Site icon Vistara News

ಬೆಂಗಳೂರಿನಲ್ಲಿ ಮನೆಗಳ್ಳರನ್ನು ಬಂಧಿಸಿದ ಪೊಲೀಸರು

ಬೆಂಗಳೂರು: ಬೆಂಗಳೂರು ನಗರ ವೈಟ್‌ಫೀಲ್ಡ್‌ ವಿಭಾಗದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ ಆಸಾಮಿಯನ್ನು ಮಹದೇವಪುರ ಹೊಲೀಸರು ಬಂಧಿಸಿದ್ದಾರೆ.

ಈ ಹಿಂದೆ ವೈಟ್‌ಫೀಲ್ಡ್ ಬಳಿ ಇದ್ದ ಮನೆಯ ಬೀಗವನ್ನು ಒಡೆದು ದರೋಡೆ ಮಾಡಿದ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಮನೆಯಲ್ಲಿದ್ದ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಿರುವ ಬಗ್ಗೆ ಮಹದೇವಪುರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದ್ದು, ಈ ಬಗ್ಗೆ ತನಿಖೆ ಆರಂಭಿಸಲಾಗಿತ್ತು.

ಬೆ೦ಗಳೂರು ನಗರ ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಗಿರೀಶ್‌.ಎಸ್‌, ರವರ ಮಾರ್ಗದರ್ಶನ ಮತ್ತು ವೈಟ್‌ಫಿಲ್ಡ್‌ ಉಪ ವಿಭಾಗದ ಎ.ಸಿ.ಪಿ. ಶಾಂತಮಲ್ಲಪ್ಪ, ರವರ ಸಾರಥ್ಯದಲ್ಲಿ ಮಹದೇವಪುರ ಪೊಲೀಸರು ಕ್ಷಿಪ್ರ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ವೇಳೆ 20 ಗ್ರಾಂ ಚಿನ್ನ ಹಾಗೂ ಅಂದಾಜು ₹10 ಲಕ್ಷ ಮೌಲ್ಯದ ಒಡವೆಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸದರಿ ಪ್ರಕರಣದಲ್ಲಿ ದರೊಡೆ ಮಾಡಿದವರನ್ನು ಧರ್ಮ(26) ಹಾಗೂ ರಾಜ್‌ ಬಿನ್‌ ಪ್ರಕಾಶ್‌ ಗುಂಡ(26) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಹುಷಾರ್‌ ! ಬೆಂಗಳೂರಿನಲ್ಲಿ ಮತ್ತೊಮ್ಮೆ ಪತ್ತೆಯಾಯ್ತು ಓಜಿಕುಪ್ಪಂ ಗ್ಯಾಂಗ್

Exit mobile version