Site icon Vistara News

ಬಂಗಾರದ ಅಂಗಡಿ ಮಾಲೀಕನ ಎದುರೇ ₹32 ಲಕ್ಷ ಮೌಲ್ಯದ ಚಿನ್ನಾಭರಣ ಹೊತ್ತೊಯ್ದ ಕಳ್ಳ

ಬಳ್ಳಾರಿ: ಬಂಗಾರದ ಅಂಗಡಿಯಲ್ಲಿ ಮಾಲೀಕನ ಕಣ್ತಪ್ಪಿಸಿ ಕ್ಷಣಮಾತ್ರದಲ್ಲಿ ₹32 ಲಕ್ಷ ಮೌಲ್ಯದ ಆಭರಣಗಳನ್ನು ಕಳ್ಳರು ಪಟಾಯಿಸಿದ್ದಾರೆ. ಸಂಡೂರು ಪಟ್ಟಣದ SSV ಜ್ಯುವೆಲರಿ ಶಾಪ್‌ನಲ್ಲಿ ಈ ಘಟನೆ ನಡೆದಿದೆ. 825 ಗ್ರಾಂ ಬಂಗಾರವಿದ್ದ ಬ್ಯಾಗ್ ಕಳ್ಳತನ ಮಾಡಿ ಕಳ್ಳರು ಪರಾರಿಯಾಗಿದ್ದಾರೆ.

ಇದನ್ನೂ ಓದಿ |ಬಾರ್‌ನಲ್ಲಿ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ: ಸಿಸಿಟಿವಿಯಲ್ಲಿ ಸೆರೆ

ಮಾಲೀಕ ಒಂದು ಬಾಗಿಲಿನ ಬೀಗ ತಗೆದು ಶಾಪ್ ಒಳಗೆ ಚಿನ್ನವಿದ್ದ ಚೀಲವನ್ನು ಇಟ್ಟಿದ್ದರು. ಇನ್ನೊಂದು ಬಾಗಿಲು ತಗೆಯುವ ವೇಳೆ ಬ್ಯಾಗ್‌ ಕಳ್ಳತನ ಮಾಡಿ ಕ್ಷಣಾರ್ಧದಲ್ಲಿ ಕಳ್ಳ ಪರಾರಿಯಾಗಿದ್ದಾನೆ. ಮುಂದಿನ ರಸ್ತೆಯಲ್ಲಿ ಪೊಲೀಸ್‌ ಠಾಣೆಯ ಬಳಿಯಲ್ಲೆ ಈ ಕಳ್ಳನ ಇಬ್ಬರು ಸಹಚರರು ಬೈಕ್‌ನಲ್ಲಿ ಹೊಂಚುಹಾಕಿ ಕಾಯುತ್ತಿದ್ದರು. ಈತನನ್ನು ಹತ್ತಿಸಿಕೊಂಡು ಬೈಕ್‌ನಲ್ಲಿ ಪರಾರಿ ಆಗಿದ್ದಾರೆ. ಅಂಗಡಿಯಲ್ಲಿ ಕಳ್ಳತನ ಮಾಡುತ್ತಿರುವುದು, ಬೈಕ್‌ನಲ್ಲಿ ಮೂವರು ತೆರಳುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಚಿನ್ನದಂಗಡಿ ಮಾಲೀಕ ಮೆಹಬೂಬ ಬಾಷಾರಿಂದ ಸಂಡೂರು ಠಾಣೆಯಲ್ಲಿ ದೂರು ದಾಖಲಾಗಿದೆ. ಮಾಲೀಕ ದೂರಿನಲ್ಲಿ ತಿಳಿಸಿರುವಂತೆ 32,54,000 ಮೌಲ್ಯದ 825 ಗ್ರಾಂ ಬಂಗಾರ ಕಳ್ಳತನ ಮಾಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | 50 ಸಿಸಿಟಿವಿ, ಮೊಬೈಲ್‌ ನೆಟ್‌ವರ್ಕ್‌ ಸಹಾಯದಿಂದ ಸಿಕ್ಕಿಬಿದ್ದ ಲಾರಿ ಕಳ್ಳ !

Exit mobile version