Site icon Vistara News

CT Ravi : ಕೈ ಸರ್ಕಾರ ಬಂದ ಬಳಿಕ ಕೆಲವು ಮುಸ್ಲಿಮರಿಗೆ ಮದ; 14 ಘಟನೆ ಪಟ್ಟಿ ಮಾಡಿದ ಸಿ.ಟಿ ರವಿ

CT Ravi in Mysore

ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ (Congress Government) ಅಸ್ತಿತ್ವಕ್ಕೆ ಬಂದ ಬಳಿಕ ಮುಸ್ಲಿಂ ಸಮುದಾಯದ ಒಂದು ವರ್ಗ ಮದೋನ್ಮತ್ತವಾಗಿದೆ. ಯುದ್ಧೋನ್ಮಾದ ಮನಸ್ಥಿತಿಯಲ್ಲಿದೆ. ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಕೊಲೆ ಮಾಡಲಾಗುತ್ತಿದೆ‌ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾ‌ನ ಕಾರ್ಯದರ್ಶಿ ಸಿ.ಟಿ. ರವಿ (CT Ravi) ಅವರು ಆರೋಪಿಸಿದ್ದಾರೆ.

ಜಿಲ್ಲೆಯ ತಿ. ನರಸೀಪುರದಲ್ಲಿ ನಡೆದ ಯುವ ಬ್ರಿಗೇಡ್‌ ಕಾರ್ಯಕರ್ತ (Yuva Brigade activist) ವೇಣುಗೋಪಾಲ ನಾಯಕ್‌ ಹತ್ಯೆಯ ಸಂಬಂಧ ಸತ್ಯಶೋಧನೆ ನಡೆಸಲು ಬಿಜೆಪಿಯಿಂದ ನಿಯೋಜಿತವಾದ 11 ಸದಸ್ಯರ ತಂಡದ ನೇತೃತ್ವ ವಹಿಸಿ ಸ್ಥಳಕ್ಕೆ ಆಗಮಿಸಿದ ವೇಳೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇದುವರೆಗೆ 14 ಕೊಲೆ, ಕೊಲೆ ಯತ್ನ, ಹೆದರಿಸುವ ಪ್ರಕರಣಗಳು ನಡೆದಿವೆ. ಸಾಮಾನ್ಯ ನೆಲೆಯಲ್ಲಿ ನೋಡಿದರೆ ಇವೆಲ್ಲವೂ ಬಿಡಿ ಬಿಡಿಯಾದ ಪ್ರಕರಣಗಳು. ಆದರೆ ಎಲ್ಲದರ ಹಿಂದೆ ಒಂದು ತಂಡ ಕೆಲಸ ಮಾಡುತ್ತಿರುವ ಗುಮಾನಿ ಇದೆ. ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಒಂದು ವರ್ಗ ಮದೋನ್ಮತ್ತವಾಗಿ ವರ್ತಿಸುತ್ತಿರುವುದು ಸ್ಪಷ್ಟವಾಗಿದೆ. ಇದಕ್ಕೆ ಕಾಂಗ್ರೆಸ್‌ ಸರ್ಕಾರ ನೀಡುತ್ತಿರುವ ಪ್ರೋತ್ಸಾಹವೂ ಕಾರಣ ಎಂದು ಸಿ.ಟಿ. ರವಿ ಆರೋಪಿಸಿದರು. ಇದರೊಂದಿಗೆ ಸಿ.ಟಿ. ರವಿ ಅವರು ಕಳೆದ ಕೆಲವೇ ವಾರಗಳಲ್ಲಿ ರಾಜ್ಯದಲ್ಲಿ ನಡೆದ ಘಟನಾವಳಿಗಳ ಪಟ್ಟಿಯನ್ನೂ ನೀಡಿದ್ದಾರೆ.

  1. ಚಿಕ್ಕೋಡಿಯ ಹಿರೇಕೋಡಿಯಲ್ಲಿ ನಡೆದ ಜೈನ ಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಕೊಲೆ
  2. ಮೈಸೂರಿನ ತಿ. ನರಸೀಪುರದಲ್ಲಿ ನಡೆದ ಯುವ ಬ್ರಿಗೇಡ್‌ ಕಾರ್ಯಕರ್ತ ವೇಣುಗೋಪಾಲ ನಾಯಕ ಹತ್ಯೆ
  3. ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಹೊಸಕೋಟೆಯಲ್ಲಿ ಬಿಜೆಪಿ ಕಾರ್ಯಕರ್ತ ಕೃಷ್ಣಪ್ಪ ಎಂಬವರ ಕೊಲೆ
  4. ಧಾರವಾಡದಲ್ಲಿ ನಡೆದ ವಿಜಯೋತ್ಸವದಲ್ಲಿ ಭರತೇಶ್‌ ಎಂಬವರಿಗೆ ಚೂರಿ ಇರಿತ
  5. ಯಾದಗಿರಿಯಲ್ಲಿ ಬಿಜೆಪಿ ಕಾರ್ಯಕರ್ತ ಶ್ರೀನಿವಾಸ್‌ ಹತ್ಯೆ ನಡೆದಿದೆ. ಇದರಲ್ಲಿ, ಬಂಗಾಳ ಒಡಿಶಾ ಮೂಲದ ಮುಸ್ಲಿಮರು ಭಾಗಿಯಾಗಿರುವ ಶಂಕೆ ಇದೆ.
  6. ಮಂಗಳೂರಿನಲ್ಲಿ ಅಂಗಡಿ ಮಾಲೀಕ ತೌಸಿಫ್‌ ಹುಸೇನ್‌ ಎಂಬಾತ ತನ್ನ ಅಂಗಡಿಯಲ್ಲಿ ಕೆಲಸಕ್ಕಿದ್ದ ಗಗ್ನಾನ್‌ ಎಂಬಾತನನ್ನು ಕೊಂದು ವಿದ್ಯುತ್‌ ಶಾಕ್‌ ಎಂದು ನಂಬಿಸಿದ್ದ.
  7. ಚುನಾವಣೆಯ ವಿಜಯೋತ್ಸವದ ಸಂದರ್ಭಧಳಳೀ ಬೆಳಗಾವಿಯಲ್ಲಿ ಪಾಕಿಸ್ತಾನ್‌ ಕೀ ಜೈ
  8. ನಂಜನಗೂಡಿನಲ್ಲಿ ಭಾರತ್‌ ಮಾತಾ ಕೀ ಜೈ ಎಂದು ಜಯಘೋಷ ಮಾಡಿದ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ
  9. ಸರ್ವಜ್ಞ ನಗರದಲ್ಲಿ ಪದ್ಮನಾಭ ರೆಡ್ಡಿ ಅವರ ಗ್ಯಾರೇಜಿಗೆ ಮತ್ತು ಬೈಕ್‌ಗೆ ಬೆಂಕಿ ಹಾಕಿದ್ದು
  10. ಹಾಸನದಲ್ಲಿ ಬೈಕ್‌ನಲ್ಲಿ ಪಿಸ್ತೂಲು ಹಿಡಿದುಕೊಂಡು ಓಡಾಡಿ ಭಯ ಹುಟ್ಟಿಸಿದ್ದು
  11. ಸಕಲೇಶಪುರದಲ್ಲಿ ಬಕ್ರೀದ್‌ ಹಿಂದಿನ ದಿನ ತುಂಬು ಗಬ್ಬದ ಎಮ್ಮೆಯನ್ನು ಬಂದೂಕಿನಿಂದ ಶೂಟ್‌ ಮಾಡಿ ಮಾಂಸ ಮಾಡಿದ್ದು,
  12. ಕಡೂರಿನಲ್ಲಿ ವಿಘ್ನೇಶ್‌ ಎಂಬಾತನ ಮೇಲೆ ಸಣ್ಣ ಕಾರಣ ಇಟ್ಟುಕೊಂಡು ಮುಸ್ಲಿಂ ಯುವಕರು ಅಟ್ಟಾಡಿಸಿ ಹಲ್ಲೆ ಮಾಡಿದ್ದು
  13. ಹಳೆ ಬಾಗಲಕೋಟೆಯ ನವನಗರದಲ್ಲಿ ಬೀದಿ ದೀಪ ಆಫ್‌ ಮಾಡಿ, ಸಿಸಿ ಟಿವಿ ಕವರ್‌ ಮಾಡಿ ಮೂವರು ಹಿಂದುಗಳ ಮೇಲೆ ಹಲ್ಲೆ ಮಾಡಿದ್ದು
  14. ಭಟ್ಕಳದಲ್ಲಿ ಹಿಂದೂ ಹೆಣ ಹೂಳಲು ಬಿಡಲ್ಲ ಅಂತ ಧಮ್ಕಿ ಹಾಕಲಾಗಿದೆ.

ಇದನ್ನೂ ಓದಿ: Murder Case : ನನ್ನ ಗಂಡ ಹುಲಿ ಥರ ಇದ್ದ ಸರ್‌, ಮುಖ ಮತ್ತು ತಲೆಗೆ ಸಾಬನಿಂದ ಚುಚ್ಚಿಸಿ ಕೊಂದ್ರು; ವೇಣುಗೋಪಾಲ್‌ ಪತ್ನಿ

Exit mobile version