Site icon Vistara News

Electricuted | ಕಂಬ ಏರಿ ದುರಸ್ತಿ ಮಾಡುವ ವೇಳೆಯೇ ಪ್ರವಹಿಸಿದ ವಿದ್ಯುತ್‌, ಇಬ್ಬರು ಗುತ್ತಿಗೆ ಕಾರ್ಮಿಕರು ಸ್ಥಳದಲ್ಲೇ ಬಲಿ

power

ಚಿಕ್ಕೋಡಿ: ಅವರು ವಿದ್ಯುತ್‌ ಇಲಾಖೆಯೇ ನೇಮಕ ಮಾಡಿಕೊಂಡ ಗುತ್ತಿಗೆ ಕಾರ್ಮಿಕರು. ಕೆಲಸ ಮಾಡುತ್ತಿದ್ದುದು ಕೂಡಾ ವಿದ್ಯುತ್‌ ಇಲಾಖೆಯದ್ದೇ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅವರೀಗ ಹೆಣವಾಗಿದ್ದಾರೆ. ಇದು ಹೆಸ್ಕಾಂನ ಗುತ್ತಿಗೆ ಕಾರ್ಮಿಕರಾಗಿರುವ ಹನಮಂತ ಮಗದುಮ್(೩೪), ಅಶೋಕ್ ಮಾಳಿ(೩೬) ಎಂಬವರ ದುರಂತ ಕಥೆ.

ಹನಮಂತ ಹಾಗೂ ಅಶೋಕ್ ರಾಯಭಾಗ ತಾಲೂಕಿನ ಹಿಡಕಲ್ ಗ್ರಾಮದ ನಿವಾಸಿಗಳು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಿಂದ ಬೇವನೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ಪ್ರಸರಣ ಸಮಸ್ಯೆ ಉಂಟಾಗಿತ್ತು. ಇದನ್ನು ಸರಿಪಡಿಸುವ ಕೆಲಸವನ್ನು ಮಾಡುತ್ತಿದ್ದರು ಹನಮಂತ ಹಾಗೂ ಅಶೋಕ್‌ ರಾಯಬಾಗ. ಈ ನಡುವೆ ಅವರಿಬ್ಬರು ವಿದ್ಯುತ್ ಕಂಬ ಏರಿ ದುರಸ್ತಿ ಮಾಡುತ್ತಿದ್ದ ವೇಳೆ ಪ್ರವಹಿಸಿ ಅವರಿಬ್ಬರು ಸ್ಥಳದಲ್ಲೇ ಸಾವು ಕಂಡರು.

ಈ ರೀತಿ ಏಕಾಏಕಿ ವಿದ್ಯುತ್‌ ಪ್ರವಹಿಸಿದ್ದಕ್ಕೆ ವಿದ್ಯುತ್ ವಿತರಣಾ ಕೇಂದ್ರದ ಶಾಖಾಧಿಕಾರಿ, ಲೈನ್ ಮ್ಯಾನ್, ಸ್ಟೇಷನ್ ಆಪರೇಟರ್ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ | Electricution | ತೋಟಕ್ಕೆ ಅಳವಡಿಸಿದ್ದ ಸೋಲಾರ್‌ ಫೆನ್ಸಿಂಗ್‌ ಸ್ಪರ್ಶಿಸಿ ಅಣ್ಣ- ತಮ್ಮ ದಾರುಣ ಮರಣ

Exit mobile version