಖರೀದಿ ಮಾಡಿದ್ದ. ಶಿಕ್ಷಕರು ಚೀಟಿ ಹಣ ಕೇಳಿದ್ದಕ್ಕೆ ನೀಡದೆ ಸಬೂಬು ಹೇಳಿದ್ದ.

ನಂತರ ಹಣ ಕೊಡಲು ಸಾಧ್ಯವಾಗದೆ ಪತ್ನಿ ದಾಕ್ಷಾಯಿಣಿಯ ಕೈಕಾಲು ಕಟ್ಟಿ ಹಣ ದೋಚಿದ್ದಾರೆ ಎಂದು ನಾಟಕವಾಡಿದ್ದ. ನಾಟಕ ಬಯಲಾಗುತ್ತಿದ್ದಂತೆ ನೇಣಿಗೆ ಶರಣಾಗಿದ್ದಾನೆ. ಸದ್ಯ ಶಂಭುಲಿಂಗನ ಪತ್ನಿ ದಾಕ್ಷಾಯಿಣಿ ನಾಪತ್ತೆಯಾಗಿದ್ದು, ಆಕೆಗಾಗಿ ಹುಡುಕಾಟ ನಡೆದಿದೆ. ಆಸ್ತಿ ಮುಟ್ಟುಗೋಲು ಹಾಕಿ ಹಣ ನೀಡುವಂತೆ ಹೂಡಿಕೆದಾರರು ಆಗ್ರಹಿಸಿದ್ದಾರೆ.

ಇದನ್ನೂ ಓದಿ | ಮಗ್ಗಿ ಸರಿಯಾಗಿ ಹೇಳದ 5ನೇ ಕ್ಲಾಸ್​ ಹುಡುಗನ ಎಡಗೈಯನ್ನು ಡ್ರಿಲ್​ ಮಷಿನ್​ನಿಂದ ಕೊರೆದ ಶಿಕ್ಷಕ!

Exit mobile version