Site icon Vistara News

Modi in Karnataka : ಮಂಡ್ಯದಲ್ಲಿ ವಿವಾದಕ್ಕೀಡಾಗಿದ್ದ ಉರಿಗೌಡ, ನಂಜೇಗೌಡ ದ್ವಾರದ ಹೆಸರು ಬದಲಾವಣೆ

ಮೈಸೂರು: ಮಂಡ್ಯದಲ್ಲಿ ವಿವಾದಕ್ಕೆ ಕಾರಣವಾಗಿದ್ದ ಉರಿಗೌಡ, ನಂಜೇಗೌಡ ಮಹಾ ದ್ವಾರದ ಹೆಸರನ್ನು ರಾತ್ರೋರಾತ್ರಿ ಬದಲಿಸಲಾಗಿದೆ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮಹಾದ್ವಾರ ಎಂದು (Modi in Karnataka) ನಾಮಕರಣ ಮಾಡಲಾಗಿದೆ. ಭಾನುವಾರ ದಶಪಥ ಹೆದ್ದಾರಿ ಉದ್ಘಾಟನೆಯ ಪ್ರಯುಕ್ತ ಅಳವಡಿಸಿದ್ದ ದ್ವಾರಕ್ಕೆ ಉರಿಗೌಡ, ನಂಜೇಗೌಡ ಎಂದು ಹೆಸರಿಡಲಾಗಿತ್ತು. ಆದರೆ ಇದಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ದ್ವಾರದ ಹೆಸರನ್ನು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮಹಾದ್ವಾರ ಎಂದು ಬದಲಿಸಿರುವುದು

ಪ್ರತಿಯಾಗಿ ಬಿಜೆಪಿ ನಾಯಕ ಸಿಟಿ ರವಿ ಸರಣಿ ಟ್ವೀಟ್‌ ಮೂಲಕ ವಾಗ್ದಾಳಿ ನಡೆಸಿದ್ದರು.
ಟಿಪ್ಪು ಸುಲ್ತಾನ್ ಹತ್ಯೆಗೈದವರು ಉರಿಗೌಡ, ದೊಡ್ಡನಂಜೇಗೌಡ ಎಂದು ಬಿಜೆಪಿ ನಾಯಕರು ವಾದಿಸಿದ್ದರು.
ಆದರೆ ಒಕ್ಕಲಿಗ ಸಮುದಾಯಕ್ಕೆ ಬಿಜೆಪಿ ಅಪಮಾನ ಮಾಡುತ್ತಿದೆ ಆರೋಪವೂ ಕೇಳಿಬಂದಿತ್ತು. ಹೀಗಾಗಿ ದ್ವಾರದ ಹೆಸರನ್ನು ಆಯೋಜಕರು ಬದಲಿಸಿದ್ದಾರೆ.

ವಿವಾದಕ್ಕೀಡಾಗಿದ್ದ ಉರಿಗೌಡ, ದೊಡ್ಡನಂಜೇಗೌಡ ಹೆಸರಿನ ದ್ವಾರ

Exit mobile version