Deepawali eco friendly crackers | ದೀಪಾವಳಿಗೆ ಬಂತು ಪರಿಸರಸ್ನೇಹಿ ಪ್ಲಾಂಟಬಲ್ ಸೀಡ್ ಪಟಾಕಿ - Vistara News

ಲೈಫ್‌ಸ್ಟೈಲ್

Deepawali eco friendly crackers | ದೀಪಾವಳಿಗೆ ಬಂತು ಪರಿಸರಸ್ನೇಹಿ ಪ್ಲಾಂಟಬಲ್ ಸೀಡ್ ಪಟಾಕಿ

ಪಟಾಕಿ ಪ್ರಿಯರಿಗೆಂದೇ ಇದೀಗ ಮಾರುಕಟ್ಟೆಯಲ್ಲಿ ಪರಿಸರಸ್ನೇಹಿ ಪ್ಲಾಂಟಬಲ್ ಸೀಡ್ ಪಟಾಕಿಗಳು ಬಂದಿವೆ. ಈ ಬಗ್ಗೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Deepawali eco friendly crackers
ಚಿತ್ರಗಳು : ಸೀಡ್ ಪೇಪರ್ ಇಂಡಿಯಾ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು


ಪಟಾಕಿ ಪ್ರಿಯರಿಗೆಂದೇ ಇದೀಗ ಇಕೋ ಫ್ರೆಂಡ್ಲಿ ಪ್ಲಾಂಟಬಲ್ ಪಟಾಕಿಗಳು ಎಂಟ್ರಿ ನೀಡಿವೆ. ಹೌದು. ಇನ್ಮುಂದೆ ಪಟಾಕಿ ಹೊಡೆದು ಪರಿಸರಕ್ಕೆ ಧಕ್ಕೆ ಮಾಡಿದೆವಲ್ಲ! ಪರಿಸರ ಹಾಳು ಮಾಡಿದೆವಲ್ಲ ಎಂದು ಪರಿತಪಿಸಬೇಕಾಗಿಲ್ಲ! ಬದಲಿಗೆ ಸಂತಸಪಡಬಹುದು. ಪರಿಸರಕ್ಕೆ ಪೂರಕವಾಗುವಂತಹ ಇಕೋ ಫ್ರೆಂಡ್ಲಿ ಪಟಾಕಿಗಳು ದೀಪಾವಳಿಗೆ ಮುನ್ನವೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

Deepawali eco friendly crackers


ಏನಿದು ಪರಿಸರಸ್ನೇಹಿ ಸೀಡ್ ಪಟಾಕಿ
ಪ್ಲಾಂಟಬಲ್ ಸೀಡ್ ಪಟಾಕಿಗಳು ಪರಿಸರಸ್ನೇಹಿಯಾಗಿದ್ದು, ಅವುಗಳು ಪಟ್ ಅಂದಾಗ ಅದರಲ್ಲಿ ತುಂಬಲಾಗಿದ್ದ ಮಿಶ್ರಣದಲ್ಲಿ ಅನೇಕ ಬಗೆಯ ಗಿಡಗಳ ಬೀಜಗಳು ಚದುರುತ್ತವೆ. ಇವು ಕಸದಲ್ಲಿ ಸೇರಿದರೂ ಕೂಡ ಮಣ್ಣಿನ ಸಂಪರ್ಕ ಪಡೆದ ತಕ್ಷಣ ಮೊಳಕೆಯೊಡೆದು ಸಸಿಗಳಾಗುತ್ತವೆ. ಪಟಾಕಿಯ ಒಳಗೆ ತುಂಬಲಾಗುವ ಸ್ಟಫ್ನಲ್ಲಿ ಕೆಮಿಕಲ್‌ಗಳ ಬದಲು ಅರ್ಗಾನಿಕ್ ಸಾಮಗ್ರಿಗಳನ್ನು ಬಳಸಲಾಗಿರುತ್ತದೆ. ಹಾಗಾಗಿ ಪಟಾಕಿ ಹೊಡೆದ ನಂತರ ಯಾವುದೇ ಅಡ್ಡ ಪರಿಣಾಮಗಳಾಗುವುದಿಲ್ಲ ಎನ್ನುತ್ತಾರೆ ಸೀಡ್ ಪೇಪರ್ ಇಂಡಿಯಾ ಕಂಪನಿಯ ಸಂಸ್ಥಾಪಕರು.

Deepawali eco friendly crackers


ಈ ಪಟಾಕಿ ಪರಿಸರಸ್ನೇಹಿ ಹೇಗೆ?
ಪರಿಸರಸ್ನೇಹಿ ಪ್ಲಾಂಟಬಲ್ ಪಟಾಕಿಗಳಿಂದ ಮಾಲಿನ್ಯ ಉಂಟಾಗುವ ಬದಲು ಹೊಸ ಸಸಿ ಬೆಳೆಯಲು ಆಸ್ಪದವಾಗುತ್ತದೆ. ಒಂದಿಷ್ಟು ದಿನ ಕಳೆದ ನಂತರ ಹೊಡೆದ ಪಟಾಕಿಯಲ್ಲೆ ಹೊಸ ಸಸಿಯೊಂದು ಬೆಳೆಯುತ್ತದೆ. ಅಚ್ಚರಿಯಾಗುತ್ತಿದೆಯಾ! ಅಚ್ಚರಿಯಾದರೂ ಇದು ಸತ್ಯ. ಹಾಗೆನ್ನುತ್ತಾರೆ ಈ ಕಾನ್ಸೆಪ್ಟನ್ನು ಯಶಸ್ವಿಗೊಳಿಸಿರುವ ಸೀಡ್ ಪೇಪರ್ ಇಂಡಿಯಾ ಸಂಸ್ಥೆಯ ರೋಷನ್. ಅವರು ಹೇಳುವಂತೆ, ಈ ಪಟಾಕಿಗಳು ಪರಿಸರಸ್ನೇಹಿ ಮಾತ್ರವಲ್ಲ, ಮಕ್ಕಳು ಸುರಕ್ಷತೆಯಿಂದ ಬಳಸಬಹುದಾದ ಪಟಾಕಿಗಳು.

Deepawali eco friendly crackers

ಉದಾಹರಣೆಗೆ ಲಕ್ಷ್ಮಿ ಬಾಂಬ್, ರಾಕೆಟ್, ಭೂಮಿ ಚಕ್ರ, ಹೂವಿನ ಕುಂಡ ಸೇರಿದಂತೆ ನಾನಾ ಪಟಾಕಿಗಳನ್ನು ಪ್ಲಾಂಟಬಲ್ ಸೀಡ್‌ವನ್ನೊಳಗೊಂಡ ಇಕೋ ಫ್ರೆಂಡ್ಲಿ ಪಟಾಕಿಗಳನ್ನಾಗಿ ಪರಿವರ್ತಿಸಲಾಗಿದೆ. ಇವನ್ನು ಸಿಡಿಸುವುದರಿಂದ ಮುಂದೆ ಪಶ್ಶ್ಚಾತ್ತಾಪವೂ ಆಗದು. ಬೇಸರವೂ ಮೂಡದು. ಬದಲಿಗೆ ಪರಿಸರಕ್ಕೆ ಕೊಡುಗೆ ನೀಡಿದಂತಾಗುತ್ತದೆ. ದೀಪಾವಳಿಯ ಸಂತಸವು ಇಮ್ಮಡಿಯಾಗುತ್ತದೆ ಎನ್ನುತ್ತಾರೆ ಅವರು. ಅವರ ಪ್ರಕಾರ, ಸೀಡ್ ಇಂಡಿಯಾ ಸಂಸ್ಥೆಯು ಸಾಮಾಜಿಕ ಕಳಕಳಿಯೊಂದಿಗೆ ಈ ಕಾನ್ಸೆಪ್ಟ್ ಜನರ ಮುಂದೆ ತಂದಿದೆ. ಪರಿಸರ ಕಾಪಾಡುವುದರೊಂದಿಗೆ ನಮ್ಮ ಸಂಸ್ಕೃತಿ ಹಾಗೂ ಆಚರಣೆಯನ್ನು ಬಿಡದಂತೆ ಆಚರಿಸುವುದು ಉದ್ದೇಶ ಎನ್ನುತ್ತಾರೆ ಅವರು.

Deepawali eco friendly crackers


ಆನ್‌ಲೈನ್‌ನಲ್ಲಿ ಪಟಾಕಿ ಲಭ್ಯ
ಆಫ್‌ಲೈನ್‌ ಹಾಗೂ ಆನ್‌ಲೈನ್‌ನಲ್ಲಿ ಈಗಾಗಲೇ ಇಂತಹ ಸಾಕಷ್ಟು ಇಕೋ ಫ್ರೆಂಡ್ಲಿ ಪಟಾಕಿಗಳು ಲಭ್ಯ. ಸೀಡ್ ಇಂಡಿಯಾ ಮಾತ್ರವಲ್ಲ, ಬಹಳಷ್ಟು ಸಂಸ್ಥೆಗಳು ಈಗಾಗಲೇ ಪರಿಸರಸ್ನೇಹಿ ಪಟಾಕಿಗಳನ್ನು ಬಿಡುಗಡೆ ಮಾಡಿ ಮಾರಾಟ ಮಾಡುತ್ತಿವೆ. ಇದು ಉತ್ತಮ ಬೆಳವಣಿಗೆ ಎನ್ನುತ್ತಾರೆ ಪಟಾಕಿ ಪ್ರೇಮಿಗಳು.

(ಲೇಖಕಿ ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ| Deepawali 2022 | ಪಟಾಕಿ ಹೊಡೆಯಲು ‌ದಿನಕ್ಕೆ 2 ಗಂಟೆ ಟೈಂ ಫಿಕ್ಸ್‌; ಗ್ರೀನ್‌ ಪಟಾಕಿಗಷ್ಟೇ ಗ್ರೀನ್‌ ಸಿಗ್ನಲ್!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Empty Stomach Foods: ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ತಿನ್ನಬೇಡಿ!

Empty Stomach Foods: ಬೆಳಗ್ಗೆ ಎದ್ದ ಕೂಡಲೇ ಚಹಾ ಬೇಕು, ಇಲ್ಲವಾದರೆ ಕಷ್ಟ ಎಂಬಂಥ ಅಭ್ಯಾಸವನ್ನು ಅನೇಕರು ರೂಢಿಸಿಕೊಂಡಿರುತ್ತಾರೆ. ಆದರೆ, ಇವು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ನಮಗೆ ಗೊತ್ತಿದ್ದೂ ಇದನ್ನು ಬಿಡಲು ಸಾಧ್ಯವಾಗುವುದಿಲ್ಲ. ಇರಲಿ. ಇನ್ನೂ ಅನೇಕರು, ಈ ಅಭ್ಯಾಸವನ್ನು ತ್ಯಜಿಸಿ ಅನೇಕ ಹೊಸ ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಯಾವ ಆಹಾರ ಸೇವಿಸಬಾರದು ಎಂಬ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Empty Stomach Foods
Koo

ಬೆಳಗ್ಗೆ ಎದ್ದ ಕೂಡಲೇ (Empty Stomach Foods) ಸಾಮಾನ್ಯವಾಗಿ ಒಂದು ಲೋಟ ಚಹಾ ಮಾಡಿಕೊಂಡು ಸೋಫಾದಲ್ಲಿ ಕೂತು ಪೇಪರು ಓದುತ್ತಲೋ, ಸುಮ್ಮನೆ ಬಾಲ್ಕನಿಯಲ್ಲಿ ಒಂದ್ಹತ್ತು ನಿಮಿಷ ಚಹಾ ಹಿಡಿದು ಕೂರುವ ಅಭ್ಯಾಸ ನಮ್ಮಲ್ಲಿ ಬಹುತೇಕರಿಗಿದೆ. ಬೆಳಗ್ಗೆ ಎದ್ದ ಕೂಡಲೇ ಚಹಾ ಬೇಕು, ಇಲ್ಲವಾದರೆ ಕಷ್ಟ ಎಂಬಂಥ ಅಭ್ಯಾಸವನ್ನು ಅನೇಕರು ರೂಢಿಸಿಕೊಂಡಿರುತ್ತಾರೆ. ಆದರೆ, ಇವು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ನಮಗೆ ಗೊತ್ತಿದ್ದೂ ಇದನ್ನು ಬಿಡಲು ಸಾಧ್ಯವಾಗುವುದಿಲ್ಲ. ಇರಲಿ. ಇನ್ನೂ ಅನೇಕರು, ಈ ಅಭ್ಯಾಸವನ್ನು ತ್ಯಜಿಸಿ ಅನೇಕ ಹೊಸ ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ. ಖಾಲಿ ಹೊಟ್ಟೆಯಲ್ಲಿ ನಿಂಬೆ ಹಣ್ಣು ಹಿಂಡಿದ ಬಿಸಿ ನೀರು, ತರಕಾರಿ ಸೇವನೆ ಇತ್ಯಾದಿ ಇತ್ಯಾದಿ ಅನೇಕ ಅಭ್ಯಾಸಗಳನ್ನು ಹಲವೆಡೆ ಓದಿ ತಿಳಿದುಕೊಂಡು, ಹಲವರ ಸಲಹೆ ಕೇಳಿ, ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿದು ಅಭ್ಯಾಸ ಶುರು ಮಾಡಿರುತ್ತಾರೆ. ಆದರೆ, ಎಲ್ಲವೂ ಇವು ಒಳ್ಳೆಯದೇ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಅಥವಾ ಕೆಲವರಿಗೆ ಒಳ್ಳೆಯದು ಮಾಡಿದೆ ಎಂದಾಕ್ಷಣ ಎಲ್ಲರಿಗೂ ಒಳ್ಳೆಯದನ್ನ ಮಾಡುತ್ತದೆ ಎಂದೇನಿಲ್ಲ. ಕಾರಣ ಒಬ್ಬೊಬ್ಬರ ದೇಹ ಪ್ರಕೃತಿಯೂ ಒಂದೊಂದು ಬಗೆಯದು. ಹೀಗಾಗಿ, ಬೆಳಗ್ಗೆ ಎದ್ದ ಕೂಡಲೇ, ಕೆಲವು ಆಹಾರಗಳನ್ನು ನಾವು ಆದಷ್ಟು ದೂರವಿರಿಸಿದರೆ ಒಳ್ಳೆಯದು. ಬನ್ನಿ, ಯಾವೆಲ್ಲ ಆಹಾರವನ್ನು ನಾವು ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಅಷ್ಟು ಯೋಗ್ಯವಲ್ಲ ಎಂಬುದನ್ನು ನೋಡೋಣ.

Spicy Foods Superfoods To Get That Belly Fat

ಸ್ಪೈಸೀ ಆಹಾರಗಳು

ಬೆಳಗ್ಗೆ ಎದ್ದ ಕೂಡಲೇ ಸ್ಪೈಸೀ ಆಹಾರದ ಸೇವನೆ ಒಳ್ಳೆಯದಲ್ಲ. ಬೆಳಗ್ಗೆ ಕಾಲಿ ಹೊಟ್ಟೆಗೆ ಉತ್ತಮ ಆರೋಗ್ಯಕರವಾದ, ದಿನವಿಡೀ ದೇಹ ಉಲ್ಲಾಸ ಪಡೆಯುವ ಆಹಾರ ನೀಡಬೇಕೇ ಹೊರತು ಬೆಳ್ಳಂಬೆಳಗ್ಗೆಯೇ ಆಲಸ್ಯತನವನ್ನು ಆವಾಹಿಸುವ ಆಹಾರವನ್ನು ತಿನ್ನಬಾರದು. ಬೆಳಗ್ಗೆ ಖಾಲಿ ಹೊಟ್ಟೆಗೆ ಸ್ಪೈಸೀಯಾದ ಮಸಾಲೆಯುಕ್ತ ಆಹಾರವನ್ನು ನೀಡಿದರೆ, ಹೊಟ್ಟೆಯ ಒಳಪದರಕ್ಕೆ ಕಿರಿಕಿರಿಯಾದ ಭಾವ ಉಂಟಾಗುತ್ತದೆ. ಹೀಗಾಗಿ, ದೇಹವನ್ನು ತಂಪಾಗಿಡುವ ಪೋಷಕಾಂಶಯುಕ್ತ, ಮಸಾಲೆಯಿಲ್ಲದ ಆಹಾರ ಸೇವಿಸಿ. ದೇಹಕ್ಕೆ ಹಿತವಾದ ಅನುಭವ ನೀಡುವ ಆಹಾರ ಒಳ್ಳೆಯದು.

Image Of Navaratri sweets

ಸಿಹಿತಿನಿಸುಗಳು

ಬೆಳಗ್ಗೆ ಸಿಹಿತಿನಿಸು ತಿನ್ನುವ ಕ್ರಮ ಹಲವರ ಪದ್ಧತಿಯಲ್ಲಿದೆ. ಆದರೆ ಇದು ಒಳ್ಳೆಯದಲ್ಲ. ಇನ್ನೂ ಕೆಲವರು ಈಗ ಆಧುನಿಕ ಪಾಶ್ಚಾತ್ಯ ಶೈಲಿಯ ಅನುಕರಣೆಯಲ್ಲಿ ಪ್ಯಾನ್‌ ಕೇಕ್‌, ವ್ಯಾಫಲ್‌ಗಳನ್ನು ಸೇವಿಸುವ ಅಭ್ಯಾಸವನ್ನೂ ಆರಂಭಿಸಿದ್ದಾರೆ. ಅಷ್ಟೇ ಅಲ್ಲ, ಮಕ್ಕಳಿಗೆ ಬ್ರೆಡ್‌ ಮೇಲೆ ಒಂದಿಷ್ಟು ಜ್ಯಾಮ್‌, ಚಾಕೋಲೇಟ್‌ ಸಿರಪ್‌ಗಳನ್ನು ಸುರಿದು ತಿನ್ನಿಸುವುದೂ ಉಂಟು. ಆದರೆ ಈ ಅಭ್ಯಾಸಗಳಾವುದೂ ಹೊಟ್ಟೆಗೆ ಒಳ್ಳೆಯದಲ್ಲ ನೆನಪಿಡಿ. ಇದು ತೂಕ ಹೆಚ್ಚಿಸುವ ಜೊತೆಗೆ, ಪಿತ್ತಕೋಶದ ಮೇಲೆ ಹೆಚ್ಚಿನ ಒತ್ತಡವನ್ನು ಹಾಕುತ್ತದೆ.

ಇದನ್ನೂ ಓದಿ: Mint Leaf Water: ಪುದಿನ ಎಲೆಗಳ ನೀರನ್ನು ನಿತ್ಯವೂ ಕುಡಿಯಿರಿ, ಈ ಲಾಭಗಳನ್ನು ಪಡೆಯಿರಿ!

ತಂಪು ಪಾನೀಯಗಳು

ಬೆಳಗ್ಗೆ ಎದ್ದು ಹಲವರು ತಂಪು ಪಾನೀಯಗಳನ್ನೂ ಸೇವಿಸುವುದೂ ಇದೆ. ಐಸ್ಡ್‌ ಟೀ, ಹಣ್ಣಿನ ಜ್ಯೂಸ್‌ಗಳು, ಪ್ಯೇಕೇಜ್ಡ್‌ ಡ್ರಿಂಕ್‌ಗಳು ಇತ್ಯಾದಿಗಳನ್ನು ಬೆಳಗ್ಗಿನ ಹೊತ್ತು ಕುಡಿಯುತ್ತಾರೆ. ತಣ್ಣಗಿನ ಇಂತಹ ಡ್ರಿಂಕ್‌ಗಳನ್ನು ಬೆಳಗ್ಗೆ ಕುಡಿಯುವುದರಿಂದ ಇದ್ದಕ್ಕಿದ್ದ ಹಾಗೆ ಶಕ್ತಿ ಬಂದಂಥ ಅನುಭವವಾದರೂ, ಇವು ಜೀರ್ಣಕ್ರಿಯೆಯನ್ನು ಕುಂಠಿತಗೊಳಿಸುತ್ತವೆ. ಅಷ್ಟೇ ಅಲ್ಲ, ಇದರಲ್ಲಿರುವ ಅಧಿಕ ಸಕ್ಕರೆಯೂ ದೇಹದ ಮೇಲೆ ಕೆಟ್ಟ ಪರಿಣಾಮವನ್ನೇ ಬೀರುತ್ತದೆ.

Citrus Fruits Healthy Foods That Are Harmful To Consume At Night

ಸಿಟ್ರಸ್‌ ಹಣ್ಣುಗಳು

ಬೆಳಗ್ಗೆ ಎದ್ದ ಕೂಡಲೇ ಸಿಟ್ರಸ್‌ ಹಣ್ಣುಗಳನ್ನು ಸೇವಿಸುವ ಅಭ್ಯಾಸವಿದ್ದರೆ ಬಿಡಿ. ಇವು ದೇಹದಲ್ಲಿ ಆಸಿಡ್‌ ಮಟ್ಟವನ್ನು ಏರಿಸುತ್ತದೆ. ಜೊತೆಗೆ ಜೀರ್ಣಕ್ರಿಯೆಯನ್ನೂ ಕುಂಠಿತಗೊಳಿಸುವ ಸಾಧ್ಯತೆ ಹೆಚ್ಚು.

Green vegetables

ಹಸಿ ತರಕಾರಿಗಳು

ಹಸಿ ತರಕಾರಿಗಳು ದೇಹಾರೋಗ್ಯಕ್ಕೆ ಒಳ್ಳೆಯದು ನಿಜ. ಆದರೆ ಖಾಲಿ ಹೊಟ್ಟೆಯಲ್ಲಿ ಹಸಿ ತರಕಾರಿ ತಿನ್ನುವುದು ಅಷ್ಟು ಒಳ್ಳೆಯದಲ್ಲ. ಇವು ಕರಗಲು ಸ್ವಲ್ಪ ಹೆಚ್ಚೇ ಸಮಯ ಬೇಕು. ಅಷ್ಟೇ ಅಲ್ಲ, ಬೆಳಗಿನ ಹೊತ್ತು ಖಾಲಿ ಹೊಟ್ಟೆಯಲ್ಲಿರುವಾಗ, ಜೀರ್ಣಾಂಗಗಳಿಗೆ ಹೆಚ್ಚಿನ ಒತ್ತಡವನ್ನು ಕೊಟ್ಟು ಕೆಲಸವನ್ನು ಮಾಡಿಸುತ್ತವೆ. ಹಾಗಾಗಿ, ಜೀರ್ಣಕ್ರಿಯೆಗೆ ಹೆಚ್ಚು ಒತ್ತಡವಾಗದಂಥ ಆಹಾರವನ್ನು ಬೆಳಗ್ಗೆ ತಿನ್ನುವುದು ಒಳ್ಳೆಯದು.

Continue Reading

ಆರೋಗ್ಯ

Menopausal Weight Gain: ಋತುಚಕ್ರ ನಿಂತ ಬಳಿಕ ತೂಕ ಹೆಚ್ಚುವುದನ್ನು ತಡೆಯಬಹುದೇ?

Menopausal Weight Gain: ಋತುಬಂಧವೆಂದರೆ ಬದಲಾವಣೆಯ ಕಾಲ. ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳ ಜೊತೆಗೆ, ದೇಹದ ಆಕಾರವೂ ಬದಲಾಗುತ್ತದೆ. 40 ವರ್ಷದ ನಂತರ ಈ ಘಟ್ಟದ ಒಂದೊಂದೇ ಹಂತಗಳು ಪ್ರಾರಂಭವಾಗುತ್ತವೆ. ಈ ಘಟ್ಟದಲ್ಲಿ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಸ್ತರದಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಾಣಬಹುದು. ಇವುಗಳ ಜೊತೆಗೆ, ಶರೀರದ ಆಕಾರವೇ ಬದಲಾಗುವಂತೆ ತೂಕ ಹೆಚ್ಚುತ್ತದೆ. ಹೀಗೆ ತೂಕ ಹೆಚ್ಚುವುದನ್ನು ತಡೆಯುವುದಕ್ಕೆ ಸಾಧ್ಯವೇ? ಇಲ್ಲಿದೆ ವಿವರ.

VISTARANEWS.COM


on

Menopausal Weight Gain
Koo

ರಜೋನಿವೃತ್ತಿ ಪ್ರತಿಯೊಂದು ಮಹಿಳೆಯ ಬದುಕಿನ ಮಹತ್ವದ ಘಟ್ಟಗಳಲ್ಲಿ ಒಂದು. 40 ವರ್ಷದ ನಂತರ ಈ ಘಟ್ಟದ ಒಂದೊಂದೇ ಹಂತಗಳು ಪ್ರಾರಂಭವಾಗುತ್ತವೆ. ಈ ಘಟ್ಟದಲ್ಲಿ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಸ್ತರದಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಾಣಬಹುದು. ಮೈಯೆಲ್ಲ ಬಿಸಿಯಾಗಿ ಬೆವರುವುದು, ನಿದ್ರಾಹೀನತೆ, ಚರ್ಮವೆಲ್ಲ ಶುಷ್ಕವಾಗುವುದು, ಮೂಡ್‌ ಬದಲಾವಣೆ ಮುಂತಾದ ಬಹಳಷ್ಟು ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇವುಗಳ ಜೊತೆಗೆ, ಶರೀರದ ಆಕಾರವೇ ಬದಲಾಗುವಂತೆ ತೂಕ ಹೆಚ್ಚುತ್ತದೆ. ಬದುಕಿನಲ್ಲಿ ಈವರೆಗೂ ತೂಕ ಇಳಿಸುವುದಕ್ಕೆ ಒದ್ದಾಡವರಿಗೂ ಕಷ್ಟವಾಗುವಂತೆ, ಏರಿದ ತೂಕ ಇಳಿಯುವುದೇ ಇಲ್ಲವೆಂದು ಗಪ್ಪನೆ ಕೂತು ಬಿಡುತ್ತದೆ. ತಳೋದರಿಯರೂ ಗುಂಡಮ್ಮಂದಿರಾಗುತ್ತಾರೆ. ಇರುವೆಲ್ಲ ಸಂಕಟಗಳ ಜೊತೆಗೆ ತೂಕವೂ ಏರಿಬಿಟ್ಟರೆ…! ಹೀಗೇಕಾಗುತ್ತದೆ ಮತ್ತು ಈ ಹಠಮಾರಿ (Menopausal Weight Gain) ತೂಕವನ್ನು ಇಳಿಸುವುದಕ್ಕೆ ಏನು ಮಾಡಬೇಕು?

Belly Fat Reduction

ಏಕೆ ಹೀಗೆ?

ದೇಹದ ಚಯಾಪಚಯ ಮತ್ತು ಕೊಬ್ಬು ಶೇಖರವಾಗುವುದನ್ನು ಈಸ್ಟ್ರೋಜನ್‌ ಚೋದಕ ನಿರ್ವಹಿಸುತ್ತದೆ. ಋತುಬಂಧದ ನಂತರ ದೇಹದಲ್ಲಿ ಈಸ್ಟ್ರೋಜನ್‌ ಚೋದಕ ಗಣನೀಯವಾಗಿ ಕಡಿಮೆ ಆಗುವುದರಿಂದ, ಶರೀರದಲ್ಲಿ ಕೊಬ್ಬು ಶೇಖರವಾಗುವ ಪ್ರಮಾಣ ಹೆಚ್ಚುತ್ತದೆ. ಅದರಲ್ಲೂ ಹೊಟ್ಟೆಯ ಸುತ್ತಲಿನ ಭಾಗದಲ್ಲಿ ಕೊಬ್ಬು ಸಾಂದ್ರವಾಗಿ ಕೂತು ಸಿಂಹಕಟಿಯೆಂಬುದು ಕುಂಬಳಕಾಯಿಯಂತಾಗುತ್ತದೆ. ಹಾಗಾಗಿ ಹಾರ್ಮೋನಿನ ಏರುಪೇರು ಇದಕ್ಕೆ ಮುಖ್ಯ ಕಾರಣ. ಇದೊಂದೇ ಕಾರಣವಲ್ಲ, ನಮ್ಮ ಪ್ರಾಯ ಹೆಚ್ಚಿದಂತೆ ಶರೀರದಲ್ಲಿರುವ ಸ್ನಾಯುಗಳು ನೈಸರ್ಗಿಕವಾಗಿಯೇ ಕಡಿಮೆಯಾಗುತ್ತವೆ. ಇದರ ಬದಲಿಗೆ ಕೊಬ್ಬು ತುಂಬಿಕೊಳ್ಳಬಹುದು. ಆದರೆ ಕ್ಯಾಲರಿಗಳನ್ನು ಕರಗಿಸುವ ವಿಚಾರಕ್ಕೆ ಬಂದರೆ, ಕೊಬ್ಬಿಗಿಂತ ಸ್ನಾಯುಗಳು ಹೆಚ್ಚು ಶಕ್ತಿಯನ್ನು ವ್ಯಯಿಸುತ್ತವೆ. ಹಾಗಾಗಿ ಚಯಾಪಚಯ ನಿಧಾನವಾಗಬಹುದು. ಇದಕ್ಕೆ ಸರಿಯಾಗಿ, ವ್ಯಾಯಾಮ ಮಾಡುವುದಕ್ಕೆ ಸಮಯ ಇಲ್ಲದಿದ್ದರೆ ಅಥವಾ ಜೀವನಶೈಲಿಯಲ್ಲಿ ದೋಷವಿದ್ದರೆ ತೂಕ ಇರುತ್ತದೆ ಮತ್ತು ಇಳಿಯಲು ನಿರಾಕರಿಸುತ್ತದೆ!

ಇದನ್ನು ತಡೆಯಬಹುದೇ?

ಋತುಬಂಧದ ಸಮಯದಲ್ಲಿ ಮಹಿಳೆಯರ ತೂಕ ಹೆಚ್ಚುವುದನ್ನು ತಡೆಯಬಹುದೇ? ಇದಕ್ಕೆ ಉತ್ತರವೆಂದರೆ, ತಡೆಯಬಹುದು. ಒಂದು ಅಂದಾಜಿನ ಪ್ರಕಾರ, ರಜೋನಿವೃತ್ತಿಯ ನಂತರ, ಮಹಿಳೆಯರು ವರ್ಷದಿಂದ ವರ್ಷಕ್ಕೆ 0.7 ಕೆ.ಜಿ.ಯಷ್ಟು ತೂಕ ಹೆಚ್ಚುತ್ತಾ ಹೋಗುತ್ತಾರೆ. ಇದಕ್ಕೆ ಕಡಿಮೆಯಾಗುವ ಸ್ನಾಯುಬಲ ಮತ್ತು ಹೆಚ್ಚುವ ಕೊಬ್ಬಿನಂಶಗಳೇ ಮುಖ್ಯ ಕಾರಣ. ಜೊತೆಗೆ ಹಾರ್ಮೋನಿನ ವ್ಯತ್ಯಾಸದಿಂದಾಗಿ ಸೊಂಟ, ಹೊಟ್ಟೆಗಳ ಸುತ್ತಳತೆ ಏರುತ್ತದೆ. ಆದರೆ ಸರಿಯಾದ ಆಹಾರ, ವ್ಯಾಯಾಮ ಮತ್ತು ಉಳಿದ ಜೀವನಶೈಲಿಯ ಬದಲಾವಣೆಗಳ ನೆರವಿನಿಂದ ಆರೋಗ್ಯಕರ ತೂಕದ ಮಟ್ಟದಲ್ಲೇ ಇರಬಹುದು ಎನ್ನುತ್ತಾರೆ ಸ್ತ್ರೀರೋಗ ತಜ್ಞರು.

ಇದನ್ನೂ ಓದಿ: Health Tips: ನೀವು ಕುಡಿಯುವ ಹಾಲಿನಲ್ಲಿ ಕಲಬೆರಕೆಯೇ? ಹೀಗೆ ಸುಲಭವಾಗಿ ಪತ್ತೆ ಹಚ್ಚಿ!

ಏನು ಮಾಡಬಹುದು?

ಎಲ್ಲಕ್ಕಿಂತ ಮೊದಲು, ತಿನ್ನುವ ಆಹಾರದತ್ತ ಗಮನಕೊಡಿ. ನಿಮ್ಮ ದೇಹಕ್ಕೆ 2000 ಕ್ಯಾಲರಿ ಬೇಕಿದ್ದರೆ, 1800 ಕ್ಯಾಲರಿಯ ಆಹಾರವನ್ನೇ ಸೇವಿಸಿ. ಅಂದರೆ ಕ್ಯಾಲರಿ ಖೋತಾ ಆಗುವಂತೆ ನೋಡಿಕೊಳ್ಳಿ. ಜೊತೆಗೆ, ಆರೋಗ್ಯಕರ ಕ್ಯಾಲರಿಗಳನ್ನು ಮಾತ್ರವೇ ದೇಹಕ್ಕೆ ನೀಡಿ. ಸಕ್ಕರೆ ಮತ್ತು ಜಿಡ್ಡು ಭರಿತ, ಸಂಸ್ಕರಿಸಿದ ಆಹಾರಗಳನ್ನು ದೇಹಕ್ಕೆ ನೀಡಿದಷ್ಟೂ ಸಮಸ್ಯೆ ಏರುತ್ತದೆ.

Female runner doing stretching exercise, preparing for morni

ವ್ಯಾಯಾಮ

ಇದಕ್ಕೂ ಇಷ್ಟೇ ಗಮನವನ್ನು ನೀಡಬೇಕು. ಜಿಮ್‌ಗೆ ಹೋಗಿ ಬಿಂದಿಗೆಗಟ್ಟಲೆ ಬೆವರಿಳಿಸಬೇಕು ಅಥವಾ ಹಿಮಾಲಯ ಹತ್ತುವುದಕ್ಕೆ ತರಬೇತಿ ಪಡೆಯಬೇಕು ಎಂದಲ್ಲ; ವಾರಕ್ಕೆ ೧೫೦ ನಿಮಿಷಗಳ ಮಧ್ಯಮ ಗತಿಯ ವ್ಯಾಯಾಮ ಸಾಕಾಗುತ್ತದೆ. ಇದರಲ್ಲಿ ವಾಕಿಂಗ್‌, ಜಾಗಿಂಗ್‌, ಸೈಕಲ್‌ ಹೊಡೆಯುವುದು, ಏರೋಬಿಕ್ಸ್‌, ಪಿಲಾಟೆ, ಯೋಗ, ಈಜು ಮುಂತಾದ ಯಾವುದೂ ಆಗುತ್ತದೆ. ಅಂತೂ ಪ್ರತಿ ದಿನ 30 ನಿಮಿಷ ಕಡ್ಡಾಯವಾಗಿ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ.

Vastu Tips

ನಿದ್ದೆ

ಪ್ರತಿ ದಿನ 7-8 ತಾಸಿನ ನಿದ್ದೆ ದೊರೆಯುವುದಕ್ಕೆ ಸಾಧ್ಯವೇ ನೋಡಿ. ನಿದ್ದೆಗೆಡುವುದರಿಂದ ಹಾರ್ಮೋನುಗಳ ಮಟ್ಟ ಇನ್ನಷ್ಟು ಏರುಪೇರು ಆಗುತ್ತದೆ. ಜೊತೆಗೆ ಹಸಿವನ್ನು ನಿಯಂತ್ರಿಸಿಕೊಳ್ಳುವುದಕ್ಕೂ ಕಣ್ತುಂಬ ನಿದ್ರಿಸುವುದಕ್ಕೂ ನೇರ ಸಂಬಂಧವಿದೆ. ಹಾಗಾಗಿ ತೂಕ ನಿಯಂತ್ರಿಸಬೇಕು ಎಂದರೆ ನಿದ್ದೆಗೆಡುವುದನ್ನೂ ನಿಯಂತ್ರಿಸಬೇಕು.

Continue Reading

ಫ್ಯಾಷನ್

Dogs Monsoon Fashion: ಮುದ್ದು ಶ್ವಾನಗಳಿಗೂ ಬಂತು ಮಾನ್ಸೂನ್‌ ಫ್ಯಾಷನ್‌!

Dogs Monsoon Fashion: ಮುದ್ದು ಶ್ವಾನಗಳನ್ನು ಸಿಂಗರಿಸುವ ಮಾನ್ಸೂನ್‌ ಡ್ರೆಸ್‌, ರೈನ್‌ಕೋಟ್ಸ್ ಹಾಗೂ ಇತರೇ ಆಕ್ಸೆಸರೀಸ್‌ಗಳು ಪೆಟ್‌ ಶಾಪ್‌ಗಳಿಗೆ ಎಂಟ್ರಿ ನೀಡಿವೆ. ಯಾವ್ಯಾವ ಬಗೆಯವು ದೊರೆಯುತ್ತಿವೆ? ಯಾವುದೆಲ್ಲಾ ಆಕ್ಸೆಸರೀಸ್‌ಗಳು ಬೇಡಿಕೆ ಪಡೆದುಕೊಂಡಿವೆ? ಎಂಬುದರ ಕುರಿತಂತೆ ಡಾಗ್‌ ಸ್ಟೈಲಿಸ್ಟ್‌ಗಳು ವಿವರಿಸಿದ್ದಾರೆ.

VISTARANEWS.COM


on

Dogs Monsoon Fashion
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮುದ್ದು ಶ್ವಾನಗಳಿಗೂ ಬಂತು ಮಾನ್ಸೂನ್‌ ಫ್ಯಾಷನ್‌! (Dogs Monsoon Fashion) ಅರರೆ., ಇದೇನಿದು ಶ್ವಾನಗಳಿಗೂ ಮಳೆಗಾಲದ ಫ್ಯಾಷನ್‌ ಎಂದು ಹುಬ್ಬೇರಿಸಬಹುದು. ಹೌದು, ಇದೀಗ ಶ್ವಾನಗಳ ಮಾನ್ಸೂನ್‌ ಡ್ರೆಸ್‌ ಹಾಗೂ ರೈನ್‌ಕೋಟ್‌, ಮತ್ತಿತರೇ ಆಕ್ಸೆಸರೀಸ್‌ ಪೆಟ್‌ ಲೋಕದಲ್ಲಿ ಕಾಲಿಟ್ಟಿವೆ. ಆಯಾ ಜಾತಿಯ ಮುದ್ದು ಶ್ವಾನಗಳಿಗೆ ಹೊಂದುವಂತಹ, ನಾನಾ ವೆರೈಟಿ ಮಾನ್ಸೂನ್‌ ಡ್ರೆಸ್‌ಗಳು ಹಾಗೂ ವಾಟರ್‌ಪ್ರೂಫ್‌ ರೈನ್‌ಕೋಟ್‌ಗಳು ನಾಯಿಮರಿಗಳನ್ನು ಅಲಂಕರಿಸುತ್ತಿವೆ.

Dogs Monsoon Fashion

ಮುದ್ದು ಶ್ವಾನಗಳಿಗೂ ಮಾನ್ಸೂನ್‌ ಫ್ಯಾಷನ್‌

“ಇಂದು ಕಾಲ ಬದಲಾಗಿದೆ. ಮನೆಯಲ್ಲಿ ಮುದ್ದು ಶ್ವಾನಗಳಿಗೂ ಮಕ್ಕಳ ಸ್ಥಾನ ಮಾನ ದೊರಕಿದೆ. ಪ್ರತಿಯೊಬ್ಬರು ಅವರು ಸಾಕಿದ ನಾಯಿಮರಿಗಳನ್ನು ಯಾವ ಮಟ್ಟಿಗೆ ಇಷ್ಟ ಪಡುತ್ತಾರೆಂದರೇ, ಅವಕ್ಕೆ ಇತ್ತೀಚೆಗೆ ನಾನಾ ಬಗೆಯಲ್ಲಿ ಸ್ಟೈಲಿಂಗ್‌ ಕೂಡ ಮಾಡುತ್ತಾರೆ. ಇನ್ನು, ಹಿರಿಯರು ಕಿರಿಯರೆನ್ನದೇ ಎಲ್ಲರೂ ವಾಕಿಂಗ್‌ ಹಾಗೂ ಜಾಕಿಂಗ್‌ ಸಮಯದಲ್ಲೂ ಶ್ವಾನಗಳನ್ನು ಜೊತೆಯಲ್ಲಿಯೇ ಕರೆದೊಯ್ಯುತ್ತಾರೆ. ಇದಕ್ಕೆ ಪೂರಕ ಎಂಬಂತೆ, ಪೆಟ್‌ ಲೋಕದಲ್ಲೂ ನಾನಾ ಬಗೆಯ ಆಕ್ಸೆಸರೀಸ್‌ಗಳು ಹಾಗೂ ಉಡುಗೆಗಳು ಬಂದಿವೆ. ಆಯಾ ಸೀಸನ್‌ಗೆ ಮ್ಯಾಚ್‌ ಆಗುವಂತೆ ದೊರಕುತ್ತಿವೆ. ಅವುಗಳಲ್ಲಿ ಇದೀಗ ಮಾನ್ಸೂನ್‌ ಸೀಸನ್‌ಗೆ ಹೊಂದುವಂತಹ ಫ್ಯಾಷನ್‌ ಉಡುಗೆ ಹಾಗೂ ರೈನ್‌ಕೋಟ್‌ಗಳು ಬಿಡುಗಡೆಗೊಂಡಿವೆ” ಎನ್ನುತ್ತಾರೆ ಪೆಟ್‌ ಸ್ಪಾನ ಸ್ಟೈಲಿಂಗ್‌ ಎಕ್ಸ್‌ಫರ್ಟ್ ಜಾಕಿ. ಅವರ ಪ್ರಕಾರ, ಶ್ವಾನಗಳು ಇದೀಗ ಸ್ಟೈಲಿಶ್‌ ಆಗಿ ಕಾಣಿಸಲು ಈ ಆಕ್ಸೆಸರೀಸ್‌ಗಳು ಸಹಕರಿಸುತ್ತಿವೆಯಂತೆ.

Dogs Monsoon Fashion

ಮಾನ್ಸೂನ್‌ಗೆ ಮ್ಯಾಚಿಂಗ್‌

ಶ್ವಾನಗಳಿಗೆ ಬಂದಿರುವ ಕಲರ್‌ಫುಲ್‌ ಉಡುಗೆ ಹಾಗೂ ರೈನ್‌ಕೋಟ್‌ ಮತ್ತು ಅವುಗಳ ಕಾಲಿನ ಪಾದಗಳಿಗೆ ಹಾಕಬಹುದಾದ ಪೆಟ್‌ ವೆಲ್ಲೈಸ್‌, ರೈನ್‌ ಬೂಟ್ಸ್ ಹಾಗೂ ಟವೆಲ್‌ ಮತ್ತು ವೈಪ್ಸ್ ಈ ಸೀಸನ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ.

Dogs Monsoon Fashion

ಕಲರ್‌ಫುಲ್‌ ಡಾಗ್ಗಿ ರೈನ್‌ ಕೋಟ್ಸ್

ಪಿರಿ ಪಿರಿ ಸಣ್ಣ ಮಳೆಯಲ್ಲೂ ಡಾಗ್ಗಿಯಿಲ್ಲದೇ ವಾಕ್‌ ಮಾಡಲಾಗುವುದಿಲ್ಲ ಎನ್ನುವ ಶ್ವಾನಗಳ ಪೋಷಕರು, ಈ ಮಾನ್ಸೂನ್‌ ಡಾಗ್‌ ರೈನ್‌ಕೋಟ್ಸ್‌ಗಳ ಖರೀದಿ ಮಾಡತೊಡಗಿದ್ದಾರೆ. ಬೇಡಿಕೆ ಹೆಚ್ಚಾದಂತೆ, ಸಿಂಥಟಿಕ್‌, ಪಾಲಿಸ್ಟರ್‌ ಸೇರಿದಂತೆ ವಾಟರ್‌ ಪ್ರೂಫ್‌ ಫ್ಯಾಬ್ರಿಕ್‌ನಲ್ಲಿ ಇವು ನಾನಾ ಡಿಸೈನ್‌ನಲ್ಲಿ ಆಗಮಿಸಿವೆ.

Dogs Monsoon Fashion

ಪೆಟ್ಸ್ ರೈನ್‌ ಬೂಟ್ಸ್

ನಾಯಿ ಮರಿಗಳಿಗೆ ರಸ್ತೆಯ ಹಾಗೂ ನೆಲದ ಕೊಚ್ಚೆ, ಕೆಸರು ಹತ್ತದಂತೆ ಕಾಪಾಡಬಹುದಾದ ಪುಟ್ಟ ಪುಟ್ಟ ರೈನ್‌ ಬೂಟ್ಸ್‌ಗಳು ಕೂಡ ನಾನಾ ವಿನ್ಯಾಸದಲ್ಲಿ ಪೆಟ್‌ ಶಾಪ್‌ಗಳಿಗೆ ಬಂದಿವೆ. ಇನ್ನು, ಡಾಗ್‌ ಟವೆಲ್ಸ್ ಹಾಗೂ ವೈಪ್ಸ್ ಸೇರಿದಂತೆ, ಬೋ ಹಾಗೂ ಬೆಲ್ಟ್‌ಗಳು ಕೂಡ ಪೆಟ್‌ ಶಾಪ್‌ಗಳಿಗೆ ಲಗ್ಗೆ ಇಟ್ಟಿವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Monsoon Fashion 2024: ಮಾನ್ಸೂನ್‌ ಫ್ಯಾಷನ್‌ಗೆ ಲಗ್ಗೆ ಇಟ್ಟ ಡ್ರೆಸ್ ಕೋಡ್ಸ್

Continue Reading

ಆರೋಗ್ಯ

Yogurt vs Curd: ಮಾಮೂಲಿ ಮೊಸರಿಗೂ ಗ್ರೀಕ್‌ ಯೋಗರ್ಟ್‌ಗೂ ಏನು ವ್ಯತ್ಯಾಸ?

Yogurt vs Curd: ಮೊಸರು ಮೆಲ್ಲುವುದು ಬಹುಮಂದಿಗೆ ಮೆಚ್ಚಿನ ಕೆಲಸ. ಬೇರೆ ಬೇರೆ ಬ್ರ್ಯಾಂಡ್‌ಗಳಲ್ಲಿ ಹಲವು ರುಚಿಗಳ ಯೋಗರ್ಟ್‌ಗಳು ದೊರೆಯುತ್ತವೆ. ಜೊತೆಗೆ ಗ್ರೀಕ್‌ ಯೋಗರ್ಟ್‌ ತಿನ್ನುವವರ ಸಂಖ್ಯೆಯೂ ಕಡಿಮೆ ಇಲ್ಲ. ಆದರೆ ಆಯ್ಕೆಯ ಪ್ರಶ್ನೆ ಬಂದಾಗ ಯಾವುದನ್ನು ಕೈಗೆತ್ತಿಕೊಳ್ಳಬೇಕು ಎಂಬ ಗೊಂದಲ ಬಂದರೆ, ಸಹಜ. ಹಾಗಾಗಿ ಮಾಮೂಲಿ ಮೊಸರಿಗೂ ಗ್ರೀಕ್‌ ಯೋಗರ್ಟ್‌ ಇರುವ ವ್ಯತ್ಯಾಸಗಳನ್ನು ತಿಳಿದುಕೊಳ್ಳಿ.

VISTARANEWS.COM


on

Yogurt vs Curd
Koo

ಮೊಸರನ್ನು ಮೆಚ್ಚದವರು (Yogurt vs Curd) ಅಪರೂಪ. ದ್ವಾಪರದ ಕೃಷ್ಣನಿಂದ ಹಿಡಿದು, ಕಲಿಯುಗದ ಚಿಣ್ಣರೆಲ್ಲರೂ ಗಟ್ಟಿ ಮೊಸರು ತಟ್ಟೆಗೆ ಬರುತ್ತಿದ್ದಂತೆ ಸಂಭ್ರಮಿಸುತ್ತಾರೆ. ಇದು ಮನೆಯಲ್ಲಿ ಮಾಡಿದ ಮೊಸರೇ ಇರಬಹುದು ಅಥವಾ ಅಂಗಡಿಯಿಂದ ತಂದ ʻಯೋಗರ್ಟ್‌ʼ ಎಂಬ ಹೆಸರಿನದ್ದೇ ಇರಬಹುದು. ಅಂತೂ ಮೊಸರು ಮೆಲ್ಲುವುದು ಬಹುಮಂದಿಗೆ ಮೆಚ್ಚಿನ ಕೆಲಸ. ಬೇರೆ ಬೇರೆ ಬ್ರ್ಯಾಂಡ್‌ಗಳಲ್ಲಿ ಹಲವು ರುಚಿಗಳ ಯೋಗರ್ಟ್‌ಗಳು ದೊರೆಯುತ್ತವೆ; ಸದಾ ಕಾಲ ಸಪ್ಪೆ ಮೊಸರನ್ನೇ ತಿನ್ನಬೇಕೆಂದಿಲ್ಲ. ಜೊತೆಗೆ ಗ್ರೀಕ್‌ ಯೋಗರ್ಟ್‌ ತಿನ್ನುವವರ ಸಂಖ್ಯೆಯೂ ಕಡಿಮೆ ಇಲ್ಲ. ಆದರೆ ಆಯ್ಕೆಯ ಪ್ರಶ್ನೆ ಬಂದಾಗ ಯಾವುದನ್ನು ಕೈಗೆತ್ತಿಕೊಳ್ಳಬೇಕು ಎಂಬ ಗೊಂದಲ ಬಂದರೆ, ಸಹಜ. ಹಾಗಾಗಿ ಮಾಮೂಲಿ ಮೊಸರಿಗೂ ಗ್ರೀಕ್‌ ಯೋಗರ್ಟ್‌ ಇರುವ ವ್ಯತ್ಯಾಸಗಳನ್ನು ತಿಳಿದುಕೊಂಡರೆ, ಯಾವುದನ್ನು ಆಯ್ದುಕೊಳ್ಳಬೇಕು ಎನ್ನುವ ಗೊಂದಲಕ್ಕೆ ಉತ್ತರ ದೊರೆಯುತ್ತದೆ. ಪ್ಲೇನ್‌ ಯೋಗರ್ಟ್‌ ಮತ್ತು ಗ್ರೀಕ್‌ ಯೋಗರ್ಟ್‌- ಈ ಎರಡೂ ರೀತಿಯ ಮೊಸರಿಗೆ ಅದರದ್ದೇ ಆದ ಪ್ರತ್ಯೇಕ ರುಚಿ, ಘಮ ಮತ್ತು ಸತ್ವಗಳಿವೆ. ಪ್ಲೇನ್‌ ಯೋಗರ್ಟ್‌ ನಮ್ಮ ಮನೆಗಳಲ್ಲಿ ನಿತ್ಯ ಉಪಯೋಗಿಸುವ ಮೊಸರಿನಂತೆಯೇ, ಹೆಚ್ಚಿನ ವ್ಯತ್ಯಾಸವಿಲ್ಲ. ಆದರೆ ಮಾರುಕಟ್ಟೆಯ ದೃಷ್ಟಿಯಿಂದ ಅದಕ್ಕೆ ಬಣ್ಣ, ರುಚಿ, ಘಮ ಇತ್ಯಾದಿಗಳನ್ನು ಸೇರಿಸಿದವು ಲಭ್ಯವಿವೆ. ಕೃತಕ ಬಣ್ಣ, ರುಚಿ, ಸಕ್ಕರೆಗಳು ಬೇಡ ಎನ್ನುವವರಿಗೆ ಮನೆಯಲ್ಲಿ ಮಾಡಿದ ಮೊಸರು ಎಲ್ಲ ದೃಷ್ಟಿಯಲ್ಲೂ ಶ್ರೇಷ್ಠ. ಇವುಗಳ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Health Tips about curd

ಮೊಸರು

ಇದು ಗ್ರೀಕ್‌ ಯೋಗರ್ಟ್‌ನಷ್ಟು ಮಂದವಿರುವುದಿಲ್ಲ. ಮನೆಯಲ್ಲಿ ಮಾಡಿದ ಮೊಸರಿನಂತೆಯೇ ರುಚಿ, ಬಣ್ಣ ಎಲ್ಲವೂ ಇರುತ್ತದೆ. ಪ್ಲೇನ್‌ ಯೋಗರ್ಟ್‌ ಮತ್ತು ಮನೆ ಮೊಸರಿಗೆ ಹೆಚ್ಚಿನ ವ್ಯತ್ಯಾಸವೂ ಇಲ್ಲ. ಆರೋಗ್ಯಕ್ಕೆ ಅಗತ್ಯವಾದ ಬೇಕಾದ ಪ್ರೊಬಯಾಟಿಕ್‌ ಅಂಶಗಳನ್ನು ಹೇರಳವಾಗಿ ನೀಡುತ್ತದೆ. ಇದಲ್ಲದೆ, ಸಾಕಷ್ಟು ಪ್ರೊಟೀನ್‌ ಅಂಶಗಳನ್ನೂ ಒಳಗೊಂಡಿದ್ದು, ಸ್ನಾಯುಗಳ ದುರಸ್ತಿ ಮತ್ತು ಬೆಳವಣಿಗೆಗೆ ಸೂಕ್ತವಾಗಿದೆ.
ಕ್ಯಾಲ್ಶಿಯಂ ಸತ್ವ ಇದರಲ್ಲಿ ಭರಪೂರ ದೊರೆಯುತ್ತದೆ. ಮೂಳೆಗಳನ್ನು ಬಲಪಡಿಸುವುದಕ್ಕೆ ಇದು ಒಳ್ಳೆಯ ಆಯ್ಕೆ. ಜೀರ್ಣಾಂಗಗಳಿಗೆ ಬೇಕಾದ ಒಳ್ಳೆಯ ಬ್ಯಾಕ್ಟೀರಿಯಗಳನ್ನು ಇದು ಧಾರಾಳವಾಗಿ ನೀಡುತ್ತದೆ. ಜೊತೆಗೆ, ವಿಟಮಿನ್‌ ಡಿ, ವಿಟಮಿನ್‌ ಬಿ೧೨, ಪೊಟಾಶಿಯಂ ಮತ್ತು ಮೆಗ್ನೀಶಿಯಂ ಸತ್ವಗಳು ಇದರಲ್ಲಿವೆ. ನೈಸರ್ಗಿಕವಾಗಿ ಕೊಂಚ ಸಕ್ಕರೆಯಂಶವೂ ಇದರಲ್ಲಿದ್ದು, ಉತ್ತಮ ಪಿಷ್ಟ ದೇಹಕ್ಕೆ ಲಭಿಸುತ್ತದೆ.

Low fat Yogurt with Berries Weight Loss Snacks

ಗ್ರೀಕ್‌ ಯೋಗರ್ಟ್‌

ಹಾಲಿನಲ್ಲಿರುವ ನೀರಿನಂಶವನ್ನು ತೆಗೆದು ಸಂಸ್ಕರಿಸಿದ ನಂತರ ಈ ಮೊಸರನ್ನು ಮಾಡಲಾಗುವುದರಿಂದ, ಗ್ರೀಕ್‌ ಯೋಗರ್ಟ್‌ ಹೆಚ್ಚು ಮಂದವಾಗಿ ಕೆನೆಭರಿತವಾಗಿರುತ್ತದೆ. ಇದರ ರುಚಿಯೂ ಗಾಢವಾಗಿಯೇ ಇರುವುದರಿಂದ ಮಾಮೂಲಿ ಮೊಸರಿನ ಬದಲು, ಇದನ್ನು ಇಷ್ಟಪಟ್ಟು ತಿನ್ನುವವರ ಸಂಖ್ಯೆ ಸಾಕಷ್ಟು ದೊಡ್ಡದಿದೆ. ಇದರಲ್ಲೂ ಪ್ರೊಬಯಾಟಿಕ್‌ ಕಿಣ್ವಗಳು ಸಾಕಷ್ಟಿವೆ. ಆದರೆ ಮೊಸರಿನಲ್ಲಿರುವ ದೊರೆಯುವ ಬ್ಯಾಕ್ಟೀರಿಯಗಳಿಗೂ ಗ್ರೀಕ್‌ ಯೋಗರ್ಟ್‌ನಲ್ಲಿ ದೊರೆಯುವ ಬ್ಯಾಕ್ಟೀರಿಯಗಳಿಗೂ ವ್ಯತ್ಯಾಸವಿದೆ.
ಮಾಮೂಲಿ ಮೊಸರಿಗಿಂತ ಗ್ರೀಕ್‌ ಯೋಗರ್ಟ್‌ನಲ್ಲಿ ಪ್ರೊಟೀನ್‌ ಸಾಂದ್ರವಾಗಿದೆ. ಇದರಿಂದ ಸ್ನಾಯುಗಳನ್ನು ಬೆಳೆಸಲು, ದೇಹ ಹುರಿಗಟ್ಟಿಸಲು ಇದು ಯೋಗ್ಯವಾದ ಆಹಾರ. ಅದರಲ್ಲೂ ಸಸ್ಯಾಹಾರಿಗಳಿಗೆ ಪ್ರೊಟೀನ್‌ ಅಂಶವನ್ನು ಹೆಚ್ಚಿಸಿಕೊಳ್ಳಲು ಇದು ಉತ್ತಮ ಆಯ್ಕೆ. ಇದರಲ್ಲಿರುವ ನೀರಿನಂಶವನ್ನು ತೆಗೆಯಲಾದ್ದರಿಂದ, ಮಾಮೂಲಿ ಮೊಸರಿಗಿಂತ ಕೊಂಚ ಕಡಿಮೆ ಪ್ರಮಾಣದಲ್ಲಿ ಕ್ಯಾಲ್ಶಿಯಂ ಅಂಶ ಇರುತ್ತದೆ.
ಉಳಿದಂತೆ ವಿಟಮಿನ್‌ಗಳು, ಖನಿಜಗಳು ಇದರಲ್ಲೂ ಇವೆ. ಆದರೆ ಸಾಂದ್ರತೆ ಮಾಮೂಲಿ ಮೊಸರಿಗಿಂತ ಕೊಂಚ ಭಿನ್ನವಾಗಿರುತ್ತದೆ. ಇದರಲ್ಲಿ ಸಕ್ಕರೆಯಂಶ ಮತ್ತು ಪಿಷ್ಟವೂ ಕಡಿಮೆ. ಹಾಗಾಗಿ ತೂಕ ಇಳಿಸುವ ಉದ್ದೇಶ ಇರುವವರಿಗೆ ಇದು ಒಳ್ಳೆಯ ಆಯ್ಕೆ. ಲ್ಯಾಕ್ಟೋಸ್‌ ತಿಂದರೆ ಸಮಸ್ಯೆ ಆಗುತ್ತದೆ ಎನ್ನುವವರಿಗೆ ಮಾಮೂಲಿ ಮೊಸರಿಗಿಂತ ಗ್ರೀಕ್‌ ಯೋಗರ್ಟ್‌ ಒಳ್ಳೆಯದು.

ಇದನ್ನೂ ಓದಿ: Health Tips: ನಮ್ಮ ದೇಹಕ್ಕೆ ಪ್ರೊಟೀನ್‌ ಪುಷ್ಟಿ ನೀಡಲು ಯಾವ ಮೊಳಕೆ ಕಾಳುಗಳು ಸೂಕ್ತ?

Continue Reading
Advertisement
Suraj Revanna Case
ಕರ್ನಾಟಕ8 mins ago

Suraj Revanna Case:  ಸಲಿಂಗ ಕಾಮ ಆರೋಪ; ಸಂತ್ರಸ್ತನ ವೈದ್ಯಕೀಯ ಪರೀಕ್ಷೆ ಬಳಿಕ ಇಂದೇ ಅರೆಸ್ಟ್‌ ಆಗ್ತರಾ ಸೂರಜ್‌ ರೇವಣ್ಣ?

Empty Stomach Foods
ಆರೋಗ್ಯ47 mins ago

Empty Stomach Foods: ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ತಿನ್ನಬೇಡಿ!

karnataka weather Forecast
ಮಳೆ1 hour ago

Karnataka Weather : ಕರಾವಳಿ, ಮಲೆನಾಡಿಗೆ ಗುಡುಗು ಸಹಿತ ಭಾರಿ ಮಳೆ; 9 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

Menopausal Weight Gain
ಆರೋಗ್ಯ2 hours ago

Menopausal Weight Gain: ಋತುಚಕ್ರ ನಿಂತ ಬಳಿಕ ತೂಕ ಹೆಚ್ಚುವುದನ್ನು ತಡೆಯಬಹುದೇ?

Vastu Tips
ಧಾರ್ಮಿಕ2 hours ago

Vastu Tips: ತಿಳಿದಿರಲಿ, ಕನ್ನಡಿಯೂ ನುಡಿಯುತ್ತದೆ ನಮ್ಮ ಭವಿಷ್ಯ!

Virat kohli
ಪ್ರಮುಖ ಸುದ್ದಿ3 hours ago

Virat Kohli : ಐಸಿಸಿ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿ ವಿಶೇಷ ಮೈಲುಗಲ್ಲು ಸ್ಥಾಪಿಸಿದ ವಿರಾಟ್​ ಕೊಹ್ಲಿ

Dina bhavishya
ಭವಿಷ್ಯ3 hours ago

Dina Bhavishya : ಈ ರಾಶಿಯವರು ಮಡದಿಯ ಪ್ರೀತಿಗೆ ಸೋಲುವಿರಿ; ಮನೆಯಲ್ಲಿ ಸಂತೋಷದ ದಿನ

NEET UG
ಪ್ರಮುಖ ಸುದ್ದಿ8 hours ago

NEET UG : ನೀಟ್​ ಪರೀಕ್ಷೆ ಅಕ್ರಮಗಳ ತನಿಖೆ ಹೊಣೆ ಸಿಬಿಐಗೆ ಒಪ್ಪಿಸಿದ ಕೇಂದ್ರ ಸರ್ಕಾರ

T20 world cup 2024
ಪ್ರಮುಖ ಸುದ್ದಿ8 hours ago

T20 World Cup 2024 : ಬಾಂಗ್ಲಾದೇಶ ವಿರುದ್ಧ ಭಾರತಕ್ಕೆಭರ್ಜರಿ 50 ರನ್​ಗಳ ಭರ್ಜರಿ ಗೆಲುವು

Mangalya chain was stolen by pretending to be a police in Shira
ಕರ್ನಾಟಕ9 hours ago

Theft Case: ಶಿರಾದಲ್ಲಿ ಪೊಲೀಸರಂತೆ ನಟಿಸಿ ಮಹಿಳೆಯ ಮಾಂಗಲ್ಯ ಕಳವು!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ2 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ3 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು6 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು6 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ7 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ7 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ7 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌