Site icon Vistara News

Missing Case | ರಾಮನಗರದ ದೇಗುಲ ಮಠದ ಮೂವರು ಬಾಲಕರು ನಾಪತ್ತೆ!

Missing Case

ರಾಮನಗರ: ಇಲ್ಲಿನ ಕನಕಪುರ ನಗರದಲ್ಲಿರುವ ದೇಗುಲ ಮಠದಿಂದ ಮೂವರು ಬಾಲಕರು ನಾಪತ್ತೆ (Missing Case) ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ. ದೇಗುಲ ಮಠದಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂವರು ಬಾಲಕರು ನವೆಂಬರ್‌ 9 ರಂದು ಮಠದಿಂದ ನಾಪತ್ತೆ ಆಗಿದ್ದಾರೆ ಎನ್ನಲಾಗಿದೆ.

ಆನೇಕಲ್ ತಾಲೂಕು ಅತ್ತಿಬೆಲೆ ಗ್ರಾಮದ ಶಿವಕುಮಾರ್(15), ಆನೇಕಲ್ ತಾ. ಕೊಡ್ಲಿಪುರ ಗ್ರಾಮದ ಪ್ರತಾಪ್ (16)ಬೆಂಗಳೂರಿನ ಎಂ.ಎಸ್. ನಗರದ ಕಾರ್ತಿಕ್ (15) ನಾಪತ್ತೆಯಾದ ವಿದ್ಯಾರ್ಥಿಗಳು. ಮೂವರು ಬಾಲಕರು 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.

ನವೆಂಬರ್‌ 9ರ ರಾತ್ರಿ ದೇಗುಲ ಮಠದ ನಿರ್ವಾಣಸ್ವಾಮಿ ಹಾಸ್ಟೆಲ್‌ನಲ್ಲಿ ಊಟ ಮುಗಿಸಿದವರು ನಂತರ ಎಲ್ಲೂ ಕಂಡಿಲ್ಲ. ತುಂಬಾ ಸಮಯದ ನಂತರ ಪತ್ತೆಯಾಗದೇ ಇದ್ದಾಗ ಮಠದ ಸಿಬ್ಬಂದಿ ಮಹದೇವಸ್ವಾಮಿ ಎಂಬುವವರು ಕನಕಪುರ ನಗರ ಠಾಣೆಗೆ ದೂರು ನೀಡಿದ್ದಾರೆ. ನವೆಂಬರ್‌ 9ರಂದು ಬಾಲಕರು ನಾಪತ್ತೆಯಾಗಿದ್ದು, ನವೆಂಬರ್ 11 ರಂದು ಕಾಣೆಯಾಗಿರುವ ಸಂಬಂಧ ದೂರು ದಾಖಲಾಗಿದೆ. ಸದ್ಯ ಬಾಲಕರಿಗಾಗಿ ಪೊಲೀಸರಿಂದ ಶೋಧ ಕಾರ್ಯ ಮುಂದುವರಿದಿದೆ.

ಇದನ್ನೂ ಓದಿ | ಪ್ಯಾರಿಸ್​ ಏರ್​ಪೋರ್ಟ್​ನಲ್ಲಿಯೇ 18ವರ್ಷ ಜೀವಿಸಿದ್ದ ಇರಾನ್​ ಪ್ರಜೆ ಅಲ್ಲೇ ಸಾವು; ಹಾಲಿವುಡ್​ ಸಿನಿಮಾಕ್ಕೂ ಸ್ಫೂರ್ತಿಯಾಗಿದ್ದರು!

Exit mobile version