Site icon Vistara News

ಅರಮನೆ ಅಂಗಳದಲ್ಲಿ ಕಾಡಿನ ಮಕ್ಕಳ ಅಪ್ಪು ಕ್ರೇಜ್!

appu in mysore

ಮೈಸೂರು: ಬಹುತೇಕ ಕಾಡಿನಲ್ಲೇ ವಾಸಿಸುವ ಗಜಪಡೆಯ ಮಾವುತರ, ಕಾವಾಡಿಗಳ ಮಕ್ಕಳು ದೊಡ್ಡ ತೆರೆಯ ಮೇಲೆ ಪುನೀತ್‌ ರಾಜ್‌ಕುಮಾರ್‌ ಅವರನ್ನು ಕಂಡೊಡನೆ ಹರ್ಷೋದ್ಘಾರ ಮಾಡಿ ಸಂಭ್ರಮಿಸಿದ್ದು ವಿಶೇಷವಾಗಿತ್ತು. ಇದು ಅರಮನೆ ಆವರಣದಲ್ಲಿ ಶನಿವಾರ ಕಂಡುಬಂದ ದೃಶ್ಯ.

ರಾಷ್ಟ್ರೀಯ ಚಲನಚಿತ್ರ ದಿನದ ಅಂಗವಾಗಿ ಗಜಪಡೆಯ ಮಾವುತರು, ಕಾವಾಡಿಗಳ ಕುಟುಂಬಸ್ಥರಿಗೆ ಮೈಸೂರು ಅರಮನೆ ಆವರಣದಲ್ಲಿ ಸಿನಿಮಾ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಸಂದರ್ಭ ನಟ ದಿ. ಪುನೀತ್ ರಾಜ್‌ಕುಮಾರ್ ಅಭಿನಯದ ಯುವರತ್ನ ಸಿನಮಾ ಪ್ರದರ್ಶಿಸಲಾಯಿತು. ಈ ವೇಳೆ ಬಿಗ್ ಸ್ಕ್ರೀನ್‌ನಲ್ಲಿ ಅಪ್ಪು ಕಂಡು ಪುಳಕಿತರಾದ ಮಕ್ಕಳು ಸಿಳ್ಳೆ ಹೊಡೆದು, ಅಪ್ಪು ಬಾಸ್ ಎಂದು ಕೂಗತೊಡಗಿದರು. ನಮಗೆ ಅಪ್ಪು ಅಂದ್ರೆ ಇಷ್ಟ, ಅಪ್ಪು ನಮ್ ಗುರು ಎನ್ನುತ್ತಾ ಅವರ ಫೈಟ್ ನೋಡಿ ಎಂಜಾಯ್ ಮಾಡಿದರು.

ಬಳಿಕ ʻಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡುʼ ಚಿತ್ರ ಪ್ರದರ್ಶನ ನಡೆಯಿತು. ಸದಾ ಕಾಡಿನಲ್ಲಿಯೇ ಇರುವ ಮಾವುತರು ಹಾಗೂ ಕಾವಾಡಿಗಳು ದೊಡ್ಡ ತೆರೆಯಲ್ಲಿ ಸಿನಿಮಾ ನೋಡುವುದು ಅಪರೂಪವಾಗಿದ್ದರಿಂದ, ಈ ಸಿನಿಮಾ ಪ್ರದರ್ಶನ ಅವರಲ್ಲಿ ವಿಶೇಷ ಸಂಭ್ರಮ ತುಂಬಿತ್ತು.‌

ಇದನ್ನೂ ಓದಿ | Mysore Dasara 2022 | ಗಜಪಡೆ ಮಾವುತ ಮತ್ತು ಕಾವಾಡಿಗಳಿಗೆ ಉಪಾಹಾರ

Exit mobile version