Site icon Vistara News

ಗೂಂಡಾಗಳ ರೀತಿಯಲ್ಲಿ ವರ್ತಿಸುವ ಮುಸ್ಲಿಮರಿಗೆ ಅಲ್ಲೇ ಡ್ರಾ ಅಲ್ಲೇ ಬಹುಮಾನವೇ ಸೂಕ್ತ ಎಂದ ಸಿ.ಟಿ. ರವಿ

ಸಿ.ಟಿ.ರವಿ

ಬೆಂಗಳೂರು: ʻʻಮುಸ್ಲಿಮರು ಗೂಂಡಾಗಳ ಥರ ವರ್ತಿಸುತ್ತಾರೆ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಭಾರತ ಸ್ವಾತಂತ್ರ್ಯ ಗಳಿಸಿದ ನಂತರವೂ ಅದೇ ರೀತಿ ಮುಂದುವರಿಯಲು ಬಿಟ್ಟರೆ ಕಷ್ಟ. ಅಲ್ಲೇ ಡ್ರಾ ಅಲ್ಲೇ ಬಹುಮಾನ ಕೊಡಬೇಕುʼʼ- ಹೀಗೆಂದಿದ್ದರೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ.

ಶಿವಮೊಗ್ಗ ಸಂಘರ್ಷ, ಸಿದ್ದರಾಮಯ್ಯ ಹೇಳಿಕೆ, ರಾಮುಲು ಅಭಿಮತ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಅವರು ಮಾತನಾಡಿದರು.

ʻಗೂಂಡಾಗಳನ್ನು ಅಲ್ಲೇ ಡ್ರಾ ಅಲ್ಲೇ ಬಹುಮಾನ ರೂಪದಲ್ಲಿ ಶಿಕ್ಷೆ ಕೊಡಬೇಕು. ಆದರೆ, ಇದನ್ನು ನೇರವಾಗಿ ಹೇಳುವುದಕ್ಕೆ ಸಾಂವಿಧಾನಿಕ ಅಡ್ಡಿ ಇದೆ. ನಿಮಗೂ ಅರ್ಥ ಆಗುವವರಿಗೂ ಅರ್ಥ ಆಗಿದೆʼʼ ಎಂದು ಸಿ.ಟಿ ರವಿ ಹೇಳಿದರು.

ನಾಳೆ ಸಿದ್ದರಾಮಯ್ಯರೂ ಕಾಫಿರರೇ!
ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಇಡೋದಕ್ಕೆ ವಿರೋಧ ಆದರೆ ಮುಂದೇನು? ಇವತ್ತು ಸಾವರ್ಕರ್‌ ಅವರನ್ನು ವಿರೋಧಿಸುವವರು ನಾಳೆ ಗಾಂಧೀಜಿಯನ್ನು ವಿರೋಧಿಸದೆ ಇರ್ತಾರಾ? ಅದರ ಆಚೆಗೆ ಸಿದ್ದರಾಮಯ್ಯ ಅವರನ್ನೂ ವಿರೋಧಿಸುತ್ತಾರೆ. ಅವರ ಪ್ರಕಾರ ಸಿದ್ದರಾಮಯ್ಯ ಕೂಡಾ ಒಬ್ಬ ಕಾಫಿರ- ಎಂದು ಹೇಳಿದರು ಸಿ.ಟಿ. ರವಿ.

ನಮಗೆ ಟಿಪ್ಪು ಕೂಡಾ ಬ್ರಿಟಿಷನೇ!
ʻʻಟಿಪ್ಪುವನ್ನು ವಿರೋಧಿಸುವ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ನಮಗೆ ಟಿಪ್ಪು ಮಾತ್ರವಲ್ಲ ಅವರಪ್ಪ ಹೈದರಾಲಿ ಕೂಡಾ ಬ್ರಿಟಿಷರ ಲೆಕ್ಕವೇ. ಮೊದಲು ಆಕ್ರಮಣ ಮಾಡಿದವರು ಅವರೇ. ಮೊದಲು ಬಂದು ಆಕ್ರಮಣ ಮಾಡಿದವರು ನೆಂಟರಾಗಲು ಸಾಧ್ಯವಿಲ್ಲ. ಮೋಸ ಮಾಡಿ ಅಧಿಕಾರಕ್ಕೆ ಬಂದವರು ಹೈದರಾಲಿ, ಟಿಪ್ಪುʼʼ ಎಂದು ಹೇಳಿದರು.

ʻʻಹೈದರಾಲಿಗೆ, ಟಿಪ್ಪುವಿಗೆ ಸ್ವಾತಂತ್ರ್ಯ ಹೋರಾಟಗಾರರ ಪಟ್ಟ ಕಟ್ಟೋದಾದರೆ ಅವರ ವಿರುದ್ಧ ಹೋರಾಡಿದ ಒನಕೆ ಓಬವ್ವನಿಗೆ ಯಾವ ಪಟ್ಟ ಕೊಡುತ್ತೀರಿ? ಟಿಪ್ಪುವನ್ನು ಅಟ್ಟಾಡಿಸಿದ ಮರಿಗೌಡನನ್ನು ದೇಶ ದ್ರೋಹಿ ಅಂತ ಕರೆಯಲಾಗುತ್ತಾ? ಟಿಪ್ಪು ವಿರುದ್ಧ ಮರಾಠರು ಹೋರಾಟ ಮಾಡಿದ್ರು, ಅವರಿಗೆ ದೇಶ ದ್ರೋಹಿ ಅಂತ ಪಟ್ಟ ಕಟ್ಟಲು ಸಾಧ್ಯವಾʼʼ ಎಂದು ಪ್ರಶ್ನಿಸಿದ ಅವರು, ʻಕಾಂಗ್ರೆಸ್‌ನವರು ತಾಕತ್ತಿದ್ದೆ ಇವರನ್ನೆಲ್ಲ ದೇಶದ್ರೋಹಿ ಅಂತ ಕರೆಯಲಿʼ ಎಂದು ಸವಾಲು ಹಾಕಿದರು.

ಇದನ್ನೂ ಓದಿ | ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ ಎಂದು ಆಸೆ ಪಡುತ್ತೇನೆ: ಸಚಿವ ಶ್ರೀರಾಮುಲು ಹೇಳಿಕೆ

Exit mobile version