ವಿಸ್ತಾರ Explainer | ಜಾರ್ಖಂಡ್‌ನ ಜಾಮತಾಡಾ- ಇದು ಸೈಬರ್ ಕ್ರೈಮ್ ಕ್ಯಾಪಿಟಲ್! ಇಲ್ಲಿಯ ಜನರ ಕಸುಬೇ ಆನ್‌ಲೈನ್ ವಂಚನೆ! - Vistara News

EXPLAINER

ವಿಸ್ತಾರ Explainer | ಜಾರ್ಖಂಡ್‌ನ ಜಾಮತಾಡಾ- ಇದು ಸೈಬರ್ ಕ್ರೈಮ್ ಕ್ಯಾಪಿಟಲ್! ಇಲ್ಲಿಯ ಜನರ ಕಸುಬೇ ಆನ್‌ಲೈನ್ ವಂಚನೆ!

ದೇಶದ ಹಿಂದುಳಿದ ಜಿಲ್ಲೆಗಳ ಪೈಕಿ ಜಾರ್ಖಂಡ್‍ನ ಜಾಮತಾಡವೂ ಒಂದು. ಆದರೆ, ಈ ಜಿಲ್ಲೆಯು ಸೈಬರ್ ಕ್ರೈಮ್‌ಗಳಿಂದಾಗಿಯೇ ಇಂದು ಕುಖ್ಯಾತಿಗಳಿಸಿದೆ. ಬಹುತೇಕ ಆನ್‌ಲೈನ್ ವಂಚನೆಗಳ ಮೂಲ ಜಾಮತಾಡಾ ಆಗಿರುತ್ತದೆ(ವಿಸ್ತಾರ Explainer).

VISTARANEWS.COM


on

Jamtara @ ವಿಸ್ತಾರ Explainer
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

| ಮಲ್ಲಿಕಾರ್ಜುನ ತಿಪ್ಪಾರ, ಬೆಂಗಳೂರು

ಸೈಬರ್ ಖದೀಮರ ಕೈಚಳಕ, ಭಾರಿ ಮೊತ್ತದ ಹಣ ಗುಳುಂ, ಪಿನ್ ನಂಬರ್ ಕೊಟ್ಟು ಹಣ ಕಳೆದುಕೊಂಡ ಐಎಎಸ್ ಅಧಿಕಾರಿ, ಒಟಿಪಿ ಕೊಟ್ಟು ಯಾಮಾರಿದ ಜಡ್ಜ್……ಈ ರೀತಿಯ ಸುದ್ದಿಗಳನ್ನು ನೀವು ವೆಬ್‌ಗಳಲ್ಲಿ ಓದಿರುತ್ತೀರಿ, ಇಲ್ಲವೇ ಟಿವಿಗಳಲ್ಲಿ ನೋಡಿರುತ್ತೀರಿ. ಹಾಗಾದರೆ, ಈ ಸೈಬರ್ ಖದೀಮರು ಎಲ್ಲಿದ್ದಾರೆ, ಅವರು ಯಾಕೆ ಪೊಲೀಸರಿಗೆ ಸಿಗುವುದಿಲ್ಲ ಎಂಬಿತ್ಯಾದಿ ಪ್ರಶ್ನೆಗಳು ಸಹಜ.

ಎಲ್ಲರೂ ಅಂದುಕೊಂಡಿರುವ ಹಾಗೆ ಬೆಂಗಳೂರು, ಮುಂಬೈಗಳಂಥ ಮೆಟ್ರೊ ನಗರಗಳಲ್ಲಿದ್ದುಕೊಂಡೇ ಜನರು ಸೈಬರ್ ಕ್ರೈಮ್‌ ಮಾಡುತ್ತಾರೆ. ಆದರೆ, ಇದು ನಿಜವಲ್ಲ. ಜಾರ್ಖಂಡ್‌ನ ಜಾಮತಾಡಾ (Jamtara) ಎಂಬ ಅತಿ ಹಿಂದುಳಿದ ಜಿಲ್ಲೆ, ಭಾರತದಲ್ಲಿ ನಡೆಯುವ ಬಹುತೇಕ ಸೈಬರ್ ವಂಚನೆಯ ಕೇಂದ್ರ ಬಿಂದುವಾಗಿದೆ! ಈ ನಗರವನ್ನು Epicenter of Cybercrime ಎಂದೂ ಹೇಳಬಹುದು. ಹಣದ ಆಮಿಷ ಒಡ್ಡಿಯೋ, ಇನ್ನಿತರ ಗಿಫ್ಟ್‌ಗಳ ಆಸೆ ತೋರಿಸಿ ಬರುವ ಬಹುತೇಕ ಕರೆಗಳು ಈ ಜಾಮತಾಡಾ ಜಿಲ್ಲೆಯಿಂದಲೇ ಉತ್ಪಾದನೆಯಾಗಿರುತ್ತವೆ(ವಿಸ್ತಾರ Explainer).

ಜಾಮತಾಡಾ ಜಾರ್ಖಂಡ್‌ನಲ್ಲಿರುವ ಒಂದು ಜಿಲ್ಲೆ. ಈ ಜಿಲ್ಲಾ ಕೇಂದ್ರದ ಹೆಸರೂ ಜಾಮತಾಡಾ. ಇದನ್ನು ಫಿಶಿಂಗ್ ಕ್ಯಾಪಿಟಲ್ ಆಫ್ ಇಂಡಿಯಾ ಎಂದೂ ಕರೆಯುತ್ತಾರೆ. ದೇಶಾದ್ಯಂತ ವರದಿಯಾಗುವ ಬಹುತೇಕ ಫಿಶಿಂಗ್ ಪ್ರಕರಣಗಳಿಗೆ ಈ ಪ್ರದೇಶವೇ ಮೂಲವಾಗಿದೆ. ಸೈಬರ್ ಕ್ರೈಮ್ ಮೂಲ ಹುಡುಕಿಕೊಂಡು ಬಹುತೇಕ ರಾಜ್ಯದ ಪೊಲೀಸರು ಈ ಜಾಮತಾಡಾಕ್ಕೆ ಆಗಾಗ ಬರುತ್ತಾರೆ. ದೇಶದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಜಾಮತಾಡಾ ಕೂಡ ಒಂದಾಗಿದೆ. ದೇಶದಲ್ಲಿ ನಡೆಯುವ ಒಟ್ಟು ಫಿಶಿಂಗ್ ಮತ್ತು ಸೈಬರ್‌ ಕ್ರೈಮ್‌ಗಳಲ್ಲಿ ಈ ಪ್ರದೇಶದ ಕಾಣಿಕೆ ಹೆಚ್ಚಿದೆ.

ಈಶ್ವರಚಂದ್ರ ವಿದ್ಯಾಸಾಗರರ ಕರ್ಮಭೂಮಿ
ಇತಿಹಾಸವನ್ನು ಓದಿದವರಿಗೆ ಈಶ್ವರ ಚಂದ್ರ ವಿದ್ಯಾಸಾಗರ ಅವರ ಬಗ್ಗೆ ತಿಳಿದಿರುತ್ತರೆ. ಅವರೊಬ್ಬ 19ನೇ ಶತಮಾನದ ಮಹಾನ್ ಸಮಾಜ ಸುಧಾರಕ. ಜಾಮತಾಡಾ ಜಿಲ್ಲೆಯ ಬುಡಕಟ್ಟು ಹೆಣ್ಣು ಮಕ್ಕಳ ಶಾಲಾ ಕಲಿಕೆಗಾಗಿ ಅವರು ಸುಮಾರು 18 ವರ್ಷಗಳ ಕಾಲ ಈ ಜಿಲ್ಲೆಯ ಕರ್ಮತಾಂಡ್ ಪಟ್ಟಣದಲ್ಲಿ ಕೆಲಸ ಮಾಡಿದ್ದರು. 1853ರಿಂದಲೇ ವಿದ್ಯಾಸಗಾರರು ಈ ಜಾಮತಾಡಾದಲ್ಲಿ ನೆಲೆಸಿದ್ದರು. ಸಣ್ಣ ಗುಡಿಸಲೇ ಅವರ ವಾಸಸ್ಥಾನವಾಗಿತ್ತು. ನಂದಂಕಾನನ್ ಎಂಬ ಕುಟೀರದಲ್ಲಿ ಆಶ್ರಮ ಸ್ಥಾಪಿಸಿ, ವನವಾಸಿಗಳನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡುತ್ತಿದ್ದರು. ಅವರಿಗೆ ಉಚಿತ ವೈದ್ಯಕೀಯ ಸೇವೆಗಳನ್ನು ನೀಡುವುದರ ಜತೆಗೆ, ಮಹಿಳಾ ಶಿಕ್ಷಣಕ್ಕಾಗಿ ಹೋರಾಟ ಕೂಡ ಮಾಡಿದರು. ಇದರ ಭಾಗವಾಗಿಯೇ ಬಾಲಕಿಯರ ಶಾಲೆಗಳನ್ನು ಆರಂಭಿಸಿದರು. ಬಾಲ್ಯ ವಿವಾಹ ನಿಷೇಧ, ವಿಧವಾ ಪುನರ್ವಿವಾಹಕ್ಕಾಗಿ ಹೋರಾಟಗಳನ್ನೇ ಮಾಡಿದರು. ತಮ್ಮ ಜೀವನದ ಕೊನೆಯ ದಿನಗಳನ್ನು ಇಲ್ಲಿಯೇ ಕಳೆದರು. ಭವ್ಯ ಇತಿಹಾಸದ ಹೊರತಾಗಿಯೂ ಇಂದಿನ ದಿನಗಳಲ್ಲಿ ಜಾಮತಾಡಾವನ್ನು ಫಿಶಿಂಗ್ ಕಾರಣಕ್ಕಾಗಿಯೇ ಜನರು ಗುರುತಿಸುವಂತಾಗಿದೆ.

ಬಿಪಿಎಲ್ ಕಾರ್ಡುದಾರರು ಇಲ್ಲಿ ಶ್ರೀಮಂತರು!
ಜಾಮತಾಡಾ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡು ಹೊಂದಿದವರು ಹೇಗೆ ಶ್ರೀಮಂತರಾಗುತ್ತಿದ್ದಾರೆ ಎಂಬುದಕ್ಕೆ ಈ ನಿರ್ದಿಷ್ಟ ಪ್ರಕರಣವನ್ನು ಓದಬೇಕು. ಜಿಲ್ಲೆಯ ಸೋನಬಾದ್ ಹಳ್ಳಿಯ ಆನಂದ್ ರಕ್ಷಿತ್ ಓದಿದ್ದು ಬರೀ ಎಂಟನೇ ಕ್ಲಾಸ್. ಈತನ ತಂದೆ ಹಿರೆನ್ ರಕ್ಷಿತ್. ಸೈಕಲ್ ಮೇಲೆ ಸ್ಕ್ರ್ಯಾಪ್ ಸಂಗ್ರಹಿಸಿ, ಅದನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. 7 ಸದಸ್ಯರು ಇರುವ ಕುಟುಂಬವು ಒಂದು ಸಣ್ಣ ಗುಡಿಸಲಿನಲ್ಲಿ ವಾಸವಾಗಿತ್ತು. ಇವರ ಊಟಕ್ಕೆ ಸರ್ಕಾರ ಒದಗಿಸುವ ಪ್ರತಿ ತಿಂಗಳ ಪಡಿತರವೇ ಆಧಾರವಾಗಿತ್ತು. ಇದು ನಾಲ್ಕೈದು ವರ್ಷಗಳ ಹಿಂದಿನ ಮಾತು.

ಆದರೆ, ನಾಲ್ಕೈದು ವರ್ಷಗಳ ಬಳಿಕ ಕೆಲವೇ ತಿಂಗಳಲ್ಲಿ ಈ ಕುಟುಂಬದ ಚಹರೆ ಬದಲಾಗಿ ಹೋಯಿತು. ಆರ್ಥಿಕ ಪರಸ್ಥಿತಿಯೂ ಸುಧಾರಿಸಿತು, ಹೊಸ ಮನೆಯನ್ನು ಕಟ್ಟಿದರು. 2021ರ ಆಗಸ್ಟ್‌ನಲ್ಲಿ ಈ ಮನೆ ಮೇಲೆ ದಾಳಿ ಮಾಡಿದಾಗ, ಈ ಕುಟುಂಬದ ದಿಢೀರ್ ಶ್ರೀಮಂತಿಕೆಯ ಹಿಂದಿನ ರಹಸ್ಯ ಬದಲಾಯಿತು. ದಾಳಿ ವೇಳೆ ವೇಳೆ, 21 ಲಕ್ಷ ರೂ. ನಗದಿನೊಂದಿಗೆ ಕಾರು, ಸ್ಕೂಟಿ, ಬೈಕ್, 7 ಲಕ್ಷ ರೂ. ಠೇವಣಿ ಪತ್ರಗಳು, 65 ಲಕ್ಷ ರೂ. ಅಧಿಕ ಮೌಲ್ಯ ಸ್ಥಿರಾಸ್ತಿ ಮತ್ತು ಚರಾಸ್ತಿಗಳ ದಾಖಲೆ ಪತ್ರಗಳು, 12 ಪಾಸ್‌ಬುಕ್‌ಗಳು ದೊರೆತವು. ಮನೆಯ ಮೌಲ್ಯ 50 ಲಕ್ಷ ರೂ. ಎಂದು ನಿರ್ಧರಿಸಲಾಯಿತು. ಇದಕ್ಕೆಲ್ಲ ಹಣದ ಮೂಲ ಆನಂದ್ ನಡೆಸುತ್ತಿದ್ದ ಸೈಬರ್ ವಂಚನೆಯಾಗಿತ್ತು. ಪೊಲೀಸ್ ದಾಳಿ ವೇಳೆ ಆನಂದ್ ತಲೆ ಮರೆಸಿಕೊಂಡಿದ್ದ. ಆದರೆ, ಬಳಿಕ ಆತನನ್ನು ಬಂಧಿಸಿ, ಜೈಲಿಗೆ ಕಳುಹಿಸಲಾಯಿತು. 20 ಲಕ್ಷ ರೂ. ಭದ್ರತೆಯ ಜಾಮೀನಿನಿ ಮೇಲೆ ಶೀಘ್ರವೇ ಜೈಲಿನಿಂದ ಹೊರಗೆ ಕೂಡ ಬಂದ ಆನಂದ್ ರಕ್ಷಿತ್. ಜಾಮತಾಡಾ ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಈ ರೀತಿಯ ಆನಂದ್ ರಕ್ಷಿತ್‌ಗಳು ಸಿಗುತ್ತಾರೆ.

ಕರ್ಮತಾಂಡ್‌ನ ಕರ್ಮಕಾಂಡ
ಜಾಮತಾಡಾ ಜಿಲ್ಲೆಯ ಕರ್ಮತಾಂಡ್ ಪ್ರದೇಶವು ಸೈಬರ್ ಕ್ರೈಮ್‌ಗಳ ಕೇಂದ್ರ ಸ್ಥಾನವೂ ಹೌದು. ಈ ಪಟ್ಟಣದಲ್ಲಿ ಒಂದೂವರೆ ಲಕ್ಷ ಜನರಿದ್ದಾರೆ. ಇಲ್ಲಿನ ಜನರು ಸೈಬರ್ ಕ್ರೈಮ್‌ಗಳಿಗೆ ತೆರೆದುಕೊಳ್ಳುವ ಮುನ್ನ, ಮಾದಕ ವ್ಯಸನ ಪ್ರಕರಣಗಳು, ಸರಗಳ್ಳತನ, ರೈಲುಗಳಲ್ಲಿ ದರೋಡೆ ಸೇರಿದಂತೆ ಇನ್ನಿತರ ಕಾನೂನುಬಾಹಿರ ಚಟುವಟಿಕೆಗಳಲ್ಲಿ ನಿರತರಾಗಿದ್ದರು. ರೈಲುಗಳಲ್ಲಿ ಪ್ರಯಾಣಿಕರ ಭಾರೀ ಮೌಲ್ಯದ ವಸ್ತುಗಳನ್ನು ಕದಿಯುವ ದೊಡ್ಡ ಗ್ಯಾಂಗ್‌ಗಳು ಸಕ್ರಿಯವಾಗಿದ್ದವು. ಯಾವಾಗ ಸ್ಮಾರ್ಟ್‌ಫೋನ್‌ಗಳು ಪ್ರಚಲಿತಕ್ಕೆ ಬಂದವೋ, ಇಲ್ಲಿನ ಯುವಕರು ಆನ್ ಲೈನ್ ವಂಚನೆಯ ತಂತ್ರಗಳನ್ನು ಕಲಿತು, ಅನಾಯಸವಾಗಿ ಹಣವನ್ನು ಸಂಪಾದಿಸುವ ದಾರಿಗಳನ್ನು ಹುಡುಕಿಕೊಂಡರು. ಇದು ಕೇವಲ ಕರ್ಮತಾಂಡ್ ಪ್ರದೇಶದ ಕತೆಯಲ್ಲ ಜಾಮತಾಡಾ ಜಿಲ್ಲೆಯ ಬಹಳಷ್ಟು ಪಟ್ಟಣಗಳು, ಹಳ್ಳಿಗಳಲ್ಲಿ ಇದೇ ರೀತಿಯಲ್ಲಿವೆ.

ಹೇಗೆ ಕಲಿತರು ಇವರೆಲ್ಲ?
ಕೆಲವು ಜನರು ಪ್ರಮುಖ ಮೆಟ್ರೋ ನಗರಗಳಿಗೆ ಸ್ಥಳಾಂತರಗೊಂಡರು ಮತ್ತು ಚಿಪ್ ರಿಪ್ಲೇಸ್ಮೆಂಟ್, ಸೈಬರ್ ಕೆಫೆಗಳು, ಸಾಫ್ಟ್‌ವೇರ್ ಚಿಪ್‌ಗಳ ಬದಲಿ ಇತ್ಯಾದಿ ಕೆಲಸ ಮೂಲಕ ತಂತ್ರಗಳನ್ನು ತಮ್ಮದಾಗಿಸಿಕೊಂಡರು. ಇನ್ನು ಕೆಲವರು ಕಾಲ್ ಸೆಂಟರ್‌ಗಳನ್ನು ಸ್ಥಾಪಿಸುವ ಮೂಲಕ ಜನರನ್ನು ವಂಚಿಸುವ ದಾರಿಗಳನ್ನು ಕಂಡುಕೊಂಡರು. ಕ್ರಮೇಣ ಆನ್‌ಲೈನ್ ವಂಚಕರ ಹಲವಾರು ಗುಂಪುಗಳು ಸೃಷ್ಟಿಯಾದವು. ಈ ಗುಂಪುಗಳು ಜಾಮತಾಡಾ ಜಿಲ್ಲೆಯ ಸುಮಾರು 100 ಹಳ್ಳಿಗಳಲ್ಲಿ ಹರಡಿಕೊಂಡಿವೆ. ಜಾಮತಾಡಾ ಮಾತ್ರವಲ್ಲದೇ ದಿಯೋಘರ್, ಗಿರಿದಿಹ್, ಧನ್‌ಬಾದ್‌ ಮತ್ತು ಗೊಡ್ಡಾ ಜಿಲ್ಲೆಗಳಲ್ಲಿ ಸೈಬರ್ ವಂಚನೆಯನ್ನೇ ಧಂದೆಯಾಗಿ ಮಾಡಿಕೊಂಡಿರುವುದನ್ನು ಕಾಣಬಹುದು. ಈ ಪ್ರದೇಶಗಳಲ್ಲಿನ ಹತ್ತಾರು ಸೈಬರ್ ಅಪರಾಧಿಗಳು ದೆಹಲಿ, ಅಹಮದಾಬಾದ್, ಕೋಲ್ಕೊತಾ, ಜೈಪುರ, ಮುಂಬೈ ಮತ್ತು ಪಾಟ್ನಾದಂತಹ ಅನೇಕ ಮೆಟ್ರೊ ನಗರಗಳಲ್ಲಿ ಕಾಲ್ ಸೆಂಟರ್‌ಗಳನ್ನು ತೆರೆದಿದ್ದಾರೆ.

ದಿ ಫಸ್ಟ್ ಕೇಸ್- ಸೀತಾರಾಮ್ ಮಂಡಲ್
ಆನ್‌ಲೈನ್‌ ವಂಚನೆಯ ಗಮನ ಸೆಳೆದ ಮೊದಲ ಪ್ರಕರಣ ಎಂದರೆ ಸೀತಾರಾಮ್ ಮಂಡಲ್‌ನದ್ದು. ಜಾಮತಾಡಾದ ಸಿಂಧರ್‌ಜೋರಿ ಹಳ್ಳಿಯ ನಿವಾಸಿ ಸೀತಾರಾಮ್ ಮಂಡಲ್ 15 ವರ್ಷಗಳ ಹಿಂದೆ ಮುಂಬೈಗೆ ತೆರಳಿ, ಮೊಬೈಲ್ ರಿಚಾರ್ಜ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ, ಆತ ಮೊಬೈಲ್ ಫೋನುಗಳ ಮೂಲಕ ಜನರನ್ನು ವಂಚಿಸುವ ಹಲವಾರು ತಂತ್ರಗಳನ್ನು ಕಂಡುಕೊಂಡ. ಬಳಿಕ ತನ್ನೂರಿಗೆ ಹಿಂದಿರುಗಿ, ಆನ್‌ಲೈನ್ ವಂಚನೆಯನ್ನು ಶುರು ಮಾಡಿದ. ಈತನ ತಂಡಕ್ಕೆ ಅನೇಕ ಯುವಕರು ಸೇರ್ಪಡೆಯಾದರು. ಸೀತಾರಾಮ್ ಮಂಡಲ್ ರೀತಿಯ ವ್ಯಕ್ತಿಗಳು ಜಾಮತಾಡಾದ ಪ್ರತಿ ಹಳ್ಳಿಯಲ್ಲಿ ಈಗ ಸಿಗುತ್ತಾರೆ.

ಪೊಲೀಸ್ ಠಾಣೆ ಆರಂಭ
ಜಾಮತಾಡಾದಲ್ಲಿ ನಡೆಯುತ್ತಿರುವ ಸೈಬರ್ ಕ್ರೈಮ್‌ಗಳನ್ನು ಮಟ್ಟ ಹಾಕುವುದಕ್ಕಾಗಿ ಸರ್ಕಾರವು 2018ರಲ್ಲಿ ಸೈಬರ್ ಪೊಲೀಸ್ ಠಾಣೆ ತೆರೆಯಿತು. ಅಲ್ಲಿಂದ ಇಲ್ಲಿಯತನಕ 250ಕ್ಕೂ ಹೆಚ್ಚು ಸೈಬರ್ ಅಪರಾಧಿಗಳನ್ನು ಬಂಧಿಸಲಾಗಿದೆ. ಹಾಗಿದ್ದೂ, ಜಾಮತಾಡಾ ಮೂಲಕ ನಡೆಯುವ ಆನ್‌ಲೈನ್ ವಂಚನೆಗಳಿಗೆ ಈವರೆಗೂ ತಡೆ ಬಿದ್ದಿಲ್ಲ. ಯಾಕೆಂದರೆ, ಈ ಅಪರಾಧಿಗಳು ಜಾಮೀನಿನ ಮೇಲೆ ಬಿಡುಗಡೆ ಆದ ಬಳಿಕ ಮತ್ತೆ ಅದೇ ಕೆಲಸವನ್ನು ಮುಂದುವರಿಸುತ್ತಾರೆ. ಜೆತೆಗೆ, ಈ ವಂಚನೆ ಚಟುವಟಿಕೆಗೆ ಹೊಸಬರು ಕೂಡ ಸೇರಿಕೊಳ್ಳುತ್ತಲೇ ಇರುತ್ತಾರೆ.

ಜಾಮತಾಡಾದಲ್ಲೇಕೆ ಸೈಬರ್ ಕ್ರೈಮ್ಸ್?
ಸೈಬರ್ ತಜ್ಞರ ಪ್ರಕಾರ ಫಿಶಿಂಗ್‌ನಂಥ ಸ್ಕ್ಯಾಮ್‌ಗಳು ಸಣ್ಣ ಪಟ್ಟಣಗಳಿಂದಲೇ ಹುಟ್ಟಿಕೊಳ್ಳುತ್ತವೆ. ಯಾಕೆಂದರೆ, ಪೊಲೀಸರು ಸೈಬರ್ ಕ್ರೈಮ್‌ ವಿಷಯದಲ್ಲಿ ಸಣ್ಣ ಪಟ್ಟಣ, ನಗರಗಳತ್ತ ಅಷ್ಟು ಲಕ್ಷ್ಯ ವಹಿಸುವುದಿಲ್ಲ. ಜತೆಗೆ, ಈ ಪ್ರದೇಶಗಳಲ್ಲಿ ಸೈಬರ್ ಕ್ರೈಮ್ ತಜ್ಞ ಪೊಲೀಸರೂ ಇರುವುದಿಲ್ಲ. ಆದರೆ, ಮೆಟ್ರೋ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆಯ ಸೈಬರ್ ಕ್ರೈಮ್‌ಗಳನ್ನು ಪತ್ತೆ ಹೆಚ್ಚಲು ಹೆಚ್ಚು ಸಾಮರ್ಥ್ಯವನ್ನು ಪಡೆದುಕೊಂಡಿರುತ್ತದೆ. ಸಾಕಷ್ಟು ರೇಡ್‌ಗಳನ್ನು ಮಾಡಿ, ಆರೋಪಿಗಳನ್ನು ಪತ್ತೆ ಹಚ್ಚುತ್ತದೆ. ಆದರೆ, ಇದೇ ರೀತಿ ಸೌಕರ್ಯವನ್ನು ಸಣ್ಣ ಪಟ್ಟಣ ಮತ್ತು ನಗರಗಳಲ್ಲಿ ನಿರೀಕ್ಷಿಸಲಾಗದು. ಈ ಸಂಗತಿಯ ಲಾಭವನ್ನು ಪಡೆದುಕೊಂಡಿರುವ ಜಾರ್ಖಂಡ್‌ನ ಜಾಮತಾಡಾ ಜಿಲ್ಲೆ ಹಾಗೂ ನಗರವು ಭಾರತದ ಫಿಶಿಂಗ್ ಕ್ಯಾಪಿಟಲ್ ಎಂಬ ಕುಖ್ಯಾತಿಯನ್ನು ಪಡೆದುಕೊಂಡಿದೆ. ಇಲ್ಲಿನ ಬಹುತೇಕ ಹಳ್ಳಿ, ಚಿಕ್ಕ ಪಟ್ಟಣಗಳಲ್ಲಿ ಸೈಬರ್ ಕ್ರೈಮ್‌ಗಳಲ್ಲಿ ನಿರತವಾಗಿರುವ ಜನರಿದ್ದಾರೆ. ದೇಶದಲ್ಲಿ ನಡೆಯುವ ಫಿಶಿಂಗ್, ಒಟಿಪಿ ಸ್ಕ್ಯಾಮ್‌ಗಳ ಪೈಕಿ ಹೆಚ್ಚಿನವುಗಳ ಮೂಲ ಜಾಮತಾಡಾವೇ ಆಗಿದೆ.

ಆಮಿಷಕ್ಕೆ ಬಲಿ ಬೀಳುವ ಜನ
ಜನ ಎಷ್ಟೇ ಸುಶಿಕ್ಷತರಾದರೂ ಆಮಿಷದಲ್ಲಿ ಕ್ಷಣವಾದರೂ ಯಾಮಾರುತ್ತಾರೆ. ಈ ಮಾನವ ನಡವಳಿಕೆಯೇ ಜಾಮತಾಡಾ ಫಿಶಿಂಗ್ ಪಂಟರ್‌ಗಳಿಗೆ ನೆರವಾಗಿರುವುದು. ಅವರು ಫೋನ್ ಕಾಲ್ ಮಾಡಿ, ಆಮಿಷವೊಡ್ಡಿ ನಿಮ್ಮ ವೈಯಕ್ತಿಕ ಎಲ್ಲ ಸೂಕ್ಷ್ಮ ಮಾಹಿತಿಯನ್ನು ಪಡೆದುಕೊಂಡು, ನಿಮ್ಮ ಖಾತೆಗೆ ಕನ್ನ ಹಾಕುತ್ತಾರೆ. ಬ್ಯಾಂಕಿನ ಖಾತೆಯಿಂದ ಹಣ ಸರಸರನೇ ಹೊರ ಹೋದಾಗಲೇ ಜನರಿಗೆ ತಾವು ಮೋಸ ಹೋಗಿರುವುದು ತಿಳಿಯುತ್ತದೆ.

ಲೇಡಿ ಕಾಲರ್!
ಅತ್ತ ಕಡೆಯಿಂದ ಮಹಿಳೆಯೊಬ್ಬಳು ಮಾತನಾಡಲಾರಂಭಿಸಿದರೆ ಇತ್ತ ಕಡೆಯ ಗಂಡಸು ಫಿದಾ ಆಗಿ ಬಿಡುತ್ತಾನೆ. ಇದೇ ಸಂಗತಿ ಜಾಮತಾಡಾ ಖದೀಮರಿಗೆ ಹೆಚ್ಚು ವರವಾಗಿದೆ. ಫಿಶಿಂಗ್ ಮಾಡುವ ಜನರು, ಹೆಣ್ಣು ಮಕ್ಕಳಿಂದ ಕರೆ ಮಾಡಿಸಿ, ತಮಗೆ ಬೇಕಿರುವ ಎಲ್ಲ ಮಾಹಿತಿಯನ್ನು ಬಹಳ ನಯ ನಾಜೂಕಿನಿಂದ ಪಡೆದುಕೊಳ್ಳುತ್ತಾರೆ. ಬಹಳ ಜನರಿಗೆ ಹೆಂಗಸಿನ ದನಿಯಲ್ಲಿ ಮಾತನಾಡುವ ಕರೆಗಳು ಇನ್ನೆಲ್ಲೋ ಕುಳಿತ ಗಂಡಸೇ ಮಾಡುತ್ತಿರುತ್ತಾನೆ ಎಂಬ ಸಂಗತಿ ಗೊತ್ತೇ ಇರುವುದಿಲ್ಲ.

ಬೆತ್ತಲೆ ವಿಡಿಯೋ
ಹಣ ಸುಲಿಗೆಗೆ ಕಂಡುಕೊಂಡಿರುವ ಮತ್ತೊಂದು ವಂಚನೆ ಮತ್ತು ಅಪರಾಧದ ದಾರಿ ಇದು. ಜಾಮತಾಡಾದ ಕೆಲವರು ಈ ಕ್ರೈಮ್‌ನಲ್ಲಿ ಎಕ್ಸ್‌ಪರ್ಟ್ ಆಗಿದ್ದಾರೆ. ವಂಚಕ ತನ್ನ ಟಾರ್ಗೆಟ್ ವ್ಯಕ್ತಿಗೆ, ಫೋನ್ ಹಿಂಬದಿಯ ಕ್ಯಾಮೆರಾ ಮೂಲಕ ನಗ್ನ ವಿಡಿಯೋವನ್ನು ವಿಡಿಯೋ ಕಾಲ್ ಮೂಲಕ ತೋರಿಸುತ್ತಾನೆ. ಟಾರ್ಗೆಟ್ ವ್ಯಕ್ತಿ ಈ ನಗ್ನ ವಿಡಿಯೋ ನೋಡುವಾಗ, ಸ್ಕ್ರೀನ್ ಅನ್ನು ರೆಕಾರ್ಡ್ ಮಾಡಿಕೊಳ್ಳುತ್ತಾನೆ. ಆ ಬಳಿಕ ಅದನ್ನು ವಿಡಿಯೋ ತುಣುಕು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸುತ್ತಾನೆ. ಇದರಲ್ಲಿ ಟಾರ್ಗೆಟ್ ವ್ಯಕ್ತಿಯ ತಪ್ಪೇನೂ ಇರದಿದ್ದರೂ, ತಾನು ನಗ್ನ ವಿಡಿಯೋ ನೋಡುತ್ತಿದ್ದ ವಿಷಯ ಜನರಿಗೆ ಗೊತ್ತಾದರೆ ಏನು ಅಂದುಕೊಂಡಾರು ಎಂಬ ಭಯದಿಂದ ವಂಚಕನಿಗೆ ಹೇಳಿದಷ್ಟು ಹಣ ನೀಡಲಾರಂಭಿಸುತ್ತಾನೆ.

ಕೆವೈಸಿ ಅಪ್‌ಡೇಟ್
ಜಾಮತಾಡಾದ ವಂಚಕರು ಆಯ್ದುಕೊಂಡಿರುವ ಮತ್ತೊಂದು ದಾರಿ ಇದು. ಹಾಗೆಯೇ ಭಾರತದಲ್ಲಿ ನಡೆಯುವ ಅತ್ಯಂತ ಸಾಮಾನ್ಯ ಸೈಬರ್ ಕ್ರೈಮ್ ಇದು. ಗೊತ್ತಿದ್ದೂ ಹಲವರು ಈ ಕೆವೈಸಿ ಬಲೆಗೆ ಬಿದ್ದು, ಹಣವನ್ನು ಕಳೆದುಕೊಳ್ಳುತ್ತಾರೆ. ಟಾರ್ಗೆಟ್ ವ್ಯಕ್ತಿಯ ಸಿಮ್ ಕಾರ್ಡ್ ಅಥವಾ ಬ್ಯಾಂಕ್ ಕಾರ್ಡ್‌ಗಳ ಕೆವೈಸಿ(Know Your Customer) ಪರಿಶೀಲನೆಗೆಂದು ಕಾಲ್ ಮಾಡುತ್ತಾನೆ. ಆಗ ಟಾರ್ಗೆಟ್, ಸ್ಕ್ಯಾಮರ್ ಕಾಲರ್ ಕೇಳುವ ಎಲ್ಲ ಮಾಹಿತಿಯನ್ನು ನೀಡುತ್ತಾರೆ. ಅಲ್ಲದೇ, ವಂಚನೆಗೆ ನೆರವಾಗುವ ಆ್ಯಪ್ ಡೌನ್ಲೋಡ್ ಮಾಡಲು ಹೇಳುತ್ತಾರೆ. ಇದರಿಂದಾಗಿ ಅವರಿಗೆ ಬೇಕಾಗುವ ಎಲ್ಲ ಮಾಹಿತಿಯು ಸಿಕ್ಕುಬಿಡುತ್ತದೆ. ಇದಾದ ಮರುಗಳಿಗೆಯಲ್ಲೇ ಟಾರ್ಗೆಟ್ ವ್ಯಕ್ತಿಯ ಖಾತೆಯಲ್ಲಿನ ಹಣವೆಲ್ಲ ಡ್ರಾ ಆಗಿರುತ್ತದೆ!

ಫೇಕ್ ಪ್ರೊಫೈಲ್ಸ್
ವಂಚಕರು ಅತ್ಯುನ್ನತ ಅಧಿಕಾರಿಗಳು ಅಂದರೆ, ಐಎಎಸ್, ಐಪಿಎಸ್‌ ಅಧಿಕಾರಿಗಳ ರೀತಿಯಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಪ್ರೊಫೈಲ್‌ಗಳನ್ನು ಸೃಷ್ಟಿಸಿಕೊಂಡಿರುತ್ತಾರೆ. ಬಳಿಕ, ನಿರ್ದಿಷ್ಟ ವ್ಯಕ್ತಿಗಳಿಗೆ ರಿಕ್ವೆಸ್ಟ್ ಕಳುಹಿಸಿ, 5 ಸಾವಿರದಿಂದ 10 ಸಾವಿರ ರೂ.ವರೆಗೂ ಹಣ ಪಡೆದುಕೊಳ್ಳುತ್ತಾರೆ. ಪ್ರೊಫೈಲ್‌ಗಳನ್ನು ಗಮನಿಸುವ ಜನರು ನಿಜ ಇರಬೇಕೆಂದು ಭಾವಿಸಿ ಹಣ ಕಳುಹಿಸಿ, ಕೈ ಸುಟ್ಟುಕೊಳ್ಳುತ್ತಾರೆ.

ವಂಚಕರಿಗೆ ಫೋನ್ ನಂಬರ್ಸ್ ಹೇಗೆ ಸಿಗುತ್ತವೆ?
ಮುಖ್ಯವಾಗಿ ಕಾಡುವ ಪ್ರಶ್ನೆ ಎಂದರೆ, ಈ ಜಾಮತಾಡಾ ಸೈಬರ್ ವಂಚಕರಿಗೆ ಫೋನ್ ನಂಬರ್ಸ್ ಹೇಗೆ ಸಿಗುತ್ತವೆ? ಕಾಲ್ ಸೆಂಟರ್‌ಗಳೇ ಇದಕ್ಕೆ ಮೂಲ. ಕೆಲವರು ದುಡ್ಡಿನ ಆಸೆಗೆ ಕಾಲ್ ಸೆಂಟರ್‌ಗಳಿಂದ ಡೇಟಾವನ್ನು ಸೈಬರ್ ವಂಚಕರಿಗೆ ಮಾರಾಟ ಮಾಡುತ್ತಾರೆ. ಇನ್ನು, ಡಿಜಿಟಲ್ ಪೇಮೆಂಟ್ ಗೇಟ್‌ವೇ, ಒಟಿಪಿ ವ್ಯವಸ್ಥೆಯಲ್ಲಿ ಲೋಪಗಳನ್ನು ವಂಚರು ಬಳಸಿಕೊಂಡು ಫೋನ್ ನಂಬರ್ಸ್ ಪಡೆದುಕೊಳ್ಳುತ್ತಾರೆ. ಒಂದೊಮ್ಮೆ, ಕಾಲ್ ಮಾಡಿದ ವ್ಯಕ್ತಿ ನಿಮ್ಮ ಹೆಸರು, ವಿಳಾಸವನ್ನು ಸರಿಯಾಗಿ ಹೇಳುತ್ತಿದ್ದಾನೆ ಎಂದರೆ ಆ ವ್ಯಕ್ತಿಯ ಬಳಿಯ, ಮಾರಾಟಕ್ಕೀಡಾದ ನಿಮ್ಮ ಮಾಹಿತಿ ಇರುತ್ತದೆ ಎಂದರ್ಥ. ಯಾಕೆಂದರೆ, ಯಾವುದೇ ಬ್ಯಾಂಕುಗಳು ಫೋನ್ ಮಾಡಿ, ಕೆವೈಸಿಯಾಗಲೀ, ಒಟಿಪಿಯಾಗಲಿ ಕೇಳುವುದಿಲ್ಲ. ಶಾಪಿಂಗ್ ವೆಬ್‌ಸೈಟ್ಸ್, ಟೆಲಿಫೋನ್ ಕಂಪನಿ ಇತ್ಯಾದಿಗಳ ಕಾಲ್ ಸೆಂಟರ್‌ಗಳಲ್ಲಿ ಕೆಲಸ ಮಾಡುವವರೇ ಈ ಮಾಹಿತಿಗಳನ್ನು ಮಾರಾಟ ಮಾಡಿರುತ್ತಾರೆ. ಇತ್ತೀಚೆಗೆ, ಈ ಜಾಮತಾಡಾ ವಂಚಕರ ಇನ್ಶೂರೆನ್ಸ್ ಮಾಹಿತಿಯನ್ನು ಕೂಡ ಖರೀದಿಸುತ್ತಿದ್ದಾರೆಂದು ತಿಳಿದು ಬಂದಿದೆ.

ಜಾಮತಾಡಾ ಕೇಂದ್ರಿತ ವೆಬ್‌ಸೀರೀಸ್
ಭಾರತದ ಫಿಶಿಂಗ್ ಕ್ಯಾಪಿಟಲ್ ಎನಿಸಿಕೊಂಡಿರುವ ಜಾಮತಾಡಾ ನಟೋರಿಯಸ್ ಕ್ರಿಮಿನಲ್ ಹಿನ್ನೆಲೆಯನ್ನು ಅನೇಕ ಸಿನಿಮಾ ಮತ್ತು ವೆಬ್‌ಸೀರೀಸ್‌ಗಳಲ್ಲಿ ಬಳಸಿಕೊಳ್ಳಲಾಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ಜಾಮತಾಡಾ ವೆಬ್‌ಸೀರೀಸ್ ಸಂಚನಲ ಸೃಷ್ಟಿಸಿದೆ. ಈವರೆಗೆ ಎರಡು ಸೀಸನ್ ಪ್ರಸಾರವಾಗಿದ್ದು, ಜಾಮತಾಡ ಸೈಬರ್ ಕ್ರೈಮ್‌ ಅನ್ನು ಎಳೆ ಎಳೆಯಾಗಿ ತೋರಿಸಲಾಗಿದೆ. ಇಡೀ ವ್ಯವಸ್ಥೆಯು ಇದರಲ್ಲಿ ಭಾಗಿಯಾಗಿರುವುದನ್ನು ಸೂಚ್ಯವಾಗಿ ಹೇಳಲಾಗಿದೆ.

ಸೋಷಿಯಲ್ ಮೀಡಿಯಾ ಬಳಸುವಾಗ ಇರಲಿ ಎಚ್ಚರ
ಸಾಮಾಜಿಕ ಜಾಲತಾಣಗಳ (Social Media) ಬಳಕೆ ಇಂದಿನ ಅಗತ್ಯ ಹಾಗೂ ಅನಿವಾರ್ಯತೆ. ಕಚೇರಿ ಕೆಲಸಕ್ಕಾಗಲಿ, ಸ್ನೇಹಿತರು ಅಥವಾ ಬಂಧುಗಳ ಜತೆಗಿನ ಮಾತುಕತೆಗಾಗಲಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಲೇಬೇಕಾಗಿದೆ. ಆದರೆ, ಸೋಷಿಯಲ್‌ ಮೀಡಿಯಾ ಬಳಕೆಯನ್ನು ಎಚ್ಚರ ತಪ್ಪಿ ಮಾಡಿದರೆ ಅದು ಅಪಾಯಕಾರಿ ಎನಿಸಬಹುದು. ನಿಮ್ಮ ವೈಯಕ್ತಿಕ ಮಾಹಿತಿಗಳು ದುರುಪಯೋಗವಾಗುವ ಜತೆಗೆ ನಿಮ್ಮ ಕಂಪ್ಯೂಟರ್‌ ಹಾಗೂ ಬ್ಯಾಂಕ್‌ ಖಾತೆಗಳಿಗೆ ಸೈಬರ್‌ ಕಳ್ಳರು ಕನ್ನ ಹಾಕಬಹುದು. ಹೀಗಾಗಿ ಸೋಶಿಯಲ್‌ ಮೀಡಿಯಾ ಬಳಕೆ ವೇಳೆ ಕೆಲವೊಂದು ಎಚ್ಚರಿಕೆಗಳನ್ನು ವಹಿಸಿಕೊಳ್ಳಬೇಕಾಗುತ್ತದೆ.

1. ನೀವು ಮಾಡುವ ಯಾವುದೇ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಶಾಶ್ವತವಾಗಿ ಇರುತ್ತದೆ. ಅದು ಸಾವಿರಾರು ಮಂದಿಯ ಕಣ್ಣಿಗೆ ಬೀಳುತ್ತದೆ. ಹೀಗಾಗಿ ಯಾವುದೇ ಪೋಸ್ಟ್‌ಗಳನ್ನು ಮಾಡುವಾಗ ಎರಡೆರಡು ಬಾರಿ ಯೋಚಿಸಿ. ಪ್ರಮಾದಗಳು ಘಟಿಸದಂತೆ ಮುನ್ನೆಚ್ಚರಿಕೆ ವಹಿಸಿ.

2. ಸಾಮಾಜಿಕ ಜಾಲತಾಣಗಳಲ್ಲ ವ್ಯವಹಾರ ಮಾಡುವಾಗ ವೈಯಕ್ತಿಕ ಮಾಹಿತಿಗಳನ್ನು ಕೊಡಬೇಕಾಗುತ್ತದೆ. ಕೆಲವೊಂದು ಮಾಹಿತಿಗಳು ಅನಿವಾರ್ಯವಾದರೂ ಇನ್ನು ಕೆಲವು ಮಾಹಿತಿಗಳನ್ನು ನೀಡುವ ಅಗತ್ಯ ಇರುವುದಿಲ್ಲ. ಹೆಚ್ಚು ಮಾಹಿತಿಗಳನ್ನು ಪ್ರಕಟಿಸಿದರೆ ಹ್ಯಾಕರ್‌ಗಳಿಗೆ ಸುಲಭವಾಗಿ ನಿಮ್ಮ ಖಾತೆಗಳಿಗೆ ಕನ್ನ ಹಾಕಲು ಸಾಧ್ಯವಾಗುತ್ತದೆ.

3. ಕಂಪ್ಯೂಟರ್‌, ಸ್ಮಾರ್ಟ್‌ಫೋನ್‌ ಹಾಗೂ ಟ್ಯಾಬ್‌ಗಳಲ್ಲಿ ಸುರಕ್ಷಿತವಾದ Anti virus ಅಳವಡಿಸಿಕೊಳ್ಳಿ. ಅದೇ ರೀತಿ ಆಪರೇಷನ್‌ ಸಿಸ್ಟಮ್‌ (OS) ಅಪ್‌ಡೇಟ್‌ ವರ್ಷನ್‌ ಇರುವಂತೆ ನೋಡಿಕೊಳ್ಳಿ.

4. ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹಿತರನ್ನು ಮಾಡಿಕೊಳ್ಳುವಾಗ ಜಾಗರೂಕರಾಗಿರಬೇಕು. ನಿಮಗೆ ಪರಿಚಯ ಇದ್ದರೆ ಮಾತ್ರ ಅವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಿ.ಅಪರಿಚಿತ ವ್ಯಕ್ತಿಯನ್ನು Friend ಮಾಡಿಕೊಂಡು ಅನಾಹುತಕ್ಕೆ ದಾರಿ ಮಾಡಿಕೊಡಬಾರದು. ಅಪರಿಚಿತರಲ್ಲಿ ಹಲವರು ಸೈಬರ್‌ ಕಳ್ಳರೂ ಇರಬಹುದು. ಸುಂದರ ಹುಡುಗಿಯರ ಚಿತ್ರವನ್ನು ಹಾಕಿಕೊಂಡು ಯಾಮಾರಿಸುವ ಪ್ರಕರಣಗಳು ಆಧುನಿಕ ಜಗತ್ತಿನಲ್ಲಿ ನಡೆಯುತ್ತಲೇ ಇವೆ.

5. ನಿಮ್ಮ ಸೋಶಿಯಲ್‌ ಮೀಡಿಯಾ ನೆಟ್‌ವರ್ಕ್‌ನಲ್ಲಿ ಯಾರಾದರೂ ಕಿರಿಕಿರಿ ಉಂಟು ಮಾಡುತ್ತಿದ್ದರೆ ಅವರನ್ನು ಮುಲಾಜಿಲ್ಲದೆ Unfriend ಮಾಡಿ. ಅವರ ವಿರುದ್ಧ ರಿಪೋರ್ಟ್‌ ಮಾಡಿ.

6. ಸುಲಭವಾಗಿ ಬೇರೆಯವರು ಗ್ರಹಿಸಲಾಗದಂಥ password ಬಳಸಿ. ಅಂಕಿಗಳು ಹಾಗೂ ಸಂಖ್ಯೆಗಳು ಸರಿಯಾಗಿ ಇರುವಂತೆ ನೋಡಿಕೊಳ್ಳಿ. ಬೇರೆಬೇರೆ ಅಕೌಂಟ್‌ಗಳಿಗೆ ಬೇರೆಬೇರೆ ಪಾಸ್‌ವರ್ಡ್‌ ಇರಬೇಕು.

ಇದನ್ನೂ ಓದಿ | Cyber Attack | ಮಿಸ್ಡ್ ಕಾಲ್ ಕೊಟ್ಟು 50 ಲಕ್ಷ ರೂ. ಎಗರಿಸಿದ ಸೈಬರ್ ಖದೀಮರು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

EXPLAINER

Dubai Airport : ದುಬೈನಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಅತಿ ದೊಡ್ಡ ಏರ್​ಪೋರ್ಟ್​​; ಏನಿದರ ವಿಶೇಷತೆ? ಎಲ್ಲ ಮಾಹಿತಿ ಇಲ್ಲಿದೆ

Dubai Airport: ಅಲ್ ಮಕ್ತೌಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ವಿಶ್ವದ ಅತಿದೊಡ್ಡ ಸಾಮರ್ಥ್ಯವನ್ನು ಹೊಂದಿರುತ್ತದೆ, 2.6 ಕೋಟಿ ಪ್ರಯಾಣಿಕರಿಗೆ ಸೌಲಭ್ಯ ಕಲ್ಪಿಸಲಿದೆ. ಇದು ಪ್ರಸ್ತುತ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗಾತ್ರಕ್ಕಿಂತ ಐದು ಪಟ್ಟು ದೊಡ್ಡದಾಗಿರುತ್ತದೆ.

VISTARANEWS.COM


on

Dubai Airport
Koo

ನವದೆಹಲಿ: 2.92 ಲಕ್ಷ ಕೋಟಿ ರೂಪಾಯಿ (35 ಬಿಲಿಯನ್ ಡಾಲರ್) ವೆಚ್ಚದಲ್ಲಿ 400 ಗೇಟ್ ಗಳು ಮತ್ತು ಐದು ಸಮಾನಾಂತರ ರನ್ ವೇಗಳಿರುವ ವಿಶ್ವದ ಅತ್ಯಂತ ದೊಡ್ಡ ಏರ್​ಪೋರ್ಟ್​​ ನಿರ್ಮಾಣ (Dubai Airport) ಮಾಡುವುದಾಗಿ ದುಬೈ ಆಡಳಿತ ಭಾನುವಾರ ಪ್ರಕಟಿಸಿದೆ. ಅದಕ್ಕೆ ಅಲ್ ಮಕ್ತೌಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ ಎಂದು ಹೆಸರಿಡುವುದಾಗಿ ಹೇಳಿದೆ.

“ಇಂದು, ನಾವು ಅಲ್ ಮಕ್ತೌಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ಪ್ರಯಾಣಿಕರ ಟರ್ಮಿನಲ್​ಗಳ ವಿನ್ಯಾಸಗಳನ್ನು ಅನುಮೋದಿಸಿದ್ದೇವೆ. ದುಬೈ ಏವಿಯೇಷನ್ ಕಾರ್ಪೊರೇಷನ್​​ನ ಕಾರ್ಯತಂತ್ರದ ಭಾಗವಾಗಿ 128 ಬಿಲಿಯನ್ ಡಾಲರ್ ವೆಚ್ಚದಲ್ಲಿ ಕಟ್ಟಡದ ನಿರ್ಮಾಣವನ್ನು ಪ್ರಾರಂಭಿಸಿದ್ದೇವೆ” ಎಂದು ದುಬೈ ಆಡಳಿತಗಾರ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಪ್ರಕಟಿಸಿದ್ದಾರೆ.

“ಅಲ್ ಮಕ್ತೌಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ವಿಶ್ವದ ಅತಿದೊಡ್ಡ ಸಾಮರ್ಥ್ಯವನ್ನು ಹೊಂದಿರುತ್ತದೆ, 2.6 ಕೋಟಿ ಪ್ರಯಾಣಿಕರಿಗೆ ಸೌಲಭ್ಯ ಕಲ್ಪಿಸಲಿದೆ. ಇದು ಪ್ರಸ್ತುತ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗಾತ್ರಕ್ಕಿಂತ ಐದು ಪಟ್ಟು ದೊಡ್ಡದಾಗಿರುತ್ತದೆ. ಮುಂಬರುವ ವರ್ಷಗಳಲ್ಲಿ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಎಲ್ಲಾ ಕಾರ್ಯಾಚರಣೆಗಳನ್ನು ಅದಕ್ಕೆ ವರ್ಗಾಯಿಸಲಾಗುವುದು” ಎಂದು ಪೋಸ್ಟ್​​ನಲ್ಲಿ ಬರೆಯಲಾಗಿದೆ.

ಈ ವಿಮಾನ ನಿಲ್ದಾಣ ವಿಶ್ವದ ಅತಿ ದೊಡ್ಡ ನಿಲ್ದಾಣವಾಗುವ ವೇಳೆ ಅಲ್ಲಿ ಇರಬಹುದಾದ ಕೆಲವೊಂದು ಸೌಲಭ್ಯಗಳು ಹಾಗೂ ಇನ್ನಿತರ ಮಾಹಿತಿಗಳ ಬಗ್ಗೆ ಕುತೂಹಲ ಸೃಷ್ಟಿಯಾಗಿದೆ. ಆ ಕುರಿತು ಇಲ್ಲಿದೆ ಸಂಕ್ಷಿಪ್ತ ವಿವರ ಇಲ್ಲಿದೆ.

ಸಾಮರ್ಥ್ಯ ಎಷ್ಟು?


ಅಲ್ ಮಕ್ತೌಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ವಿಶ್ವದ ಹೆಚ್ಚು ಸಾಮರ್ಥ್ಯ ಹೊಂದಿರುವ ವಿಮಾನ ನಿಲ್ದಾಣವಾಗಲಿದೆ. ವಾರ್ಷಿಕವಾಗಿ 2.6 ಕೋಟಿ (260 ಮಿಲಿಯನ್) ಪ್ರಯಾಣಿಕರು ಈ ವಿಮಾನದ ಮೂಲಕ ಪ್ರಯಾಣ ಮಾಡಲಿದ್ದಾರೆ.

ಗಾತ್ರ ಎಷ್ಟು?
ಇದು ಪ್ರಸ್ತುತ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕಿಂತ ಐದು ಪಟ್ಟು ದೊಡ್ಡದಾಗಿರುತ್ತದೆ.

ಮೂಲಸೌಕರ್ಯ ಹೇಗಿರುತ್ತದೆ?

ವಿಮಾನಗಳ ಸುಗಮ ಕಾರ್ಯಾಚರಣೆಗೆ ಅನುಕೂಲವಾಗುವಂತೆ ವಿಮಾನ ನಿಲ್ದಾಣವು 400 ವಿಮಾನ ಗೇಟ್ ಗಳನ್ನು ಹೊಂದಿರುತ್ತದೆ. ಏಕಕಾಲಕ್ಕೆ ಇಲ್ಲಿ ಅಷ್ಟೊಂದು ವಿಮಾನಗಳು ಪ್ರವೇಶಿಸಬಹುದು.

ರನ್ ವೇಗಳು ಎಷ್ಟು?

ವಿಮಾನಗಳ ಸಂಚಾರವನ್ನು ಸಮರ್ಥವಾಗಿ ನಿರ್ವಹಿಸಲು ಇದು ಐದು ಸಮಾನಾಂತರ ರನ್ ವೇಗಳನ್ನು ಹೊಂದಿರುತ್ತದೆ. ಒಂದೇ ಬದಿಯಲ್ಲಿ ಅಷ್ಟೊಂದು ವಿಮಾನಗಳು ಏಕಕಾಲಕ್ಕೆ ಟೇಕ್​ಆಫ್​ ಅಥವಾ ಲ್ಯಾಂಡಿಂಗ್ ಆಗಬಹುದು.

ಹೊಸತೇನು?

ಈ ವಿಮಾನ ನಿಲ್ದಾಣದಲಲಿ ಹೊಸ ವಾಯುಯಾನ ತಂತ್ರಜ್ಞಾನಗಳನ್ನು ಪರಿಚಯಿಸಲಾಗುತ್ತದೆ ಎಂದು ಅವರು ಹೇಳದಿ್ದಾರೆ. ಇದು ವಾಯುಯಾನ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಎಂದು ಹೇಲಾಗಿದೆ.

ವೆಚ್ಚ ಎಷ್ಟು?

ಈ ಯೋಜನೆಗೆ ಸುಮಾರು 2.9 ಲಕ್ಷ ಕೋಟಿ ರೂ. ವೆಚ್ಚವಾಗಲಿದೆ.

ಮುಗಿಯುವುದು ಯಾವಾಗ?

ವರ್ಷಕ್ಕೆ 150 ಮಿಲಿಯನ್ ಪ್ರಯಾಣಿಕರಿಗೆ ಸ್ಥಳಾವಕಾಶ ಕಲ್ಪಿಸುವ ಸಾಮರ್ಥ್ಯವಿರುವ ಮೊದಲ ಹಂತವು 10 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಮುಂದುವರಿದ ಭಾಗವು ಆ ಬಳಿಕ ಸಾಗಲಿದೆ.

ಇದನ್ನೂ ಓದಿ: Pro-Khalistan slogan : ಕೆನಡಾ ಪ್ರಧಾನಿ ಟ್ರುಡೊ ಕಾರ್ಯಕ್ರಮದಲ್ಲಿ ಖಲಿಸ್ತಾನ ಪರ ಘೋಷಣೆ!

ಲಾಜಿಸ್ಟಿಕ್ಸ್ ಮತ್ತು ವಾಯು ಸಾರಿಗೆ ಕ್ಷೇತ್ರಗಳಲ್ಲಿ ವಿಶ್ವದ ಪ್ರಮುಖ ಕಂಪನಿಗಳಿಗೆ ಆತಿಥ್ಯ ವಹಿಸುವ “ದುಬೈ ದಕ್ಷಿಣದ ವಿಮಾನ ನಿಲ್ದಾಣದ ಸುತ್ತಲೂ” ಅವರು ಇಡೀ ನಗರವನ್ನು ನಿರ್ಮಿಸುತ್ತಿದ್ದಾರೆ. ಒಂದು ಮಿಲಿಯನ್ ಜನರಿಗೆ ಉಳಿದುಕೊಳ್ಳುವುದಕ್ಕೂ ಅವಕಾಶ ಮಾಡಿಕೊಡುತ್ತೇವೆ ಎಂದು ಆಡಳಿತಗಾರ ಹೇಳಿದ್ದರೆ.

“ನಾವು ಭವಿಷ್ಯದ ಪೀಳಿಗೆಗಾಗಿ ಹೊಸ ಯೋಜನೆಯನ್ನು ನಿರ್ಮಿಸುತ್ತಿದ್ದೇವೆ ನಮ್ಮ ಮಕ್ಕಳು ಮತ್ತು ಅವರ ಮಕ್ಕಳಿಗೆ ನಿರಂತರ ಮತ್ತು ಸ್ಥಿರ ಅಭಿವೃದ್ಧಿಯನ್ನು ಖಾತ್ರಿಪಡಿಸುತ್ತಿದ್ದೇವೆ. ದುಬೈ ವಿಶ್ವದ ವಿಮಾನ ನಿಲ್ದಾಣ, ಅದರ ಬಂದರು, ಅದರ ನಗರ ಕೇಂದ್ರ ಮತ್ತು ಅದರ ಹೊಸ ಜಾಗತಿಕ ಕೇಂದ್ರವಾಗಲಿದೆ.

Continue Reading

Lok Sabha Election 2024

Lok Sabha Election 2024: ಜೈಲಿನಲ್ಲಿರುವ ಅಮೃತಪಾಲ್ ಚುನಾವಣೆಗೆ ಸ್ಪರ್ಧಿಸಬಹುದು, ಕೇಜ್ರಿವಾಲ್ ಮತ ಚಲಾಯಿಸುವಂತಿಲ್ಲ! ಏನಿದು ನಿಯಮ?

Lok Sabha Election 2024: ಜೈಲಿನಲ್ಲಿರುವ ಇಬ್ಬರು ಖೈದಿಗಳಲ್ಲಿ ಒಬ್ಬರಿಗೆ 2024ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ, ಇನ್ನೊಬ್ಬರಿಗೆ ಮತದಾನ ಮಾಡಲು ಅವಕಾಶ ನೀಡಲಾಗುತ್ತಿಲ್ಲ. ಏನಿದು ಚುನಾವಣೆ ಆಯೋಗದ ನಿಯಮ? ಇಲ್ಲಿದೆ ವಿಸ್ತೃತ ವಿವರಣೆ.

VISTARANEWS.COM


on

By

Lok Sabha Election-2024
Koo

ನವದೆಹಲಿ: ಪ್ರಪಂಚದಾದ್ಯಂತ ಚುನಾವಣೆಗಳಲ್ಲಿ (election) ವಿರೋಧಾಭಾಸಗಳು ಎದುರಾಗುತ್ತವೆ. ಇದರಲ್ಲಿ ಭಾರತವೂ ಹೊರತಾಗಿಲ್ಲ. ಇದೀಗ ಜೈಲಿನಲ್ಲಿರುವ (jail) ಇಬ್ಬರು ಕೈದಿಗಳಲ್ಲಿ (locked up) ಒಬ್ಬರಿಗೆ ಚುನಾವಣೆಗೆ ಸ್ಪರ್ಧಿಸಲು ಅನುಮತಿ ಸಿಕ್ಕಿದ್ದರೆ, ಇನ್ನೊಬ್ಬರಿಗೆ ಮತದಾನ (voting) ಮಾಡಲೂ ಅವಕಾಶ ನೀಡಲಾಗಿಲ್ಲ.

2024ರ ಲೋಕಸಭಾ ಚುನಾವಣೆಯ (Lok Sabha Election‌ 2024) ವೇಳೆ ಭಾರತದಲ್ಲಿ (india) ಅಂತಹ ಒಂದು ವಿರೋಧಾಭಾಸ ಕಾಣಿಸಿಕೊಂಡಿದೆ. 2,300 ಕಿ.ಮೀ. ದೂರದಲ್ಲಿರುವ ಎರಡು ವಿಭಿನ್ನ ಜೈಲುಗಳಲ್ಲಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ಇವರಲ್ಲಿ ಒಬ್ಬರಿಗೆ ಚುನಾವಣೆಗೆ ಸ್ಪರ್ಧಿಸಲು ಅನುಮತಿ ನೀಡಿದ್ದರೆ, ಇನ್ನೊಬ್ಬರಿಗೆ ಮತದಾನ ಮಾಡಲು ಅವಕಾಶ ಸಿಕ್ಕಿಲ್ಲ.

ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತಪಾಲ್ ಸಿಂಗ್ (Amritpal Singh) ಅಸ್ಸಾಂನ ದಿಬ್ರುಗಢ್ ಜೈಲಿನಲ್ಲಿದ್ದರೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ತಿಹಾರ್ ಜೈಲಿನಲ್ಲಿದ್ದಾರೆ.

ಇದನ್ನೂ ಓದಿ: Lok Sabha Election 2024: ದೇಶ, ರಾಜ್ಯಕ್ಕೆ ಬಿಜೆಪಿಯಿಂದ ಖಾಲಿ ಚೊಂಬು ಕೊಟ್ಟಿದ್ದಾರೆ: ರಾಹುಲ್‌ ಗಾಂಧಿ

ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾನೂನು ಅನುಮತಿ ನೀಡಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಂತಹ ಲಕ್ಷಾಂತರ ವಿಚಾರಣಾಧೀನ ಕೈದಿಗಳು ಮತ ಚಲಾಯಿಸಲು ಅನುಮತಿ ನೀಡಲಾಗಿಲ್ಲ. ಯಾಕೆಂದರೆ ಭಾರತ ಕಾನೂನು ಪ್ರಕಾರ ಭಾರತದಲ್ಲಿ ಜನರು ಜೈಲಿನಲ್ಲಿ ಇದ್ದು ಚುನಾವಣೆಗೆ ಸ್ಪರ್ಧಿಸಬಹುದು. ಆದರೆ ಜೈಲಿನಿಂದ ಮತ ಚಲಾಯಿಸಲು ಸಾಧ್ಯವಿಲ್ಲ!


ಅಮೃತ್ ಪಾಲ್ ಸ್ಪರ್ಧೆ

2023ರ ಏಪ್ರಿಲ್ 23ರಿಂದ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಜೈಲಿನಲ್ಲಿರುವ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ಅವರು ಪಂಜಾಬ್‌ನ ಖಾದೂರ್ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.

ದಿಬ್ರುಗಢ ಕೇಂದ್ರ ಕಾರಾಗೃಹದಲ್ಲಿ ಭಾಯಿ ಸಾಹೇಬ್ ಅಮೃತಪಾಲ್ ಅವರನ್ನು ನಾನು ಭೇಟಿ ಮಾಡಿದ್ದೇನೆ. ಖಾಲ್ಸಾ ಪಂಥ್‌ನ ಹಿತಾಸಕ್ತಿಯಿಂದ ಅವರು ಈ ಬಾರಿ ಸಂಸದರಾಗಲು ಖದೂರ್ ಸಾಹಿಬ್‌ನಿಂದ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ನಾನು ಅವರಿಗೆ ವಿನಂತಿಸಿದೆ ಎಂದು ಅಮೃತಪಾಲ್ ಅವರ ವಕೀಲ ರಾಜದೇವ್ ಸಿಂಗ್ ಖಾಲ್ಸಾ ಈ ಹಿಂದೆ ಹೇಳಿದ್ದು, ಭಾಯಿ ಸಾಹೇಬ್ ಒಪ್ಪಿದ್ದಾರೆ ಮತ್ತು ಅವರು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ಅವರು ಹೇಳಿದರು.

ಬಂಧನಕ್ಕೆ ಒಳಗಾಗಿರುವುದು ಏಕೆ?

ಅಮೃತಪಾಲ್ ಸಿಂಗ್ ಅವರನ್ನು ಪಂಜಾಬ್‌ನ ಮೋಗಾ ಜಿಲ್ಲೆಯ ರೋಡ್ ಗ್ರಾಮದಲ್ಲಿ ವರ್ಷದ ಹಿಂದೆ ಬಂಧಿಸಲಾಗಿತ್ತು. ಅಮೃತ್‌ಪಾಲ್ ಸಿಂಗ್ ಅವರು ಬೆಂಬಲಿಗರೊಂದಿಗೆ ಬಂದೂಕು ಮತ್ತು ಕತ್ತಿಗಳನ್ನು ಹಿಡಿದುಕೊಂಡು ಅಮೃತಸರದ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದರಿಂದ ಅವರನ್ನು ಬಂಧಿಸಲಾಯಿತು. ಪ್ರತ್ಯೇಕತಾವಾದಿ ಈತ.

ಜೈಲಿನಿಂದ ಸ್ಪರ್ಧಿಸಿದವರು, ಗೆದ್ದವರಿವರು

1996 ರಲ್ಲಿ, ಡಾನ್- ಟರ್ನ್ಡ್ ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರು ಜೈಲಿನಲ್ಲಿದ್ದಾಗ ಬಿಎಸ್ಪಿ ಟಿಕೆಟ್‌ನಲ್ಲಿ ಉತ್ತರ ಪ್ರದೇಶದ ಮೌ ಅಸೆಂಬ್ಲಿ ಸ್ಥಾನಕ್ಕೆ ಸ್ಪರ್ಧಿಸಿದರು. ಕಳೆದ ತಿಂಗಳು ನಿಧನರಾದ ಅನ್ಸಾರಿ ಅವರು ಜೈಲಿನಿಂದಲೇ ಚುನಾವಣೆಯಲ್ಲಿ ಗೆದ್ದಿದ್ದರು.

2005ರಲ್ಲಿ ಸೆರೆವಾಸದಲ್ಲಿದ್ದ ಮುಖ್ತಾರ್ ಅನ್ಸಾರಿ ಅವರು ಜೈಲಿನಿಂದ 2007, 2012 ಮತ್ತು ಮತ್ತೆ 2017 ರಲ್ಲಿ ಒಟ್ಟು ಮೂರು ಬಾರಿ ಮೌ ಅಸೆಂಬ್ಲಿ ಸ್ಥಾನವನ್ನು ಗೆದ್ದರು.

ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ 1998ರ ಲೋಕಸಭೆ ಚುನಾವಣೆ ವೇಳೆ ಮೇವು ಹಗರಣದಲ್ಲಿ ಜೈಲು ಸೇರಿದ್ದರು. ಬಿಹಾರದ ಮಾಧೇಪುರ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿ ಜೈಲಿನಲ್ಲಿದ್ದೇ ಗೆದ್ದಿದ್ದರು.


ಕೇಜ್ರಿವಾಲ್ ಮತದಾನ ಸಾಧ್ಯವಿಲ್ಲ

ಅಪರಾಧಗಳ ಆರೋಪ ಹೊತ್ತಿರುವ ಜನರು ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ, ಅಪರಾಧಿಗಳೆಂದು ಸಾಬೀತಾಗದ ವಿಚಾರಣಾಧೀನ ಕೈದಿಗಳು ತಮ್ಮ ಮತವನ್ನು ಚಲಾಯಿಸಲು ಸಾಧ್ಯವಿಲ್ಲ.

ತಪ್ಪಿತಸ್ಥರೆಂದು ಸಾಬೀತಾಗದವರಿಗೂ ಭಾರತದಲ್ಲಿ ಜೈಲುಗಳಿಂದ ಮತದಾನ ಮಾಡಲು ಯಾವುದೇ ಅವಕಾಶವಿಲ್ಲ. 2019 ರ ಪ್ರವೀಣ್ ಕುಮಾರ್ ಚೌಧರಿ ವಿರುದ್ಧ ಭಾರತ ಚುನಾವಣಾ ಆಯೋಗದ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಕೈದಿಗಳಿಗೆ ಮತದಾನದ ಹಕ್ಕನ್ನು ಹೊಂದಿಲ್ಲ ಎಂದು ಪುನರುಚ್ಚರಿಸಿದೆ.

ಮೇ 25ರಂದು ದೆಹಲಿ ಮತದಾನ ನಡೆಯಲಿದೆ. ಏಪ್ರಿಲ್ 29 ರಂದು ಸುಪ್ರೀಂ ಕೋರ್ಟ್‌ ನೀಡುವ ತೀರ್ಪಿನ ಮೇಲೆ ಕೇಜ್ರಿವಾಲ್ ಮತ ಚಲಾಯಿಸಬಹುದೇ ಅಥವಾ ಇಲ್ಲವೇ ಎಂಬುದು ನಿರ್ಧಾರವಾಗಲಿದೆ.

ಮಾರ್ಚ್ 21ರಂದು ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟ ಕೇಜ್ರಿವಾಲ್, ಬಹು ಕಸ್ಟಡಿ ವಿಸ್ತರಣೆಗಳು ಮತ್ತು ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ ಅನಂತರ ಅವರನ್ನು ನವದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.

ಬಿಡುಗಡೆಯಾಗದೆ ಇದ್ದರೆ ಹೇಮಂತ್ ಸೊರೆನ್ ಗೂ ಅವಕಾಶ ಇಲ್ಲ

ಭಾರತದಲ್ಲಿ ಐದು ಲಕ್ಷಕ್ಕೂ ಹೆಚ್ಚು ವಿಚಾರಣಾಧೀನ ಕೈದಿಗಳಿದ್ದು, ಅವರಿಗೂ ಮತ ಚಲಾಯಿಸಲು ಸಾಧ್ಯವಿಲ್ಲ. ಅಂತೆಯೇ, ಭೂ ಹಗರಣಕ್ಕೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿರುವ ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೆನ್ ಅವರನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಆದೇಶಿಸದಿದ್ದರೆ ಮತದಾನ ಮಾಡಲಾಗುವುದಿಲ್ಲ.

ತನ್ನ ಬಂಧನವನ್ನು ಪ್ರಶ್ನಿಸಿ ಹೇಮಂತ್ ಸೊರೆನ್ ಬುಧವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಯಾಕೆ ಈ ತಾರತಮ್ಯ?

2021 ರ ರಾಷ್ಟ್ರೀಯ ಅಪರಾಧ ವರದಿಗಳ ಬ್ಯೂರೋ (NCRB) ವರದಿಯ ಪ್ರಕಾರ, ಭಾರತದಾದ್ಯಂತ ವಿವಿಧ ಜೈಲುಗಳಲ್ಲಿ ಒಟ್ಟು 5,54,034 ಕೈದಿಗಳನ್ನು ಬಂಧಿಸಲಾಗಿದೆ. ಅಮೃತಪಾಲ್ ಸಿಂಗ್ ಅವರಿಗೆ ಇನ್ನೂ ಶಿಕ್ಷೆಯಾಗದ ಕಾರಣ ಅವರು ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಶಿಕ್ಷೆಗೊಳಗಾದವರು ಕೂಡ ಜೈಲು ಶಿಕ್ಷೆ ಮುಗಿದ ಆರು ವರ್ಷಗಳ ಬಳಿಕ ಚುನಾವಣೆಗೆ ಸ್ಪರ್ಧಿಸಬಹುದು.

ಅಮೃತಪಾಲ್ ಸಿಂಗ್ ಅವರಂತಹ ಜೈಲಿನಲ್ಲಿರುವ ವ್ಯಕ್ತಿಗಳು ತಮ್ಮ ಪ್ರತಿನಿಧಿಯ ಸಹಾಯದಿಂದ ಜೈಲಿನಿಂದಲೇ ನಾಮಪತ್ರ ಸಲ್ಲಿಸಬಹುದು. ಒಂದು ವೇಳೆ ಜೈಲಿನಲ್ಲಿರುವ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದರೆ, ತಜ್ಞರ ಪ್ರಕಾರ ಜೈಲಿನೊಳಗೆ ಪ್ರಮಾಣ ವಚನ ಬೋಧಿಸಲು ಅವಕಾಶವಿಲ್ಲದ ಕಾರಣ, ಪ್ರಮಾಣ ವಚನ ಸ್ವೀಕರಿಸಲು ಜೈಲಿನಿಂದ ಬಿಡುಗಡೆ ಮಾಡಬಹುದು.

ಆದರೆ ಜೈಲಿನಲ್ಲಿರುವ ವ್ಯಕ್ತಿಯ ಪರವಾಗಿ ಬೇರೆಯವರು ಮತವನ್ನು ಚಲಾಯಿಸಲು ಸಾಧ್ಯವಿಲ್ಲ. ಪತಿ ಅರವಿಂದ್ ಕೇಜ್ರಿವಾಲ್ ಬಂಧನದ ಅ ನಂತರ ಗಮನ ಸೆಳೆದಿರುವ ಸುನೀತಾ ಕೇಜ್ರಿವಾಲ್, ಎಎಪಿ ಪರ ಪ್ರಚಾರ ಮಾಡಲಿದ್ದಾರೆ.

ಪ್ರಜಾಪ್ರತಿನಿಧಿ ಕಾಯಿದೆ 1951ರ ಸೆಕ್ಷನ್ 62 (5) ಪ್ರಕಾರ ಯಾವುದೇ ವ್ಯಕ್ತಿ ಪೊಲೀಸರ ಕಾನೂನುಬದ್ಧ ವಶದಲ್ಲಿದ್ದರೆ ಅಥವಾ ಜೈಲಿನಲ್ಲಿ ಬಂಧಿಯಾಗಿದ್ದಲ್ಲಿ ಯಾವುದೇ ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ.

Continue Reading

ಆರೋಗ್ಯ

 Ayushman Bharat Yojana: ಆಪತ್ಕಾಲದಲ್ಲಿ ಆಯುಷ್ಮಾನ್‌ ಭಾರತ್‌ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ?

Ayushman Bharat Yojana: ಆಯುಷ್ಮಾನ್ ಭಾರತ್ ಯೋಜನೆಯು ಭಾರತದಲ್ಲಿ ಸಾರ್ವತ್ರಿಕ ಆರೋಗ್ಯ ರಕ್ಷಣೆಯತ್ತ ಮಹತ್ವದ ಹೆಜ್ಜೆ. ದುರ್ಬಲ ಕುಟುಂಬಗಳಿಗೆ ಹೆಚ್ಚು ಅಗತ್ಯವಿರುವ ಆರ್ಥಿಕ ರಕ್ಷಣೆಯನ್ನು ನೀಡುತ್ತದೆ. ಇದರ ನೋಂದಣಿ ಪ್ರಕ್ರಿಯೆ ಹೇಗಿರುತ್ತದೆ, ಇದರಿಂದ ಸಿಗುವ ಪ್ರಯೋಜನಗಳ ಮಾಹಿತಿ ಇಲ್ಲಿದೆ.

VISTARANEWS.COM


on

By

Ayushman Bharat Yojana
Koo

ಲಕ್ಷಾಂತರ ಭಾರತೀಯರಿಗೆ (indian) ಆರೋಗ್ಯ (health) ಸೇವೆಯನ್ನು (service) ಹೆಚ್ಚು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡುವ ಗುರಿ ಹೊಂದಿರುವ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯ (Ayushman Bharat Yojana) ಪ್ರಯೋಜನ ಪಡೆಯುವುದು ಇನ್ನೂ ಹಲವಾರು ಮಂದಿಗೆ ಸವಾಲಾಗಿ ಪರಿಣಮಿಸಿದೆ. 2018ರಲ್ಲಿ ಜಾರಿಯಾಗಿರುವ ಆಯುಷ್ಮಾನ್ ಯೋಜನೆ ಇನ್ನೂ ಹಲವು ಮಂದಿಗೆ ಸರಿಯಾಗಿ ಅರ್ಥವೇ ಆಗಿಲ್ಲ. ಇದರಿಂದ ಸಾಕಷ್ಟು ಪರಿಣಾಮಕಾರಿಯಾಗಿ ಎಲ್ಲರನ್ನು ತಲುಪುವುದು ಸಾಧ್ಯವಾಗಿಲ್ಲ. ಭಾರತದಂತಹ ವಿಶಾಲ ಮತ್ತು ವೈವಿಧ್ಯಮಯವಾದ ದೇಶದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವುದು ಸವಾಲಾಗಿದೆ. ಇದನ್ನು ಗುರುತಿಸಿ ಸರ್ಕಾರವು ಆಯುಷ್ಮಾನ್ ಭಾರತ್ ಯೋಜನೆಯನ್ನು ಪ್ರಾರಂಭಿಸಿತು. ಆಯುಷ್ಮಾನ್ ಭಾರತ್ ಯೋಜನೆಯು ಏನನ್ನು ಒಳಗೊಳ್ಳುತ್ತದೆ, ಆಯುಷ್ಮಾನ್ ಕಾರ್ಡ್ ಸೇರಿದಂತೆ ಅದರ ಪ್ರಯೋಜನಗಳಿಗಾಗಿ ಹೇಗೆ ನೋಂದಾಯಿಸಿಕೊಳ್ಳುವುದು ಎಂಬುದರ ಮಾಹಿತಿ ಇಲ್ಲಿದೆ.


ಏನಿದು ಆಯುಷ್ಮಾನ್ ಭಾರತ್ ಯೋಜನೆ?

ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (PMJAY) ಎಂದು ಕರೆಯಲ್ಪಡುವ ಆಯುಷ್ಮಾನ್ ಭಾರತ್ ಯೋಜನೆಯು ಭಾರತ ಸರ್ಕಾರವು ಪರಿಚಯಿಸಿದ ಪ್ರಮುಖ ಆರೋಗ್ಯ ಯೋಜನೆಯಾಗಿದೆ. ದುರಂತದ ಆರೋಗ್ಯ ವೆಚ್ಚಗಳ ವಿರುದ್ಧ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ಆರ್ಥಿಕ ರಕ್ಷಣೆ ನೀಡುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ. ಈ ಯೋಜನೆಯಡಿಯಲ್ಲಿ, ಅರ್ಹ ಫಲಾನುಭವಿಗಳು ನಿಗದಿತ ಆಸ್ಪತ್ರೆಗಳಲ್ಲಿ ನಿರ್ದಿಷ್ಟ ಮೊತ್ತದವರೆಗೆ ನಗದು ರಹಿತ ಆರೋಗ್ಯ ಸೇವೆಗಳನ್ನು ಪಡೆಯಬಹುದು.

ಇದನ್ನೂ ಓದಿ: ORS: ಒಆರ್‌ಎಸ್‌ ಜೀವಜಲ; ಯಾರು, ಎಷ್ಟು ಪ್ರಮಾಣದಲ್ಲಿ ಸೇವಿಸಬಹುದು?

ನೋಂದಣಿ ಹೇಗೆ?

ಆಯುಷ್ಮಾನ್ ಭಾರತ್ ಯೋಜನೆಗೆ ನೋಂದಾಯಿಸಲು ಮೊದಲು ಅದರ ಬಗ್ಗೆ ತಿಳಿದುಕೊಳ್ಳಿ.

ಅರ್ಹತೆಯನ್ನು ಪರಿಶೀಲಿಸಿ

ಆಯುಷ್ಮಾನ್ ಭಾರತ್ ಯೋಜನೆಗೆ ನೋಂದಣಿ ನಡೆಸುವ ಮೊದಲು ಆಯುಷ್ಮಾನ್ ಭಾರತ್ ಯೋಜನೆ ಪಡೆಯುವ ಅರ್ಹತೆ ನಿಮಗಿದೆಯೇ ಎಂಬುದನ್ನು ತಿಳಿದುಕೊಳ್ಳಿ. ಇದು ಪ್ರಾಥಮಿಕವಾಗಿ ಸಾಮಾಜಿಕ ಆರ್ಥಿಕ ಅಂಶಗಳು ಮತ್ತು ಮನೆಯ ಆದಾಯವನ್ನು ಆಧರಿಸಿರುತ್ತದೆ.


ಸಾಮಾನ್ಯ ಸೇವಾ ಕೇಂದ್ರ, ನೆಮ್ಮದಿ ಕೇಂದ್ರ

ಆಯುಷ್ಮಾನ್ ಭಾರತ್ ಯೋಜನೆಗಾಗಿ ನೋಂದಣಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಸಾಮಾನ್ಯ ಸೇವಾ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತವೆ. ನಿಮ್ಮ ಪ್ರದೇಶದಲ್ಲಿ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ, ನೆಮ್ಮದಿ ಕೇಂದ್ರಗಳನ್ನು ಪತ್ತೆ ಮಾಡಿ ಮತ್ತು ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅಲ್ಲಿಗೆ ಭೇಟಿ ಮಾಡಿ.

ಅಗತ್ಯ ದಾಖಲೆಗಳನ್ನು ಒದಗಿಸಿ

ನೋಂದಣಿ ಪ್ರಕ್ರಿಯೆಯಲ್ಲಿ ನಿಮ್ಮ ಅರ್ಹತೆಯನ್ನು ಸ್ಥಾಪಿಸಲು ನೀವು ಕೆಲವು ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಇವುಗಳು ಗುರುತಿನ ಪುರಾವೆ, ವಿಳಾಸ ಪುರಾವೆ ಮತ್ತು ಆದಾಯ ಪ್ರಮಾಣಪತ್ರವನ್ನು ಒಳಗೊಂಡಿರುತ್ತದೆ.

ಸಂಪೂರ್ಣ ನೋಂದಣಿ ಅರ್ಜಿ

ಒದಗಿಸಿದ ಮಾಹಿತಿಯ ನಿಖರತೆ ಮತ್ತು ಸಂಪೂರ್ಣತೆಯನ್ನು ಖಚಿತಪಡಿಸಿಕೊಳ್ಳಲು ಸಾಮಾನ್ಯ ಸೇವಾ ಕೇಂದ್ರದಲ್ಲಿ ಒದಗಿಸಲಾದ ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಿ. ನಿಮ್ಮ ಕುಟುಂಬದ ಸದಸ್ಯರು, ಆದಾಯ ಮತ್ತು ಇತರ ಸಂಬಂಧಿತ ಮಾಹಿತಿಯ ಕುರಿತು ವಿವರಗಳನ್ನು ಒದಗಿಸಿ.

ಪರಿಶೀಲನೆ ಪ್ರಕ್ರಿಯೆ

ನೋಂದಣಿ ಫಾರ್ಮ್ ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಅನಂತರ ಅಧಿಕಾರಿಗಳು ಆಯುಷ್ಮಾನ್ ಭಾರತ್ ಯೋಜನೆಗೆ ನಿಮ್ಮ ಅರ್ಹತೆಯನ್ನು ಪರಿಶೀಲಿಸುತ್ತಾರೆ. ಈ ಪರಿಶೀಲನಾ ಪ್ರಕ್ರಿಯೆಯು ಸರ್ಕಾರಿ ಡೇಟಾಬೇಸ್‌ಗಳೊಂದಿಗೆ ಒದಗಿಸಲಾದ ಮಾಹಿತಿಯನ್ನು ಕ್ರಾಸ್-ಚೆಕ್ ಮಾಡುವುದನ್ನು ಒಳಗೊಂಡಿರುತ್ತದೆ.

ಆಯುಷ್ಮಾನ್ ಕಾರ್ಡ್ ಸ್ವೀಕರಿಸಿ

ಅರ್ಹತೆಯ ಯಶಸ್ವಿ ಪರಿಶೀಲನೆಯ ಅನಂತರ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಹೊಂದಿರುವ ಆಯುಷ್ಮಾನ್ ಕಾರ್ಡ್ ಅನ್ನು ನಿಮಗೆ ನೀಡಲಾಗುತ್ತದೆ. ಈ ಕಾರ್ಡ್ ಯೋಜನೆಯಲ್ಲಿ ನಿಮ್ಮ ದಾಖಲಾತಿಗೆ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಎಂಪನೆಲ್ಡ್ ಆಸ್ಪತ್ರೆಗಳಲ್ಲಿ ನಗದು ರಹಿತ ಆರೋಗ್ಯ ಸೇವೆಗಳನ್ನು ಪ್ರವೇಶಿಸಲು ಅನುಮತಿ ನೀಡುತ್ತದೆ.

doctor

ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಿ

ಆಯುಷ್ಮಾನ್ ಕಾರ್ಡ್‌ನೊಂದಿಗೆ ನೀವು ಇದೀಗ ಆಯುಷ್ಮಾನ್ ಭಾರತ್ ಯೋಜನೆಯ ಅಡಿಯಲ್ಲಿ ಯಾವುದೇ ಎಂಪನೆಲ್ ಮಾಡಲಾದ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಗಳನ್ನು ಪಡೆಯಬಹುದು. ನಗದು ರಹಿತ ಚಿಕಿತ್ಸಾ ಪ್ರಕ್ರಿಯೆಯನ್ನು ಪ್ರಾರಂಭಿಸಲು ನಿಮ್ಮ ಕಾರ್ಡ್ ಅನ್ನು ಆಸ್ಪತ್ರೆಯ ಸ್ವಾಗತ ವಿಭಾಗದಲ್ಲಿ ನೀಡಿ.

ಪ್ರಯೋಜನಗಳು ಏನೇನು?

ಆಯುಷ್ಮಾನ್ ಕಾರ್ಡ್‌ ಹೊಂದಿರುವುದರಿಂದ ಪ್ರಮುಖ ಪ್ರಯೋಜನಗಳು ಇಂತಿವೆ.

ದುರ್ಬಲ ಕುಟುಂಬಗಳಿಗೆ ರಕ್ಷಣೆ

ಆಯುಷ್ಮಾನ್ ಭಾರತ್ ಯೋಜನೆಯು ಭಾರತದಾದ್ಯಂತ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹೆಚ್ಚಿನ ಆರೋಗ್ಯ ವೆಚ್ಚಗಳ ವಿರುದ್ಧ ಆರ್ಥಿಕ ರಕ್ಷಣೆ ನೀಡುತ್ತದೆ.

ನಗದು ರಹಿತ ಚಿಕಿತ್ಸೆ

ಯೋಜನೆಯ ಫಲಾನುಭವಿಗಳು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕುಟುಂಬಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿ ನಿಗದಿತ ಆಸ್ಪತ್ರೆಗಳಲ್ಲಿ 5 ಲಕ್ಷ ರೂ.ವರೆಗೆ ನಗದು ರಹಿತ ಚಿಕಿತ್ಸೆಯನ್ನು ಪಡೆಯಬಹುದು.

ವ್ಯಾಪಕ ಆಸ್ಪತ್ರೆ ನೆಟ್‌ವರ್ಕ್

ಅಯುಷ್ಮಾನ್ ಯೋಜನೆಯು ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳನ್ನು ಒಳಗೊಂಡಂತೆ ನಿಗದಿತ ಆಸ್ಪತ್ರೆಗಳ ವ್ಯಾಪಕ ಜಾಲವನ್ನು ಹೊಂದಿದೆ. ಇದು ದೇಶದಾದ್ಯಂತ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಪಡೆಯಲು ಸಹಕರಿಸುತ್ತದೆ.

Ayushman Card

ಆಯುಷ್ಮಾನ್ ಕಾರ್ಡಗೆ ಅಗತ್ಯವಿರುವ ದಾಖಲೆಗಳು

1. ನಿವಾಸದ ಗುರುತು ಪತ್ರ
2. ವಯಸ್ಸು ಮತ್ತು ಗುರುತಿನ ಪುರಾವೆ- ಉದಾಹರಣೆಗೆ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್
3. ಜಾತಿ ಪ್ರಮಾಣಪತ್ರ
4. ಸಂಪರ್ಕ ಮಾಹಿತಿ- ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ ಇತ್ಯಾದಿ
5. ಆದಾಯ ಪ್ರಮಾಣ ಪತ್ರ
6. ಪ್ರಸ್ತುತ ಕುಟುಂಬದ ಸ್ಥಿತಿಯನ್ನು ಸೂಚಿಸುವ ದಾಖಲೆಗಳು

Continue Reading

ವಾಣಿಜ್ಯ

Donkey milk: ಕತ್ತೆ ಹಾಲು ಲೀಟರ್‌ಗೆ 7000 ರೂ! ಈ ಹಾಲಿಗೆ ಏಕಿಷ್ಟು ಡಿಮ್ಯಾಂಡ್‌?

Donkey milk: ಹಾಲು ಉದ್ಯಮದಲ್ಲಿ ಕತ್ತೆಯ ಹಾಲು ಇಂದು ಬಿಳಿ ಚಿನ್ನವಾಗಿದೆ. ಗುಜರಾತ್‌ನಲ್ಲಿ ಧೀರೇನ್ ಸೋಲಂಕಿ ಅವರು ಕತ್ತೆಯ ಹಾಲು ಉತ್ಪಾದನೆಯಲ್ಲಿ ಕ್ರಾಂತಿಯನ್ನು ಮಾಡುತ್ತಿದ್ದಾರೆ. ಅವರು ಅದರ ಹಾಲನ್ನು ಗೋವಿನ ಪ್ರತಿಸ್ಪರ್ಧಿಗಳು ಉತ್ಪಾದಿಸುವ ಹಾಲಿನ 70 ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇಷ್ಟಕ್ಕೂ ಈ ಕತ್ತೆ ಹಾಲಿಗೆ ಏಕಿಷ್ಟು ಡಿಮ್ಯಾಂಡ್‌? ಇದರ ಹಿನ್ನೆಲೆ ಏನು? ಇಲ್ಲಿದೆ ಕುತೂಹಲಕರ ಮಾಹಿತಿ.

VISTARANEWS.COM


on

By

donkey milk
Koo

ಹಾಲು (milk) ಮಾರಾಟ ಮಾಡಿ ತಿಂಗಳಿಗೊಂದು ಎಷ್ಟು ಆದಾಯ ಗಳಿಸಬಹುದು? ಅಬ್ಬಬ್ಬಾ ಎಂದರೆ 10 ಸಾವಿರ ರೂ. ಗಡಿ ದಾಟಿದರೆ ಬಹುದೊಡ್ಡದು. ಆದರೆ ಇಲ್ಲೊಬ್ಬರು ಹಾಲು ಮಾರಾಟದಿಂದಲೇ ತಿಂಗಳಿಗೆ 2- 3 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಆದರೆ ಇವರು ಮಾರುತ್ತಿರುವ ಹಾಲು ಹಸುವಿನದಲ್ಲ (cow) ಕತ್ತೆಯದ್ದು (Donkey milk).

ಹಾಲು ಉದ್ಯಮದಲ್ಲಿ ಕತ್ತೆಯ ಹಾಲು ಇಂದು ಬಿಳಿ ಚಿನ್ನವಾಗಿದೆ (white gold). ಗುಜರಾತ್‌ನಲ್ಲಿ (gujarat) ಧೀರೇನ್ ಸೋಲಂಕಿ ( Dhiren Solanki) ಅವರು ಕತ್ತೆಯ ಹಾಲು ಉತ್ಪಾದನೆಯಲ್ಲಿ ಕ್ರಾಂತಿಯನ್ನು ಮಾಡುತ್ತಿದ್ದಾರೆ. ಅವರು ಅದರ ಹಾಲನ್ನು ಗೋವಿನ ಪ್ರತಿಸ್ಪರ್ಧಿಗಳು ಉತ್ಪಾದಿಸುವ ಹಾಲಿನ 70 ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಪಟಾನ್ ಜಿಲ್ಲೆಯಲ್ಲಿ 42 ಕತ್ತೆಗಳಿರುವ ಫಾರ್ಮ್ ಹೊಂದಿರುವ ಧೀರೇನ್ ಸೋಲಂಕಿ, ದಕ್ಷಿಣ ಪ್ರದೇಶಗಳಲ್ಲಿನ ಗ್ರಾಹಕರಿಗೆ ಬೆಲೆಬಾಳುವ ಹಾಲನ್ನು ಮಾರಾಟ ಮಾಡುವ ಮೂಲಕ ತಿಂಗಳಿಗೆ 2- 3 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ಇದನ್ನೂ ಓದಿ: Tech Mahindra: ಫ್ರೆಶರ್‌ಗಳಿಗೆ ಗುಡ್‌ ನ್ಯೂಸ್;‌ 6 ಸಾವಿರ ಜನರನ್ನು ನೇಮಕ ಮಾಡಲಿದೆ ಮಹೀಂದ್ರಾ!

ಸುಮಾರು ಎಂಟು ತಿಂಗಳ ಹಿಂದೆ ಕೇವಲ 20 ಕತ್ತೆಗಳೊಂದಿಗೆ 22 ಲಕ್ಷ ರೂ.ಗಳ ಆರಂಭಿಕ ಹೂಡಿಕೆ ಮಾಡಿರುವ ಸೋಲಂಕಿ ಈಗ ಕೋಟ್ಯಂತರ ಮೌಲ್ಯದ ಹಾಲು ವ್ಯಾಪಾರ ನಡೆಸುತ್ತಿದ್ದಾರೆ.

ಪ್ರಾರಂಭದಲ್ಲಿ ಸವಾಲು

ಗುಜರಾತ್‌ ನಲ್ಲಿ ಕತ್ತೆ ಹಾಲಿಗೆ ಹೆಚ್ಚು ಬೇಡಿಕೆ ಇಲ್ಲದ ಕಾರಣ ಪ್ರಾರಂಭಿಸಿದ ಐದು ತಿಂಗಳು ಸೋಲಂಕಿ ಅವರು ತುಂಬಾ ಕಷ್ಟ ಪಟ್ಟಿದ್ದರು. ಅದರ ಅನಂತರ ಅವರು ದಕ್ಷಿಣ ಭಾರತದಲ್ಲಿ ಕತ್ತೆ ಹಾಲಿನ ಹೆಚ್ಚಿನ ಅಗತ್ಯತೆ ಇರುವಲ್ಲಿ ತಮ್ಮ ವ್ಯಾಪ್ತಿಯನ್ನು ಬೆಳೆಸುವ ನಿರ್ಧಾರವನ್ನು ಮಾಡಿದರು.

ಪ್ರಸ್ತುತ ಅವರು ಕತ್ತೆ ಹಾಲನ್ನು ಹೆಚ್ಚಾಗಿ ಕರ್ನಾಟಕ ಮತ್ತು ಕೇರಳ ರಾಜ್ಯಗಳಿಗೆ ಒದಗಿಸುತ್ತಿದ್ದಾರೆ. ಅವರ ಕೆಲವು ಗ್ರಾಹಕರು ಕತ್ತೆಗಳ ಹಾಲನ್ನು ಬಳಸುವ ಸೌಂದರ್ಯವರ್ಧಕ ಸಂಸ್ಥೆಗಳಾಗಿವೆ.


ಲೀಟರ್‌ಗೆ 5ರಿಂದ 7 ಸಾವಿರ ರೂ.

ಸೋಲಂಕಿ ಪ್ರಕಾರ ಕತ್ತೆ ಹಾಲು ಮಾರುಕಟ್ಟೆಯಲ್ಲಿ ಪ್ರತಿ ಲೀಟರ್‌ಗೆ 5,000 ರಿಂದ 7,000 ರೂ. ಗೆ ಮಾರಾಟವಾಗುತ್ತಿದೆ. ಹಸುವಿನ ಹಾಲಿಗೆ ಹೋಲಿಸಿದರೆ ಲೀಟರ್‌ಗೆ 65 ರೂ. ಗೆ ಮಾರಾಟವಾಗುತ್ತದೆ. ಹಾಲಿನ ತಾಜಾತನವನ್ನು ಕಾಪಾಡಲು ರೆಫ್ರಿಜರೇಟರ್‌ಗಳಲ್ಲಿ ಇರಿಸಲಾಗುತ್ತದೆ.

ದುಬಾರಿಯಾಗಲು ಕಾರಣ

ಕತ್ತೆಯ ಹಾಲಿನ ಬಗ್ಗೆ ಜನಪ್ರಿಯತೆ ಈಗಷ್ಟೇ ಬೆಳೆಯುತ್ತಿದೆ. ಬಹುತೇಕ ಫಾರ್ಮ್‌ಗಳು ಚಿಕ್ಕದಾಗಿದ್ದು, ಐದರಿಂದ 30 ಹಾಲು ಕರೆಯುವ ಕತ್ತೆಗಳನ್ನು ಒಳಗೊಂಡಿರುತ್ತದೆ. ಪ್ರತಿ ದಿನವೂ ಸರಿಸುಮಾರು ನಾಲ್ಕು ಕಪ್ ಅಂದರೆ ಒಂದು ಲೀಟರ್ ಹಾಲನ್ನು ಮಾತ್ರ ಉತ್ಪಾದಿಸಲಾಗುತ್ತದೆ. ಹೀಗಾಗಿ ಹಾಲು ಸ್ವಲ್ಪ ದುಬಾರಿಯಾಗಿದೆ ಮತ್ತು ಪಡೆಯುವುದು ಕಷ್ಟವಾಗುತ್ತದೆ.

ಕತ್ತೆ ಹಾಲಿನ ಪ್ರಯೋಜನಗಳು

ಕತ್ತೆ ಹಾಲಿನ ಬಳಕೆ ಸುಮಾರು 10 ಸಾವಿರ ವರ್ಷಗಳಿಂದಲೂ ಇದೆ. ಅದರ ಪೌಷ್ಟಿಕಾಂಶ ದಿಂದಾಗಿ ಸೌಂದರ್ಯವರ್ಧಕಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಹಲವಾರು ಆರೋಗ್ಯ ಪ್ರಯೋಜನಗಳಿಂದಾಗಿ ಇದು ಇತ್ತೀಚಿನ ದಿನಗಳಲ್ಲಿ ಇದಕ್ಕೆ ಮತ್ತೆ ಬೇಡಿಕೆ ಹೆಚ್ಚಾಗುತ್ತಿದೆ.

ಕತ್ತೆ ಹಾಲಿನ ಇತಿಹಾಸ

ಹಿಂದಿನ ಕಾಲದಲ್ಲಿ ಶಿಶುಗಳ ಆಹಾರಕ್ಕಾಗಿ ಕತ್ತೆ ಹಾಲನ್ನು ಬಳಸುವುದು ಸಾಮಾನ್ಯವಾಗಿತ್ತು. ಈಜಿಪ್ಟಿನ ರಾಣಿ ಕ್ಲಿಯೋಪಾತ್ರ ಕೂಡ ಅದನ್ನು ಇಷ್ಟಪಟ್ಟಿದ್ದಳು. ಅವಳು ತನ್ನ ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳಲು ಕತ್ತೆ ಹಾಲಿನಲ್ಲಿ ಸ್ನಾನ ಮಾಡುತ್ತಿದ್ದಳು. ದಂತಕಥೆಯ ಪ್ರಕಾರ ಅವಳಿಗೆ ನಿತ್ಯ ಅಗತ್ಯವಾದ ಹಾಲು ಒದಗಿಸಲು ಸುಮಾರು 700 ಕತ್ತೆಗಳು ಬೇಕಾಗಿದ್ದವು ಎನ್ನಲಾಗುತ್ತದೆ.

ಕತ್ತೆ ಹಾಲು ಮುಖದ ಚರ್ಮದಿಂದ ಸುಕ್ಕುಗಳನ್ನು ನಿವಾರಿಸುತ್ತದೆ. ಚರ್ಮವನ್ನು ಮೃದು ಮತ್ತು ಬಿಳಿಯನ್ನಾಗಿ ಮಾಡುತ್ತದೆ ಎಂದು ನಂಬಲಾಗಿದೆ. ರೋಮನ್ ಚಕ್ರವರ್ತಿ ನೀರೋನ ಹೆಂಡತಿ ಪೊಪ್ಪಿಯಾ ಸ್ನಾನಕ್ಕೂ ಸಹ ಕತ್ತೆ ಬಳಸುತ್ತಿದ್ದಳು. ಈ ಕಾರಣಕ್ಕಾಗಿ, ಅವಳು ಪ್ರಯಾಣ ಮಾಡುವಾಗ ಕತ್ತೆಗಳ ಹಿಂಡುಗಳನ್ನು ಜೊತೆಗೆ ಕೊಂಡೊಯ್ಯುತ್ತಿದ್ದಳು.

ಕತ್ತೆ ಹಾಲಿನ ವಿಶೇಷತೆ

ಕತ್ತೆ ಹಾಲು ಹಸುವಿನ ಹಾಲು ಮತ್ತು ಮಾನವ ಎದೆ ಹಾಲು ಹಲವಾರು ಪೌಷ್ಟಿಕಾಂಶಗಳನ್ನು ಹೊಂದಿದೆ. ಪ್ರೋಟೀನ್ ಜೊತೆಗೆ ಇದು ಜೀವಸತ್ವ, ವಿಶೇಷವಾಗಿ ವಿಟಮಿನ್ ಡಿ ಮತ್ತು ಖನಿಜಗಳನ್ನು ಒಳಗೊಂಡಿರುತ್ತದೆ. ಕತ್ತೆ ಹಾಲು ಕಡಿಮೆ ಕೊಬ್ಬು ಮತ್ತು ಕ್ಯಾಲೋರಿಗಳನ್ನು ಹೊಂದಿದ್ದು, ಇವುಗಳಲ್ಲಿ ಹೆಚ್ಚಿನವು ಕಾರ್ಬೋಹೈಡ್ರೇಟ್‌ಗಳಿಂದ ಲ್ಯಾಕ್ಟೋಸ್ ಹಾಲಿನಲ್ಲಿರುವ ಸಕ್ಕರೆಯ ರೂಪದಲ್ಲಿರುತ್ತದೆ.

ಹಸುವಿನ ಹಾಲಿನ ಪ್ರೋಟೀನ್ ಅಲರ್ಜಿಯನ್ನು ಹೊಂದಿರುವ ಅನೇಕ ಜನರು ಕತ್ತೆ ಹಾಲನ್ನು ಅದರ ಕಡಿಮೆ ಕ್ಯಾಸೀನ್ ಮಟ್ಟದಿಂದ ಸೇವಿಸಬಹುದು. ಏಕೆಂದರೆ ಕತ್ತೆ ಹಾಲು ಅಲರ್ಜಿಯ ಪ್ರತಿಕ್ರಿಯೆಯನ್ನು ಉಂಟುಮಾಡುವುದಿಲ್ಲ.


ಕತ್ತೆ ಹಾಲಿನಲ್ಲಿ ಲ್ಯಾಕ್ಟೋಸ್, ಕ್ಯಾಲ್ಸಿಯಂ ಅನ್ನು ಒಳಗೊಂಡಿದ್ದು, ಬಲವಾದ ಮೂಳೆಗಳಿಗೆ ಅಗತ್ಯವಾದ ಖನಿಜಾಂಶವನ್ನು ಇದು ಒಳಗೊಂಡಿದೆ.

2010ರ ಪ್ರಯೋಗಾಲಯದ ಅಧ್ಯಯನದ ಪ್ರಕಾರ ಕತ್ತೆ ಹಾಲು ಸೈಟೊಕಿನ್‌ಗಳ ಬಿಡುಗಡೆಯನ್ನು ಹೆಚ್ಚಿಸುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುವ ಪ್ರೋಟೀನ್‌ಗಳಾಗಿವೆ. ಹಾಲು ನೈಟ್ರಿಕ್ ಆಕ್ಸೈಡ್ ಅನ್ನು ಉತ್ಪಾದಿಸಲು ಜೀವಕೋಶಗಳಿಗೆ ಕಾರಣವಾಗುತ್ತದೆ. ಇದು ರಕ್ತನಾಳಗಳನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಿ ರಕ್ತದ ಹರಿವನ್ನು ಸುಧಾರಿಸುತ್ತದೆ.

Continue Reading
Advertisement
IPL 2024
ಕ್ರೀಡೆ7 seconds ago

IPL 2024 : ರೋಹಿತ್​ ಶರ್ಮಾ ಬೆಂಚು ಕಾಯುವಂತೆ ಮಾಡಿದ ಹಾರ್ದಿಕ್ ಪಾಂಡ್ಯ

Darshanam Mogulaiah
ದೇಶ6 mins ago

Darshanam Mogulaiah: 2 ವರ್ಷದ ಹಿಂದೆ ಪದ್ಮಶ್ರೀ ಪಡೆದ ಸಾಧಕ ಈಗ ಹೊಟ್ಟೆಪಾಡಿಗಾಗಿ ಕೂಲಿ ಕಾರ್ಮಿಕ!

Prajwal Revanna Case Who is the kingpin of Prajwal video pen drive HDK team is on its way
ಕ್ರೈಂ11 mins ago

Prajwal Revanna Case: ಪ್ರಜ್ವಲ್‌ ವಿಡಿಯೊ ಪೆನ್‌ಡ್ರೈವ್ ಕಿಂಗ್‌ಪಿನ್ ಯಾರು? ಬೆನ್ನತ್ತಿ ಹೊರಟಿದೆ ಎಚ್‌ಡಿಕೆ ಟೀಂ!

KL Rahul
ಕ್ರೀಡೆ21 mins ago

KL Rahul : ವಿಶ್ವ ಕಪ್​ ತಂಡಕ್ಕೆ ಕೆ. ಎಲ್​ ರಾಹುಲ್​ ಬೇಡ ಅಂದಿದ್ದು ರೋಹಿತ್ ಶರ್ಮಾ; ಆಂತರಿಕ ಮಾಹಿತಿ ಬಹಿರಂಗ

Physical Abuse
ಕರ್ನಾಟಕ38 mins ago

Physical Abuse: ದಲಿತ ಬಾಲಕಿಯನ್ನು ಗರ್ಭಿಣಿ ಮಾಡಿ ಎಸ್ಕೇಪ್ ಆಗಿದ್ದ ಸದ್ದಾಂ ಹುಸೇನ್ ಅರೆಸ್ಟ್‌

Rachita Taneja
ದೇಶ52 mins ago

Rachita Taneja: ಭಾರತದ ಕಾರ್ಟೂನಿಸ್ಸ್ ರಚಿತಾ ತನೇಜಾಗೆ ಕೋಫಿ ಅನ್ನಾನ್‌ ಪ್ರಶಸ್ತಿ ಗರಿ

Rahul Gandhi
ಪ್ರಮುಖ ಸುದ್ದಿ54 mins ago

Rahul Gandhi : ಮಹಾತ್ಮ ರಾಹುಲ್​, ಕುತಂತ್ರಿ ಗಾಂಧೀಜಿ; ಚರ್ಚೆಗೆ ಗ್ರಾಸವಾಯ್ತು​ ಕಾಂಗ್ರೆಸ್​ ನಾಯಕನ ಹೇಳಿಕೆ

Prajwal Revanna Case Kidnapping case filed against Revanna Anticipatory bail plea postponed
ಕ್ರೈಂ56 mins ago

Prajwal Revanna Case: ರೇವಣ್ಣ ಮೇಲೆ ಕಿಡ್ನ್ಯಾಪ್‌ ಕೇಸ್;‌ ನಿರೀಕ್ಷಣಾ ಜಾಮೀನು ಅರ್ಜಿ ಮುಂದೂಡಿಕೆ, ನಾಳೆ SIT ಮುಂದೆ ಹಾಜರ್‌?

Prajwal Revanna Case HD Revanna ready to leave the country SIT issues lookout notice
ಕ್ರೈಂ1 hour ago

Prajwal Revanna Case: ದೇಶ ಬಿಟ್ಟು ಹೋಗಲು ಸಜ್ಜಾದರೇ ಎಚ್.ಡಿ. ರೇವಣ್ಣ? ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿದ SIT!

IPL 2024
Latest1 hour ago

IPL 2024 : ಕೊಹ್ಲಿಯ ಸ್ಟ್ರೈಕ್ ರೇಟ್ ಪ್ರಶ್ನಿಸುವವರಿಗೆ ತಕ್ಕ ಪಾಠ ಹೇಳಿದ ಕೈಫ್​, ಪಠಾಣ್​​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Bengaluru Rains
ಮಳೆ5 hours ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ17 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ1 day ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ2 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ4 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20244 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ5 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

ಟ್ರೆಂಡಿಂಗ್‌