Site icon Vistara News

ಹಾವೇರಿಯಲ್ಲಿ ಅತ್ತಿಗೆ, ಇಬ್ಬರು ಮಕ್ಕಳನ್ನು ಕೊಚ್ಚಿ ಕೊಂದ ಕಟುಕ; ಮಾಡಿದ ತಪ್ಪಾದರೂ ಏನು?

Accused Kumar Gowda

Man Kills Sister In Law And Her Son And Daughter In Haveri District

ಹಾವೇರಿ: ಅಣ್ಣನ ಹೆಂಡತಿ ಸಂಬಂಧದಲ್ಲಿ ಅತ್ತಿಗೆಯಾದರೂ ತಾಯಿಯ ಸ್ಥಾನ ನೀಡುತ್ತೇವೆ. ಯಾವುದೇ ವ್ಯಕ್ತಿಗೆ ಅಣ್ಣನ ಮಕ್ಕಳು ತನಗೂ ಮಕ್ಕಳು ಎಂಬ ಭಾವನೆ ಇರುತ್ತದೆ. ಅಣ್ಣನ ಮಕ್ಕಳೂ ಪ್ರೀತಿಯಿಂದ ಚಿಕ್ಕಪ್ಪ ಎಂದು ಕರೆದಾಗ ಯಾರಿಗಾದರೂ ಖುಷಿಯಾಗುತ್ತದೆ. ಆದರೆ, ಹಾವೇರಿ ಜಿಲ್ಲೆಯಲ್ಲಿ (Haveri District) ದುರುಳನೊಬ್ಬ ಅತ್ತಿಗೆ ಹಾಗೂ ಅವರ ಇಬ್ಬರು ಮಕ್ಕಳನ್ನೇ ಕೊಚ್ಚಿ ಕೊಲೆ (Physical Abuse) ಮಾಡಿದ್ದಾನೆ.

ಹಾವೇರಿ ಜಿಲ್ಲೆ ಹಾನಗಲ್‌ ತಾಲೂಕು ಯಳ್ಳೂರು ಗ್ರಾಮದಲ್ಲಿ ಕುಮಾರ್‌ ಗೌಡ ಎಂಬಾತನು ಅಣ್ಣನ ಹೆಂಡತಿ ಹಾಗೂ ಆತನ ಇಬ್ಬರು ಮಕ್ಕಳನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಗೀತಾ (35), ಅಕುಲ್‌ (10) ಹಾಗೂ ಅಂಕಿತಾ (8) ಮೃತರು. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅತ್ತಿಗೆ ಹಾಗೂ ಇಬ್ಬರು ಮಕ್ಕಳನ್ನು ಭೀಕರವಾಗಿ ಕೊಲೆ ಮಾಡಲು ಏನು ಕಾರಣ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: Murder Case: ಕೋಲಾರದಲ್ಲಿ ಮತ್ತೆ ಹರಿದ ನೆತ್ತರು; 17 ವರ್ಷದ ಬಾಲಕನ ಭೀಕರ ಕೊಲೆ

ಹೆತ್ತ ಮಗುವನ್ನೇ ಕೆರೆಗೆ ಎಸೆದ ಪಾಪಿ

ಕೆಲ ದಿನಗಳ ಹಿಂದಷ್ಟೇ ಮೈಸೂರಿನಲ್ಲೊಂದು ಅಮಾನುಷ ಕೃತ್ಯ ನಡೆದಿತ್ತು. ತಂದೆಯೇ ತನ್ನ ಒಂದೂವರೆ ವರ್ಷದ ಹಸುಗೂಸನ್ನು ಕೆರೆಗೆಸೆದು ಕೊಲೆ ಮಾಡಿದ ಪ್ರಕರಣ ಸುದ್ದಿಯಾಗಿತ್ತು. ಈತನ ಪತ್ನಿ ಮೂರನೇ ಹೆರಿಗೆಯ ನಂತರ ತೀರಿಕೊಂಡಿದ್ದಾರೆ. ತನ್ನ ಇನ್ನಿಬ್ಬರು ಹೆಣ್ಣುಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಿಲ್ಲವೆಂದು ತಾಯಿಯ ಬಳಿ ಬಿಟ್ಟಿದ್ದ ಈ ಪಾತಕಿ, ಮೂರನೇ ಮಗುವನ್ನು ಕೊಲೆ ಮಾಡಿದ್ದ ಎಂದು ಪೊಲೀಸ್‌ ಮೂಲಗಲೂ ತಿಳಿಸಿದ್ದವು.

ಒಂದೂವರೆ ವರ್ಷದ ಮಗುವನ್ನು ಕೆರೆಗೆ ಎಸೆದು ಕೊಂದ ಪಾಪಿ ತಂದೆಯ ಹೆಸರು ಗಣೇಶ್. ಪಿರಿಯಾಪಟ್ಟಣ ತಾಲೂಕು ಮಾಕೋಡು ಗ್ರಾಮದಲ್ಲಿ ಘಟನೆ ನಡೆದಿದೆ. ಬೆಂಗಳೂರಿನ ದೊಡ್ಡಸನ್ನೆ ಗ್ರಾಮದಲ್ಲಿ ಗಣೇಶ್- ಲಕ್ಷ್ಮಿ ದಂಪತಿ ವಾಸವಿದ್ದರು. ದಂಪತಿಗೆ ಮೂರು ಮಕ್ಕಳಿದ್ದರು. ಗಣೇಶ್ ಪತ್ನಿ ಲಕ್ಷ್ಮಿ ಮೂರನೇ ಮಗುವಿನ ಹೆರಿಗೆ ವೇಳೆ ಮೃತಪಟ್ಟಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version