Site icon Vistara News

Hit and Run | ಸಿಸಿ ಕ್ಯಾಮೆರಾದಿಂದ ಸಿಕ್ಕಿದ ಸುಳಿವು, ಪರಾರಿಯಾದ ಉದ್ಯಮಿ ಮೇಲೆ ಎಫ್‌ಐಆರ್

hit and run

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸಂಭವಿಸಿದ್ದ ಹಿಟ್‌ ಆ್ಯಂಡ್ ರನ್ ಕೇಸ್‌ಗೆ ತಿರುವು ಸಿಕ್ಕಿದ್ದು, ಖ್ಯಾತ ಉದ್ಯಮಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಹುಬ್ಬಳ್ಳಿಯ ಟೆಂಡರ್ ಶ್ಯೂರ್ ರಸ್ತೆಯ ಸಿದ್ದೇಶ್ವರ ಸರ್ಕಲ್‌ನಲ್ಲಿ ಕಳೆದ ರವಿವಾರ ಮಧ್ಯರಾತ್ರಿ 2.15ಕ್ಕೆ ಭೀಕರ ಅಪಘಾತ ನಡೆದಿತ್ತು. ಬೈಕ್‌ಗೆ ಕಾರು ಗುದ್ದಿ ಪರಾರಿಯಾಗಿತ್ತು. ಬೈಕ್ ಸವಾರ ಗಣೇಶ ಬಡಿಗಣ್ಣವರ ಮೃತಪಟ್ಟಿದ್ದರು. ಆರೋಪಿ ಕಾರ್ ಡ್ರೈವರ್ ಎಂದು ದೂರು ದಾಖಲಿಸಲಾಗಿತ್ತು. ಅಪಘಾತ ನಡೆದ ಸ್ಥಳದ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ, ಅದು ಯುವ ಉದ್ಯಮಿ ಭಂಡಾರಿ ಅವರ ಕಾರು ಎಂಬುದು ಗೊತ್ತಾಗಿದ್ದು, ಅವರ ಮೇಲೆ ಎಫ್‌ಐಆರ್‌ ದಾಖಲಾಗಿದೆ.

ಅಪಘಾತದ ನಂತರ ಉದ್ಯಮಿ ಭಂಡಾರಿ ಕಾರು ಬದಲಾಯಿಸಿದ್ದರು. ಕಾರು ಬದಲಾಯಿಸುವ ದೃಶ್ಯವೂ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅಪಘಾತದ ನಂತರ ತನ್ನ ಕಾರು ಬಿಟ್ಟು ಮತ್ತೊಂದು ಕಾರ್ ಹತ್ತಿ ಪರಾರಿಯಾಗಿದ್ದರು. ಹುಬ್ಬಳ್ಳಿ ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿಯನ್ನು ಬಂಧಿಸಲು ಮೀನಮೇಷ ಎಣಿಸುತ್ತಿದ್ದ ಪೊಲೀಸರು, ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತಿದ್ದಾರೆ. ಉದ್ಯಮಿ ಭಂಡಾರಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಇದನ್ನೂ ಓದಿ | ಅಪಘಾತದಿಂದ ಮೃತಪಟ್ಟ ಯುವಕ, ಅಂಗದಾನ ಮಾಡಿದ ಕುಟುಂಬ

Exit mobile version