Urfi Javed | ʻಬೇಷರಮ್‌ ರಂಗ್‌ʼ ಹಾಡಿಗೆ ಕೇಸರಿ ಬಣ್ಣದ ತುಂಡು ಬಟ್ಟೆ ಧರಿಸಿ ಕ್ಯಾಟ್‌ ವಾಕ್‌ ಮಾಡಿದ ಉರ್ಫಿ! - Vistara News

ಬಾಲಿವುಡ್

Urfi Javed | ʻಬೇಷರಮ್‌ ರಂಗ್‌ʼ ಹಾಡಿಗೆ ಕೇಸರಿ ಬಣ್ಣದ ತುಂಡು ಬಟ್ಟೆ ಧರಿಸಿ ಕ್ಯಾಟ್‌ ವಾಕ್‌ ಮಾಡಿದ ಉರ್ಫಿ!

ಪಠಾಣ್‌ ಸಿನಿಮಾದ ʻಬೇಷರಮ್‌ ರಂಗ್ʼ ಬಿಡುಗಡೆಯಾದಾಗಿನಿಂದ ದೊಡ್ಡ ವಿವಾದವನ್ನು ಹುಟ್ಟುಹಾಕಿದೆ. ಉರ್ಫಿ ಜಾವೇದ್‌ (Urfi Javed ) ಕೇಸರಿ ಕಟ್-ಔಟ್ ಟಾಪ್‌ನಲ್ಲಿ ʻಬೇಷರಮ್‌ ರಂಗ್‌ʼ ಸಾಂಗ್‌ಗೆ ಕ್ಯಾಟ್‌ ವಾಕ್‌ ಮಾಡಿರುವ ವಿಡಿಯೊ ವೈರಲ್‌ ಆಗಿದೆ.

VISTARANEWS.COM


on

Urfi Javed
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಶಾರುಖ್‌ ಖಾನ್‌- ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್‌’ ಸಿನಿಮಾದ ಕೇಸರಿ ವಿವಾದದ ಬೆನ್ನಲ್ಲೇ ಇದೀಗ ಫ್ಯಾಷನ್‌ ಐಕಾನ್‌ ಖ್ಯಾತಿಯ ಉರ್ಫಿ ಜಾವೇದ್‌ (Urfi Javed ) ಕೇಸರಿ ಕಟ್-ಔಟ್ ಟಾಪ್‌ನಲ್ಲಿ ʻಬೇಷರಮ್‌ ರಂಗ್‌ʼ ಸಾಂಗ್‌ಗೆ ಕ್ಯಾಟ್‌ ವಾಕ್‌ ಮಾಡಿರುವ ವಿಡಿಯೊ ಇನ್‌ ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಪಠಾಣ್‌ ಸಿನಿಮಾದ ʻಬೇಷರಮ್‌ ರಂಗ್ʼ ಬಿಡುಗಡೆಯಾದಾಗಿನಿಂದ ದೊಡ್ಡ ವಿವಾದವನ್ನು ಹುಟ್ಟುಹಾಕಿದೆ. ಹಲವಾರು ರಾಜಕಾರಣಿಗಳು ದೀಪಿಕಾ ಪಡುಕೋಣೆ ಅವರ ʻಕೇಸರಿʼ ಬಿಕಿನಿ ಮತ್ತು ಶಾರುಖ್‌ ಅವರ ʻಹಸಿರುʼ ಶರ್ಟ್‌ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಇದೀಗ ಬೇಷರಮ್ ರಂಗ್‌ ಹಾಡಿಗೆ ಕಟ್-ಔಟ್ ಕೇಸರಿ ಬಟ್ಟೆ ಧರಿಸಿ ಉರ್ಫಿ ಸುದ್ದಿಯಾಗಿದ್ದಾರೆ. ಉರ್ಫಿ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ, ನಟಿ ಕೇಸರಿ ಕಟ್-ಔಟ್ ಟಾಪ್ ಮತ್ತು ಮ್ಯಾಚಿಂಗ್ ಹೀಲ್ಸ್‌ನೊಂದಿಗೆ ಜೋಡಿಯಾಗಿರುವ ಸಣ್ಣ ಸ್ಕರ್ಟ್‌ನಲ್ಲಿ ಕ್ಯಾಟ್‌ ವಾಕ್‌ ಮಾಡಿದ್ದಾರೆ. ಈ ವಿಡಿಯೊಗೆ ನೆಟ್ಟಿಗರು ಸಖತ್‌ ಕ್ಲಾಸ್‌ ತೆಗೆದುಕೊಂಡಿದ್ದು ʻʻಕೇಸರಿ ವಿವಾದಕ್ಕಾಗಿ ಕೇಸರಿ ಬಣ್ಣದ ಉಡುಪನ್ನು ಧರಿಸಿದ್ದಾರೆ. ಜನರ ಗಮನ ಸೆಳೆಯಲು (attention seeking) ಹೀಗೆ ಮಾಡುತ್ತಿದ್ದಾರೆʼʼ ಎಂದು ಕಮೆಂಟ್‌ ಮಾಡಿದರೆ, ಇನ್ನೊಬ್ಬರು ʻʻಮತ್ತೆ ಕೇಸರಿ ಬಣ್ಣವನ್ನು ಅವಮಾನಿಸಲಾಗುತ್ತಿದೆ. ವಿವಾದವನ್ನು ಸೃಷ್ಟಿಸಬೇಡಿ” ಎಂದು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ | Urfi Javed | ʻʻನನ್ನನ್ನು ಯಾರೂ ಬಂಧಿಸಿಲ್ಲ, ಆಗಿದ್ದೇ ಬೇರೆʼʼ: ಉರ್ಫಿ ಜಾವೇದ್‌ ಹೇಳಿದ್ದೇನು?

ಬಿಜೆಪಿ ಮಹಾರಾಷ್ಟ್ರ ಮಹಿಳಾ ಮೋರ್ಚಾ ಅಧ್ಯಕ್ಷೆ ಚಿತ್ರಾ ವಾಘ್ ಅವರು ಉರ್ಫಿ ವಿರುದ್ಧ “ಇವರು ಮುಂಬೈನ ಬೀದಿಗಳಲ್ಲಿ ದೇಹವನ್ನು ಪ್ರದರ್ಶಿಸುತ್ತಾ ತಿರುಗಾಡುತ್ತಿದ್ದಾರೆ” ಎಂದು ದೂರು ದಾಖಲಿಸಿದ್ದರು. ಇದಕ್ಕೆ ಖಡಕ್‌ ಆಗಿ ಪ್ರತಿಕ್ರಿಯಿಸಿದ ಉರ್ಫಿ “ಸಂವಿಧಾನದಲ್ಲಿ ಇನ್ನು ತಡೆಯುವ ಯಾವುದೇ ವಿಧಿ ಇಲ್ಲ’ ಎಂದಿದ್ದರು.

ಇದನ್ನೂ ಓದಿ | Urfi Javed | ಉರ್ಫಿ ಜಾವೇದ್‌ಗೆ ವಾಟ್ಸ್ ಆ್ಯಪ್‌ನಲ್ಲಿ ಅತ್ಯಾಚಾರ, ಕೊಲೆ ಬೆದರಿಕೆ: ವ್ಯಕ್ತಿ ಬಂಧನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

OTT Release : ಒಟಿಟಿಯಲ್ಲಿ ಈ ವಾರ ಬಿಡುಗಡೆಯಾಗಲಿರುವ ಹೊಸ ಚಲನಚಿತ್ರಗಳು, ವೆಬ್ ಸರಣಿಗಳ ಪಟ್ಟಿ ಹೀಗಿವೆ

OTT Release ನೀವು ಸಿನಿಮಾ ಪ್ರಿಯರಾಗಿದ್ದರೆ ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಈ ಸಿನಿಮಾಗಳು ನಿಮಗೆ ಭರಪೂರ ಮನರಂಜನೆಯನ್ನು ನೀಡುವುದಂತೂ ಗ್ಯಾರಂಟಿ. ಎ ಫ್ಯಾಮಿಲಿ ಅಫೇರ್, ಆವೇಶಮ್, ಸಿವಿಲ್ ವಾರ್, ಸಾವೇಜ್ ಬ್ಯೂಟಿ ಸೀಸನ್ 2, ಶರ್ಮಾಜೀ ಕಿ ಬೇಟಿ, ದಿ ವೈರ್ಲ್ವಿಂಡ್ ಮುಂತಾದ ಸಿನಿಮಾಗಳು ನಿಮ್ಮನ್ನು ಹೊಸಲೋಕಕ್ಕೆ ಕರೆದುಕೊಂಡು ಹೋಗಲಿದೆ. ತಪ್ಪದೇ ಒಟಿಟಿಯಲ್ಲಿ ಈ ಸಿನಿಮಾವನ್ನು ನೋಡಿ.

VISTARANEWS.COM


on

OTT Release
Koo

ಬೆಂಗಳೂರು : ಒಟಿಟಿ ಪ್ರತಿವಾರ ತನ್ನ ವೀಕ್ಷಕರಿಗೆ ಹೊಸ ಹೊಸ ಚಲನಚಿತ್ರಗಳು ಮತ್ತು ವೆಬ್ ಸರಣಿಗಳನ್ನು ಬಿಡುಗಡೆ ಮಾಡುತ್ತದೆ. ಆ ಮೂಲಕ ಒಟಿಟಿ ತನ್ನ ವೀಕ್ಷಕರನ್ನು ಸೆಳೆಯುವ ಯೋಜನೆ ಮಾಡುತ್ತಿದೆ. ಪ್ರತಿಬಾರಿ ಒಟಿಟಿಯಲ್ಲಿ ಉತ್ತಮವಾದ ಚಿತ್ರಗಳನ್ನು ಬಿಡುಗಡೆ ಮಾಡಿ ವೀಕ್ಷಕರಿಗೆ ಮನೋರಂಜನೆಯನ್ನು ನೀಡುತ್ತಿದೆ. ಹಾಗಾದ್ರೆ ಒಟಿಟಿ(OTT Release )ಯಲ್ಲಿ ಈ ವಾರ ಬಿಡುಗಡೆಯಾಗಲಿರುವ ಹೊಸ ಚಲನಚಿತ್ರಗಳು, ವೆಬ್ ಸರಣಿಗಳ ಬಗ್ಗೆ ತಿಳಿದುಕೊಳ್ಳೋಣ.

OTT Release

ಎ ಫ್ಯಾಮಿಲಿ ಅಫೇರ್(A Family Affair):

ಒಬ್ಬ ಯುವತಿ, ಆಕೆಯ ತಾಯಿ ಮತ್ತು ಆಕೆಯ ನೆಚ್ಚಿನ ಸಿನಿಮಾ ತಾರೆ ಬಾಸ್ ಅವರ ಪ್ರೀತಿ, ಸೆಕ್ಸ್ ಅನ್ನು ನ್ಯಾವಿಗೇಟ್ ಮಾಡುವುದರಿಂದ ಅವರ ಪ್ರಣಯ ಹಾಸ್ಯ ಸನ್ನಿವೇಶಗಳಿಗೆ ಕಾರಣವಾಗುತ್ತದೆ. ಇದರಲ್ಲಿ ನಿಕೋಲ್ ಕಿಡ್ಮನ್, ಜಾಕ್ ಎಫ್ರಾನ್, ಜೋಯಿ ಕಿಂಗ್ ನಟಿಸಿದ್ದಾರೆ. ಇದು ಜೂನ್ 28ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ.

OTT Release

ಆವೇಶಮ್ (ಹಿಂದಿ) (Aavesham (Hindi):

ಮೂವರು ಹದಿಹರೆಯದ ಬಾಲಕರು ಎಂಜಿನಿಯರಿಂಗ್ ಅಧ್ಯಯನಕ್ಕಾಗಿ ಬೆಂಗಳೂರಿಗೆ ಬಂದು ಅಲ್ಲಿ ಜಗಳವಾಡುತ್ತಾರೆ. ನಂತರ ಅವರು ಹೊಡೆದಾಡಲು ಸ್ಥಳೀಯ ದರೋಡೆಕೋರನ ಸಹಾಯವನ್ನು ಪಡೆಯುತ್ತಾರೆ. ಇದರಲ್ಲಿ ಫಹಾದ್ ಫಾಸಿಲ್, ಹಿಪ್‌ಸ್ಟರ್‌, ಸಜಿನ್ ಗೋಪು, ಮಿಥುನ್ ಜೈ ಶಂಕರ್ ನಟಿಸಿದ್ದಾರೆ. ಇದು ಹಾಸ್ಯ ಹಾಗೂ ಆ್ಯಕ್ಷನ್ ಚಿತ್ರವಾಗಿದ್ದು, ಜೂನ್ 28ರಂದು ಡಿಸ್ನಿ ಪ್ಲಸ್ ಹಾಟ್ಸ್ಸ್ಟಾರ್ನಲ್ಲಿ ಪ್ರಸಾರವಾಗಿದೆ.

OTT Release

ಸಿವಿಲ್ ವಾರ್ (Civil War):

ಯುಎಸ್ ಅಂತರ್ಯುದ್ಧದ ಸಮಯದಲ್ಲಿ ವಾರ್ ಜರ್ನಲಿಸ್ಟ್ ತಂಡವು ನ್ಯೂಯಾರ್ಕ್ ನಗರದಿಂದ ವಾಷಿಂಗ್ಟನ್ ಡಿಸಿಗೆ ಪ್ರಯಾಣಿಸುತ್ತದೆ. ಬಂಡುಕೋರರು ರಾಜಧಾನಿಯನ್ನು ವಶಪಡಿಸಿಕೊಳ್ಳುವ ಮೊದಲು ಯುಎಸ್ ಅಧ್ಯಕ್ಷರನ್ನು ಸಂದರ್ಶಿಸುವ ಗುರಿಯನ್ನು ಅವರು ಹೊಂದಿರುತ್ತಾರೆ.ಇದರಲ್ಲಿ ಕ್ರಿಸ್ಟನ್ ಡನ್ಸ್ಟ್, ವ್ಯಾಗ್ನರ್ ಮೌರಾ, ಕೈಲೀ ಸ್ಪೇನಿ, ಸ್ಟೀಫನ್ ಮೆಕಿನ್ಲೆ ಹೆಂಡರ್ಸನ್ ನಟಿಸಿದ್ದಾರೆ. ಇದು ಆ್ಯಕ್ಷನ್, ಥ್ರಿಲ್ಲರ್ ಚಿತ್ರವಾಗಿದ್ದು, ಜೂನ್ 28ರಂದು ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಪ್ರಸಾರವಾಗಿದೆ.

OTT Release

ರೌತು ಕಾ ರಾಜ್(Rautu Ka Raaz):

ಉತ್ತರಾಖಂಡದ ತೆಹ್ರಿಯ ರೌತು ಕಿ ಬೇಲಿ ಗ್ರಾಮದ ಅಂಧರ ಶಾಲೆಯ ವಾರ್ಡನ್ ತನ್ನ ಕೋಣೆಯಲ್ಲಿ ಶವವಾಗಿ ಪತ್ತೆಯಾಗುತ್ತಾನೆ. ಈ ಪ್ರಕರಣದ ತನಿಖೆ ಮಾಡಲು ಇನ್ಸ್ಪೆಕ್ಟರ್ ದೀಪಕ್ ನೇಗಿ ಅವರನ್ನು ಕರೆಸಲಾಗುತ್ತದೆ. ಇದರಲ್ಲಿ ನವಾಜುದ್ದೀನ್ ಸಿದ್ದಿಕಿ, ರಾಜೇಶ್ ಕುಮಾರ್, ಅತುಲ್ ತಿವಾರಿ, ನಾರಾಯಣಿ ಶಾಸ್ತ್ರಿ ನಟಿಸಿದ್ದಾರೆ. ಇದು ಮಿಸ್ಟರಿ/ಥ್ರಿಲ್ಲರ್ ಚಿತ್ರವಾಗಿದ್ದು, ಜೂನ್ 28ರಂದು ಜೀ5ನಲ್ಲಿ ಬಿಡುಗಡೆಯಾಗಿದೆ.

OTT Release

ಸಾವೇಜ್ ಬ್ಯೂಟಿ ಸೀಸನ್ 2 (Savage Beauty Season 2):

ನಿಗೂಢ ಮಹಿಳೆಯೊಬ್ಬಳು ತನ್ನ ಜೀವನದಲ್ಲಿ ಹಿಂದೆ ನಡೆದ ದುರಂತಕ್ಕೆ ಸೇಡು ತೀರಿಸಿಕೊಳ್ಳಲು ಜಾಗತಿಕ ಸೌಂದರ್ಯ ಸಾಮ್ರಾಜ್ಯ ಮತ್ತು ಕರಾಳ ರಹಸ್ಯಗಳನ್ನೊಳಗೊಂಡ ಪ್ರಬಲ ಕುಟುಂಬಕ್ಕೆ ಬರುತ್ತಾಳೆ. ಈ ಚಿತ್ರದಲ್ಲಿ ನಂಬಿತಾ ಬೆನ್-ಮಜ್ವಿ, ರೋಸ್ಮರಿ ಜಿಮು, ಎನ್ಥಾಟಿ ಮೋಶೆಶ್, ದುಮಿಸಾನಿ ಎಂಬೆಬೆ ನಟಿಸಿದ್ದಾರೆ. ಇದು ಥ್ರಿಲ್ಲರ್/ಡ್ರಾಮಾ ಚಿತ್ರವಾಗಿದ್ದು, ಜೂನ್ 28ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ.

OTT Release

ಶರ್ಮಾಜೀ ಕಿ ಬೇಟಿ (Sharmajee Ki Beti):

ಶರ್ಮಾ ಎಂಬ ಉಪನಾಮ ಹೊಂದಿರುವ ಮೂವರು ಮಹಿಳೆಯರನ್ನು ಕಥೆ ಅನುಸರಿಸುತ್ತದೆ. ಅವರ ಜೀವನವು ಸರಿಯಾದ ದಾರಿಯಲ್ಲಿ ಚಲಿಸಿದರೂ ಕೂಡ ಅವರು ಸಂಕ್ಷಿಪ್ತವಾದ ಮಾರ್ಗಗಳನ್ನು ದಾಟುತ್ತಾರೆ, ಇದು ಅವರ ಜೀವನದ ಮೇಲೆ ಗಮನಾರ್ಹ ಪರಿಣಾಮವನ್ನು ಬೀರುತ್ತದೆ. ಈ ಚಿತ್ರದಲ್ಲಿ ಸಾಕ್ಷಿ ತನ್ವರ್, ದಿವ್ಯಾ ದತ್ತಾ, ಸಯಾಮಿ ಖೇರ್ ನಟಿಸಿದ್ದಾರೆ. ಇದು ಒಂದು ಡ್ರಾಮಾವಾಗಿದ್ದು, ಜೂನ್ 28ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ.

ಇದನ್ನೂ ಓದಿ:  ನಟ ಶಾರುಖ್ ಖಾನ್ ಬಗ್ಗೆ ಶಾಕಿಂಗ್ ಸುದ್ದಿ ಕೊಟ್ಟ ನಟ ಗೋವಿಂದ್ ನಾಮದೇವ್

ದಿ ವೈರ್ಲ್ವಿಂಡ್(The Whirlwind):

ದಕ್ಷಿಣ ಕೊರಿಯಾದ ಸರ್ಕಾರದಲ್ಲಿ, ಭ್ರಷ್ಟಾಚಾರವನ್ನು ನಿಭಾಯಿಸುವ ಗುರಿಯನ್ನು ಹೊಂದಿರುವ ಪ್ರಧಾನಿ ಪಾರ್ಕ್ ಡಾಂಗ್ ಹೋ, ಎಂಬವವರು ಅಲ್ಲಿನ ಅಧ್ಯಕ್ಷರ ಹತ್ಯೆಯನ್ನು ಧೈರ್ಯದಿಂದ ಆಯೋಜಿಸುತ್ತಾರೆ. ಇದರಲ್ಲಿ ಸೋಲ್ ಕ್ಯೂಂಗ್-ಗು, ಕಿಮ್ ಹೀ-ಎ, ಲೀ ಹೇ ಯಂಗ್ ನಟಿಸಿದ್ದಾರೆ. ಇದು ಒಂದು ಡ್ರಾಮಾವಾಗಿದ್ದು, ಜೂನ್ 28ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ.

Continue Reading

Latest

Deepika Padukone: ‘ಕಲ್ಕಿ 2898 ಎಡಿ’ ಚಿತ್ರದ ದೀಪಿಕಾ ಪಡುಕೋಣೆ ನಗ್ನ ಚಿತ್ರ ಸೋರಿಕೆ; ನೆಟ್ಟಿಗರು ಹೇಳಿದ್ದೇನು?

Deepika Padukone ದೀಪಿಕಾ ಪಡುಕೋಣೆ, ಪ್ರಭಾಸ್ ಮತ್ತು ಅಮಿತಾಬ್ ಬಚ್ಚನ್ ಅವರ ‘ಕಲ್ಕಿ 2898 ಎಡಿ’ ಚಿತ್ರ ಜೂನ್ 27 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ ಮತ್ತು ಇದು ಅಭಿಮಾನಿಗಳು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ. ಇನ್ನು ನಾಗ್ ಅಶ್ವಿನ್ ನಿರ್ದೇಶನದ ಬಗ್ಗೆ ಜನರು ಹೊಗಳಿದ್ದರು. ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ದೀಪಿಕಾ ಸುಮತಿ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ತನ್ನ ಗರ್ಭದಲ್ಲಿ ಇಡೀ ವಿಶ್ವದ ದುಷ್ಟ ಶಕ್ತಿಗಳಿಗೆ ಶತ್ರುವಾದ ಮಗುವನ್ನು ಹೊತ್ತುಕೊಂಡು ಬೆಂಕಿಯ ಮೂಲಕ ನಡೆಯುತ್ತಾ ಬರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆ. ಇದು ಈಗ ವೈರಲ್ ಆಗಿದೆ.

VISTARANEWS.COM


on

deepika padukone
Koo

ಮುಂಬೈ : ಬಾಲಿವುಡ್ ಖ್ಯಾತ ನಟಿಯರಲ್ಲಿ ದೀಪಿಕಾ ಪಡುಕೋಣೆ (Deepika Padukone )ಕೂಡ ಒಬ್ಬರು. ಇವರು ತಮ್ಮ ನಟನೆಯ ಮೂಲಕ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ಇಂತಹ ಖ್ಯಾತನಟಿ ದೀಪಿಕಾ ಪಡುಕೋಣೆ ಅವರ ‘ಕಲ್ಕಿ 2898 ಎಡಿ’ ಚಿತ್ರದ ಬೆಂಕಿಯಲ್ಲಿ ನಡೆದು ಬರುವ ಅವರ ನಗ್ನ ಚಿತ್ರ ಸೋರಿಕೆಯಾಗಿದೆ.

Deepika Padukone

ದೀಪಿಕಾ ಪಡುಕೋಣೆ, ಪ್ರಭಾಸ್ ಮತ್ತು ಅಮಿತಾಭ್‌ ಬಚ್ಚನ್ ಅವರ ‘ಕಲ್ಕಿ 2898 ಎಡಿ’ ಚಿತ್ರ ಜೂನ್ 27 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ ಮತ್ತು ಇದು ಅಭಿಮಾನಿಗಳು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ. ಇನ್ನು ನಾಗ್ ಅಶ್ವಿನ್ ನಿರ್ದೇಶನದ ಬಗ್ಗೆ ಜನರು ಹೊಗಳಿದ್ದರು. ಆದರೆ ಈ ಚಿತ್ರದ ಕೆಲವು ದೃಶ್ಯಗಳು, ಹಲವಾರು ಫೋಟೊಗಳು ಮತ್ತು ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿವೆ.

Deepika Padukone

‘ಕಲ್ಕಿ 2898 ಎಡಿ’ ಚಿತ್ರದಲ್ಲಿ ದೀಪಿಕಾ ಸುಮತಿ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ತನ್ನ ಗರ್ಭದಲ್ಲಿ ಇಡೀ ವಿಶ್ವದ ದುಷ್ಟ ಶಕ್ತಿಗಳಿಗೆ ಶತ್ರುವಾದ ಮಗುವನ್ನು ಹೊತ್ತುಕೊಂಡು ಬೆಂಕಿಯ ಮೂಲಕ ನಡೆಯುತ್ತಾ ಬರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆ. ಇದು ಈಗ ವೈರಲ್ ಆಗಿದೆ.

ವಿಡಿಯೊದಲ್ಲಿ ದೀಪಿಕಾ ಬೆಂಕಿಯ ಮೂಲಕ ನಡೆಯುತ್ತಾ ಬರುವಾಗ ಅವರ ಬಟ್ಟೆಗಳು ಬೆಂಕಿಗೆ ಉರಿದುಹೋಗುತ್ತಿದ್ದಂತೆ, ಅವರು ತಮ್ಮ ಎದೆಯನ್ನು ತಮ್ಮ ಕೈಯಿಂದ ಮುಚ್ಚಿಕೊಳ್ಳುತ್ತಾರೆ. ದೀಪಿಕಾ ಅವರ ಈ ಪಾತ್ರವು ಕಥಾಹಂದರಕ್ಕೆ ಪ್ರಮುಖವಾಗಿರುವುದರಿಂದ ಅವರ ಈ ಪಾತ್ರದ ಬಗ್ಗೆ ಚಿತ್ರತಂಡ ಬಹಿರಂಗಪಡಿಸಿರಲಿಲ್ಲ.

ಆದರೂ ಈ ವಿಡಿಯೋ ಸೋರಿಕೆಯಾಗಿದೆ. ಆದರೆ ಇದರಲ್ಲಿ ನಟಿಯ ಅಭಿನಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತು ಬಳಕೆದಾರರು ಈ ಬೆಂಕಿಯ ದೃಶ್ಯವನ್ನು ‘ಅಪ್ರತಿಮ’ ಎಂದು ಕರೆದಿದ್ದಾರೆ.

Deepika Padukone

ದೀಪಿಕಾ ಪಡುಕೋಣೆಯವರ ಇಡೀ ವೃತ್ತಿಜೀವನದ ಅತ್ಯಂತ ಅಪ್ರತಿಮ ದೃಶ್ಯ ಇದಾಗಿದೆ ಎಂದು ಒಬ್ಬ ಬಳಕೆದಾರ ತಿಳಿಸಿದರೆ, ಮತ್ತೊಬ್ಬರು “ದೀಪಿಕಾ ಉರಿಯುತ್ತಿರುವ ಬೆಂಕಿಯ ಮೂಲಕ ನಡೆಯುವುದು ಯುಗಾಂತರಗಳ ದೃಶ್ಯವಾಗಿದೆ” ಎಂದು ಬರೆದಿದ್ದಾರೆ.

ಈ ನಡುವೆ ‘ಕಲ್ಕಿ 2898 ಎಡಿ’ ಚಿತ್ರ ಥಿಯೇಟರ್ ಗಳಲ್ಲಿ ಬಿಡುಗಡೆಯಾದಾಗ ಚಿತ್ರತಂಡ ಚಲನಚಿತ್ರದ ತುಣುಕುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳದಂತೆ ಅಭಿಮಾನಿಗಳಲ್ಲಿ ವಿನಂತಿಸಿದ್ದರು. ಈ ಚಿತ್ರ 4 ವರ್ಷಗಳ ಸುದೀರ್ಘ ಪ್ರಯಾಣ ಮತ್ತು ಇದು ನಾಗ್ ಅಶ್ವಿನ್ ಮತ್ತು ತಂಡದ ಅಪಾರ ಪರಿಶ್ರಮದ ಕಥೆಯಾಗಿದೆ.

Deepika Padukone

ಇದನ್ನೂ ಓದಿ: ಈಗಷ್ಟೇ ಮದುವೆಯಾಗಿರುವ ನಟಿ ಸೋನಾಕ್ಷಿ ಸಿನ್ಹಾ ಗರ್ಭಿಣಿ?

ಈ ಕಥೆಯನ್ನು ಜಾಗತಿಕ ಮಟ್ಟಕ್ಕೆ ತರುವಲ್ಲಿ ಯಾವುದೇ ಪ್ರಯತ್ನ ನಡೆದಿಲ್ಲ. ಇದನ್ನು ಮುಂದೆ ತರಲು ತಂಡವು ರಕ್ತ ಮತ್ತು ಬೆವರು ಹರಿಸಿದೆ. ಹಾಗಾಗಿ ದಯವಿಟ್ಟು ಸಿನಿಮಾವನ್ನು ಗೌರವಿಸೋಣ. ಅದಕ್ಕಾಗಿ ಸಿನಿಮಾ ತುಣುಕುಗಳನ್ನು ಹಂಚಿಕೊಳ್ಳಬೇಡಿ. ನಿಮಿಷದಿಂದ ನಿಮಿಷಕ್ಕೆ ಅಪ್ಡೇಟ್ ನೀಡಬೇಡಿ ಅಥವಾ ಪೈರಸಿಯಲ್ಲಿ ತೊಡಗಬೇಡಿ ಎಂದು ಕೇಳಿಕೊಂಡಿದ್ದರು. ಆದರೂ ಈ ಚಿತ್ರದ ಪ್ರಮುಖ ದೃಶ್ಯ ಸೋರಿಕೆಯಾಗಿರುವುದು ಬೇಸರವೇ ಸರಿ.

Continue Reading

ಪ್ರಮುಖ ಸುದ್ದಿ

Shah Rukh Khan: ನಟ ಶಾರುಖ್ ಖಾನ್ ಬಗ್ಗೆ ಶಾಕಿಂಗ್ ಸುದ್ದಿ ಕೊಟ್ಟ ನಟ ಗೋವಿಂದ್ ನಾಮದೇವ್

Shah Rukh Khan ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರೊಂದಿಗೆ ಹಿಟ್ ಚಿತ್ರಗಳನ್ನು ಮಾಡಿದ ಹಿರಿಯ ನಟ ಗೋವಿಂದ್ ನಾಮದೇವ್ ಅವರು ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಇಬ್ಬರು ಬಾಲಿವುಡ್ ಸೂಪರ್ ಸ್ಟಾರ್‌ಗಳೊಂದಿಗೆ ಕೆಲಸ ಮಾಡಿದ ಅನುಭವದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಕೆಲಸದ ಬಗ್ಗೆ ತುಂಬಾ ನಿಷ್ಠೆ ಇರುವ ನಟ ಶಾರೂಕ್ ಖಾನ್ ರಾತ್ರಿಯಿಡೀ ಚಿತ್ರತಂಡದೊಂದಿಗೆ ಸೇರಿಕೊಂಡು ಮುಂಜಾನೆ 2 ಗಂಟೆಯವರೆಗೆ ಕೆಲಸ ಮಾಡುತ್ತಿದ್ದರು. ಅವರು ಮೂರೂವರೆ ಅಥವಾ ನಾಲ್ಕು ಗಂಟೆಗಳಿಗಿಂತ ಹೆಚ್ಚು ಕಾಲ ನಿದ್ರೆ ಮಾಡುತ್ತಿರಲಿಲ್ಲ.ಇನ್ನೂ ಧೂಮಪಾನದ ಚಟ ಕೂಡ ಇವರಿಗೆ ವಿಪರೀತವಿತ್ತು ಎಂದು ಹೇಳಿದ್ದಾರೆ.

VISTARANEWS.COM


on

Shah Rukh Khan
Koo

ಮುಂಬೈ : ಶಾರುಖ್ ಖಾನ್ (Shah Rukh Khan) ಬಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ನಟರೆನಿಸಿಕೊಂಡಿದ್ದಾರೆ. ದೇಶ, ವಿದೇಶಗಳಲ್ಲಿ ಕೊಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಈ ನಟನ ಧೂಮಪಾನ ಚಟದ ಕುರಿತು ಹಿರಿಯ ನಟ ಗೋವಿಂದ್ ನಾಮದೇವ್ ಅವರು ಶಾಕಿಂಗ್ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರೊಂದಿಗೆ ಹಿಟ್ ಚಿತ್ರಗಳನ್ನು ಮಾಡಿದ ಹಿರಿಯ ನಟ ಗೋವಿಂದ್ ನಾಮದೇವ್ ಅವರು ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಇಬ್ಬರು ಬಾಲಿವುಡ್ ಸೂಪರ್ ಸ್ಟಾರ್‌ಗಳೊಂದಿಗೆ ಕೆಲಸ ಮಾಡಿದ ಅನುಭವದ ಬಗ್ಗೆ ಮಾತನಾಡಿದ್ದಾರೆ.

Shah Rukh Khan

2000ರಲ್ಲಿ ಬಿಡುಗಡೆಯಾದ “ಫಿರ್ ಭಿ ದಿಲ್ ಹೈ ಹಿಂದೂಸ್ತಾನಿ” ಚಿತ್ರದ ಚಿತ್ರೀಕರಣ ಸಮಯದಲ್ಲಿ ಶಾರುಖ್ ಖಾನ್ ಅವರ ಜೊತೆ ಕಳೆದ ದಿನಗಳನ್ನು ಅವರು ಮೆಲುಕು ಹಾಕಿದ್ದಾರೆ. “ಫಿರ್ ಭಿ ದಿಲ್ ಹೈ ಹಿಂದೂಸ್ತಾನಿ” ಚಿತ್ರವನ್ನು ಶಾರುಖ್ ಖಾನ್, ಅವರ ಸ್ನೇಹಿತೆ ನಟಿ ಜೂಹಿ ಚಾವ್ಲಾ ಮತ್ತು ಚಲನಚಿತ್ರ ನಿರ್ಮಾಪಕ ಅಜೀಜ್ ಮಿರ್ಜಾ ನಿರ್ಮಿಸಿದ್ದು, ಡ್ರೀಮ್ಜ್ ಅನ್ಲಿಮಿಟೆಡ್ ನಿರ್ಮಾಣ ಮಾಡಿದೆ.

Shah Rukh Khan

ನಟ ಶಾರುಖ್ ಖಾನ್ ಅವರು ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದರು. ಹಾಗಾಗಿ ಅವರು ದಿನವಿಡೀ ಕೆಲಸ ಮಾಡುತ್ತಿದ್ದರು, ರಾತ್ರಿಯಿಡೀ ಚಿತ್ರತಂಡದೊಂದಿಗೆ ಸೇರಿಕೊಂಡು ಮುಂಜಾನೆ 2 ಗಂಟೆಯವರೆಗೆ ಕೆಲಸ ಮಾಡುತ್ತಿದ್ದರು. ಅವರು ಸಮಾರಂಭವೊಂದರಲ್ಲಿ ಭಾಗವಹಿಸಲು ಚೆನ್ನೈಗೆ ಮುಂಜಾನೆ ವಿಮಾನದಲ್ಲಿ ತೆರಳಬೇಕಾಗಿತ್ತು, ನಂತರ ಹಿಂತಿರುಗಿ ಬಂದು ಮತ್ತೆ ಚಿತ್ರೀಕರಣವನ್ನು ಪುನರಾರಂಭಿಸಬೇಕಾಗಿತ್ತು. ಹಾಗಾಗಿ ಅವರು ಮೂರೂವರೆ ಅಥವಾ ನಾಲ್ಕು ಗಂಟೆಗಳಿಗಿಂತ ಹೆಚ್ಚು ಕಾಲ ನಿದ್ರೆ ಮಾಡುತ್ತಿರಲಿಲ್ಲ.

ಹಾಗಾಗಿ ಅವರು ಚಿಮಣಿಯಂತೆ ಧೂಮಪಾನ ಮಾಡುತ್ತಿದ್ದರು ಮತ್ತು ಕೆಲಸ ಮಾಡುತ್ತಲೇ ಇರುತ್ತಿದ್ದರು, ಮುಂದೆ ಏನು ಮಾಡಬೇಕೆಂದು ಯೋಚಿಸುತ್ತಲೇ ಇರುತ್ತಾರೆ. ಸೂಪರ್‌ ಸ್ಟಾರ್‌ಗಳಲ್ಲಿ ಸಾಮಾನ್ಯವಾಗಿ ಈ ಮನೋಭಾವ ಇರುತ್ತದೆ ಎಂದು ಗೋವಿಂದ್ ಅವರು ಶಾರುಖ್ ಖಾನ್ ಬಗ್ಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಈ ಆರು ಯೂಟ್ಯೂಬರ್‌ಗಳು ಜೈಲು ಪಾಲಾಗಲು ಶಾರುಖ್‌ ಖಾನ್‌ ಕಾರಣವಂತೆ!

ಆದರೆ ಬೋನಿ ಕಪೂರ್ ನಿರ್ಮಿಸಿದ ಆಕ್ಷನ್ ಚಿತ್ರ ‘ವಾಂಟೆಡ್’ ನಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡಿದ ಅನುಭವದ ಬಗ್ಗೆ ಮಾತನಾಡಿದ ಗೋವಿಂದ್ ಅವರು, ನಟ ಸಲ್ಮಾನ್ ಖಾನ್ ಅವರು ನಟ ಶಾರುಖ್ ಖಾನ್ ಅವರಿಗೆ ವಿರುದ್ಧವಾಗಿದ್ದರು. ಯಾಕೆಂದರೆ ಅವರು ಹೆಚ್ಚು ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಇತರರೊಂದಿಗೆ ಸಂವಹನ ನಡೆಸುವ ವಿಷಯದಲ್ಲಿ ಅವರು ಶಾರುಖ್ ಖಾನ್‌ಗೆ ವಿರುದ್ಧವಾಗಿದ್ದಾರೆ” ಎಂದು ಅವರು ಹೇಳಿದರು.

Continue Reading

ಬಾಲಿವುಡ್

Asha Bhosle: ಹಿರಿಯ ಗಾಯಕಿ ಆಶಾ ಭೋಂಸ್ಲೆ ಪಾದಕ್ಕೆ ಮುತ್ತಿಟ್ಟು, ಪನ್ನೀರಿನಿಂದ ತೊಳೆದು ನಮಸ್ಕರಿಸಿದ ಸೋನು ನಿಗಮ್

Asha Bhosle: ಮೊದಲಿಗೆ ಸೋನು ನಗುತ್ತ ಆಶಾ ಅವರ ಪಾದಗಳಿಗೆ ಮುತ್ತಿಟ್ಟರು. ಆಶಾ ಭೋಂಸ್ಲೆಯ ಪಾದಗಳನ್ನು ಪನ್ನೀರಿನಿಂದ ತೊಳೆದು ಆಶೀರ್ವಾದ ಪಡೆದರು. ವೇದಿಕೆಯಿಂದ ಹೊರಡುವ ಮೊದಲು, ಸೋನು ನಿಗಮ್‌ ಅವರು ಮತ್ತೆ ಗಾಯಕಿಗೆ ಮೈ ಮುಗಿದು ನಮಸ್ಕರಿಸಿದ್ದಾರೆ. ಸೋನು ನಿಗಮ್‌ ಕಾರ್ಯಕ್ರಮದಲ್ಲಿ ಆಶಾ ಭೋಂಸ್ಲೆ ಮತ್ತು ಅವರ ದಿವಂಗತ ಸಹೋದರಿ, ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ನೆನೆದು, ಭಾರತೀಯ ಸಂಗೀತಕ್ಕೆ ಅವರ ಅಪಾರ ಕೊಡುಗೆ ಇದೆ ಎಂದು ಶ್ಲಾಘಿಸಿದರು.

VISTARANEWS.COM


on

Koo

ಬೆಂಗಳೂರು: ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಗೌರವ ಸೂಚಕವಾಗಿ ಗಾಯಕ ಸೋನು ನಿಗಮ್ (Sonu Nigam) ಅವರು ಹಿರಿಯ ಗಾಯಕಿ ಆಶಾ ಭೋಂಸ್ಲೆ (Asha Bhosle) ಅವರ ಪಾದ ತೊಳೆದು ನಮಸ್ಕರಿಸಿದ್ದಾರೆ. ʻಸ್ವರ್ಸ್ವಾಮಿನಿ ಆಶಾʼ (Swarswamini Asha)ಎಂಬ ಶೀರ್ಷಿಕೆಯ ಆಶಾ ಅವರ ಜೀವನಚರಿತ್ರೆ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಸೋನು ನಿಗಮ್‌ ಅವರು ಆಶಾ ಭೋಂಸ್ಲೆಯ ಪಾದಗಳನ್ನು ಪನ್ನೀರಿನಿಂದ ತೊಳೆದು ಆಶೀರ್ವಾದ ಪಡೆದರು. ಈ ಕಾರ್ಯಕ್ರಮದಲ್ಲಿ ನಟ ಜಾಕಿ ಶ್ರಾಫ್ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮೊದಲಿಗೆ ಸೋನು ನಗುತ್ತ ಆಶಾ ಅವರ ಪಾದಗಳಿಗೆ ಮುತ್ತಿಟ್ಟರು. ಆಶಾ ಭೋಂಸ್ಲೆಯ ಪಾದಗಳನ್ನು ಪನ್ನೀರಿನಿಂದ ತೊಳೆದು ಆಶೀರ್ವಾದ ಪಡೆದರು. ವೇದಿಕೆಯಿಂದ ಹೊರಡುವ ಮೊದಲು, ಸೋನು ನಿಗಮ್‌ ಅವರು ಮತ್ತೆ ಗಾಯಕಿಗೆ ಮೈ ಮುಗಿದು ನಮಸ್ಕರಿಸಿದ್ದಾರೆ.

ಕಾರ್ಯಕ್ರಮಕ್ಕೆ ಆಶಾ ಭೋಂಸ್ಲೆ ಅವರು ಪ್ರಿಂಟೆಡ್‌ ಬಿಳಿ ಸೀರೆಯನ್ನು ಧರಿಸಿದ್ದರು. ಸೋನು ನಿಗಮ್‌ ಅವರು ಹಳದಿ ಕುರ್ತಾ ಮತ್ತು ಬಿಳಿ ಪೈಜಾಮಾದಲ್ಲಿ ಕಾಣಿಸಿಕೊಂಡರು. ವಿಡಿಯೊಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, “ಇಂತಹ ವಿಷಯಗಳನ್ನು ನಾವು ಭಾರತೀಯರು ಎಂದು ಹೆಮ್ಮೆಪಡುತ್ತೇವೆ.”ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ʻʻಸೋನು ನಿಗಮ್ ಬಗ್ಗೆ ತುಂಬಾ ಹೆಮ್ಮೆ ಇದೆ. ನಿಜವಾಗಿಯೂ ಗ್ರೇಟ್” ಎಂದು ಬರೆದಿದ್ದಾರೆ. “ಸೋನು ನಿಗಮ್‌ಗೆ ಹ್ಯಾಟ್ಸ್ ಆಫ್! ಎಂತಹ ಆರೋಗ್ಯಕರ ಕ್ಷಣ. ಲತಾ ಜೀ ಅವರು ಇರಬೇಕಿತ್ತುʼʼಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಸೋನು ನಿಗಮ್‌ ಕಾರ್ಯಕ್ರಮದಲ್ಲಿ ಆಶಾ ಭೋಂಸ್ಲೆ ಮತ್ತು ಅವರ ದಿವಂಗತ ಸಹೋದರಿ, ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ನೆನೆದು, ಭಾರತೀಯ ಸಂಗೀತಕ್ಕೆ ಅವರ ಅಪಾರ ಕೊಡುಗೆ ಇದೆ ಎಂದು ಶ್ಲಾಘಿಸಿದರು.

ಇದನ್ನೂ ಓದಿ: Asha Bhosle: 90ನೇ ವಸಂತಕ್ಕೆ ಕಾಲಿಟ್ಟ ಖ್ಯಾತ ಗಾಯಕಿ ಆಶಾ ಭೋಂಸ್ಲೆ

ಕಾರ್ಯಕ್ರಮದಲ್ಲಿ ಮಾತನಾಡಿದ ಸೋನು ನಿಗಮ್, ‘ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಡುಗಾರಿಕೆ ಕಲಿಯಲು ಹಲವು ದಾರಿಗಳಿವೆ. ಆದರೆ ಹಿಂದಿನ ಕಾಲದಲ್ಲಿ ಲತಾಜಿ ಮತ್ತು ಆಶಾಜಿ ಮಾತ್ರ ಇದ್ದರು. ಆಶಾ ಅವರಿಂದ ನಾವು ಸಾಕಷ್ಟು ಕಲಿತಿದ್ದೇವೆ. ಅದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವರಿಂದ ನಾವು ಇನ್ನೂ ಕಲಿಯುವುದು ಬಹಳಷ್ಟಿದೆʼʼಎಂದರು.

ಸಂಗೀತ ಮತ್ತು ದೇಶಭಕ್ತಿ ಎರಡಕ್ಕೂ ಮಂಗೇಶ್ಕರ್ ಕುಟುಂಬದ ಸಮರ್ಪಣೆಯ ಬಗ್ಗೆ ಮೋಹನ್ ಭಾಗವತ್ ಮಾತನಾಡಿದರು. ಕಾರ್ಯಮದಲ್ಲಿ ಆಶಾ ಭೋಂಸ್ಲೆ ಸಹೋದರ, ಸಂಗೀತ ನಿರ್ದೇಶಕ ಹೃದಯನಾಥ್ ಮಂಗೇಶ್ಕರ್ ಕೂಡ ಉಪಸ್ಥಿತರಿದ್ದರು.

ಪಂಡಿತ್ ಹೃದಯನಾಥ್ ಮಂಗೇಶ್ಕರ್, ಉಷಾ ಮಂಗೇಶ್ಕರ್, ಅಶೋಕ್ ಸರಾಫ್, ಸುರೇಶ್ ವಾಡ್ಕರ್, ಶ್ರೀಧರ್ ಫಡ್ಕೆ, ರವೀಂದ್ರ ಸಾಠೆ, ಪದ್ಮಜಾ ಫೆನಾನಿ, ಉತ್ತರ ಕೇಳ್ಕರ್, ಸುದೇಶ್ ಭೋಸ್ಲೆ, ವೈಶಾಲಿ ಸಾಮಂತ್ ಮತ್ತು ಜಾಕಿ ಶ್ರಾಫ್, ನಾನಾ ಪಾಟೇಕರ್, ಪೂನಂ ಧಿಲ್ಲೋ, ಪದ್ಮಿನಿ ಕೊಲ್ಹಾಪುರೆ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಮುಂಬೈ ಬಿಜೆಪಿ ಅಧ್ಯಕ್ಷ ಆಶಿಶ್ ಶೇಲಾರ್ ಕೂಡ ಹಾಜರಿದ್ದರು.

Continue Reading
Advertisement
Job Alert
ಉದ್ಯೋಗ24 mins ago

Job Alert: 10ನೇ ತರಗತಿ ಪಾಸಾದವರಿಗೆ ಗುಡ್‌ನ್ಯೂಸ್‌; SSCಯಿಂದ ಬರೋಬ್ಬರಿ 8,326 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

OTT Release
Latest28 mins ago

OTT Release : ಒಟಿಟಿಯಲ್ಲಿ ಈ ವಾರ ಬಿಡುಗಡೆಯಾಗಲಿರುವ ಹೊಸ ಚಲನಚಿತ್ರಗಳು, ವೆಬ್ ಸರಣಿಗಳ ಪಟ್ಟಿ ಹೀಗಿವೆ

Chinnamma song from Krishnam Pranaya Sakhi is at 3rd position in All India YouTube trending list
ಕರ್ನಾಟಕ33 mins ago

Kannada New Movie: “ಯೂಟ್ಯೂಬ್ ಟ್ರೆಂಡಿಂಗ್” ಪಟ್ಟಿಯ 3ನೇ ಸ್ಥಾನದಲ್ಲಿ “ಕೃಷ್ಣಂ ಪ್ರಣಯ ಸಖಿ” ಚಿತ್ರದ “ಚಿನ್ನಮ್ಮ” ಹಾಡು!

Kanguva vs Alia Bhatt Kanguva finally set a date
ಕಾಲಿವುಡ್34 mins ago

Kanguva vs Alia Bhatt: ಕಂಗುವ- ಮಾರ್ಟಿನ್‌ ಜತೆ ಆಲಿಯಾ ಭಟ್‌ ಸಿನಿಮಾ ಕೂಡ ಕ್ಲ್ಯಾಶ್‌!

DCET 2024
ಬೆಂಗಳೂರು42 mins ago

DCET 2024 : ಡಿಸಿಇಟಿ ಫಲಿತಾಂಶ ಪ್ರಕಟಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ

vinay Kulkarni
ಕರ್ನಾಟಕ44 mins ago

Vinay Kulkarni: ವಿನಯ್‌ ಕುಲಕರ್ಣಿಗೆ ಧಾರವಾಡ ಜಿಲ್ಲೆ ಪ್ರವೇಶ ಮತ್ತೆ ನಿರಾಕರಿಸಿದ ಕೋರ್ಟ್‌

Sania Mirza
ಕ್ರೀಡೆ1 hour ago

Sania Mirza: ಶಮಿ ಜತೆ ಮದುವೆ ಟಾಕ್​ ಬೆನ್ನಲ್ಲೇ ಇನ್​ಸ್ಟಾಗ್ರಾಮ್​ನಲ್ಲಿ ‘YES’ ಎಂದು ಬರೆದುಕೊಂಡ ಸಾನಿಯಾ ಮಿರ್ಜಾ

Mohamed Muizzu
ವಿದೇಶ1 hour ago

Mohamed Muizzu: ಮಾಲ್ಡೀವ್ಸ್‌ ಅಧ್ಯಕ್ಷನ ವಿರುದ್ಧ ವಾಮಾಚಾರ; ಸಚಿವೆ ಅರೆಸ್ಟ್‌

Rakshana Vedike
ಕರ್ನಾಟಕ1 hour ago

ಕರ್ನಾಟಕ ತೋಟದಪ್ಪನ ಛತ್ರ ಅಲ್ಲ; ಕನ್ನಡಿಗರಿಗೆ ಉದ್ಯೋಗಕ್ಕೆ ಆಗ್ರಹಿಸಿ ಜು.1ರಂದು ಕರವೇ ಬೃಹತ್‌ ಪ್ರತಿಭಟನೆ!

Heavy Rain
ದೇಶ1 hour ago

Heavy Rain: ಭಾರೀ ಮಳೆಗೆ ಕುಸಿದು ಬಿದ್ದ ರಾಜ್‌ಕೋಟ್‌ ವಿಮಾನ ನಿಲ್ದಾಣ ಹೊರಭಾಗದ ಛಾವಣಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ5 hours ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ22 hours ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು2 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ2 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ5 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 week ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

ಟ್ರೆಂಡಿಂಗ್‌