Day Care Centre | ಮಕ್ಕಳ ಪಾಲನೆಗೆ ಮೊದಲ ʻಸರ್ಕಾರಿ ಡೇ ಕೇರ್ ಸೆಂಟರ್ʼ ಆರಂಭ - Vistara News

ಆರೋಗ್ಯ

Day Care Centre | ಮಕ್ಕಳ ಪಾಲನೆಗೆ ಮೊದಲ ʻಸರ್ಕಾರಿ ಡೇ ಕೇರ್ ಸೆಂಟರ್ʼ ಆರಂಭ

ನಾವೆಲ್ಲರೂ ಖಾಸಗಿ ಡೇ ಕೇರ್‌ಗಳನ್ನು (Day Care Centre) ನೋಡಿರುತ್ತೇವೆ. ಆದರೆ ನಮ್ಮ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರಿ ಡೇ ಕೇರ್ ಸೆಂಟರ್ ಆರಂಭ ಮಾಡಲಾಗಿದೆ. ಇಷ್ಟಕ್ಕೂ ಈ ಡೇ ಕೇರ್ ಸೆಂಟರ್‌ ಯಾರಿಗಾಗಿ? ಎಲ್ಲಿದೆ ಈ ಸೆಂಟರ್‌ ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

health department
ಸಾಂದರ್ಭಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯ ಸರ್ಕಾರ ಇದೇ ಮೊದಲ‌ ಬಾರಿಗೆ ಆರೋಗ್ಯ ಸಿಬ್ಬಂದಿಗಳಿಗಾಗಿ ಡೇ ಕೇರ್ ಸೆಂಟರ್ (Day Care Centre) ನಿರ್ಮಾಣ ಮಾಡಿದೆ. ನಗರದ ಮಾಗಡಿ ರಸ್ತೆಯಲ್ಲಿರುವ ಆರೋಗ್ಯ ಸೌಧದ ಅಧಿಕಾರಿ ಮತ್ತು ಸಿಬ್ಬಂದಿಯ ಮಕ್ಕಳ ಲಾಲನೆ, ಪಾಲನೆಗೆ ಡೇ ಕೇರ್ ಸೆಂಟರ್ ನಿರ್ಮಾಣ ಮಾಡಿದ್ದಾರೆ.

ವಿನೂತನ ಶೈಲಿಯ ನೆಲದ ಹಾಸಿಗೆ, ರಬ್ಬರ್ ಮ್ಯಾಟ್, ಡೈನಿಂಗ್ ಟೇಬಲ್, ಜಾರು ಬಂಡಿ, ಬಾಸ್ಕೆಟ್ ಬಾಲ್ ಹಾಗೂ ಅಂಬೆಗಾಲಿಡುವ ಮಕ್ಕಳಿಂದ ಪ್ರಾಥಮಿಕ ಶಾಲೆ ಪ್ರವೇಶಿಸುವ ವಿದ್ಯಾರ್ಥಿ ಹಂತದವರೆಗೆ ಆಟಿಕೆ ವಸ್ತುಗಳ ಜತೆಗೆ ಉಪಚಾರಕ್ಕಾಗಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಉಚಿತ ಡೇ ಕೇರ್‌ ಸೆಂಟರ್‌
ಆರೋಗ್ಯ ಇಲಾಖೆಯ ಮಹಿಳಾ ಸಿಬ್ಬಂದಿ ಡೇ ಕೇರ್ ಸೆಂಟರ್ ಮಾಡಿರುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಈ ಹಿಂದೆಲ್ಲ ಮಕ್ಕಳನ್ನು ಖಾಸಗಿ ಡೇ ಕೇರ್ ಸೆಂಟರ್‌ನಲ್ಲಿ ಬಿಟ್ಟು ಬರುತ್ತಿದ್ದೀವಿ. ಆಗ ಮನಸ್ಸೆಲ್ಲ ಮಕ್ಕಳ ಮೇಲೆ ಇರುತ್ತಿತ್ತು, ಆತಂಕವೂ ಇರುತ್ತಿತ್ತು. ಅಲ್ಲದೆ ಒಂದು‌ ತಿಂಗಳಿಗೆ 5 ಸಾವಿರ ರೂ. ವ್ಯಯಿಸಬೇಕಿತ್ತು. ಆದರೆ, ಆರೋಗ್ಯ ಇಲಾಖೆ ಹಾಗೂ ಸರ್ಕಾರ ನಮಗೆ ಉಚಿತವಾಗಿ ಡೇ ಕೇರ್ ಮಾಡಿ ಕೊಟ್ಟಿದ್ದಾರೆ. ನಮ್ಮ ಮಕ್ಕಳು ತಂದೆ-ತಾಯಿ ಜತೆ ಬೆರೆಯಲು, ಬೆಳೆಯಲು ಅನುವಾಗಲಿದೆ ಎಂದು ಆರೋಗ್ಯ ಸಿಬ್ಬಂದಿ ಸುಜಾತ ತಿಳಿಸಿದ್ದಾರೆ.

ಆರೋಗ್ಯ ಇಲಾಖೆಯ ಈ ಹೊಸ ಪ್ರಯೋಗಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಕ್ಕಳ ಲಾಲನೆ, ಪಾಲನೆಗೆ ಸೂಕ್ತ ಸೌಲಭ್ಯ ಕಲ್ಪಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಇಂತಹ ಕೇಂದ್ರಗಳು ಅಗತ್ಯವಾಗಿವೆ. ಉದ್ಯೋಗದಲ್ಲಿರುವ ದಂಪತಿಗೆ, ಅದರಲ್ಲೂ ನಿರ್ದಿಷ್ಟವಾಗಿ ಹತ್ತು ವರ್ಷ ವಯೋಮಿತಿಯೊಳಗಿನ ಮಕ್ಕಳನ್ನು ಹೊಂದಿರುವ ಪಾಲಕರಿಗೆ ಈ ವ್ಯವಸ್ಥೆ ಅನುಕೂಲವಾಗಿದೆ.

ಇದನ್ನೂ ಓದಿ | Kangaroo care | ಅವಧಿಪೂರ್ವದಲ್ಲಿ ಜನಿಸಿದ ಮಗುವಿಗೆ ಬೆಚ್ಚಗಿನ ಅಪ್ಪುಗೆ: ವಿಶ್ವ ಆರೋಗ್ಯ ಸಂಸ್ಥೆ ಸೂಚನೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಲೈಫ್‌ಸ್ಟೈಲ್

Sleep After Lunch: ಊಟದ ನಂತರ ನಮಗೆ ಆಕಳಿಕೆ, ನಿದ್ದೆ ಬರುವುದೇಕೆ?

Sleep after Lunch: ಮಧ್ಯಾಹ್ನ ವಿಪರೀತ ಹಸಿವಾಗುತ್ತದೆ. ಹಸಿವು ಅಂತ ಚೆನ್ನಾಗಿ ಊಟ ಮಾಡಿದರೆ ಆಕಳಿಕೆ ಬಂದು ನಿದ್ದೆ ಆವರಿಸುತ್ತದೆ. ಹೀಗೆ ಊಟದ ನಂತರ ಕಾಲು ಚಾಚಿ ಮೈ ಚೆಲ್ಲಬೇಕೆಂಬ ಬಯಕೆ ಬಹಳಷ್ಟು ಜನರಿಗೆ ಬರುತ್ತದೆ. ಊಟದ ನಂತರ ಕಣ್ಣೆಳೆದು ನಿದ್ದೆ ಬರುವಂತಾಗುವುದೇಕೆ? ಉಂಡಿದ್ದಕ್ಕೇ ದಣಿವಾಗುವುದೇಕೆ? ಇಲ್ಲಿದೆ ಅದಕ್ಕೆ ಕಾರಣಗಳ ವಿವರ.

VISTARANEWS.COM


on

Sleep After Lunch
Koo

ಈಗಷ್ಟೇ ಮಧ್ಯಾಹ್ನದ ಊಟ ಮುಗಿಸಿ (Sleep after Lunch) ಬಂದು ಆಫೀಸ್‌ನಲ್ಲಿ ಕುಳಿತಿದ್ದೀರಿ. ಅಲ್ಲಿಯವರೆಗೆ ಇಲ್ಲದ್ದು ಇದ್ದಕ್ಕಿದ್ದಂತೆ ಗಂಟು ಬೀಳುತ್ತದೆ- ಆಕಳಿಕೆ! ಹತ್ತಿಪ್ಪತ್ತು ಸಾರಿ ಆಕಳಿಸುವಷ್ಟರಲ್ಲಿ, ಮೆಲ್ಲಗೆ ತೂಕಡಿಕೆ ಆವರಿಸುತ್ತದೆ. ಎಷ್ಟು ಪ್ರಯತ್ನಿಸಿದರೂ ಕಣ್ಣು ತೆರೆದು ಕೂರುವುದಕ್ಕೇ ಆಗುತ್ತಿಲ್ಲ. ಸಣ್ಣದೊಂದು ಕೋಳಿ ನಿದ್ದೆ ಮಾಡಿದ ಮೇಲೆಯೇ ಈ ಅವಸ್ಥೆಯಿಂದ ಬಿಡುಗಡೆ ಅನಿಸಬಹುದು. ಕೂತಲ್ಲೇ ತೂಕಡಿಸಿ ನಿದ್ದೆ ತೆಗೆಯುವ ಸಾಮರ್ಥ್ಯ ಇದ್ದರೆ ಸರಿ, ಇಲ್ಲದಿದ್ದರೆ? ಫಜೀತಿ ತಪ್ಪಿದ್ದಲ್ಲ. ಹೀಗೆ ಊಟದ ನಂತರ ಕಾಲು ಚಾಚಿ ಮೈ ಚೆಲ್ಲಬೇಕೆಂಬ ಬಯಕೆ ಬಹಳಷ್ಟು ಜನರಿಗೆ ಬರುತ್ತದೆ. ಊಟದ ನಂತರ ಕಣ್ಣೆಳೆದು ನಿದ್ದೆ ಬರುವಂತಾಗುವುದೇಕೆ? ಉಂಡಿದ್ದಕ್ಕೇ ದಣಿವಾಗುವುದೆಂದರೆ! ಇದಕ್ಕೆ ಕಾರಣಗಳು ಇಲ್ಲಿವೆ.

Asian man is sleeping snoring

ಏಕೆ ಹೀಗೆ?

ಗಡದ್ದು ಊಟದ ನಂತರ ನಿದ್ದೆ ಬರುವುದಕ್ಕೆ ಕಾರಣಗಳು ಇಲ್ಲದಿಲ್ಲ. ದೇಹದಲ್ಲಿ ಹೆಚ್ಚುವ ಸೆರೋಟೀನಿನ್‌ ಎಂಬ ಅಂಶವೇ ಇದಕ್ಕೆ ಕಾರಣ. ವಿವರವಾಗಿ ಹೇಳುವುದಾದರೆ, ಪಿಷ್ಟ ಮತ್ತು ಪ್ರೊಟೀನ್‌ ಅಂಶಗಳು ಹೆಚ್ಚಿರುವಂಥ ಆಹಾರಗಳು ಸಾಮಾನ್ಯವಾಗಿ ನಿದ್ದೆ ಬರಿಸುತ್ತವೆ. ಕಾರಣ ಪ್ರೊಟೀನ್‌ಭರಿತ ಆಹಾರಗಳಲ್ಲಿ ಟ್ರಿಪ್ಟೋಫ್ಯಾನ್‌ ಎಂಬ ಅಮೈನೊ ಆಮ್ಲಗಳು ಧಾರಾಳವಾಗಿ ಇರುತ್ತವೆ. ಈ ಅಮೈನೊ ಆಮ್ಲಗಳಿಂದ ಸೆರೋಟೋನಿನ್‌ ಎನ್ನುವ ಹ್ಯಾಪಿ ಹಾರ್ಮೋನು ಬಿಡುಗಡೆ ಆಗುತ್ತದೆ. ನಮ್ಮ ಮೂಡ್‌ ಬದಲಾವಣೆ, ನಿದ್ದೆ ಮುಂತಾದ ಬಹಳಷ್ಟು ವಿಷಯಗಳ ಮೇಲೆ ಇದು ಪ್ರಭಾವ ಬೀರುತ್ತದೆ. ಈ ಸೆರೋಟೋನಿನ್‌ ಹೀರಿಕೊಳ್ಳುವುದಕ್ಕೆ ಪಿಷ್ಟಭರಿತ ಆಹಾರಗಳು ಪ್ರೋತ್ಸಾಹ ನೀಡುತ್ತವೆ. ಗಡದ್ದು ಊಟದ ನಂತರ ನಿದ್ದೆ ಬರುವುದಕ್ಕೆ ಇಷ್ಟು ಸಾಲದೇ?

ಯಾವ ಆಹಾರಗಳು?

ಪ್ರೊಟೀನ್‌ ಹೆಚ್ಚಿರುವಂಥ ಮೊಟ್ಟೆ, ಚಿಕನ್‌, ಹಾಲು, ಮೊಸರಿನಂಥ ಡೇರಿ ಉತ್ಪನ್ನಗಳು, ಸೋಯ್‌ ಉತ್ಪನ್ನಗಳು, ಮೀನು, ಬೀಜಗಳು ಇತ್ಯಾದಿ ಆಹಾರಗಳಲ್ಲಿ ಟ್ರಿಪ್ಟೊಫ್ಯಾನ್‌ ಅಮೈನೊ ಆಮ್ಲ ಹೆಚ್ಚಾಗಿರುತ್ತದೆ. ಪಿಷ್ಟ ಹೆಚ್ಚಾಗಿರುವ ಆಹಾರಗಳೆಂದರೆ- ಅನ್ನ, ಚಪಾತಿ, ಬ್ರೆಡ್‌, ಪಾಸ್ತಾ, ಯಾವುದೇ ಸಿಹಿ ತಿಂಡಿಗಳು, ಕೇಕ್‌ನಂಥ ಬೇಕ್‌ ಮಾಡಿದ ತಿನಿಸುಗಳು, ಆಲೂಗಡ್ಡೆ ಮತ್ತು ಗೆಣಸಿನಂಥ ಗಡ್ಡೆಗಳು. ಇವುಗಳ ಮಿಶ್ರಣ ಆಹಾರದಲ್ಲಿದ್ದರೆ, ಊಟದ ನಂತರ ಕಣ್ಣೆಳೆಯುವುದು ಖಚಿತ. ಹಳೆಯ ಕಾಲದಲ್ಲಿ ಮಕ್ಕಳಿಗೆ ಮಲಗುವಾಗ ಹಾಲು ಕುಡಿಸುವ ಕ್ರಮದ ಹಿಂದೆಯೂ ಇಂಥದ್ದೇ ಕಾರಣಗಳು ಇರಬಹುದು.

ಎಷ್ಟು ತಿನ್ನುತ್ತೀರಿ?

ಆಹಾರವನ್ನು ತಿನ್ನುವ ಪ್ರಮಾಣ ಎಷ್ಟು ಎನ್ನುವುದು ಸಹ ಮುಖ್ಯವಾಗುತ್ತದೆ. ಭೂರಿ ಭೋಜನದ ನಂತರ ನಿದ್ದೆಯನ್ನು ತಪ್ಪಿಸುವುದು ಕಷ್ಟ. ಭರ್ಜರಿ ಊಟದ ನಂತರ ರಕ್ತದಲ್ಲಿನ ಸಕ್ಕರೆ ಅಂಶಗಳೂ ಏರಿಳಿತವಾಗಿ ಆಯಾಸದ ಅನುಭವ ಆಗಬಹುದು, ನಿದ್ದೆ ಬೇಕೆನಿಸಬಹುದು. ಆದರೆ ಊಟದ ಪ್ರಾರಂಭದಲ್ಲಿ ಒಂದಿಷ್ಟು ಸಲಾಡ್‌ಗಳನ್ನು ತಿನ್ನುವುದರಿಂದ, ಅತಿಯಾಗಿ ಊಟ ಮಾಡುವುದನ್ನು ತಪ್ಪಿಸಬಹುದು. ಸಲಾಡ್‌ಗಳು ಒಮ್ಮೆ ಹೊಟ್ಟೆ ತುಂಬಿದ ಅನುಭವ ನೀಡಿದರೂ, ನಂತರ ದೀರ್ಘ ಕಾಲದವರೆಗೆ ಹೊಟ್ಟೆ ಭಾರವಾದ ಅನುಭವವನ್ನು ನೀಡುವುದಿಲ್ಲ. ಅದರಿಂದಾಗಿ ಮಧ್ಯಾಹ್ನದ ತೂಕಡಿಕೆಯನ್ನು ತಡೆಯಲು ಸಾಧ್ಯವಾಗುತ್ತದೆ. ಹಾಗಾಗಿ ಮಧ್ಯಾಹ್ನದ ಊಟ ಮಿತವಾಗಿರುವುದು ಅಗತ್ಯ.

Health Tips Kannada sleepy is good

ನಿದ್ದೆ

ರಾತ್ರಿಯ ಹೊತ್ತು ಸರಿಯಾಗಿ ನಿದ್ದೆಯಿಲ್ಲವೇ? ಮಧ್ಯಾಹ್ನ ತೂಕಡಿಕೆ ಬೆನ್ನುಹತ್ತುವುದು ನಿಶ್ಚಿತ. ಹಾಗಾಗಿ ರಾತ್ರಿ ಕಣ್ತುಂಬಾ ನಿದ್ರಿಸಲು ಆದ್ಯತೆ ನೀಡಿ. ಸಾಮಾನ್ಯವಾಗಿ 7 ತಾಸುಗಳ ರಾತ್ರಿಯ ನಿದ್ದೆಯಿಂದ ಹಗಲು ಹೊತ್ತಿನ ಆಯಾಸವನ್ನು ತಪ್ಪಿಸಲು ಸಾಧ್ಯವಿದೆ. ಇಷ್ಟಾಗಿಯೂ ನಿದ್ದೆ ತಡೆಯಲು ಆಗುತ್ತಿಲ್ಲವೆಂದರೆ, ಹತ್ತು ನಿಮಿಷಗಳಿಗೆ ಅಲರಾಂ ಇಟ್ಟು ನಿದ್ರಿಸಿ. ಈ ಕಿರು ನಿದ್ರೆ ಚೈತನ್ಯವನ್ನು ನೀಡಬಲ್ಲದು.

ಇದನ್ನೂ ಓದಿ: Mouth Sleeping: ನಿದ್ದೆಯಲ್ಲಿದ್ದಾಗ ಬಾಯಿಯಿಂದ ಉಸಿರಾಡುತ್ತೀರಾ? ಹಾಗಾದರೆ ಮುಂದೆ ಸಮಸ್ಯೆಯಾಗಬಹುದು!

ಉಪಾಯಗಳು ಬೇರೆಯೂ ಇವೆ

ಊಟದ ನಂತರ ಹತ್ತಿಪ್ಪತ್ತು ನಿಮಿಷಗಳ ಲಘು ನಡಿಗೆ ನೆರವಾಗುತ್ತದೆ. ಕೊಂಚ ತಾಜಾ ಗಾಳಿ, ಬೆಳಕು ಮೈಸೋಕಿದಾಗಲೂ ನಿದ್ದೆಯನ್ನು ದೂರ ಓಡಿಸಬಹುದು. ಹಾಗೆಂದು ಬಿರು ಬಿಸಿಲಿನಲ್ಲಿ ವಾಕಿಂಗ್‌ ಮಾಡಿದರೆ ತೂಕಡಿಕೆ ಹೆಚ್ಚಲೂಬಹುದು, ಜಾಗ್ರತೆ! ಊಟದ ಜೊತೆಗೆ ಆಲ್ಕೊಹಾಲ್‌ ಸೇವನೆ ಬೇಡ. ಇದು ಸಮಸ್ಯೆಯನ್ನು ಬಿಗಡಾಯಿಸುತ್ತದೆ. ಊಟದ ನಂತರದ ನಿದ್ದೆಯನ್ನು ತಡಯುವುದಕ್ಕೆಂದೇ, ಆ ಹೊತ್ತಿನಲ್ಲಿ ಒಂದು ಖಡಕ್‌ ಚಹಾ ಅಥವಾ ಸ್ಟ್ರಾಂಗ್‌ ಕಾಫಿ ಕುಡಿಯುವವರು ಬಹಳ ಜನರಿದ್ದಾರೆ.

Continue Reading

ಬೆಳಗಾವಿ

Contaminated Water : ಬೆಳಗಾವಿ, ಕೋಲಾರದಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಸಾವು

Polluted Water: ಕನಸಗೇರಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡಿದ್ದವರಲ್ಲಿ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇತ್ತ ಕೋಲಾರದಲ್ಲಿ ಕಲುಷಿತ ನೀರು ಕುಡಿದ ವೃದ್ಧರೊಬ್ಬರು (Contaminated Water) ಅಸುನೀಗಿದ್ದಾರೆ.

VISTARANEWS.COM


on

By

contaminated water
Koo

ಬೆಳಗಾವಿ: ಕಲುಷಿತ ನೀರು ಸೇವಿಸಿ ಮಹಿಳೆಯೊಬ್ಬರು (Contaminated Water) ಮೃತಪಟ್ಟಿದ್ದಾರೆ. ಹೊಳೆವ್ವಾ ಬಾಳಪ್ಪ ಧನದವರ (38) ಮೃತ ದುರ್ದೈವಿ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕನಸಗೇರಿ ಗ್ರಾಮದಲ್ಲಿ ಘಟನೆ ನಡೆದಿದೆ.

ಕನಸಗೇರಿ ಗ್ರಾಮದಲ್ಲಿ ಬಾವಿಯ ನೀರು ಸೇವಿಸಿ ಸುಮಾರು ಹತ್ತು ಮಂದಿ ಅಸ್ವಸ್ಥಗೊಂಡಿದ್ದರು. ನಿನ್ನೆ ಸಂಜೆ ಭಾನುವಾರ ಹೊಳೆವ್ವಾ ಬಾಳಪ್ಪ ಅವರಿಗೆ ವಾಂತಿಭೇದಿ ಕಾಣಿಸಿಕೊಂಡು ತೀವ್ರ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದರು.

ಸ್ಥಳಕ್ಕೆ ಡಿಎಚ್ಒ ಮಹೇಶ್ ಕೋಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಕುಟುಂಬಸ್ಥರಿಂದ ಮಾಹಿತಿ ಪಡೆದು ಸಾಂತ್ವನ ಹೇಳಿದರು. ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕೂಡ ಪರಿಶೀಲನೆ ನಡೆಸಿ, ಇದೇ ವೇಳೆ ಅಸ್ವಸ್ಥಗೊಂಡವರ ಆರೋಗ್ಯವನ್ನು ವಿಚಾರಿಸಿದರು.

ಇದನ್ನೂ ಓದಿ: Road Accident : ಚಲಿಸುತ್ತಿದ್ದಾಗಲೇ ಆಂಬ್ಯುಲೆನ್ಸ್‌ ಟಯರ್‌ ಬ್ಲಾಸ್ಟ್‌; ಬೈಕ್‌ನಿಂದ ಸ್ಕಿಡ್ ಆಗಿ ಬಿದ್ದು ವ್ಯಕ್ತಿ ಸಾವು

ಕೋಲಾರದಲ್ಲಿ ವೃದ್ಧ ಸಾವು

ವೃದ್ಧರೊಬ್ಬರು ಮನೆಯಲ್ಲೇ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ವೆಂಕಟರಮಣಪ್ಪ (60) ಮೃತದುರ್ದೈವಿ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಿಣಜೇನಹಳ್ಳಿಯಲ್ಲಿ ಘಟನೆ ನಡೆದಿದೆ. ಕಲುಷಿತ ನೀರು ಸೇವಿಸಿದ್ದರಿಂದಲೇ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇದಕ್ಕೆ ಪುಷ್ಠಿ ನೀಡುವಂತೆ ಗ್ರಾಮದಲ್ಲಿ 5 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಪಂಚಾಯಿತಿಯಿಂದಲೇ ಮನೆ ಮನೆಗೂ ನೀರು ಬಿಡುಗಡೆ ಆಗಿದ್ದು, ಆ ನೀರು ಸೇವಿಸಿಯೇ ವೃದ್ಧ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಊರುಕುಂಟೆ ಮಿಟ್ಟೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Dengue Fever : ಬಿಬಿಎಂಪಿ ಆಯುಕ್ತರಿಗೂ ಡೆಂಗ್ಯೂ; ಬೆಂಗಳೂರಲ್ಲಿ 1,230 ಮಂದಿಗೆ ಫೀವರ್‌!

Dengue Fever : ರಾಜ್ಯದಲ್ಲಿ ಡೆಂಗ್ಯೂ ಹೆಚ್ಚಾಗುತ್ತಿದ್ದು, ಜನರು ಮುನ್ನೆಚ್ಚರಿಕೆಯನ್ನು ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಬೆಂಗಳೂರಲ್ಲಿ ಬಿಬಿಎಂಪಿ ಆಯುಕ್ತರು ಸೇರಿ ಸಾವಿರಕ್ಕೂ ಹೆಚ್ಚು ಮಂದಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ.

VISTARANEWS.COM


on

By

Dengue fever rises across the state including Bengaluru BBMP Commissioner also get fever
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಮಳೆ ಶುರುವಾದರೆ ಸಾಕು ಇದರ ಜತೆಗೆ ಸೊಳ್ಳೆಗಳ ಕಾಟವೂ ಹೆಚ್ಚಲಿದೆ. ಇದೇ ಋತುವಿನಲ್ಲಿ ಡೆಂಗ್ಯೂ ಜ್ವರ (Dengue Fever) ಹೆಚ್ಚಳ ಆಗುವುದರಿಂದ ಎಚ್ಚರ ವಹಿಸುವುದು ಅತಿ ಅವಶ್ಯಕ. ಸದ್ಯ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಡೆಂಗ್ಯೂ ಭೀತಿ ಹೆಚ್ಚಾಗಿದೆ. ಬೆಂಗಳೂರಿನ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರಿಗೂ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ನಾಲ್ಕು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡು, ಡೆಂಗ್ಯೂ ಧೃಡಪಟ್ಟಿದೆ.

ಹವಾಮಾನ ವೈಪರೀತ್ಯ ಮತ್ತು ಮಳೆಯಿಂದಾಗಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿದೆ. 2022ರಲ್ಲಿ ರಾಜ್ಯದಲ್ಲಿ 7,317 ಡೆಂಗ್ಯೂ ಜ್ವರ (Dengue fever) ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ನಾಲ್ವರು ಮೃತಪಟ್ಟಿದ್ದರು. 2023ರಲ್ಲಿ 2003 ಪ್ರಕರಣಗಳು ವರದಿಯಾಗಿದ್ದವು. 2024ರಲ್ಲಿ ಈ ವರೆಗೆ (ಜೂನ್‌) 85,365 ಶಂಕಿತವಾಗಿದ್ದು, ಇದರಲ್ಲಿ 37,144 ಮಂದಿಯ ರಕ್ತ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಆ ಪ್ರಕಾರ 3,957 ಮಂದಿಗೆ ಡೆಂಗ್ಯೂ ಜ್ವರ ದೃಢಪಟ್ಟಿದೆ. ಬೆಂಗಳೂರಲ್ಲಿ 1230 ಮಂದಿಗೆ ಡೆಂಗ್ಯೂ ಜ್ವರ ಕಂಡು ಬಂದಿದೆ. ಈವರೆಗೆ ಡೆಂಗ್ಯೂನಿಂದ ಮೃತಪಟ್ಟ ವರದಿ ಆಗಿಲ್ಲ.

ಇದನ್ನೂ ಓದಿ: Empty Stomach Foods: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಉತ್ತಮ!

Dengue fever rises across the state including Bengaluru BBMP Commissioner also get fever

ಡೆಂಗ್ಯೂ ಹೇಗೆ ಹರಡುತ್ತದೆ?

ಡೆಂಗ್ಯೂ ಜ್ವರ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು ಆಗಿದೆ. ಇದು ಈಡಿಪಸ್‌ ಎಂಬ ಹೆಣ್ಣು ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಸೊಳ್ಳೆ ಕಚ್ಚಿದ 4-7 ದಿನಗಳ ನಂತರ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಇದರ ಪ್ರಭಾವ 10 ದಿನಗಳವರೆಗೆ ಇರುತ್ತದೆ. ಹೀಗಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು ಉತ್ತಮವಾಗಿದೆ.

ಡೆಂಗ್ಯೂ ಜ್ವರ ತಲೆನೋವಿನಂತಹ ರೋಗಲಕ್ಷಣಗಳನ್ನು ಉಂಟು ಮಾಡಬಹುದು. ಡೆಂಗ್ಯೂವನ್ನು ಹೆಮರಾಜಿಕ್ ಜ್ವರ ಎಂದೂ ಕರೆಯಲಾಗುತ್ತದೆ. ಡೆಂಗ್ಯೂ ಜ್ವರದ ತೀವ್ರ ಸ್ವರೂಪವು ತೀವ್ರ ರಕ್ತಸ್ರಾವ, ರಕ್ತದೊತ್ತಡ ಹಾಗೂ ರಕ್ತಕಣಗಳ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿ ವ್ಯಕ್ತಿಯ ಸಾವಿಗೂ ಕಾರಣವಾಗಬಹುದು. ಅಧಿಕ ಜ್ವರ, ತೀವ್ರ ತಲೆನೋವು, ವಾಂತಿ, ದೇಹದ ವಿವಿಧ ಭಾಗಗಳಲ್ಲಿ ದದ್ದುಗಳು, ಗ್ರಂಥಿಗಳಲ್ಲಿ ಊತ, ಮೂಳೆ ಮತ್ತು ಕೀಲು ನೋವು, ರಕ್ತಸ್ರಾವವಾಗವುದು ರೋಗ ಲಕ್ಷಣಗಳಾಗಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆಹಾರ/ಅಡುಗೆ

Empty Stomach Foods: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಉತ್ತಮ!

Empty Stomach Foods: ಬೆಳಗ್ಗೆ ಒಳ್ಳೆಯ ಆಹಾರ ತಿಂದರೆ, ಸಹಜವಾಗಿಯೇ ಇಡೀ ದಿನ ನಿಮ್ಮ ದೇಹ ಉಲ್ಲಸಿತವಾಗಿರುತ್ತದೆ. ಇಲ್ಲವಾದರೆ, ಉತ್ಸಾಹ ಕಡಿಮೆಯಾಗುತ್ತದೆ. ದೇಹ ಬಳಸುತ್ತದೆ. ಉದಾಸೀನತೆ, ಮೈಗಳ್ಳತನ ಕಾಡುತ್ತದೆ. ನಿದ್ದೆ, ಸೋಮಾರಿತನ ಎಳೆಯುತ್ತದೆ. ದೇಹ ಚುರುಕಾಗಿರಬೇಕಾದರೆ, ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಏನು ತಿನ್ನಬೇಕು ಎಂಬುದು ನಮಗೆ ಗೊತ್ತಿರಬೇಕು. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Empty Stomach Foods
Koo

ಬೆಳಗ್ಗೆ ಎದ್ದ ಕೂಡಲೇ ಏನು ತಿನ್ನುತ್ತೇವೆ (Empty Stomach Foods) ಎಂಬುದರ ಮೇಲೆ ಇಡೀ ದಿನ ನಮ್ಮ ದೇಹ ಹೇಗಿರುತ್ತದೆ ಎಂಬುದು ಅವಲಂಬಿತವಾಗುತ್ತದೆ ಎಂಬುದು ತಿಳಿದವರ ಮಾತು. ಆರೋಗ್ಯದ ವಿಚಾರಕ್ಕೆ ಬಂದರೆ ಈ ಮಾತು ನೂರಕ್ಕೆ ನೂರರಷ್ಟು ಸತ್ಯ. ಯಾಕೆಂದರೆ, ಬೆಳಗ್ಗೆ ಒಳ್ಳೆಯ ಆಹಾರ ತಿಂದರೆ, ಸಹಜವಾಗಿಯೇ ಇಡೀ ದಿನ ನಿಮ್ಮ ದೇಹ ಉಲ್ಲಸಿತವಾಗಿರುತ್ತದೆ. ಇಲ್ಲವಾದರೆ, ಉತ್ಸಾಹ ಕಡಿಮೆಯಾಗುತ್ತದೆ. ದೇಹ ಬಳಸುತ್ತದೆ. ಉದಾಸೀನತೆ, ಮೈಗಳ್ಳತನ ಕಾಡುತ್ತದೆ. ನಿದ್ದೆ, ಸೋಮಾರಿತನ ಎಳೆಯುತ್ತದೆ. ದೇಹ ಚುರುಕಾಗಿರಬೇಕಾದರೆ, ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಏನು ತಿನ್ನಬೇಕು ಎಂಬುದು ನಮಗೆ ಗೊತ್ತಿರಬೇಕು. ಬಹಳಷ್ಟು ಮಂದಿ ಬೆಳಗ್ಗೆದ್ದ ಕೂಡಲೇ ಚಹಾದ ಮೊರೆ ಹೋಗುವುದು ಸಾಮಾನ್ಯವೇ ಆದರೂ, ಅದನ್ನು ಬಿಟ್ಟು ಒಳ್ಳೆಯ ಆಹಾರದತ್ತ ಗಮನ ಹರಿಸುವುದಿದ್ದರೆ, ನೀವು ಖಾಲಿ ಹೊಟ್ಟೆಯಲ್ಲಿ ಏನೇನೆಲ್ಲ ತಿಂದರೆ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ ಎಂದು ನೋಡೋಣ ಬನ್ನಿ.

Egg Protein Foods

ಮೊಟ್ಟೆ

ದಿನದ ಆರಂಭವನ್ನು ಮಾಡುವುದಿದ್ದಲ್ಲಿ ಮೊಟ್ಟೆ ಅತ್ಯುತ್ತಮ ಆಹಾರ. ಮೊಟ್ಟೆಯಲ್ಲಿ ಪ್ರೊಟೀನ್‌ ಸೇರಿದಂತೆ ದೇಹಕ್ಕೆ ಬೇಕಾದ ಬಹಳಷ್ಟು ಪೋಷಕಾಂಶಗಳು ಇವೆ. ದೇಹ ಜಡವಾಗಿದ್ದಾಗ, ಮಲಗಿ ಎದ್ದ ಕೂಡಲೇ ಚುರುಕುಗೊಳಿಸಲು, ಉಲ್ಲಾಸ ನೀಡಿ ತಕ್ಷಣ ಚಿಗಿತುಕೊಳ್ಳಲು ಮೊಟ್ಟೆ ಬಹಳ ಒಳ್ಳೆಯದು. ಬೇಯಿಸಿ, ಆಮ್ಲೆಟ್‌ ಮಾಡಿ, ಅಥವಾ ಇನ್ನಾವುದೇ ತಿನಿಸಿನ ರೂಪದಲ್ಲಿ ಅದನ್ನು ನೀವು ತಿನ್ನಬಹುದು. ಹಾಗಾಗಿ ಇದು ಒಂದು ಅತ್ಯುತ್ತಮವಾದ ಬ್ರೇಕ್‌ಫಾಸ್ಟ್‌ ಆಯ್ಕೆ.

Mixed Nuts and Seeds Weight Loss Snacks

ಬೀಜಗಳು

ಒಂದು ಮುಷ್ಟಿ ಒಂದು ಬೀಜಗಳನ್ನು ಬೆಳಗ್ಗೆ ಎದ್ದ ಕೂಡಲೇ ಬಾಯಿಗೆ ಹಾಕಿಕೊಳ್ಳುವುದು ಒಳ್ಳೆಯ ಅಭ್ಯಾಸ. ಇದು ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆಳಗ್ಗೆ ಬೇಕಾದ ಶಕ್ತಿಯನ್ನು ಇದು ಒಡನೆಯೇ ನೀಡುತ್ತದೆ. ರಾತ್ರಿ ಬೀಜಗಳನ್ನು ನೆನೆ ಹಾಕಿ ಬೆಳಗ್ಗೆ ಎದ್ದ ಕೂಡಲೇ ತಿನ್ನುವುದರಿಂದ ಬೀಜಗಳ ಎಲ್ಲ ಬಗೆಯ ಪೋಷಕಾಂಶಗಳ ಲಾಭವನ್ನೂ ದೇಹ ಪಡೆದುಕೊಳ್ಳುತ್ತದೆ.

Papaya Digestive Boosting Foods

ಪಪ್ಪಾಯಿ

ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ತಿನ್ನುವುದು ಕೂಡಾ ಒಳ್ಳೆಯದು. ಪಪ್ಪಾಯಿಯಲ್ಲಿ ಕಡಿಮೆ ಕ್ಯಾಲರಿಯಿದ್ದು, ಅತ್ಯಂತ ಹೆಚ್ಚು ಪೋಷಕಾಂಶಗಳನ್ನು ಹೊಂದಿದೆ. ಇದು ಹೊಟ್ಟೆ ಹಾಗೂ ಜೀರ್ಣಾಂಗವ್ಹೂಹಕ್ಕೆ ಒಳ್ಳೆಯದು. ತೂಕ ಇಳಿಸುವ ಮಂದಿಗೂ ಅತ್ಯಂತ ಒಳ್ಳೆಯದು.

Berries Abdominal Obesity

ಬೆರ್ರಿ

ಬೆಳಗಿನ ಖಾಲಿ ಹೊಟ್ಟೆಗೆ ಬೆರ್ರಿ ಹಣ್ಣುಗಳು ಉತ್ತಮ. ಬೆರ್ರಿ ಹಣ್ಣುಗಳಲ್ಲಿ ಹೆಚ್ಚು ನಾರಿನಂಶ ಇರುವುದರಿಂದ ಇದು ನಿಮ್ಮನ್ನು ಹೆಚ್ಚು ಹೊತ್ತು ಹೊಟ್ಟೆ ತುಂಬಿರುವಂತೆ ನೋಡಿಕೊಳ್ಳುತ್ತದೆ. ಕಡಿಮೆ ಕ್ಯಾಲರಿಯ ಆಹಾರ ಇದಾಗಿದ್ದು, ಸ್ವಲ್ಪ ಹೆಚ್ಚು ತಿಂದರೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಸ್ಟ್ರಾಬೆರ್ರಿ, ಬ್ಲೂಬೆರ್ರಿ ಮತ್ತಿರರ ಯಾವುದೇ ಬೆರ್ರಿ ವಿಧಗಳನ್ನು ಬೆಳಗ್ಗೆ ಸೇವಿಸುವುದು ಉತ್ತಮ.

Oats Vegetarian foods for stamina

ಓಟ್ಸ್‌

ಓಟ್ಸ್‌ ಅಥವಾ ಓಟ್‌ಮೀಲ್‌ ಬೆಳಗ್ಗೆ ತಿನ್ನುವುದು ಒಳ್ಳೆಯದು. ಇದರಲ್ಲೂ ನಾರಿನಂಶ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದ್ದು, ಹೊಟ್ಟೆ ತುಂಬಿಸಲು ಸರಿಯಾದ ಆಹಾರ. ಇದರ ಜೊತೆಗೆ ಒಣ ಬೀಜಗಳು ಹಾಗೂ ನಿಮ್ಮ ಇಷ್ಟ ಹಣ್ಣುಗಳನ್ನೂ ಸೇರಿಸಬಹುದು. ಸಕ್ಕರೆ ಸೇರಿಸದೆ, ಹಾಗೆಯೇ ಹಾಲಿನ ಜೊತೆಗೆ ಮಾಡಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ಗ್ಯಾಸ್‌, ಹೊಟ್ಟೆಯುಬ್ಬರ ಇತ್ಯಾದಿ ಸಮಸ್ಯೆಯಿರುವ ಮಂದಿಗೂ ಇದು ಒಳ್ಳೆಯದು.

ಇದನ್ನೂ ಓದಿ: Menopausal Weight Gain: ಋತುಚಕ್ರ ನಿಂತ ಬಳಿಕ ತೂಕ ಹೆಚ್ಚುವುದನ್ನು ತಡೆಯಬಹುದೇ?

Continue Reading
Advertisement
Crush Saree Fashion
ಫ್ಯಾಷನ್3 mins ago

Crush Saree Fashion: ಸೆಲೆಬ್ರೆಟಿ ಲುಕ್‌ ನೀಡುವ ಡಿಸೈನರ್‌ ಕ್ರಶ್‌ ಸೀರೆಗಳು

ಕರ್ನಾಟಕ7 mins ago

Renuka Swamy Murder: ರೇಣುಕಾಸ್ವಾಮಿ ಹತ್ಯೆ ಕೇಸ್‌ನ 4 ಆರೋಪಿಗಳು ತುಮಕೂರು ಜೈಲಿಗೆ ಶಿಫ್ಟ್; ಕಾರಣವೇನು?

union Minister Pralhad Joshi took oath in the name of God in his mother tongue
ಕರ್ನಾಟಕ16 mins ago

Pralhad Joshi: ಮಾತೃಭಾಷೆ, ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಚಿವ ಪ್ರಲ್ಹಾದ್‌ ಜೋಶಿ

Divisional Level Progress Review Meeting of Revenue Department by Minister Krishna Byregowda
ಕಲಬುರಗಿ22 mins ago

krishna byre gowda: ಪಹಣಿ-ಆಧಾರ್ ಲಿಂಕ್‌ ಮಾಡಲು ಜುಲೈಗೆ ಅಂತಿಮ ಗಡುವು; ಕೃಷ್ಣ ಬೈರೇಗೌಡ

Hardeep Singh Nijjar
ದೇಶ29 mins ago

Hardeep Singh Nijjar: ಪಾಕಿಸ್ತಾನಕ್ಕೂ ಭೇಟಿ ಕೊಟ್ಟಿದ್ದನಂತೆ ನಿಜ್ಜರ್‌; ಖಲಿಸ್ತಾನಿ ಉಗ್ರನ ಬಗ್ಗೆ ಮತ್ತಷ್ಟು ಭೀಕರ ಸಂಗತಿ ಬಯಲು

Sleep After Lunch
ಲೈಫ್‌ಸ್ಟೈಲ್33 mins ago

Sleep After Lunch: ಊಟದ ನಂತರ ನಮಗೆ ಆಕಳಿಕೆ, ನಿದ್ದೆ ಬರುವುದೇಕೆ?

R Ashok demands that the Congress apologize for imposing emergency
ಕರ್ನಾಟಕ40 mins ago

R Ashok: ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್‌ ಕ್ಷಮೆ ಕೋರಲಿ, ರಾಹುಲ್‌ ಗಾಂಧಿ ತಲೆಬಾಗಲಿ; ಆರ್‌. ಅಶೋಕ್‌

Viral Video
Latest47 mins ago

Viral Video: ರೀಲ್ಸ್ ಮಾಡಲು ಹೋದ ವಿದ್ಯಾರ್ಥಿನಿಗೆ ಕೊನೆಗೆ ಆಗಿದ್ದೇನು? ವಿಡಿಯೊ ನೋಡಿ

JP Nadda
ದೇಶ53 mins ago

JP Nadda: ರಾಜ್ಯಸಭೆ ಸದನ ನಾಯಕರಾಗಿ ಜೆ.ಪಿ. ನಡ್ಡಾ ಆಯ್ಕೆ; ಪಿಯೂಷ್‌ ಗೋಯಲ್‌ ಬದಲು ನೇಮಕ

LKG UKG in Anganwadis
ಪ್ರಮುಖ ಸುದ್ದಿ53 mins ago

LKG UKG in Anganwadis: ಅಂಗನವಾಡಿಗಳಲ್ಲೇ ಎಲ್‌ಕೆಜಿ, ಯುಕೆಜಿ ಆರಂಭಿಸಲು ಸಿಎಂ ಸಹಮತ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ3 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ3 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ4 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 week ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

ಟ್ರೆಂಡಿಂಗ್‌