Site icon Vistara News

ಮಂಡ್ಯದ ಯುವತಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ ಪ್ರಿಯಕರ, 3 ವರ್ಷದಿಂದ ದೌರ್ಜನ್ಯ, ಇಬ್ಬರು ಅರೆಸ್ಟ್‌

Manjula and brahmendra

ಬೆಂಗಳೂರು: ವ್ಯಕ್ತಿಯೊಬ್ಬ ತನ್ನನ್ನು ಪ್ರೀತಿಸಿದ ಹುಡುಗಿಯನ್ನೇ ವೇಶ್ಯಾವಾಟಿಕೆ ಅಡ್ಡೆಗೆ ಮಾಡಿದ ವಿದ್ಯಮಾನ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಮೂರು ವರ್ಷಗಳಿಂದ ನರಕಯಾತನೆ ಅನುಭವಿಸಿದ ಯುವತಿ ಈ ವಿಷಯವನ್ನು ಬಾಯಿ ಬಿಟ್ಟಿದ್ದಾಳೆ.

ಶಿವಾನಂದ ಸರ್ಕಲ್‌ ಬಳಿ ಸಾಯಿ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ವಿಷಯ ತಿಳಿದು ದಾಳಿ ನಡೆಸಿದ ಹೈ ಗ್ರೌಂಡ್ಸ್‌ ಪೊಲೀಸರು ಅದರ ಮಾಲೀಕ ಸಂತೋಷ್‌, ಪಿಂಪ್‌ಗಳಾದ ಮಂಜುಳ ಮತ್ತು ಬ್ರಹ್ಮೇಂದ್ರನನ್ನು ಬಂಧಿಸಿದ್ದಾರೆ. ಈ ವೇಳೆ ಒಬ್ಬ ಯುವತಿ ಪೊಲೀಸರ ಮುಂದೆ ತನ್ನ ಕರುಣಾಜನಕ ಕಥೆಯನ್ನು ಹೇಳಿಕೊಂಡಿದ್ದಾಳೆ. ತನ್ನ ಮೇಲೆ ಸಾಮೂಹಿಕ ಅತ್ಯಾಚಾರವು ನಡೆದಿದೆ ಎಂದು ತಿಳಿಸಿದ್ದಾಳೆ.

ಕೆಲಸ ಕೊಡಿಸುವುದಾಗಿ ಬೆಂಗಳೂರಿಗೆ
ಮಂಡ್ಯ ಮೂಲದ ಈ ಯುವತಿಯನ್ನು ಮೂರು ವರ್ಷದ ಹಿಂದೆ ಬೆಂಗಳೂರಿಗೆ ಕರೆ ತಂದು ವೇಶ್ಯಾವಾಟಿಕೆ ಜಾಲಕ್ಕೆ ತಳ್ಳಲಾಗಿದೆ. ಉದ್ಯೋಗ ಕೊಡಿಸುವುದಾಗಿ ಆಕೆಯ ಪ್ರಿಯಕರನೇ ಬೆಂಗಳೂರಿಗೆ ಕರೆತಂದು ಬ್ರೋಕರ್‌ ಮಂಜುಳಾಳ ಕೈಗೆ ಒಪ್ಪಿಸಿದ್ದ ಎನ್ನಲಾಗಿದೆ.

ಈ ಮಹಿಳೆ ಕೆಲಸ ಕೊಡಿಸುತ್ತಾಳೆ ಎಂದು ಪ್ರಿಯಕರ ಬಿಟ್ಟು ಹೋಗಿದ್ದ. ಆದರೆ, ಮಂಜುಳಾ ಬೇರೆ ಕೆಲಸ ಕೊಡಿಸುವ ಬದಲು ವೇಶ್ಯಾವಾಟಿಕೆಗೆ ಇಳಿಸಿದ್ದಳು ಎಂದು ಯುವತಿ ದೂರಿದ್ದಳು.

ತನ್ನನ್ನು ದಂಧೆಗಾಗಿ ಬೇರೆ ಬೇರೆ ಹೋಟೆಲ್‌ಗಳಿಗೆ ಕಳುಹಿಸಲಾಗುತ್ತಿತ್ತು. ಕೆಲವೊಮ್ಮೆ ಏಕಕಾಲಕ್ಕೆ ಹಲವರು ದೌರ್ಜನ್ಯ ನಡೆಸುತ್ತಿದ್ದರು ಎಂದು ಯುವತಿ ದೂರಿದ್ದಾಳೆ. ಈ ದಂಧೆಯಲ್ಲಿ ಕೆಲವು ರೌಡಿ ಶೀಟರ್‌ಗಳು ಕೂಡಾ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಯುವತಿ ಮಾಹಿತಿ ನೀಡಿದ್ದಾಳೆ. ವೇಶ್ಯಾವಾಟಿಕೆಗೆ ಬೆಂಬಲ ನೀಡಿದ ಲಾಡ್ಜ್ ಮಾಲೀಕನನ್ನೂ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ| ವೇಶ್ಯೆಯನ್ನು ಕೊಲೆ ಮಾಡಿದ ಆಟೋ ಚಾಲಕ

Exit mobile version